

ಕುಂದಾಪುರ, ಅ.24; ಕುಂದಾಪುರ ರೋಜರಿ ಚರ್ಚಿನಲ್ಲಿ ಯುವ ಆಯೋಗದಿಂದ ಯುವಜನೋತ್ಸವ ಕಾರ್ಯಕ್ರಮ ನಡೆಯಿತು. ಭಾನುವಾರ ಬೆಳೆಗ್ಗೆ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಬಲಿಪೂಜೆ ಅರ್ಪಿಸಿದರು. ಯವಜನರು ಬಲಿಪೂಜೆಯ ಪ್ರಾರ್ಥನ ವಿಧಿಯಲ್ಲಿ ಪಾಲ್ಗೊಂಡರು. ಬಳಿಕ ಸಭಾ ಭವನದಲ್ಲಿ ಶಿಬಿರ ನಡೆಯಿತು ಇದರಲ್ಲಿ ಐ.ಸಿ.ವೈ.ಎಮ್. ಮತ್ತು ವೈ.ಸಿ.ಎಸ್. ಸದಸ್ಯರು ಮತ್ತು ಅವರ ತಂದೆ ತಾಯಿಗಳು ಭಾಗವಹಿಸಿದ್ದರು. “ಭರವಸೆಯ ಯುವಜನರು” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ।ರಾಯನ್ ಮಥಾಯಸ್ ಉಪನ್ಯಾಸ ನೀಡಿದರು.












