

ಕುಂದಾಪುರ, ಜೂ.14; ಸೈಂಟ್ ಮೇರಿಸ್ ಪ. ಪೂ. ಕಾಲೇಜಿನಲ್ಲಿ ಹಿಂದಿ ಅದ್ಯಾಪಕರಾಗಿ 18 ವರ್ಷ ಸೇವೆ ಸಲ್ಲಿಸಿ ವಯೋ ನಿವ್ರತ್ತರಾದ ವಸಂತ ಶೆಟ್ಟಿ ಎಂ. ಇವರನ್ನು ಕಾಲೇಜಿನ ಪರವಾಗಿ ಜೂನ್ 14 ರಂದು ಕಾಲೇಜಿನ ಪರವಾಗಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಧರ್ಮಗುರು, ವಿದ್ಯಾ ಸಂಸ್ಥೆಯ ಸಂಚಾಲಕರಾದ ಅ|ವಂ|ಪಾವ್ಲ್ ರೇಗೊ ಅವರ ನಿವ್ರತ್ತಿ ಜೀವನಕ್ಕೆ ಶುಭ ಕೋರಿ, ಅವರ ಸೇವೆಯನ್ನು ಹೊಗಳಿಸಿ, ಅವರು ಅಧ್ಯಾಪಕ ಮತ್ತು ಬೋಧಕೇತರ ವ್ರಂದದೊಂದಿಗೆ ಶಾಲು,ಫಲ, ಪುಷ್ಪ ನೀಡಿ ಪೇಟ ಹಾಕಿ ಸನ್ಮಾನಿಸಿದರು.
ಸನ್ಮಾನಕ್ಕೆ ಉತ್ತರಿಸಿದ ಅಧ್ಯಾಪಕ ವಸಂತ ಶೆಟ್ಟಿ ಎಂ. “ನಮ್ಮ ವಿದ್ಯಾ ಸಂಸ್ಥೆಯ ಅಧ್ಯಾಪಕರು, ಶಿಕ್ಷಕರು, ಬೋಧಕೇತರ ವ್ರಂದ ಒಂದು ಕುಟುಂಬದಂತೆ ಇದ್ದೇವು, ಈ ಶಿಕ್ಷಣ ಸಂಸ್ಥೆಯಲ್ಲಿ ಸಂತೋಷ ಸಂತ್ರಪ್ತಿಯಾಗುತಿತ್ತು. ಈ ಶಿಕ್ಷಣ ಸಂಸ್ಥೆ ಬಿಟ್ಟು ಹೋಗಲು ಬೇಸರವಾಗುತ್ತದೆ. ಇದು ಆರ್ಥಿಕ ದ್ರಷ್ಟಿಯಿಂದ ಹೇಳುತಿಲ್ಲ, ಇಲ್ಲಿಯ ಆತ್ಮಿಯತೆ, ಒಡನಾಟ, ಪ್ರೀತಿಗೆ ವಂಚೀತನಾಗುತ್ತೆಂದು ದುಖ್ಖವಾಗುತ್ತಿದೆ, ನಾನು ನನ್ನ ವಿದ್ಯಾರ್ಥಿಗಳನ್ನು ನನ್ನ ಮಕ್ಕಳಂತೆ ಕಂಡಿದ್ದೇನೆ. ನನ್ನ ಶಿಕ್ಷಣ ಕ್ಷೇತ್ರದ ಯಾತ್ರೆಯಲ್ಲಿ ಸಹಕರಿಸಿದ ಎಲ್ಲರಿಗೂ” ಅವರು ಧನ್ಯವಾದಗಳನ್ನು ಅರ್ಪಿಸಿದರು.
ಅಧ್ಯಾಪಕ ನಾಗರಾಜ ಶೆಟ್ಟಿ ಸನ್ಮಾನ ಪತ್ರವನ್ನು ವಾಚಿಸಿದರು. ಈ ಸಂದರ್ಭದಲ್ಲಿ ವಸಂತ ಶೆಟ್ಟಿ ಎಂ ಇವರ ಧರ್ಮಪತ್ನಿ ಶಿಕ್ಷಕಿ ಆಶಾಲತಾ ಶೆಟ್ಟಿ, ಸೈಂಟ್ ಮೇರಿಸ್ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ರೇಷ್ಮಾ ಪೆರ್ನಾಂಡಿಸ್, ಅತಿಥಿ ಜೀವನ್ ಲುವಿಸ್ , ಕಾಲೇಜಿನ ಅಧ್ಯಾಪಕ ಮತ್ತು ಬೋಧಕೇತರ ವ್ರಂದ ಮತ್ತು ಸಂತ ಮೇರಿಸ್ ಸಮುಹ ಶಿಕ್ಷಣ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರು ಉಪಸ್ಥಿತರಿದ್ದರು.


















