HOLY ROSARY CHURCH, KUNDAPUR – 450 th JUBILEE SOUVENIR 2021

ಶ್ರೀನಿವಾಸಪುರದಲ್ಲಿ ಅಬಕಾರಿ ಪೊಲೀಸರ ದಾಳಿ :730 ಗ್ರಾಮ್ ಗಾಂಜ ವಶ

ಶ್ರೀನಿವಾಸಪುರ: ದಿನಾಂಕ 23.07 2023 ರಂದು ಸಂಜೆ ಶ್ರೀನಿವಾಸಪುರ ನಗರದ ಜಗಜೀವನ್ ರಾಮ್ ಪಾಳ್ಯ ಮುಳ್ಬಾಗಲು ರಸ್ತೆಯ ದರ್ಗಾ ಬಳಿ ದಾಳಿ ಮಾಡಿ ಸಲ್ಮಾನ್ ಎಂಬುವರು TATA ACE tempo ವಾಹನದಲ್ಲಿ 430 gm ಒಣ ಗಾಂಜ ಹಾಗೂ ಮೊಹಮ್ಮದ್ ಹುಸೇನ್ ಸಾಬ್ ಎಂಬುವವರು TVS 50 ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ 300 gm ಒಣಗಿದ ಗಾಂಜಾ ವನ್ನು ಗಿರಾಕಿಗಳಿಗೆ ಮರಾಟಕ್ಕಾಗಿ ಸಾಗಾಟ ಮಾಡುತ್ತಿದ್ದದ್ದನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ NDPS ಕಾಯ್ದೆ 1985 ರಡಿ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ, ದಾಳಿಯಲ್ಲಿ ಶ್ರೀ ರೋಹಿತ್ ಬಿ ಎಸ್ ಅಬಕಾರಿ ನಿರೀಕ್ಷಕರು, ಶ್ರೀನಿವಾಸಪುರ ವಲಯ ಹಾಗೂ ಶ್ರೀಮತಿ ಪುಷ್ಪ ಅಬಕಾರಿ ನಿರೀಕ್ಷಕರು ಕೋಲಾರ ಉಪ ವಿಭಾಗ ರವರು ಮತ್ತು ಸಿಬ್ಬಂದಿಗಳಾದ ಮಂಜುನಾಥ್ ರಾಘವೇಂದ್ರ ಶಿವಾನಂದ್ ಈಶ್ವರ ಭಾಗವಹಿಸಿದ್ದರು. ಒಟ್ಟು 730 ಗ್ರಾಮ್ ಗಾಂಜವನ್ನು ವಶ ಪಡಿಸಿಕೊಳ್ಳಲಾಗಿದೆ

ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಬಗ್ಗೆ ಪರಿಶೀಲಿಸಿ ಕ್ರಮ -ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಬೆಂಗಳೂರು : ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಪ್ರೆಸ್ ಕ್ಲಬ್ ಮತ್ತು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಜಂಟಿಯಾಗಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರು ಗ್ರಾಮೀಣ ಪತ್ರಕರ್ತರ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಿದ್ದಾರೆ. ಈ ಬಾರಿ ಗ್ಯಾರಂಟಿ ಯೋಜನೆ ಜಾರಿ ಆದ್ಯತೆ ಆಗಿದ್ದರಿಂದ ಇದೆಲ್ಲಾ ಸಾಧ್ಯವಾಗಲಿಲ್ಲ. ಚರ್ಚೆ ಮಾಡಿ ಮುಂದಿನ ಕ್ರಮ ಜರುಗಿಸಲಾಗುವುದು. ಸುಮ್ಮನೆ ನಿಮಗೆ ಭರವಸೆ ಕೊಡುವುದಿಲ್ಲ. ನುಡಿದಂತೆ ನಡೆದು ಮಾಡಿ ತೋರಿಸುತ್ತೇವೆ ಎಂದರು.

ಪತ್ರಕರ್ತರ ಹಲವು ಬೇಡಿಕೆಗಳ ಬಗ್ಗೆ ಗಮನ ಸೆಳೆದಿದ್ದೀರಿ. ಹಂತ ಹಂತವಾಗಿ ಬೇಡಿಕೆ ಈಡೇರಿಸಲಾಗುವುದು. ಈ ಬಗ್ಗೆ ಶಿವಾನಂದ ಅವರ ಜೊತೆಗೆ ಚರ್ಚೆ ಮಾಡಲಾಗುವುದು. ಪತ್ರಕರ್ತರ ಹಿತ ಕಾಯಲು ಸರ್ಕಾರ ಬದ್ದವಾಗಿದೆ ಎಂದರು.

ಪ್ರೆಸ್ ಕ್ಲಬ್ ಜಾಗದ ಬಗ್ಗೆ ಶ್ರೀಧರ್ ಪ್ರಸ್ತಾಪಿಸಿದ್ದು, ಅರಕೆರೆ ಜಯರಾಂ ಗಮನ ಸೆಳೆದಿದ್ದಾರೆ. ನಿಮ್ಮನ್ನು ಯಾರೂ ಒಕ್ಕಲೆಬ್ಬಿಸುವುದಿಲ್ಲ. ನೀವು ಇದೇ ಜಾಗದಲ್ಲಿ ಮುಂದುವರಿಯುತ್ತೀರಿ ಎಂದು ಮುಖ್ಯಮಂತ್ರಿ ಅಭಯ ನೀಡಿದರು.

ನಾನು ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಿಕಾ ದಿನಾಚರಣೆ ಉದ್ಘಾಟಿಸಿದ್ದೇನೆ. ಅನೇಕ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿದ ಸೌಭಾಗ್ಯ ನನ್ನದು. ನಿಮಗೆಲ್ಲ ಪತ್ರಿಕಾ ದಿನಾಚರಣೆ ಶುಭಾಶಯ ಕೋರುತ್ತೇನೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತರನ್ನು ಯಶಸ್ವಿನಿ ಯೋಜನೆಗೆ ಸೇರಿಸಬೇಕು. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಬೇಕು. ಪತ್ರಕರ್ತರು ಮತ್ತು ಪತ್ರಿಕೆಗಳ ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಗಮನ ಸೆಳೆದರು.

ಚುನಾವಣೆ ಮುಂಚೆ ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಪತ್ರಕರ್ತರಿಗಾಗಿ 500 ಕೋಟಿ ಮೀಸಲಿಡುವ ಆಶ್ವಾಸನೆ ನೀಡಿದ್ದು ಅಭಿನಂದನಿಯ. ಅದನ್ನು ಕಾರ್ಯಗತ ಮಾಡಲು ಬಜೆಟ್ ನಲ್ಲಿ ಹಣ ನೀಡಬೇಕು ಎಂದು ತಗಡೂರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಿ.ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಾಮಾಜಿಕ ಜವಾಬ್ದಾರಿ ಬಗ್ಗೆ ಹಿರಿಯ ಪತ್ರಕರ್ತರಾದ ಪೂರ್ಣಿಮಾ, ಡಿ.ಉಮಾಪತಿ, ರವಿಹೆಗಡೆ ಅವರು ಮಾತನಾಡಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪ್ರಭಾಕರ್,ಶಾಸಕರಾದ ಅಜಯ್ ಸಿಂಗ್, ಗೋವಿಂದ ರಾಜು, ವಾರ್ತಾ ಇಲಾಖೆ ಆಯುಕ್ತ ಹೇಮಂತ ನಿಂಬಾಳ್ಕರ್, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ, ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಕಾರ್ಯದರ್ಶಿ ಸೋಮಶೇಖರ ಕೆರಗೋಡು ಮತ್ತಿತರರು ಹಾಜರಿದ್ದರು.

ಹಿಂದುಳಿದ ಪತ್ರಿಕೆಗಳಿಗೆ ಮುಖ್ಯಮಂತ್ರಿ ಅಭಯ:


ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ಪತ್ರಕರ್ತರು ಹಿಂದುಳಿದ ಪತ್ರಿಕೆಗಳಿಗೆ ಜಾಹೀರಾತು ಸೇರಿದಂತೆ ಯೋಜನೆ ಮುಂದುವರಿಸುವಂತೆ ಗಮನ ಸೆಳೆದರು. ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದೆ ನನ್ನ ಅಧಿಕಾರಾವಧಿಯಲ್ಲಿಯೇ ಆ ವರ್ಗಕ್ಕೆ ಸೌಲಭ್ಯ ನೀಡಿದ್ದೆ. ತಾರತಮ್ಯ ಮಾಡದೆ ಜಾಹೀರಾತು ನೀಡಿಕೆ ಮತ್ತು ಹಿಂದುಳಿದ ವರ್ಗಗಳ ಪತ್ರಿಕೆಗಳಿಗೂ ಯೋಜನೆ ಮುಂದುವರಿಸುವುದಾಗಿ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತೆಲೆ ಕರ್ಮಕಾಂಡಕ್ಕೆ ಅಹಿಂಸೆ ರಕ್ತಪಾತಕ್ಕೆ ಆಸ್ಪದ ನೀಡಿದಕ್ಕೆ ಕುಂದಾಪುರದಲ್ಲಿ ಬೃಹತ್ ಪ್ರತಿಭಟನೆ


ಕುಂದಾಪುರ:ಜು.14: ಮಣಿಪುರದಲ್ಲಿ ಎರಡುವರೆ ತಿಂಗಳ ಹಿಂದೆ ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿ ಹಿಂಸೆ ನೀಡಿ ಅತ್ಯಾಚಾರ ವೆಸಗಿದ ಮ್ರಗೀಯ ಘಟನೆಗಾಗಿ, ಅಲ್ಲಿಯ ರಕ್ತಪಾತಕ್ಕಾಗಿ ಹಿಂಸೆಗಾಗಿ ಅಲ್ಲಿಯ ಆಸ್ತಿಪಾಸ್ತಿ ನಷ್ಟಕ್ಕಾಗಿ ಅಸಯಪಟ್ಟು ಮಣಿಪುರ ರಾಜ್ಯ ಮತ್ತು ಕೇಂದ್ರ ಸರಕಾರದ ಸೂಕ್ತ ಕ್ರಮ ತೆಗೆದುಕೊಳ್ಳದೆ ನಿರಂತರ ಗಲಭೆ ಕೊಲೆಗಳಿಗೆ ಕಾರಣವಾಗಿದ್ದಕ್ಕೆ ಕುಂದಾಪುರದಲ್ಲಿ ಸಮಾನ ಮನಸ್ಕರಿಂದ, ಸಹಬಾಳ್ವೆ, ಸಮುದಾಯ, ಕಥೊಲಿಕ್ ಸಭಾ, ಮಹಿಳಾ ಸಂಘಟನೆ – ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಕುಂದಾಪುರ ಇವರ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಂದಾಪುರ ವಲಯದ ಎಲ್ಲಾ ಕಡೆಗಳಿಂದ ಜಾತಿ ಭೇದ ಮರೆತು ಜನ ಸೇರಿ ಪ್ರತಿಭಟಿಸಿತು.
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಶಶಿಧರ ಹೆಮ್ಮಾಡಿ ಮಾತನಾಡಿ ಮಣಿಪುರದಲ್ಲಿ ನಡೆದ ಘಟನೆ ದೇಶವೇ ತಲೆತಗ್ಗಿಸುವಂತಾಹದ್ದು. ಈ ಘಟನೆಯ ನಡೆದ ಮಾಹಿತಿ ಸ್ಥಳೀಯ ಪೆÇಲೀಸ್, ಸರ್ಕಾರಕ್ಕೆ ಗೊತ್ತಿದ್ದರೂ ಕ್ರಮ ಕೈಗೊಳ್ಳಲಿಲ್ಲ ‘ಮಣಿಪುರದ ಬುಡಕಟ್ಟು ಜನಾಂಗವೊಂದರ ಮೇಲೆ ಭಯಾನಕ ಕೌರ್ಯ ನಡೆದಿದೆ. ಮಹಿಳೆಯರನ್ನು ದೇವರು ಎನ್ನುವ ಬಿಜೆಪಿ ನೇತೃತ್ವದ ಸರ್ಕಾರ, ಪರಿವಾರ ಈ ಘಟನೆಯ ಬಗ್ಗೆ ಕಠಿಣ ನಿಲುವುಗಳನ್ನು ತಳೆಯದಿರುವುದರ ಹಿಂದೆ ಆನೇಕ ಕಾರಣಗಳು ಇವೆ. ಮಣಿಪುರ ಘರ್ಷಣೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮನೆಗಳನ್ನು ಸುಟ್ಟು ಹಾಕಿದರು. ಲೆಕ್ಕವಿಲ್ಲದಷ್ಟು ಚರ್ಚಗಳನ್ನು ನಾಶ ಮಾಡಿದರು. ಇದರಿಂದ ಸರ್ಕಾರಗಳ ವೈಫಲ್ಯ ಇಲ್ಲಿ ಸ್ಪಷ್ಟವಾಗುತ್ತದೆ’ ಎಂದರು. ಜೂಡಿತ್ ಮೆಂಡೊನ್ಸಾ ಮಾತನಾಡಿ “ಬಿಜೆಪಿ ಸರಕಾರ ಬೇಟಿ ಬಚಾವೊ ಬೇಟಿ ಪಡಾವೊ ಅಂತಾ ಹೇಳುತ್ತದೆ ಆದರೆ ವಾಸ್ತವವಾಗಿ ಮಹಿಳೆಯರಿಗೆ ಇವರಿಂದ ಯಾವ ಮರ್ಯಾದೆಯೂ ಇಲ್ಲ, ಬಿಜೆಪಿ ಆಡಳಿತ ಇರುವಲ್ಲಿ ಹೆಂಗಸರ ಮಾನಹರಣ ಮಾಡಿದಂತಹ ಘಟನೆಗಳಿಂದ ಇದು ಸಾಬಿತು ಆಗಿದೆ’ಎಂದರು.
ವಿಕಾಸ್ ಹೆಗ್ಡೆ ಮಾತನಾಡಿ ಇದು ಬಿಜೆಪಿ ಸರಕಾರದ ಕೃಪಾಪೋಷಿತ ಕುತಂತ್ರವಾಗಿದೆ, ಇದರಲ್ಲಿ ಪ್ರಧಾನ ಮಂತ್ರಿ ಮೌನ ವಹಿಸಿದ್ದು ನೋಡಿದರನೇ ತಿಳಿಯುತ್ತೆ. ಇಂದು ಬಿಜೆಪಿಯಿಂದಾಗಿ ದೇಶದಲ್ಲಿ 10 -15 ಸೇಕಡ ಜನರು ಇತರ ಧರ್ಮದವರ ವಿರುದ್ದ ವೈರತ್ವ ಸಾಧಿಸಿ ಗಲಭೆಗಳನ್ನು ಮಾಡುತ್ತಾರೆ, ಆದರೆ 85 ಸೇಕಡ ಹಿಂದು ಧರ್ಮದವರು ಅನ್ಯ ಧರ್ಮದವರ ಜೊತೆ ಅನ್ಯೋನೆತೆಯಿಂದ ಬಾಳುತ್ತಾರೆ, ನಾವು ಸಾಮರಸ್ಯದಲ್ಲಿ ಬದುಕುತ್ತೆವೆ, ಎನೇ ತೊಂದರೆ ಬಂದರು ಅನ್ಯ ಧರ್ಮದವರ ಜೊತೆ ನಾವಿದ್ದೆವೆ’ ಎಂದು ಹೇಳಿ ಧೈರ್ಯ ತುಂಬಿದರು. ಹುಸೇನ್ ಮತನಾಡಿ ‘ಅವರು ಗರ್ಭಿಣಿಯ ಹೊಟ್ಟೆಯನ್ನು ಬಗೆದು ಆ ಮಗುವನ್ನು ಸುಟ್ಟು ಹಾಕಿದರು, ಅದರ ಅಪರಾಧಿ ಯಾರೆಂದು ಇಂದಿಗೂ ಪತ್ತೆಯಾಗಲಿಲ್ಲ, ಇಂದು ಮಣಿಪುರದಲ್ಲಿ ಒಂದು ಜನಾಂಗದವರ ಮೇಲೆ ವಿಕ್ರತವಾದ ಕ್ರೌವ್ರ್ಯ ಎಸಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿದೆ, ಮುಂದಿನ ದಿನಗಳಲ್ಲಿ ಇಂತಹದಕ್ಕೆ ಆಸ್ಪದ ನೀಡದಿರಲು ಕೋಮುವಾದ ಪಕ್ಷಕ್ಕೆ ಮತ ನೀಡಬಾರದು’ ಎಂದರು. ಸಿಪಿಐ ಚಂದ್ರಶೇಖರ ಮಾತನಾಡಿ ‘ಮಣಿಪುರದ ಕುಕ್ಕಿ ಜನಾಂಗ ಬಹಳ ಕಾಡು, ಭೂಮಿ ಬೆಳೆಗಳಿಂದ ಸಮ್ರದ್ದಿಯಾಗಿದೆ, ಇದು ಬಹು ಸಂಖ್ಯಾಕ ಜನರಿಗೆ ಅಸೂಯೆ, ಇವರು ಕುಕ್ಕಿ ಜನರಿಗೆತೊಂದರೆಕೊಡಲು ಬಿಜೆಪಿಯೇ ಕುಮ್ಮಕ್ಕು ನೀಡಿದೆ’ ಎಂದು ಅಲ್ಲಿಯ ವಾಸ್ತಾವ್ಯಂಶ ತಿಳಿಸಿದರು.
ಪ್ರತಿಭಟನೆಯಲ್ಲಿ ಕ್ಯಾಂಡಲ್ ಬೆಳಗಿ ಹಿಂಸಾಚಾರದಲ್ಲಿ ಮ್ರತ ಹೊಂದಿದವರಿಗೆ ಶ್ರದ್ದಾಂಜಲಿ ಅರ್ಪಿಅಸಲಾಯಿತು. ಪ್ರತಿಭಟನೆಯಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಸ್ಟ್ಯಾನಿ ತಾವ್ರೊ ಅವರ ಉಪಸ್ಥಿತಿಯಲ್ಲಿ ವಲಯದ ಎಲ್ಲ ಕ್ರೈಸ್ತ ಧರ್ಮಗುರುಗಳು, ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳು, ಹಲವಾರು ಧರ್ಮಭಗಿನಿಯರು, ಸಹಬಾಳ್ವೆಯ ಸಂಚಾಲಕ ರಫೀಕ್, ಮಂಜು ಕಾಳಾವರ, ರಫಿಕ್ ಸಹಬಾಳ್ವೆ, ದಲಿತ ಸಂಘರ್ಷ ತಾಲೂಕು ಸಮಿತಿ ಅಧ್ಯಕ್ಶ ಮಂಜುನಾಥ ಗಿಳಿಯಾರ್, ಕುಂದಾಪುರ ವಲಯದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಮಾನವ ಬಂಧುತ್ವ ವೇದಿಕೆ ಕುಂದಾಪುರ ಘಟಕದ ಸಂಚಾಲಕ ಬರ್ನಾಡ್ ಡಿಕೋಸ್ತಾ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಸಿಪಿಎಮ್ ಅಧ್ಯಕ್ಷರಾದ ಹೆಚ್ ನರಸಿಂಹ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಅಬ್ಬು ಅಹ್ಮದ್, ಅಶ್ಬಕ್. ಕಾಂಗ್ರೆಸಿನ ಚಂದ್ರ ಅಮೀನ್, ಆಶಾ ಕರ್ವಾಲ್ಲೊ, ಕೇಶವ್ ಭಟ್, ರೋಶನ್ ಶೆಟ್ಟಿ, ರೇವತಿ ಶೆಟ್ಟಿ, ಗಂಗಾಧರ್ ಶೆಟ್ಟಿ, ಅಭಿಜಿತ್ ಪೂಜಾರಿ, ಗಣೇಶ್ ಶೇರೆಗಾರ್, ಶೋಭಾ ಸಚ್ಚಿದಾನಂದ, ಜ್ಯೋತಿ ನಾಯ್ಕ್, ಕುಮಾರ್ ಖಾರ್ವಿ, ಜ್ಯೋತಿ, ಹಾರೋನ್ ಸಾಹೇಬ್, ಅಶೋಕ್ ಸುವರ್ಣ, ರೋಶನ್ ಬರೆಟ್ಟೊ, ಮುನಾಫ್, ಶಾಲೆಟ್ ರೆಬೆಲ್ಲೊ, ಯಾಸಿನ್ ಹೆಮ್ಮಾಡಿ, ಶಾಂತಿ ಪಿರೇರಾ, ಅಬ್ದುಲ್ಲಾ ಕೋಡಿ, ಶಿವಕುಮಾರ್ ಸಮುದಾಯ ಅಧ್ಯಕ್ಷರಾದ ಸದಾನಂದ ಬೈಂದೂರು, ಸದಸ್ಯರಾದ ಉದಯ್ ಗಾಂವ್ಕರ್, ವಾಸುದೇವ ಗಂಗೇರ್, ಬಾಲಕ್ರಷ್ಣ ಮುಂತಾದ ಪ್ರಮುಖರು ಹಾಜರಿದ್ದರು.
ಸಹಬಾಳ್ವೆ ಕುಂದಾಪುರದ ಸಂಚಾಲಕರಾದ ವಿನೋದ್‍ಕ್ರಾಸ್ಟೊ ಪ್ರಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ನೀಡಿದರು.

ಕೋಲಾರ ; ಭೌದ್ಧಿಕ ಆಸ್ತಿ ಹಕ್ಕುಗಳ ಅರಿವು ಕಾರ್ಯಕ್ರಮ

ಕೋಲಾರ:- ನಗರದ ಶ್ರೀ ದೇವರಾಜ್ ಅರಸ್ ಕಾಲೇಜ್ ಆಫ ನರ್ಸಿಂಗ್ ಸಂಶೋಧನಾ ಮತ್ತು ಅಭಿವೃದಿ ಇಲಾಖೆ ಮತ್ತು ಸಹಯೋಗದಿಂದ ಶ್ರೀ ದೇವರಾಜ್ ಅರಸ್ ವಿಶ್ವವಿದ್ಯಾಲಯರವರ ಶೈಕóಣಿಕ ಹಿರಿಯ ಶಿಕ್ಷಣ ಸಂಶೋಧನಾ ಕೆಂದ್ರ ಟಮಕ ಕೋಲಾರ ಸಂಸ್ಥೆಯವರ ಕಡೆಯಿಂದ ಭೌದ್ದಿಕ ಆಸ್ತಿ ಹಕ್ಕುಗಳ ಅರಿವು ಮಂಡಿಸುವ ಬಗ್ಗೆ ಕುರಿತು ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಲೀಗಲ್ ಅಡೈಸರ್ ಸ್ಥಾಪಕರು ಹಾಗೂ ಸಿಇಓ ಆಫ್ ಲೈಫ್ಮ ಇಂಟಲೇಕಟ್ ಕನ್ಸಲ್ಟೇನ್ಸಿ (ಪ್ರೈ,ಲಿ.) ಲಿಪಿಕಾ ಸಾಹು ಗಿಡಕ್ಕೆ ನೀರುಣಿಸುವ ಮೂಲಕ ಉದಾಟಿಸಿ, ಭೌದ್ದಿಕ ಆಸ್ತಿ ಹಕ್ಕುವಿನ ಬಗ್ಗೆ ಮಾಹಿತಿ ನೀಡಿದರು.
ಸಂಶೋಧನಾ ನಿರ್ದೇಶಕ ಡಾ. ಅಜೀಂ, ಡಾ. ಮಾದವಿ (ಪೋಷಣ ಇಲಾಖೆ), ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಜಯಲಕ್ಷ್ಮಿ, ಮೂರನೇ ವರ್ಷದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಎಲ್ಲಾ ಭೋಧಕ ವೃಂದದವರು ಪಾಲ್ಗೊಂಡಿದ್ದರು.

ಜೆಸಿಐ : ನಾಗೇಶ್ ನಾವಡ ರಿಗೆ ಉದ್ಯೋಗ ರತ್ನ ಪ್ರಶಸ್ತಿ

ಕುಂದಾಪುರ. ಜೆಸಿಐ ಇಂಡಿಯಾ ವಲಯ 15 ರ ಅಭಿವೃದ್ಧಿ ಬೆಳವಣಿಗೆ ಹಾಗು ವ್ಯವಹಾರ ವಿಭಾಗದ ವೃದ್ಧಿ ಸಮ್ಮೇಳನ ವು ಜೆಸಿಐ ಶಂಕರನಾರಾಯಣ ಆತಿತ್ಯದಲ್ಲಿ ಶಾಲಿನಿ ಜಿ ಶಂಕರ್ ಕನ್ವೆನ್ಷನ್ ಸೆಂಟರ್ ಹಾಲಾಡಿ ಯಲ್ಲಿ ಜರುಗಿತು

ಕಳೆದ 20 ವರ್ಷ ಗಳಿಂದ ಉದ್ಯೋಗ ನಡೆಸಿ ಜನರೊಂದಿಗೆ ಬೆರೆತು ಸಮಾಜ ಸೇವೆ ಮಾಡುತ್ತ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಹಕರಿಸುತ್ತ ಬಂದಿರುವ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಸದ್ಯಸ್ಯ ಪೂರ್ವ ಅಧ್ಯಕ್ಷರು ಪೂರ್ವ ವಲಯ ಉಪಾಧ್ಯಕ್ಷ ರಾದ ನಾಗೇಶ್ ನಾವಡ ಇವರಿಗೆ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಜೆಸಿಐ ಇಂಡಿಯಾ ವಲಯ 15 ರ ವಲಯಾಧ್ಯಕ್ಷ ಪುರೊಷೋತ್ತಮ್ ಶೆಟ್ಟಿ ಪೂರ್ವ ವಲಯಾಧ್ಯಕ್ಷ ಕೆ ಕಾರ್ತಿಕೇಯ ಮಧ್ಯಸ್ಥ ಅಲನ್ ರೋಹನ್ ವಾಜ್ ವಲಯ ಉಪಾಧ್ಯಕ್ಷ ಅಭಿಲಾಶ್ ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ಡಾ ಸೋನಿ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ಗಿರೀಶ್ ಹೆಬ್ಬಾರ್ ಪ್ರಶಾಂತ್ ಹವಾಲ್ದಾರ್ ರಾಘವೇಂದ್ರ ಚರಣ್ ನಾವಡ ಮಂಜುನಾಥ್ ಕಾಮತ್ ಜಯಚಂದ್ರ ಶೆಟ್ಟಿ ವಿಜಯ ಬಂಡಾರಿ ಶ್ರೀಧರ್ ಸುವರ್ಣ ರಾಘವೇಂದ್ರ ಕುಲಾಲ್ ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಕಾರ್ಯದರ್ಶಿ ಸಂದೇಶ್ ಶೆಟ್ಟಿ
ಜೊತೆ ಕಾರ್ಯದರ್ಶಿ ಶೈಲಾ ಸದ್ಯಸ್ಯರಾದ ಮಿಥುನ್ ಸುವರ್ಣ ಮಹೇಶ್ ಶೇಟ್ ಭವ್ಯ ರಾವ್ ಅನಿತಾ ವಿಠಲ್ ಹೆಬ್ಬಾರ್ ನಾಗಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು
.

ಹಾಡು ನಿಲ್ಲಿಸಿದ ಖ್ಯಾತ ಕೊಂಕಣಿ ಗಾಯಕ ಕ್ಲೋಡ್ ಡಿ’ ಸೋಜಾ /Famous Konkani singer Claude D’Souza stopped the song

ಕೊಂಕಣಿ ಸಂಗೀತ ಲೋಕದ ಖ್ಯಾತ ಗಾಯಕ, ಗೀತರಚನೆಕಾರ ಮತ್ತು ಸಂಯೋಜಕ ಕ್ಲೋಡ್ ಡಿ’ಸೋಜಾ(67) ಅವರು ಜುಲೈ 24ರ ಸೋಮವಾರದಂದು ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಈ ಮೂಲಕ ಅವರು ಗಾಯನವನ್ನು ನಿಲ್ಲಿಸಿದ್ದಾರೆ.. ಸುಮಾರು 61 ಸಂಗೀತ ‘ನೈಟ್ಸ್’ ಗಳನ್ನು ಪ್ರಸ್ತುತ ಪಡಿಸಿರುವ ಕ್ಲೋಡ್ ಡಿಸೋಜಾ ಅವರು ಗಾಯಕ ಮಾತ್ರವಲ್ಲದೆ  ಗೀತರಚನೆಕಾರ ಮತ್ತು ಸಂಯೋಜಕರಾಗಿಯೂ ಸೇವೆ ಸಲ್ಲಿಸಿದ್ದಾರೆ ಡ್ರಮ್ಸ್ ಮತ್ತು ಗಿಟಾರ್‌‌ನಂತಹ ಸಂಗೀತ ವಾದ್ಯಗಳನ್ನು ನುಡಿಸಿಯು ಅವರು ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.

ಇನ್ನು ಕ್ಲೋಡ್ ಅವರು ಬರಹಗಾರ ಕೂಡ ಆಗಿದ್ದು 40 ಕ್ಕೂ ಹೆಚ್ಚು ಕೊಂಕಣಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಸಂಗೀತ ನಿರ್ದೇಶಕ ಮತ್ತು ನಟರಾಗಿ ಸಾಧನೆ ಮಾಡಿದ್ದಾರೆ. ಕ್ಲೌಡ್ ಅವರು 15 ಸಂಗೀತ ಸಿಡಿಗಳನ್ನು ಬಿಡುಗಡೆಗೊಳಿಸಿದ್ದು,  ಇತರ ಕಲಾವಿದರ ಆಲ್ಬಮ್‌ಗಳಿಗೆ ರಿದಮ್ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ.

     ಕ್ಲೋಡ್ ಅವರ ಧ್ವನಿ ಮತ್ತು ಧಾರ್ಮಿಕ ನಾಟಕಗಳಿಗೆ ‘ಸಂದೇಶ ಪ್ರಶಸ್ತಿ’ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಮತ್ತು ಪ್ರಶಸ್ತಿಗಳು ಲಭಿಸಿದೆ.ಈ ಬಹುಮುಖ ಪ್ರತಿಭೆಯ ಕಲಾವಿದನನ್ನು ಕಳೆದುಕೊಂಡ ಕೊಂಕಣಿ ಸಂಗೀತ ಲೋಕ ಸಂತಾಪ ವ್ಯಕ್ತಪಡಿಸಿದೆ.

ಜನನುಡಿ ಮಾಧ್ಯಮ ಸಂಸ್ಥೆ ಅವರಿಗೆ ಅಂತರಾಳದ ಶ್ರದ್ದಾಂಜಲಿ ಅರ್ಪಿಸುತ್ತದೆ.

Famous Konkani singer Claude D’Souza stopped the song


Renowned Konkani music singer, lyricist and composer Claude D’Souza (67) passed away in Mangalore on Monday, July 24 after a brief illness. With this he has stopped singing.. Claude D’Souza, who has presented around 61 musical ‘nights’, has not only served as a singer but also as a lyricist and composer playing musical instruments like drums and guitar and has contributed to the Konkani music scene.

Claude is also a writer and has staged more than 40 Konkani plays. Accomplished as music director and actor. Claude has released 15 music CDs and served as a rhythm composer for other artists’ albums.

Claude has received several accolades and awards including the ‘Sandesh Award’ and the Karnataka Sahitya Academy Award for his voice and religious dramas. The Konkani music world has mourned the loss of this multi-talented artiste.

 Jananudi media house pays a heartfelt tribute to him.

ಕೊಲ್ಲೂರು ಅರಶಿನಗುಂಡಿ ಜಲಪಾತ ವೀಕ್ಷಣೆಯ ದುರಂತ: ಕಾಲು ಜಾರಿ ಜಲಪಾತದಲ್ಲಿ ಕೊಚ್ಚಿ ಹೋದ ಯುವಕ /Kolluru Arashinagundi Falls View Tragedy: A young man slipped and got swept away in the falls

ಕುಂದಾಪುರ:ಜು.24. ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆಯಲ್ಲಿ ಜು.23 ರಂದು ಯುವಕನೋರ್ವ ಕಾಲು ಜಾರಿ ಬಿದ್ದು ನೀರುಪಾಲಾದ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಶಿನಗುಂಡಿ ಜಲಪಾತದಲ್ಲಿ ಸಂಭವಿಸಿದೆ. ನೀರುಪಾಲಾದ ಯುವಕ. ಭದ್ರಾವತಿ ಮೂಲದ ಶರತ್ ಕುಮಾರ್ (23) ಎಂದು ತಿಳಿದು ಬಂದಿದೆ.

ಭಾನುವಾರ ಮಧ್ಯಾಹ್ನ ಕೊಲ್ಲೂರಿಗೆ ತನ್ನ ಸ್ನೇಹಿತ ಗುರುರಾಜ್ ನೊಂದಿಗೆ ಕಾರಿನಲ್ಲಿ ಬಂದಿದ್ದ ಶರತ್ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದರು. ಈ ವೇಳೆ ಬಂಡೆಕಲ್ಲಿನ ಮೇಲೆ ನಿಂತು ಜಲಪಾತದಿಂದ ನೀರು ಧುಮ್ಮಿಕ್ಕುವ ದೃಶ್ಯ ನೋಡುತ್ತಿದ್ದ ವೇಳೆ ಕಾಲು ಜಾರಿ ನೀರಿನ ಸೆಳೆತದಲ್ಲಿ ಕೊಚ್ಚಿ ಹೋಫಿದ್ದಾನೆ.

  ಅವಘಡ ನಡೆದ ಕೂಡಲೇ ಶರತ್ ಸ್ನೇಹಿತ ಗುರುರಾಜ್ ಸಮೀಪದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿದರು, ಆದರೂ ಶರತ್ ಪತ್ತೆಯಾಗಲಿಲ್ಲ. ಅಗ್ನಿಶಾಮಕ ದಳ, ಅರಣ್ಯ ಇಲಾಖೆ‌ ಸಿಬ್ಬಂದಿಗಳು, ಕೊಲ್ಲೂರು ಪೊಲೀಸರು ಸೋಮವಾರ ಬೆಳಿಗ್ಗೆನಿಂದಲೂ ಪುನ: ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಈಜುಪಟು ಈಶ್ವರ್ ಮಲ್ಪೆ ಮತ್ತವರ ತಂಡವೂ ಆಗಮಿಸಿದೆ.

ಶರತ್ ಸ್ವ ಉದ್ಯೋಗಿಯಾಗಿದ್ದು, ಅವರ ಸ್ನೇಹಿತ ಗುರುರಾಜ್ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಭಾನುವಾರ ರಜೆ ಹಿನ್ನೆಲೆ ಜಲಪಾತ ವೀಕ್ಷಣೆಗೆ ಬಂದಿದ್ದರು. ಕಳೆದ‌ ಕೆಲ ದಿನಗಳಿಂದ‌ ಮಳೆ ಜೋರಾಗಿ ಸುರಿಯುತ್ತಿದ್ದರಿಂದ ಅರಶಿನಗುಂಡಿ ಜಲಪಾತದಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಆದರೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರವೇಶ ದ್ವಾರದಲ್ಲಿರುವುದನ್ನು ನೋಡಿ ಶರತ್ ಹಾಗೂ ಆತನ‌ ಸ್ನೇಹಿತ ಬೇರೊಂದು ದಾರಿಯಲ್ಲಿ ಜಲಪಾತಕ್ಕೆ‌ ತೆರಳಿದ್ದರು ಎನ್ನಲಾಗಿದೆ.

ಶರತ್ ಜಾರುವ ವೇಳೆ ಸ್ನೇಹಿತ ಗುರುರಾಜ್ ಚೀತ್ರಿಕರಿಸಿದ ವಿಡೀಯೊ ವೈರಲ್ ಆಗಿದೆ

ಶರತ್ ಸ್ನೇಹಿತ ಗುರುರಾಜ್ ಜಲಪಾತದ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ‌ಸೆರೆ ಹಿಡಿಯುತ್ತಿರುವ ವೇಳೆಯಲ್ಲೇ ಶರತ್ ಕಾಲು ಜಾರಿ ಬಿದ್ದಿದ್ದು, ಆ ದೃಶ್ಯವೂ ಮೊಬೈಲ್ ನಲ್ಲಿ‌ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Kolluru Arashinagundi Falls View Tragedy: A young man slipped and got swept away in the falls


Kundapur: Ju.24. On June 23, while going to see the waterfall, a young man slipped and fell into the water at the Arashinagundi waterfall under Kollur police station. A young man from Neerupala. It has been learned that Sarath Kumar (23) hails from Bhadravati.
Sarath, who had come to Kolluri with his friend Gururaj in a car on Sunday afternoon, had gone to Arashinagundi waterfall. At this time, while standing on a rock and watching the water gushing from the waterfall, he slipped and was crushed by the water.
Soon after the accident happened, Sharath’s friend Gururaj informed the forest department personnel nearby. The alert personnel informed the police and conducted an operation with the cooperation of the locals, but Sharath was never found. The fire brigade, forest department staff, Kollur police have been involved in re-operation since Monday morning, swimmer Ishwar Malpe and other teams have also arrived.
Sarath is self-employed and his friend Gururaj is working in an IT company and came to see the background falls on Sunday. Arashinagundi waterfall has been banned for tourists as it has been raining heavily for the past few days. However, it is said that Sharath and his friend went to the waterfall by a different route after seeing the forest department personnel at the entrance.
A video filmed by friend Gururaj while Sarath is sliding has gone viral
While Sharath’s friend Gururaj was capturing the scenes of the waterfall on his mobile phone, Sharath slipped and fell, and that scene was also captured on his mobile phone. This video is currently going viral on social media.

ಪಡುಕೊಣೆ ಸಂತ ಅಂತೋನಿ ಚರ್ಚಿನಲ್ಲಿ ವಯಸ್ಕರ ದಿನಾಚರಣೆ


ಪಡುಕೊಣೆ: ದಿನಾಂಕ 23.07.2023 ರಂದು ಸಂತ ಅಂತೋನಿ ಪಡುಕೊಣೆ ಚರ್ಚ್ ನಲ್ಲಿ ಕ್ರಿಸ್ತ ಸಮುದಾಯದ 70 ವರ್ಷ ಮೇಲ್ಪಟ್ಟವರ ಜೊತೆ ವಯಸ್ಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಧರ್ಮಗುರುಗಳು ವಂ ಫಾ ಫ್ರಾನ್ಸಿಸ್ ಕರ್ನೆಲಿಯೊರವರು ವಹಿಸಿ ’ಹಿರಿಯರು ಕುಟುಂಬದ ಆಸ್ತಿ ಅವರನ್ನು ನಾವು ಪ್ರೀತಿಯಿಂದ ಆರೈಕೆ ಮಾಡುವುದುರೊಂದಿಗೆ ಅವರನ್ನು ಗೌರವಿಸೋಣ’ ಎಂದು ಅವರು ಸಂದೇಶ ನೀಡಿದರು. ಅತಿಥಿಗಳಾಗಿ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಪ್ರಭು ಕೆನಡಿ ಪಿರೇರ ಕಾರ್ಯದರ್ಶಿ ಶ್ರೀ ಅಲೆಕ್ಸ್ ಅಂತೋನಿ ಡಿಸೋಜ ಮತ್ತು 21 ಆಯೋಗಗಳ ಸಂಯೋಜಕರಾದ ಶ್ರೀ ವಿನ್ಸೆಂಟ್ ಡಿಸೋಜಾ ಉಪಸ್ಥಿತರಿದ್ದರು.
ವಯಸ್ಕಾರಾದ ಹಿರಿಯನ್ನು ಗುಲಾಬಿ ಹೂ ಕೊಟ್ಟು ಗೌರವಿಸಲಾಯಿತು. ತದನಂತರ ಅದೃಷ್ಟ ಆಟಗಳನ್ನು ಆಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಮನೋರಂಜನೆಯಾಗಿ ಹಾಡುಗಳನ್ನು ಹಾಡಾಲಾಯಿತು. ಕಾರ್ಯಕ್ರಮವನ್ನು ಚರ್ಚಿನ ಕುಟುಂಬ ಆಯೋಗ ಮತ್ತು i.c.y.m ಹಾಗೂ y.c.s ಸಂಘಟನೆಗಳಿಂದ ಅಯೋಜಿಸಲಾಗಿತ್ತು
.

ಮಂಗಳೂರು ಮಣಿಪುರ ಘಟನೆಯನ್ನು ಖಂಡಿಸಿ ಸಮಾನ ಮನಸ್ಕರಿಂದ ಬೃಹತ್ ಪ್ರತಿಭಟನೆ/Massive protest by like-minded people condemning Mangalore Manipur incident

ಮಂಗಳೂರು: ಜು.೨೪  ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ,ಬಿಜೆಪಿ ಸರಕಾರದ ಕುಮ್ಮಕ್ಕಿನಿಂದ ನಡೆಯುತ್ತಿರುವ ಅನಿಯಂತ್ರಿತ ಜನಾಂಗೀಯ ದ್ವೇಷದ ಗಲಭೆಯನ್ನು ಖಂಡಿಸಿ ಇಂದು ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ಕ್ಲಾಕ್ ಟವರ್ ಮುಂಭಾಗದಲ್ಲಿ ದಿನಾಂಕ ಜುಲಾಯ್ ೨೩ ರಂದು ಬೃಹತ್ ಪ್ರತಿಭಟನೆ ನಡೆಯಿತು. ಸುರಿಯುತ್ತಿದ್ದ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಅಪಾರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು‌.ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

 ಜಾತ್ಯಾತೀತ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆಯ ಅಧ್ಯಕ್ಷರಾದ ಮಾಜಿ ಸಚಿವ ಬಿ ರಮಾನಾಥ ರೈ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದರು.ಬಳಿಕ ಮದರ್ ಥೆರೆಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರಾಯ್ ಕ್ಯಾಸ್ಟಲಿನೋ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ,ರೈತ ಸಂಘದ ಸನ್ನಿ ಡಿಸೋಜ, ಕೆಥೋಲಿಕ್ ವುಮನ್ಸ್ ಅಸೋಸಿಯೇಷನ್‌ ಜಿಲ್ಲಾಧ್ಯಕ್ಷರಾದ ಗ್ರೆಟ್ಟಾ ಪಿಂಟೊ,ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಲೆಟ್ ಪಿಂಟೋ ಸಭೆಯನ್ನುದ್ದೇಶಿಸಿ ಮಾತನಾಡಿದರು. 

  ಪ್ರತಿಭಟನೆಯಲ್ಲಿ ಕಾಂಗ್ರೆಸ್,CPI, CPIM ಪಕ್ಷಗಳು ಸೇರಿದಂತೆ ವಿದ್ಯಾರ್ಥಿ, ಯುವಜನ,ಮಹಿಳಾ,ದಲಿತ, ಆದಿವಾಸಿ,ವಕೀಲ, ಸಾಂಸ್ಕೃತಿಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Massive protest by like-minded people condemning Mangalore Manipur incident

Mangalore: July 24 Manipur women’s nude march, the uncontrolled racial hatred riots going on with the help of the BJP government, a massive protest was held in front of the clock tower on July 23 on behalf of the joint forum of like-minded organizations of Mangalore today. Despite the torrential rain, a large number of protestors gathered, especially women participated in large numbers.

Former Minister B Ramanath Rai, President of Joint Forum of Secular Parties and Organizations, inaugurated the protest meeting.Mother Teresa Forum President Roy Castellino, DYFI State President Munir Katipalla, Farmers’ Association Sunny D’Souza, Catholic Women’s Association District President Gretta Pinto, CPI Party District Secretary B Shekhar, Women’s Congress President Shalette Pinto. He addressed the gathering.

A large number of leaders and activists of Congress, CPI, CPIM parties, students, youth, women, dalit, adivasi, lawyers, cultural organizations participated in the protest.