

ಶ್ರೀನಿವಾಸಪುರ : ಮನೆಗೆ ಯಾವಾಗಲೂ ಐಎಸ್ಐ ಪ್ರಮಾಣಿತ ಉಪಕರಣಗಳನ್ನೇ ಬಳಸುವಂತೆ, ವೈರಿಂಗ್ ಕೆಲಸವನ್ನು ಸರ್ಕಾರಿ ಲೈಸೆನ್ಸ್ ಹೊಂದಿದ ಗುತ್ತಿಗೆದಾರರಿಂದ ಮಾತ್ರ ಮಾಡಿಸಿಕೊಳ್ಳಿ , ಯಾವುದೇ ಕಾರಣಕ್ಕೂ ಪ್ಲಗ್ ಪಾಯಿಂಟ್ಗಳು ಮಕ್ಕಳ ಕೈಗೆ ಎಟುಕದಂತಿರಲಿ ಎಂದು ಎಇಇ ರವೀಂದ್ರಬಾಬು ಮನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದರು
ಪಟ್ಟಣದ ಬೆಸ್ಕಾಂ ಉಪವಿಭಾಗದ ವತಿಯಿಂದ ಮಂಗಳವಾರ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಜಾಥಗೆ ಚಾಲನೆ ನೀಡಿ ಮಾತನಾಡಿದರು.
ಅದೇ ರೀತಿಯಾಗಿ ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಥವಾ ಜಾಹಿರಾತು ಫಲಕಗಳನ್ನು ಕಟ್ಟುವುದು, ಬಟ್ಟೆಗಳನ್ನು ಒಣಗಿಸುವ ತಂತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಬಾರದು, ಸ್ವಿಚ್ಗಳನ್ನು ಯಾವುದೇ ಕಾರಣಕ್ಕೂ ಒದ್ದೆ ಕೈಯಿಲ್ಲಿ ಮುಟ್ಟಬಾರದು. ಇತರೆ ಎಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ವೈನಮ್ -2 ಎಇಇ ನಿಧಿರಾಜ್, ಜೆಇ ಗಳಾದ ಆರ್.ಕೆ.ಬಾಬು, ದೇವರಾಜ್, ಆನಂದ್, ಶ್ರೀನಿವಾಸ್, ಆನಂದಬಾಬು, ಎಚ್. ವೇಣುಗೋಪಾಲ್, ಬೆಸ್ಕಾಂ ಸಂಘದ ಪದಾಧಿಕಾರಿಗಳಾದ ಆರ್.ಚಂದು, ಎಸ್.ರಾಮಾಂಜನಪ್ಪ, ರಾಜಣ್ಣ , ಎನ್.ವಿ.ಶ್ರೀನಿವಾಸ್ ಹಾಗು ಸಿಬ್ಬಂದಿ ವರ್ಗದವರು ಇದ್ದರು.

