

ಕುಂದಾಪುರ, ಜೂ.11: ‘ನಾವೆಲ್ಲರೂ ಪವಿತ್ರ ಸಭೆಯ ಜವಾಬ್ದಾರಿಯುತ ಕ್ರೈಸ್ತರಾಗಿದ್ದೇವೆ. ನಾವೆಲ್ಲರೂ ಪವಿತ್ರ ಸಭೆ ನಮ್ಮದು ಎಂದು ಅರಿತುಕೊಳ್ಳಬೇಕು, ಈ ಮುಖಾಂತರ ದೇವರ ಶುಭವಾರ್ತೆಯನ್ನು, ನಾವೆಲ್ಲ ಒಬ್ಬರೊನಬ್ಬೊರಿಗೆ ಹಂಚಬೇಕು, ದೇವರ ಪ್ರೀತಿಯನ್ನು ಹಂಚಬೇಕು. ಇಂದು ನಾವು ಪವಿತ್ರಾತ್ಮನ ಸಂಭ್ರಮದ ಹಬ್ಬವನ್ನು ಆಚರಿಸುತ್ತೇವೆ, ಈ ಪವಿತ್ರತ್ಮಾನು ನಮ್ಮಿಂದ ಆಸಾಧ್ಯವಾದ ಅದ್ಬುತಗಳನ್ನು ಮಾಡುತದೆ, ಯೇಸು ಕ್ರಿಸ್ತರು ತಮ್ಮನ್ನೆ ಬಲಿದಾನ ಅರ್ಪಿಸಿದ ಮೇಲೆ, ಪುನರ್ಜೀವಂತವಾಗಿ, ನಂತರ ಪವಿತ್ರಾತ್ಮರನ್ನು ಯೇಸು ಕ್ರೀಸ್ತರು ತಮ್ಮ ಶಿಸ್ಯರ ಮೇಲೆ ಕಳುಹಿಸುತ್ತಾರೆ, ಅವಾಗ ಅವರ ಶಿಸ್ಯರು ಪವಿತ್ರತ್ಮಾ ಭರಿತರಾಗಿ ದೇವರ ಶುಭವಾರ್ತೆಯನ್ನು ಸಾರುತ್ತಾರೆ, ಅವರಿಗೆ ಅಡ್ಡಿಪಡಿಸಿದಾಗ, ನಾವು ಕಣ್ಣಾರೆ ಕಂಡಿದ್ದನ್ನು, ಕಿವಿಯಾರೆ ಕೇಳಿದ್ದು ನೋಡಿ, ನಾವು ಸುಮ್ಮನೆ ಇರುವುದಿಲ್ಲ, ಸತ್ಯವನ್ನು ನುಡಿಯುತ್ತೇವೆ ಎಂದು ಸಾರಿದರು, ನಾವು ಕೂಡ ಇದನ್ನು ಪಾಲಿಸಬೇಕು. ಇದೇ ಸಂದರ್ಭದಲ್ಲಿ ಅವರು 38 ಯುವಕ – ಯುವತಿಯರಿಗೆ ಧ್ರಡಿಕರಣ ಸಂಸ್ಕಾರವನ್ನು ನೀಡಿದರು. ಈ ಧ್ರಡಿಕರಣ ಸಂಸ್ಕಾರ ಚೆನ್ನಾಗಿ ತಿಳುವಳಿಕೆ ಬಂದ ಮೇಲೆ ಕೊಡಲಾಗುತದೆ. “ಈ ಧ್ರಡಿಕರಣ ಸಂಸ್ಕಾರ ಪಡೆದ ಯುವಕ ಯುವತಿಯರು ಪವಿತ್ರಾತ್ಮರ ಶಕ್ತಿಯಿಂದ ಉತ್ತಮ ಜೀವನ ಸಾಗಿಸಲಿ, ಯೇಸು ಕ್ರಿಸ್ತರ ನೀಜ ಅನುಯಾಯಿಗಳಾಗಿ ಆದರ್ಶ ಜೀವನ ಸಾಗಲಿ, ಅವರಿಗೋಸ್ಕರ ನಾವೆಲ್ಲಾ ಪ್ರಾರ್ಥಿಸೋಣ’ ಎಂದು ಸಂದೇಶ ನೀಡಿದರು.
ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪೌವ್ಲ್ ರೇಗೊ, ಪ್ರಾಂಶುಪಾಲರಾದ ವಂ|ರೊಲ್ವಿನ್ ಫೆರ್ನಾಂಡಿಸ್, ಬಿಷಪರ ಕಾರ್ಯದರ್ಶಿ ವಂ। ರಿತೇಶ್ ಕಾಸ್ಟೆಲೀನೊ ಬಲಿದಾನದಲ್ಲಿ ಭಾಗವಹಿಸಿದರು.
ಚರ್ಚ್ ವತಿಯಿಂದ, ಬರ್ನಾಡ್ ಡಿಕೋಸ್ತಾ ಸಂಪಾದಕತ್ವದಲ್ಲಿ ಪ್ರಕಟವಾಗುವ ರೋಜಾರಿಯುಮ್ ಸಂಕಲನವನ್ನು ಬಿಷಪ್ ಲೆಸ್ಲಿ ಬಿಡುಗಡೆ ಮಾಡಿದರು, ಈ ಸಂಕನಲದಲ್ಲಿ, ಚರ್ಚಿನ ಕಾರ್ಯಕ್ರಮಗಳೊಗಂಡ, ಬಿಷಪ್ ಬಗ್ಗೆ ಲೇಖನ, ಶುಭಾಷಯಗಳೊಗಂಡ ಸಂಕಲನವಾಗಿದೆ. ತದ ನಂತರ ಚರ್ಚ್ ಪರವಾಗಿ ಬಿಷಪರನ್ನು ಸನ್ಮಾನಿಸಲಾಯಿತು. ಅದಕ್ಕೆ ಉತ್ತರವಾಗಿ ಅವರು ನನ್ನ ಯಾಜಕತ್ವ ಜೀವನವನ್ನು ಇಲ್ಲಿಂದ ಆರಂಭವಾಗಿದ್ದು, ಈ ಇಗರ್ಜಿಗೆ ಭವ್ಯಾವಾದ ಚರಿತ್ರೆ ಇದೆ, ಈ ಇಗರ್ಜಿ ಚಾರಿತ್ರಿಕವಾಗಿ ಬಹಳ ಪ್ರಸಿದ್ದಿ ಪಡೆದಿದೆ. ನನ್ನ ಅಂದಿನ, ಇಲ್ಲಿನ ಪ್ರಧಾನ ಧರ್ಮಗುರು ವಂ।ಕ್ಲಿಫರ್ಡ್ ಡಿಸೋಜಾ ಇವರಿಂದ ಬಹಳವಾಗಿ ಕಲಿತಿದ್ದೇನೆ, ಇಲ್ಲಿನ ಅಂದಿನ ಯುವಕರೊಂದಿಗೆ ಕೆಂಪು ಚೆಡ್ಡಿ ಹಾಕಿ ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ, ಇಂದು ಕೆಂಪು ತುರಾಯಿ ಹಾಕಿ ಬಂದಿದ್ದೇನೆ, (ಬಿಷಪರಾಗಿ ಬಂದಿದ್ದೆನೆ, ಇದು ಅವರು ತಮಾಷೆಯಾಗಿ ಹೇಳಿದ್ದಾದರೂ ಅದು ಸತ್ಯ ಸಂಗತಿಯಾಗಿದೆ) ಇಂದೂ ಅಂದಿನ ಕೆಲವು ವಿಷಯಗಳು ನನ್ನಲ್ಲಿ ಜೀವಂತವಾಗಿವೆ. ಈ ಚರ್ಚ್ ಅಂದು, ಇಂದೂ ಜೀವಾಳಾವಾಗಿದೆ, ನಿಮ್ಮ ಪ್ರೀತಿಗೆ ನಾನು ಕ್ರತ್ಜ್ನತೆ ಸಲ್ಲಿಸುತ್ತೇನೆ ಎನ್ನುತಾ, ಅವರು ನನಗೆ ಈ ಚರ್ಚಿನಿಂದ ಕೆಲವೇ ವರ್ಷಗಳಲ್ಲಿ ಕೆಲವು ಯುವಕರು ಯಾಜಕರಾಗಬೇಕು ಎಂದು ಒತ್ತಾಯ ಪೂರ್ವಕವಾಗಿ ವಿನಂತಿಸಿಕೊಂಡರು.
ಪಾಲನ ಮಂಡಳಿ ಉಪಾಧ್ಯಕ್ಷೆ ವಾಲ್ಟರ್ ಡಿಸೋಜಾ, ಕಾರ್ಯದರ್ಶಿ ಡೋಮಿನಿಕ್ ಬ್ರಗಾಂಜಾ, ಆಯೋಗಗಳ ಸಂಯೋಜಕಿ ಶೋಭ ವಾಜ್, ಧರ್ಮ ಭಗಿನಿಯರು, ಪಾಲನ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಭಾಗಿಯಾದರು.
ಬಿಶಪರ ಈ ಭೇಟಿ 2 ದಿನಗಳದಾಗಿದ್ದು, ಶನಿವಾರ ಸಂಜೆ ಆಗಮಿಸಿ, ಚರ್ಚಿನ ಪರವಾಗಿ ಗೌರವಪೂರ್ವಕ ಸ್ವಾಗತ ನೀಡಲಾಯಿತು. ವಿವಿಧ ಪ್ರಾರ್ಥನೆಗಳನ್ನು ನಡೆಸಿ, ಪಾಲನ ಮಂಡಳಿ ಸದಸ್ಯರಿಗೆ ಪ್ರಮಾಣ ವಚನ ಭೋದಿಸಿದರು. ನಂತರ ಸಮಾಧಿ ಭೂಮಿಯಲ್ಲಿ ಪ್ರಾರ್ಥನೆ ನಡೆಸಿ, ಆಶಿರ್ವದಿಸಿದರು.
ಭಾನುವಾರ ಬೆಳಗ್ಗೆಯಿಂದ, ಪಾಲನ ಮಂಡಳಿಯವರ ಜೊತೆ ಚರ್ಚೆ, ಸಮಾಲೋಚನ ನಡೆಸಿದರು. ನಂತರ ವಿವಿಧ ಸಂಘಟನೆಗಳ ಜೊತೆ ಮಾತುಕತೆ, ಸಮಾಲೋಚನ ನಡೆಸಿದರು. ಸಂಜೆ ಕಿರು ಸಮುದಾಯದ ಕೂಟದಲ್ಲಿ ಭಾಗಿಯಾದರು. ಚರ್ಚ್ ವತಿಯಿಂದ ಆನಾರೋಗ್ಯಸ್ಥರ 2 ಮನೆಗಳಿಗೆ ಭೇಟಿ ಮಾಡಿದರು.
ಬಿಷಪರ ಅಧಿಕ್ರತ ಭೇಟಿ ಸಂದರ್ಭದಲ್ಲಿ ಬಿಷಪರ ಮುಖ್ಯ ವಿಷಯಗಳು
ನಮ್ಮಲ್ಲಿ ಯಾಜಕರಾಗಲು ಹೆಚ್ಚು ಯುವಕರು ಮನಸು ಮಾಡಬೇಕು,
ನಮಗೊಂದು ಹಣ ಮಾಡಲು ಅಲ್ಲ, ಸೇವೆ ನೀಡುವ ಆಸ್ಪತ್ರೆ ಬೇಕು
ನಮ್ಮ ಶಾಲೆಗಳ ಬಗ್ಗೆ ನೂತನ ಚಿಂತನೆಯಾಗಬೇಕು



































































































































































