JANANUDI.COM NETWORK

ಉಡುಪಿ,ಜ.6: ಉಡುಪಿಯ ಕೆಥೋಲಿಕ್ ಧರ್ಮಪ್ರಾಂತ್ಯದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ “ಮಿಲಾಗ್ರೆಸ್ ಹೋಮ್” ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಅರ್ಚಕರಿಗಾಗಿ ಆಶ್ರಯ ಮನೆ ಮತ್ತು ಮೇರಿಮಾತೆಯ ಗ್ರೊಟ್ಟೊವನ್ನು ಜನವರಿ 6 ರಂದು ಉಡುಪಿಯ ಕಲ್ಯಾಣಪುರದಲ್ಲಿ ಆಗ್ರಾದ ನಿವೃತ್ತ ಆರ್ಚ್ ಬಿಷಪ್ ಅ| ವಂದನೀಯ ಆಲ್ಬರ್ಟ್ ಡಿಸೋಜ, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಪೀಟರ್ ಪೌಲ್ ಸಲ್ಡಾನ್ಹಾ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು ಉದ್ಘಾಟಿಸಿ ಆಶೀರ್ವದಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದಲ್ಲಿ ಪಾಲನಾ ಯೋಜನೆ ಮಿಷನ್ – 2025 ರ ಪ್ರಾರಂಭದ ನಂತರ ಉಡುಪಿ ಧರ್ಮಪ್ರಾಂತ್ಯದ ಸ್ಥಾಪನೆಯ ಪ್ರಾರಂಭದಿಂದಲೂ ಅದರ ದೂರದೃಷ್ಟಿ, ಧ್ಯೇಯ ಮತ್ತು ಉದ್ದೇಶಗಳನ್ನು ಇಡೇರಿಸುವ ಸಲುವಾಗಿ ನಿವೃತ್ತ ಅರ್ಚಕರ ಮನೆ ಮತ್ತು ಪಾಲನಾ ಕೇಂದ್ರವು ಎರಡು ಪ್ರಮುಖ ಮತ್ತು ಅನಿವಾರ್ಯ ಯೋಜನೆಗಳನ್ನು ಹೊಂದಿತ್ತು. ಈಗ, ಉದಾರ ದಾನಿಗಳು ಮತ್ತು ಹಿತೈಷಿಗಳ ಸಹಾಯದಿಂದ ಮಿಲಾಗ್ರೆಸ್ ಹೋಮ್, ಧರ್ಮಪ್ರಾಂತ್ಯದ ಪಾದ್ರಿಗಳು ಧರ್ಮಪ್ರಾಂತ್ಯದ ವಿವಿಧ ಹುದ್ದೆಗಳಲ್ಲಿ ದಶಕಗಳ ಕಾಲ ತಮ್ಮ ಅರ್ಹ ಸೇವೆಯ ನಂತರ ನಿವೃತ್ತರಾದ ನಂತರ ವಾಸಸ್ಥಾನವು ಸಿದ್ದವಾಗಿದೆ.
ಮಂಗಳೂರಿನ ನಿವೃತ್ತ ಬಿಷಪ್ ಅತಿ ವಂ. ಅಲೋಶಿಯಸ್ ಪಾವ್ಲ್ ಡಿಸೋಜ, ಜನರೇಟರ್ ಮತ್ತು ವಾಹನವನ್ನು ಆಶೀರ್ವದಿಸಿದರು ಉಡುಪಿ ಧ್ರಮಪ್ರಾಂತ್ಯದ ಬಿಷಪ್ ಅ| ವಂ|ಡಾ| ಜೆರಾಲ್ಡ್ ಲೋಬೋ ಯೋಜನೆಯ ಸಾಕಾರಕ್ಕೆ ಸಹಕರಿಸಿದವರಿಗೆ ಮತ್ತು ಎಲ್ಲರನ್ನು ವಂದಿಸಿದರು. ಧರ್ಮಪ್ರಾಂತ್ಯದ ವಲಯ ಪ್ರಮುಕ ಧರ್ಮಗುರುಗಳು, ಇತರ ಹಲವಾರು ಧರ್ಮಗುರುಗಳು, ಧರ್ಮಭಗಿನಿಯರು, ದಾನಿಗಳು, ಹಾಗೂ ಭಕ್ತಾದಿಗಳು ಇದ್ದರು.

































