HOLY ROSARY CHURCH, KUNDAPUR – 450 th JUBILEE SOUVENIR 2021

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಶಾಖೆಯ ಹದಿಮೂರನೇ ವಾರ್ಷಿಕ ಮಹಾ ಸಭೆ

ಕುಂದಾಪುರ ; ಸಪ್ಟಂಬರ್ 2010 ರಲ್ಲಿ ಪುನಃ ಶ್ಚೇತನ ಗೊಂಡ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಶಾಖೆಯ ಹದಿಮೂರನೇ ವಾರ್ಷಿಕ ಮಹಾ ಸಭೆಯು 23-09-2023 ರ ಶನಿವಾರ ಸಂಜೆ ಲಕ್ಷ್ಮೀ ನರಸಿಂಹ ಕಲಾಮಂದಿರ, ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿ ಜರಗಿತು. ರೆಡ್ ಕ್ರಾಸ್ ಅದ್ಯಕ್ಷರೂ ಹಾಗೂ ಕುಂದಾಪುರ ಉಪವಿಭಾಗ ಅಧಿಕಾರಿ ಯವರಾದ ರಶ್ಮಿ ಎಸ್. ಆರ್. ಇವರ ಅನುಮತಿಯ ಮೇರೆಗೆ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಇವರ ಅದ್ಯಕ್ಷತೆ ಯಲ್ಲಿ ಜರುಗಿತು. ಉಪ ಸಭಾಪತಿ ಡಾ. ಉಮೇಶ್ ಪುತ್ರನ್ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ಅದ್ಯಕ್ಷರಾದ ಜಯಕರ ಶೆಟ್ಟಿ ಯವರು ಪ್ರಾಸ್ತಾವಿಕ ಮಾತನಾಡಿ ಭಾರತೀಯ ರೆಡ್ ಕ್ರಾಸ್ ಕಳೆದ ಹದಿಮೂರು ವರ್ಷದಿಂದ ಮಾಡಿದ ಸಾಧನೆ ಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಸದಸ್ಯರಿಂದ ದೇಣಿಗೆ ಸಂಗ್ರಹಿಸಿ ಕಟ್ಟಡ ಮತ್ತು ಅತೀ ಅಗತ್ಯ ವಿರುವ ಮಷಿನರಿ ಅಳವಡಿಸಿ 2015 ಮೇ ಯಲ್ಲಿ ರಕ್ತ ನಿಧಿ ಕೇಂದ್ರ ವನ್ನು ಸ್ಥಾಪಿಸಲಾಯಿತು. ಈಗ ನಾವು ಸುಮಾರು ಎರಡುವರೆ ಕೋಟಿ ರೂಪಾಯಿ ಮಷಿನರಿ ಹೊಂದಿದ್ದೇವೆ. ನಮ್ಮ ಎರಡನೇ ಸಾಧನೆ ಸರಕಾರಿ ಆಸ್ಪತ್ರೆ ಯ ಆವರಣದಲ್ಲಿ ಜನ ಔಷಧಿ ಕೇಂದ್ರ ಸ್ಥಾಪಿಸಿ ಗುಣಮಟ್ಟದ ಔಷದ ಅತೀ ಕಡಿಮೆ ದರದಲ್ಲಿ ಜನರಿಗೆ ಒದಗಿಸುತ್ತಿದೆ. ಪ್ರಸ್ತುತ ಎರಡುವರೆ ಕೋಟಿ ವ್ಯವಹಾರ ನಡೆಸುತ್ತದೆ. ಇದಲ್ಲದೇ ಉಚಿತ E.C.G ಮತ್ತು ಉಚಿತ ಓಕ್ಸಿಜನ್ ಕೋನ್ಸಂಟ್ರೇಟರ್ ಅಗತ್ಯ ವಿರುವ ರೋಗಿಗಳಿಗೆ ನೀಡಲಾಗಿತ್ತಿದೆ. ಈ ವರೆಗೆ ನೂರಕ್ಕಿಂತ ಹೆಚ್ಚು ಜನರು ಇದರ ಪ್ರಯೋಜನ ಪಡೆದರು. ಹಳ್ಳಿಯ ಹಲವು ಸರಕಾರಿ ಶಾಲೆಗಳನ್ನು ಉಳಿಸಿ ಕೊಳ್ಳಲು ಪೀಠೋಪಕರಣ, ಸ್ಮಾರ್ಟ್ ಕ್ಲಾಸ್, ಶೌಚಾಲಯ, ಕಂಪ್ಯೂಟರ್ ಲ್ಯಾಬ್ ಇತ್ಯಾದಿಗಳನ್ನು ಒದಗಿಸಲಾಯಿತು.
ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ಆಡಳಿತಾತ್ಮಕ ವರದಿ ಮಂಡಿಸಿದರು. ಸರ್ವಾನುಮತದಿಂದ ಇದನ್ನು ಅಂಗೀಕರಿಸಿತು. ಖಜಾಂಚಿ ಶಿವರಾಮ ಶೆಟ್ಟಿ ರೆಡ್ ಕ್ರಾಸ್, ರಕ್ತ ನಿಧಿ ಮತ್ತು ಜನ ಔಷಧಿ ಕೇಂದ್ರದ ಲೆಕ್ಕಪತ್ರ ಮತ್ತು ಮುಂದಿನ ವರ್ಷದ ಬಜೆಟ್ ಮಂಡಿಸಿದರು. ಸಭೆಯು ಈ ಎರಡನ್ನೂ ಸರ್ವಾನು ಮತದಿಂದ ಅಂಗೀಕರಿಸಲಾಯಿತು. ನಿರೀಕ್ಷಕರಾಗಿ ಬಂದ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಗಳಾದ ಶ್ರೀ ಗಣನಾಥ ಎಕ್ಕಾರ್ ಇವರು ನಮ್ಮ ಕುಂದಾಪುರ ಶಾಖೆಯ ಕಾರ್ಯ ಚಟುವಟಿಕೆಗಳನ್ನು ಕೊಂಡಾಡಿದರು. ಇನ್ನಿತರ ವಿಷಯ ಗಳಿಲ್ಲದ ಕಾರಣ ಕಾರ್ಯದರ್ಶಿ ಯವರ ಧನ್ಯವಾದ ಗಳೊಂದಿಗೆ ಮಹಾ ಸಭೆ ಮುಕ್ತಾಯ ಗೊಂಡಿತು.

ತಲ್ಲೂರಿನಲ್ಲಿ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ನ 9 ನೇ ಶಾಖೆಯ ಶುಭಾರಂಭ


ಕುಂದಾಪುರ, ಸೆ.24: ಬೆಳೆಯುವಲ್ಲಿ ದಾಪುಕಾಲು ಹಾಕುತ್ತೀರುವ ಕುಂದಾಪುರದ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಇದಕ್ಕೆ ಈಗಾಗಲೇ 8 ಶಾಖೆಗಳು ಇದ್ದು, ಇದೀಗ ತಲ್ಲೂರಿನಲ್ಲಿ 9 ನೇ ಶಾಖೆಯ ಶುಭಾರಂಭಗೊಂಡಿದೆ.
ತಲ್ಲೂರು ಪೇಟೆ ಸಮೀಪದಲ್ಲಿ ಉಪ್ಪಿನಕುದ್ರು ರಸ್ತೆಯಲ್ಲಿರುವ “ಡೆಜಾನ್ ಕಾಂಪ್ಲೆಕ್ಸ್” ಸೆ.24 ರಂದು ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಇವರು ತಮ್ಮ ಶುಭಹಸ್ತದಲ್ಲಿ ಉದ್ಘಾಟಿಸಿ,ಉದ್ಘಾಟಿಸಿ ಅತಿಥಿಗಳ ಜೊತೆ ದೀಪ ಬೆಳಗಿಸಿ, ಪ್ರಾರ್ಥನೆ ನೆಡಸಿಕೊಟ್ಟು ಆಶಿರ್ವಚನ ಮಾಡಿದರು. ತಲ್ಲೂರು ಚರ್ಚಿನ ಧರ್ಮಗುರು ವಂ|ಎಡ್ವಿನ್ ಡಿಸೋಜಾ ಜೊತೆಗಿದ್ದು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ವಹಿಸಿ ‘ಕಥೊಲಿಕ್ ಸಭಾ ಸಂಘಟನೇಯ ಮೂಲಕ ನಮ್ಮ ಹಿರಿಯರು, ಬಹಳ ದೂರ ದ್ರಷ್ಟಿ ಇಟ್ಟುಕೊಂಡು ಸೊಸೈಟಿಯ ಸಣ್ಣ ಬೀಜವನ್ನು ಬಿತ್ತಿದ್ದರು, ಅದೀಗ ಅದು ಹೆಮ್ಮರವಾಗಿ ಬೆಳೆಯುತ್ತೀದೆ. ಇದು ಬೆಳೆಯಬೇಕಾದರೆ ನಿರಂತರವಾಗಿ ಶ್ರಮಿಸುತ್ತೀರುವ ನಿರ್ದೇಶಕರು, ಹಾಗೇ ಸೇವೆ ಸಲ್ಲಿಸುತ್ತೀರುವ ಕಾರ್ಯ ನಿರ್ವಹಣ ಅಧಿಕಾರಿಗಳು, ಸಿಬಂಧಿ ವರ್ಗ. ಹಾಗೇ ನಮ್ಮ ಸದಸ್ಯರು ಮತ್ತು ಗ್ರಾಹಕರು ಕೂಡ ಕಾರಣರಗಿದ್ದಾರೆ. ತಲ್ಲೂರಿನಲ್ಲಿ ಹಲವಾರು ಕೋ.ಆಪರೇಟಿವ್ ಸೊಸೈಟಿಗಳು ಇವೆ, ನಮ್ಮ ಸೊಸೈಟಿ ಉತ್ತಮ ಸೇವೆ ನೀಡುವ ಸಂಸ್ಥೆಯಾಗಿದ್ದು ಇಲ್ಲಿ ನಮಗೆ ಒಳಿತಾಗುವುದೆಂಬ ಆಶಯ ಇದೆ’ ಎಂದು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಮೇಬಲ್ ಡಿಆಲ್ಮೇಡಾ ಅತಿಥಿಗಳಿಗೆ ಪುಷ್ಪಗಳನ್ನು ನೀಡಿ ಸ್ವಾಗತಿಸಿದರು.
ಭದ್ರತಾ ಕೊಠಡಿ ಉದ್ಘಾಟನೆ ಮಾಡಿದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ‘ರೋಜರಿ ಸೊಸೈಟಿ ಉತ್ತಮ ಪ್ರಗತಿಯಲ್ಲಿದೆ, ಎಲ್ಲಿ ನಿರ್ದೇಶಕರು ಮತ್ತು ಸಿಬಂದಿ ವರ್ಗವು ಜೊತೆಜೊತೆಯಾಗಿ ಸಹಕರಿಸುತ್ತಾ, ಶ್ರಮಿಸುತ್ತಾರೋ ಆ ಸೊಸೈಟಿ ಪ್ರಗತಿ ಕಾಣುತ್ತದೆ, ಹಾಗಾಗಿ ಇಂದು ರೋಜರಿ ಸೊಸೈಟಿ ಈ ಸಂಸ್ಥೆ ಪ್ರಗತಿ ಕಂಡಿದೆ’ ಎಂದು ಶುಭ ಕೋರಿದರು.ಮುಖ್ಯ ಅತಿಥಿಗಳಾದ ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಿರೀಶ್ ಎಸ್.ನಾಯ್ಕ್ ‘ರೋಜರಿ ಸೊಸೈಟಿ ನಮ್ಮ ತಲ್ಲೂರಿನಲ್ಲಿ ಶುಭಾರಂಭಗೊಡಿದೆ, ನಾವು ಇದರ ಸದುಪಯೋಗ ಪಡಿಸಿಕೂಳ್ಳಬೇಕು, ಸಾಲ ಪಡೆದದ್ದು ಸರಿಯಾಗಿ ಮರಳಿಸಿದರೆ, ತನ್ನಿಂದ ತಾನೆ ನಾವು ಹಣವಂತಾಗಗಬಹುದು’ ಎಂದು ತಮ್ಮ ಅನುಭವನ್ನು ಹಂಸಿಕೊಂಡರು. ತಲ್ಲೂರು ಗ್ರಾಮಪಂಚಾಯತ್ ಸದಸ್ಯೆಯಾದ ಜೂಡಿತ್ ಮೆಂಡೊನ್ಸಾ ‘ನಮ್ಮ ಭಾರತದ ಆರ್ಥಿಕ ಸ್ತಿತಿ ಕೆಡದಿರಲೂ, ನಮ್ಮ ಭಾರತದ ಸ್ವಾಭಾವಿಕ ಗುಣವಾದ ಉಳಿತಾಯದ ಕ್ರಮದಿಂದ ಕಾರಣ, ಉಳಿಸುವ ಗುಣ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿದೆ, ಅದರಲ್ಲಿ ನಮ್ಮ ಹೆಂಗಸರು ಮುಂದು’ ಎಂದು ತಿಳಿಸಿದರು.

ಉದ್ಘಾಟಕರಾದ ಅ|ವಂ||ಸ್ಟ್ಯಾನಿ ತಾವ್ರೊ ಮಾತನಾಡಿ ‘ರೋಜರಿ ಸೊಸೈಟಿ ಬೆಳೆದು ಹೆಮ್ಮರವಾಗಿದೆ, ಇದಕ್ಕೆ ಕಾರಣ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗ, ಇವರ ಉತ್ತಮ ಗುಣ ಮಟ್ಟದ ಸೇವೆ ಮತ್ತು ಶ್ರಮ. ಇವತ್ತು 9 ನೇ ಶಾಖೆ ಉದ್ಘಾಟನೆಗೊಂಡಿದೆ ಮುಂದೆ ಹಲವಾರು ಶಾಖೆಗಳು ಶುಭಾರಂಭಗೊಳ್ಳಲಿವೆ ಇದು ರೋಜರಿ ಸೊಸೈಟಿಯ ಬೆಳವಣಿಗೆಯ ನೋಟವಾಗಿದೆ. ರೋಜರಿ ಸೊಸೈಟಿ ಬರೆ ಆರ್ಥಿಕ ಪ್ರಗತಿಯನ್ನು ಮಾತ್ರ ಗುರಿಯನ್ನಾಗಿಸದೆ, ಜೊತೆಗೆ ಸಮಾಜಕ್ಕೆ ಒಳಿತಾಗುವ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ, ಸಿಬಂದಿಯವರ ಮಕ್ಕಳ ಶಿಕ್ಷಣಕ್ಕೆ ಯೋಜನೆ, ಸದಸ್ಯರ ಮಕ್ಕಳ್ಳಿಳಿಗೆ ವಿದ್ಯಾರ್ಥಿ ವೇತನ ನೀಡುವಿಕೆ, ವಿಧ್ಯಾಬಾಸಕಾಗಿ ಸುಲಭ ಸಾಲದ ಯೋಜನೆ ಹೀಗೆ ಹಲವಾರು ಯೋಜನೆಗಳಿಂದ ಸಮಾಜಕ್ಕೆ ಒಳಿತನ್ನು ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೀದೆ, ಈ ಸೊಸೈಟಿಗೆ ಇಲ್ಲಿಯೂ ಒಳಿತಾಗಲಿ’ ಎಂದು ಹರಸಿದರು.


ತಲ್ಲೂರು ಶಾಖೆಯ ಸಭಾಪತಿ ಓಜ್ಲಿನ್ ರೆಬೆಲ್ಲೊ, ನಿರ್ದೇಶಕರಾದ ಪಿಲಿಫ್ ಡಿಕೋಸ್ತಾ, ವಿನೋದ್ ಕ್ರಾಸ್ಟೊ, ಪ್ರಕಾಶ್ ಲೋಬೊ, ವಿಲ್ಪ್ರರೆಡ್ ಮಿನೆಜೆಸ್, ಡಯಾನ ಡಿಆಲ್ಮೇಡಾ, ಶಾಂತಿ ಡಯಾಸ್ ಮುಂತಾದವರು ಉಪಸ್ಥಿತರಿದ್ದರು. ಸೊಸೈಟಿಯ ಉಪಾಧ್ಯಕ್ಷ ಕಿರಣ್ ಲೋಬೊ ವಂದಿಸಿದರು ನಿರ್ದೇಶಕಿ ಶಾಂತಿ ಆರ್. ಕರ್ವಾಲ್ಲೊ ನಿರೂಪಿಸಿದರು.

John B Monteiro, Milagres elected as President of Rachana Catholic Chamber of Commerce and Industry

The Rachana Catholic Chamber of Commerce and Industry held its Annual General Meeting on September 23, 2023, at 7 p.m. at the Jubilee Hall, St. Sebastian Church, Bendur, Mangalore.

The meeting commenced with a prayer led by Mrs. Eulalia D’Souza.

President Mr. Vincent Cutinha welcomed the members. He presented an overview of the various meetings, projects, and programs organised during the year and expressed his gratitude to all who participated in Rachana for their various services.

The Secretary, Mrs. Lavina S Monteiro, read the minutes of the previous AGM.

Mrs. Eulalia D’Souza, the treasurer, presented the financial statements as of 31st March 2023. The Annual report and financial statements were accepted unanimously.

The next agenda of the AGM was to elect an 11-member governing body of Rachana.

The election officer, Mr. Joe Coelho, conducted the election proceedings smoothly as bylaws of Rachana.

On completing the election proceedings, the election officer declared the names of members elected to the Governing Body and office bearers of Rachana for 2023 – 2025.

Mr. John B Monteiro – President

Mr. Naveen Lobo – Vice President

Mr. Vijay Vishwas Lobo – Secretary

Mr. Walter D’Cunha – Joint Secretary

Mr. Nelson Monteiro – Treasurer

Members

Mrs. Eulalia D’Souza

CA Vikram Saldanha

Mr Stany Alvares 

Mr. Roshan Antony D’Souza

Mr. Alwyn Prakash Sequeira

Mrs. Lavina S. Monteiro 

In his acceptance speech, newly elected President Mr John Monteiro said that since it was a unanimous call, he was honoured to take up the post as the President of Rachana. He quoted that to give is better than to receive, and such goes the services of Rachana.

He sought the blessings and guidance of former presidents and senior members and mentioned their contribution to the upbringing of Rachana in the past 25 years. He also requested wholehearted support and encouragement from all the members of Rachana and its well-wishers in the Silver Jubilee Year of Rachana.

Among many others, the AGM was attended by Mr J R Lobo, former MLA Mangalore South; Mr Roy Castelino, PRO Diocese of Mangalore; Mr Luvi J. Pinto, President Maand Sobhaan Kalangan; Mr Gilbert Dsouza, Vice President, World Konkani Centre; Mrs Marjorie Texeira, President, Christian Planters Guild; Mr Marcel Monteiro, former PRO Diocese of Mangalore; Mr Ronald Gomes, former Governor Lions Club International; Mr Rudolph Rodrigues, leading Chartered Accountant; Mr Ullas Rasquinha, President, The Sodality of Immaculate Conception; Mr Alwyn Dsouza, President, Catholic Sabha; Mrs Voilet Pereira, Mangalorean com; Mr John V Tauro, Belle Vision; Mr Donald Periera, Budkulo com.

Newly elected Secretary Mr Vijay Vishwas Lobo proposed the Vote of thanks.

The AGM concluded with dinner.

ಕುಂದಾಪುರ ವೈಶಂತಿಕ ಸಭೆ : ಸಂತ ವಿನ್ಸೆಂಟ್ ಪಾವ್ಲರ ದಿನಾಚರಣೆ

ಕುಂದಾಪುರ, 24.: ಕುಂದಾಪುರ ರೋಜರಿ ಚರ್ಚಿನ ವೈಶಂತಿಕ ಸಭೆ ಸಂತ ವಿನ್ಸೆಂಟ್ ಪಾವ್ಲರ (ಸೆ.24 ರಂದು) ದಿನಾಚರಣೆಯನ್ನು ಆಚರಿಸಿತು.
ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಕ್ರತ್ಞತಾ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು. ವೈಶಂತಿಕ ಸಭೆಯ ಸದಸ್ಯರು ಬಲಿದಾನದ ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಫಾ|ಸ್ಟಾನಿ ತಾವ್ರೊ   ‘ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರು ಸಮಾಜಕ್ಕೆ ಅಮೂಲ್ಯ ಸೇವೆಯನ್ನು ನೀಡುತಿದ್ದಾರೆ, ಯೇಸು ಕ್ರಿಸ್ತರ ಭೋದನೆಯಂತೆ ಹಿಂದುಳಿದವರಿಗೆ, ಬಡವರಿಗೆ ಸೇವೆ ಮಾಡುವುದು,  ಬಡ ಬಗ್ಗರಿಗೆ ಸಹಾಯವನ್ನು ಮಾಡುತ್ತೀರುವುದು  ನಿಮ್ಮ ಈ ಸೇವೆ ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರಿಗೆ ಅನ್ವರ್ಥವಾಗುತ್ತೆ, ನಿಮ್ಮ ಸಭೆಯ ಕೆಲಸ ಮೆಚ್ಚುಗೆಗೆ ಪಾತ್ರವಾದುದು, ಅದಕ್ಕಾಗಿ ನಾವೆಲ್ಲ ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರಿಗೆ ಪ್ರೋತ್ಸಾಹಿಸಬೇಕು ’ ಎಂದು ಶುಭ ಕೋರಿದರು.

ಸಂತ ವಿನ್ಸೆಂಟ್ ಪಾವ್ಲ್ ಕುಂದಾಪುರ ವಲಯ ಸಭೆಯ ಅಧ್ಯಕ್ಷ ಅಂತೋನಿ ಡಿಸೋಜಾ ಮತ್ತು ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯ ಶುಭ ಕೋರಿದರು, ಕಾರ್ಯದರ್ಶಿ ಒಸ್ವಲ್ಡ್ ಕರ್ವಾಲ್ಲೊ ವರದಿಯನ್ನು ವಾಚಿಸಿದರು. ಖಚಾಂಚಿ ಇಗ್ನೆಶಿಯಸ್ ಡಿಕುನ್ಹಾ ಖರ್ಚು ವೆಚ್ಚಗಳನ್ನು ಮುಂದಿಟ್ಟರು, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ವೇದಿಕೆಯಲ್ಲಿದ್ದರು. ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಅಧ್ಯಕ್ಷೆ ಸೆರಾಫಿನ್ ಡಿಸಿಲ್ವಾ ಸ್ವಾಗತಿಸಿದರು. ಉಪಾಧ್ಯಕ್ಷರಾದ ವಿಕ್ಟರ್ ಡಿಸೋಜಾ ನಿರೂಪಿಸಿದರು ಉಪಾಧ್ಯಕ್ಷರಾದ ವಾಲೇರಿಯನ್ ಡಿಸೋಜಾ ವಂದಿಸಿದರು.

ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಸೌಲಭ್ಯ; ಹೋರಾಟದ ಮೂಲಕ ಫಲಾನುಭವಿಗಳ ಪಾಲಿಗೆ ಸಾರ್ಥಕತೆ ತಂದುಕೊಟ್ಟ ಸಬೀಹಾ ಬೇಗಂ

*ಲೇಖನ: ಶಬೀನಾ ವೈ.ಕೆ*

ವಿಶೇಷಚೇತನರಿಗಾಗಿ ಮೀಸಲಿರಿಸಿದ 5% ಅನುದಾನದಲ್ಲಿ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಮೂರು ಚಕ್ರಗಳ ಸ್ಕೂಟರ್‌ನ್ನು ವಿತರಿಸಿದ ಕೀರ್ತಿ ಕರ್ನಾಟಕದ ವಿಜಯಪುರ ಜಿಲ್ಲೆಗೆ ಸಲ್ಲುತ್ತದೆ. 

ಇದಕ್ಕಾಗಿ 2008-09ರ ಅವಧಿಯಲ್ಲಿ ಹೋರಾಟ ನಿರತ ನಲವತ್ತಕ್ಕೂ ಹೆಚ್ಚು ವಿಶೇಷಚೇತನರು ಒಂದು ದಿನ ದರ್ಗಾ ಜೈಲಿನ ಅತಿಥಿಗಳಾಗಬೇಕಾಯ್ತು. 

ಹದಿಮೂರು-ಹದಿನಾಲ್ಕು ವರ್ಷಗಳ ಹಿಂದಿನ ಸಾರಿಗೆ, ಸಂವಹನ, ಸಂಪರ್ಕ ಸೇರಿದಂತೆ ವಿಶೇಷಚೇತನರಿಗೆ ಬೇಕಾದ ಸೌಕರ್ಯ ಸೌಲಭ್ಯಗಳು ಅಷ್ಟಾಗಿ ಅರಿವಿಗೆ ಬಾರದ ದಿನಗಳವು. ಅದರಲ್ಲಿಯೂ ಹೆಚ್ಚಿನ ವಿಶೇಷಚೇತನರು ಮನೆಗಳಲ್ಲಿ ಮೂಲೆಗುಂಪಾದ ಉದಾಹರಣೆಗಳೇ ಅಧಿಕ.  

ಈ ವೇಳೆ, ವಿಶೇಷ ಚೇತನರ ಅಗತ್ಯತೆಗಳಿಗೆ ಬೇಕಾಗುವ ತ್ರೀ ಚಕ್ರ ಸ್ಕೂಟರ್ ಲಭಿಸಿದಲ್ಲಿ  ಮನೆಯಿಂದ ಹೊರಗಿಳಿಯಲು ಒಂದಿಷ್ಟು ಮಂದಿಯಾದರೂ ಉತ್ಸಾಹ ತೋರುತ್ತಾರೆಂಬ ಆಶಯವೊಂದೆಡೆಯಾದರೆ, ಬೇರೊಬ್ಬರನ್ನು ಅವಲಂಭಿಸದೇ ಅವರ ದೈನಂದಿನ ಜೀವನವನ್ನು ಸಾಗಿಸಲು, ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವುದೆಂಬ ಮಹತ್ತರ ಗುರಿಯೊಂದು ಇದರ ಹಿಂದಿತ್ತು.  

ಸಬೀಹಾ ಬೇಗಂ ಕೂಡ ದರ್ಗಾ ಜೈಲು ಸೇರಿ ಬಂದ ಆ ನಲವತ್ತು ಜನ ಅಂಗವಿಕಲರಲ್ಲೊಬ್ಬರು. ಆಗಿನ‌ ಅನುಭವಗಳನ್ನು ಬಿಚ್ಚಿಟ್ಟ ಅವರು, 40 ದಿನಗಳ ಕಾಲ ನಿರಂತರ ಧರಣಿ ನಡೆಸಿದ್ದನ್ನು ನೆನೆಯುತ್ತಾರೆ. 

ಈ ಧರಣಿಗೂ ಮೊದಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಮಂತ್ರಿಗಳು, ವಿಕಲಚೇತನರ ಕಲ್ಯಾಣ ಇಲಾಖೆ ಸೇರಿದಂತೆ ಸ್ಥಳೀಯ ಶಾಸಕರಿಗೂ ಸ್ಕೂಟರ್‌ಗಾಗಿ ಮನವಿ ಸಲ್ಲಿಸುವ ಕಾಯಕವನ್ನು ಆರಂಭಿಸುತ್ತಾರೆ. ವಿಕಲಚೇತನರಿಗೆ ಮೀಸಲಿರಿಸಿದ ಶೇ.5 ಅನುದಾನದಲ್ಲಿ .

ಈ ಸ್ಕೂಟರ್‌ಗಳನ್ನು ನೀಡಲು ಆಗುವುದಿಲ್ಲ ಎಂಬ ಉತ್ತರದಿಂದ ಬೇಸತ್ತು 40ಕ್ಕೂ ಹೆಚ್ಚು ವಿಕಲಚೇತನರು ಧರಣಿ ನಿರತರಾದರು. ನಿರಂತರ 40 ದಿನಗಳ ಈ ಧರಣಿಯ ವೇಳೆ ಭೇಟಿ ನೀಡಿದ ಅಧಿಕಾರಿಗಳು, ಮಂತ್ರಿಗಳು ಸ್ಥಳೀಯ ಶಾಸಕರು ಸೇರದಂತೆ ಎಲ್ಲರಿಗೂ ಮತ್ತೆ ಮತ್ತೆ ಮನವಿ ಪತ್ರಗಳನ್ನು ನೀಡುವ ಕಾಯಕ ಮುಂದುವರಿದಿತ್ತು.

ದರ್ಗಾ ಜೈಲಿನ ಘಟನೆಯ ಬಳಿಕವೂ ಸ್ಕೂಟರ್‌ಗಾಗಿ ಹೋರಾಟ ನಿಲ್ಲಲಿಲ್ಲ‌. ಆ ವರ್ಷಾವಧಿಯಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು, ಉರುಳು ಸೇವೆ ಮಾಡಿ ಹಾಗೂ ರಸ್ತೆ ತಡೆಯೊಡ್ಡಿ ಹೀಗೆ ಹಲವು ಪ್ರತಿಭಟನೆಗಳನ್ನು ಮಾಡಿದ್ದನ್ನು ಸಬೀಹಾ ನೆನೆಯುತ್ತಾರೆ.

ಹೋರಾಟದ ಫಲವಾಗಿ 2010ನೇ ಸಾಲಿನಲ್ಲಿ ವಿಜಯಪುರದಲ್ಲಿ ಆರಂಭಿಕವಾಗಿ 40 ವಿಶೇಷ ಚೇತನರಿಗೆ 5% ಅನುದಾನ, ಶಾಸಕರ ನಿಧಿ ಸೇರಿದಂತೆ ವಿವಿಧ ಸರ್ಕಾರಿ ಮೂಲಗಳಿಂದ 40 ತ್ರಿಚಕ್ರಗಳ ಸ್ಕೂಟರ್ ವಿತರಿಸಲಾಗುತ್ತದೆ‌. 

ಹೀಗೆ ಕರ್ನಾಟಕದಲ್ಲಿ ಇಂದು ತ್ರಿಚಕ್ರ ಸ್ಕೂಟರ್‌ಗಳನ್ನು ಪಡೆಯುತ್ತಿರುವ ಫಲಾನುಭವಿಗಳ ಪಾಲಿಗೆ ಇವರ ಹೋರಾಟ ಒಂದು ಸಾರ್ಥಕತೆಯನ್ನು ಕಟ್ಟಿಕೊಟ್ಟಿದೆ.

ಸಬೀಹಾ‌, ಬಳಗನೂರಿನ ಬಾಗಪ್ಪ ರಾಮವ್ವ ದಂಪತಿಗಳ ಐವರು ಮಕ್ಕಳಲ್ಲಿ ಮೂರನೆಯವರು‌. ಕಿತ್ತು ತಿನ್ನುವ ಬಡತನದಿಂದ ಮುಕ್ತಿ ಪಡೆಯಲು ಮುಂಬೈನಲ್ಲಿ  ಕೆಲಸಕ್ಕೆಂದು ಕುಟುಂಬ ಸಮೇತ ತೆರಳಿದರು. ಸಬೀಹಾ 7 ವರ್ಷ ವಯಸ್ಸಿನವರಿದ್ದಾಗ ಬಸ್ ಅಪಘಾತದಲ್ಲಿ ಎಡಗಾಲು ಕಳೆದುಕೊಂಡರು.

ಎಲ್ಲರಂತೆ ಚೆನ್ನಾಗಿದ್ದ ಮಗಳ ಕಾಲನ್ನು ದೇವರು ಕಿತ್ತುಕೊಂಡು ಬಿಟ್ಟನಲ್ಲ ಎಂಬ ಆಕ್ರಂದನ ಮನೆಯಲ್ಲಿ ಮಡುಗಟ್ಟಿತ್ತು. ಈ ನಡುವೆ ಮುಂಬೈನಲ್ಲಿ ಅಲೆದು ಕೊನೆಗೂ ಸಬೀಹಾರಿಗೆ ಕೃತಕ ಕಾಲು ಹಾಕಿಕೊಂಡು ತಿರುಗಾಡಲು ವ್ಯವಸ್ಥೆಯಾಯಿತು.

ಬಳಗನೂರಿನ ಶಾಲೆಯಲ್ಲಿಯೇ 1 ರಿಂದ 9ನೇ ತರಗತಿಯ ವರೆಗೆ ಸಬೀಹಾ ವಿದ್ಯಾಭ್ಯಾಸ ಪಡೆದರು‌. ಪ್ರತಿದಿನ ತಂದೆ ಅವರನ್ನು ಹೊತ್ತುಕೊಂಡು ಹೋಗಿ ಶಾಲೆಗೆ ಬಿಡುತ್ತಿದ್ದುದ್ದನ್ನು ಅವರು ನೆನೆಯುತ್ತಾರೆ.

ಹತ್ತನೆ ತರಗತಿ ವಿದ್ಯಾಭ್ಯಾಸ ಹುಬ್ಬಳ್ಳಿಯಲ್ಲಿ ಮಾಡಿದ ಅವರು ಬಿಎ ಪದವಿಧರೆ ಆಗಿದ್ದಾರೆ.  ಮೂಢನಂಬಿಕಯ ಪ್ರತಿಫಲವಾಗಿ, ಅಂಗವಿಕಲಳೆಂಬ ಕಾರಣಕ್ಕೆ ಗಣಪತಿಗೆ ಆರತಿ ಮಾಡುತ್ತಿದ್ದಾಗ ಆರತಿ ತಟ್ಟೆಯನ್ನು ಕಸಿದುಕೊಂಡ ಕಹಿ ನೆನಪು ಅವರಿಗಿದೆ. 

ವಿವಾಹದ ವಿಷಯದಲ್ಲಿಯೂ “ಕಾಲಿಲ್ಲದ  ಇವಳಿಗೆ ಮದುವೆಗಿದುವೆ ಬೇಕಾ..?” ಎಂದು ಹೀಯಾಳಿಸಿದವರೇ ಅಧಿಕ. ಆದರೆ 21ನೇ ವಯಸ್ಸಿನಲ್ಲಿ ಅಂತರ್ಜಾತಿ ವಿವಾಹವಾದ ಸಬೀಹಾರಿಗೆ ಬಿಎಸ್‌ಸಿ ಹಾಗೂ ಇಂಜಿನಿಯರಿಂಗ್ ಕಲಿಯುತ್ತಿರುವ ಇಬ್ಬರು ಪುತ್ರಿಯರಿದ್ದು, ವೈವಾಹಿಕ ಜೀವನವು ಸುಖಕರವಾಗಿದೆ. 

ತನ್ನಂತೆ ಹಲವು ವಿಶೇಷಚೇತನ ಮಹಿಳೆಯರು ಇದ್ದಾರೆ ಎಂಬುದನ್ನು ಬೆಂಗಳೂರಿನ ಎಪಿಡಿ ಸಂಸ್ಥೆಯಲ್ಲಿ ಕಂಡ ಬಳಿಕ ಅರಿತ ಸಬೀಹಾ, ಬಿಜಾಪುರ ಅಂದರೆ ಈಗಿನ ವಿಜಯಪುರದಲ್ಲಿ ಕರ್ನಾಟಕ ಅಂಗವಿಕಲತ ಐಕ್ಯತಾ ವೇದಿಕೆಯನ್ನು ಹುಟ್ಟು ಹಾಕಿದರು‌. 

ವಿಶೇಷ ಚೇತನ ಪುರುಷರಿಗಿಂತ ಮಹಿಳೆಯರು ಅಧಿಕ ಮೂಲೆಗುಂಪಾಗಿರುವುದನ್ನು ಕಂಡ ಅವರು, ಮಹಿಳೆಯರ ಏಳಿಗೆಗಾಗಿ ಏನಾದರೂ ಮಾಡಬೇಕಂಬ ಉದ್ದೇಶದಿಂದ ಹಳ್ಳಿಗಳಿಗೆ ತೆರಳಿ ಅವರೊಂದಿಗೆ ಬದುಕಿ ಬಾಳಲು ಆರಂಭಿಸಿದರು. 

ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಾ, ಲಭಿಸುವ ಸೇವೆಗಳನ್ನು ಪಡೆಯಲು ಉತ್ತೇಜ‌ನ ನೀಡಿದರು.

ಸಬೀಹಾ 385ಕ್ಕೂ ಅಧಿಕ ಜನರಿಗೆ ಯುಡಿಐಡಿ(ಯೂನಿಕ್ ಡಿಸೆಬಿಲಿಟಿ ಐಡೆಂಟಿಟಿ ಕಾರ್ಡ್) ಕಾರ್ಡ್ ಮಾಡಿಸಲು, 300 ಪೋಷಣಾ ಭತ್ಯೆ, 100ಕ್ಕೂ ಹೆಚ್ಚು ಜನರಿಗೆ ಉದ್ಯೋಗ, 25 ಜನರಿಗೆ ತರಬೇತಿ ಹಾಗೂ ಕೊರೋನ ಅವಧಿಯಲ್ಲಿ 589 ರೇಷನ್ ಕಿಟ್‌ಗಳನ್ನು ಒದಗಿಸಲು ನೆರವಾಗಿದ್ದಾರೆ. 

ಪ್ರಸ್ತುತ ಸಬೀಹಾರವರು ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ಗೌರವಾಧ್ಯಕ್ಷರಾಗಿದ್ದು, ವಿಶೇಷಚೇತನರಿಗೆ ಬೇಕಾಗುವ ಸುಲಭಲಭ್ಯತೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತಿದ್ದಾರೆ‌.

ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಕಛೇರಿ ಉದ್ಘಾಟನೆ

25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಕಛೇರಿ, 4 – 5 ನವೆಂಬರ್ 2023 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಲಾಗಿದೆ, ನಗರದಲ್ಲಿ ಬೆಂದೂರ್‌ವೆಲ್, ಕುನಿಲ್ ಸಂಕೀರ್ಣದಲ್ಲಿ ಉದ್ಘಾಟನೆಯಾಗಿದೆ.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಅವರು ಮಾತೃ ಸಂಸ್ಥೆ ಅಖಿಲ ಭಾರತ ಕೊಂಕಣಿ ಪರಿಷತ್ತಿನ ಕಾರ್ಯಾಧ್ಯಕ್ಷ ಗೋವಾದ ಚೇತನಾಚಾರ್ಯ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೋಕುಲದಾಸ್ ಪ್ರಭು, ಖ್ಯಾತ ಹೃದ್ರೋಗ ತಜ್ಞ ಮತ್ತು ಕರ್ನಾಟಕದ ಶಾಲೆಗಳಲ್ಲಿ ಕೊಂಕಣಿ ಶಿಕ್ಷಣದ ಪ್ರವರ್ತಕ ಡಾ.ಕೆ.ಮೋಹನ್ ಪೈ ಅವರೊಂದಿಗೆ ದೀಪ ಬೆಳಗಿಸಿ ಕಛೇರಿಯನ್ನು ಉದ್ಘಾಟಿಸಿದರು. ಕೌನ್ಸಿಲ್ ಸದಸ್ಯ ಮತ್ತು ಕೊಂಕಣಿಯ ಕೊಂಕಣಿ ಸಲಹಾ ಮಂಡಳಿಯ ಸಂಚಾಲಕರು, ನವದೆಹಲಿಯ ಸಾಹಿತ್ಯ ಅಕಾಡೆಮಿ ಮತ್ತು ಕವಿ, ರಾಹುಲ್ ಜಾಹೀರಾತುದಾರರ ಚಿಂತಕ ಟೈಟಸ್ ನೊರೊನ್ಹಾ.

ಸ್ವಾಗತ ಸಮಿತಿ ಮತ್ತು ಇತರ ಉಪಸಮಿತಿಗಳ ರಚನೆಯ ಚರ್ಚೆಯನ್ನು ಪ್ರಾರಂಭಿಸಿದ ಮಾತೃಸಂಸ್ಥೆ ಅಖಿಲ ಭಾರತ ಕೊಂಕಣಿ ಪರಿಷತ್ತಿನ ಕಾರ್ಯಾಧ್ಯಕ್ಷ ಚೇತನಾಚಾರ್ಯ ಅವರು ಅಖಿಲ ಭಾರತೀಯ ಕೊಂಕಣಿ ಪರಿಷತ್ತಿನ ಇತಿಹಾಸ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ದೃಷ್ಟಿಕೋನ ಮತ್ತು ವ್ಯಾಪ್ತಿ ಮತ್ತು ಹಿರಿಯ ಕೊಂಕಣಿ ಲೇಖಕರ ಹೋರಾಟದ ಬಗ್ಗೆ ವಿವರಿಸಿದರು. ಮತ್ತು ಕೊಂಕಣಿ ಭಾಷೆಯ ಬೆಳವಣಿಗೆಯಲ್ಲಿ ಕಾರ್ಯಕರ್ತರು ಮತ್ತು ಮುಂದಿರುವ ಸವಾಲುಗಳು.
ಈ ಬಾರಿಯ ಸಮ್ಮೇಳನದ ರಜತ ಮಹೋತ್ಸವದ ಅಂಗವಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಮಾಡಲು ಎಲ್ಲಾ ಕೊಂಕಣಿ ಸಂಘಗಳು ಮತ್ತು ವ್ಯಕ್ತಿಗಳು ಪರಿಷತ್ತು ಮತ್ತು ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಕೈಜೋಡಿಸಬೇಕು ಎಂದು ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿ ಸದಸ್ಯ ಕವಿ ಮೆಲ್ವಿನ್ ರಾಡ್ರಿಗಸ್ ಒತ್ತಾಯಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಸಿಇಒ ಗುರುದತ್ ಬಂಟ್ವಾಳ್ಕರ್, ಕೊಂಕಣಿಯ ಎಚ್‌ಒಡಿ ಪ್ರೊ. ಫ್ಲೋರಾ ಕ್ಯಾಸ್ಟೆಲಿನೊ, ಸೇಂಟ್ ಅಲೋಶಿಯಸ್ ಕಾಲೇಜ್, ಆ್ಯಂಕರ್ ಸುಚಿತ್ರ ಎಸ್ ಶೆಣೈ, ವಿಶ್ವವಿದ್ಯಾನಿಲಯ ಕಾಲೇಜು ಪ್ರಾಧ್ಯಾಪಕ ವೆಂಕಟೇಶನಾಯಕ್, ರಾಕ್ಣೊ ಕೊಂಕಣಿ ವಾರಪತ್ರಿಕೆಯಿಂದ ಫಾ.ರೂಪೇಶ್ ಮಾಡ್ತಾ, ಕೊಂಕಣಿ ಉಜ್ವಾಡ್ ವಾರಪತ್ರಿಕೆಯ ಫಾ.ಆಲ್ವಿನ್ ಕಾರ್ಮೆಲ್,ಪ್ಲಾಯ್ಡ್ ಕಾಸ್ಸಿಯಾ, ಜೆರಾಲ್ಡ್ ಕೊನೆಸ್ಸೊ ಕೊಂಕಣಿ ನಾಟಕಸಭಾ, ಅಕಾರ್ ಇನ್ನೋವೇಶನ್ಸ್‌ನ ದಯಾ ವಿಕ್ಟರ್ ಲೋಬೋ, ಸಾಹಿತಿ ವಿನ್ಸೆಂಟ್ ಪಿಂಟೋ ಅಂಜೆಲೋರ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ವಿಚಾರಗಳನ್ನು ಹಂಚಿಕೊಂಡರು.
ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಲಹಾ ಮಂಡಳಿ ಸದಸ್ಯ ಹೆಚ್ ಎಂ ಪೆರ್ನಾಳ್ ಸ್ವಾಗತಿಸಿ, ವಿಚಾರ ವಿನಿಮಯವನ್ನು ನಡೆಸಿಕೊಟ್ಟರು.

ATHENA INSTITUTE OF HEALTH SCIENCES 11TH BATCH MUSKI, 12TH BATCH PUBSC, FAREWELL CEREMONY

Athena Institute of Health Sciences organized a programme to express gratitude and bid farewell to the outgoing 11th Batch M.Sc., 12th Batch of PB.B.Sc., 16th Batch of B.Sc. and 18th Batch of GNM.  Programme was held at St. Alphonsa Church Auditorium at 11.20 am followed by thanks giving mass.

As a part of inaugural, flex named “CIAO BASH 2K23” was released.  The outgoing batches and guests were welcomed with the entrance dance.  The formal programme began with a prayer song.  Ms. Shenova of 1st year PB.B.Sc. welcomed the gathering.  As a significance of the day lamp lighting was done by dignitaries on the dias. 
Mr. R.S. Shettian Chairman, Principal Sr. Deepa Peter, Vice Principal Sr. Aileen Mathias, Mrs. Sunitha, Mrs. Hemalatha, Mrs. Viola and Ms. Jasmin.

Felicitation with mementoes given to the outgoing batches by the dignitaries.  One representative from each batch expressed their memorable moments in Athena.  Inspiring and valuable messages delivered by Mr. R.S. Shettian, Chairman,
Sr. Deepa Peter and Mrs. Hemalatha.  The audience were entertained by various cultural programs filled with zeal and enthusiasm.  Vote of thanks delightfully delivered by Ms. Sruthi Christeena, 3rd year B.Sc. Nursing.   To wrap up the programme, refreshment was provided to all.  The programme was compared by
Ms. Laxmi Vinod, Ms. Aleen Deep and Ms. Angela Tomy, students of 3rd year B.Sc. Nursing. 

ಮುಂಬಯಿಯ ಚಕಾಲಾದ ಹೋಲಿ ಫೆಮಿಲಿ ಚರ್ಚಿನಲ್ಲಿ ಕೊಂಕಣಿ ಲಿತುರ್ಜಿ ಕಮಿಟಿಯಿಂದ ಮೊಂತಿ ಹಬ್ಬ / Monti Festival by Konkani Liturgy Committee at Holy Family Church, Chakala, Mumbai

ಮುಂಬಯ್, ಸೆ.22: ಮಹಾನಗರ ಮುಂಬಯಿನ ಚಕಾಲಾದ ಹೋಲಿ ಫೆಮಿಲಿ ಚರ್ಚಿನಲ್ಲಿ ಕೊಂಕಣಿ ಲಿತುರ್ಜಿ ಕಮಿಟಿಯಿಂದ ಸೆ.17 ರಂದು ಭಾನುವಾರ ತೇನೆ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಯಿತು. ಅತಿಥಿ ಧರ್ಮಗುರು ವಂ|ಜೆರಾಲ್ಡ್ ಡೆಸಾ ಹಬ್ಬದ ಬಲಿದಾನವನ್ನು ಅರ್ಪಿಸಿ ಜನ್ಮದಿನ ಹಬ್ಬಗಳಲ್ಲಿ ಮೇರಿ ಮಾತೆಯ ಜನ್ಮ ದಿನ ಕೂಡ ಮಹತ್ವದ ಹಬ್ಬವಾಗಿದೆ. ಇಂದು ನಾವು ಕುಟುಂಬದ ಹಬ್ಬವನ್ನು, ನವ ಬೆಳೆಗಳು ದಯಪಾಲಿಸಿದಕ್ಕೆ ಕ್ರತ್ಜನಾತೆಯನ್ನು ಮೇರಿ ಮಾತೆಯ ಮೂಲಕ ದೇವರಿಗೆ ಅರ್ಪಿಸುತ್ತಿದ್ದೆವೆ. ಎಂದು ಸಂದೇಶ ನೀಡಿದರು. ಚರ್ಚಿನ ಪ್ರಧಾನ ಧರ್ಮಗುರು ವಂ|ಜೆರಾಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.

   ತೇನೆಗಳನ್ನು ಆಶಿರ್ವದಿಸಿ ಪ್ರತಿ ಕುಟುಂಬಕ್ಕೆ ಹಂಚಲಾಯಿತು. ಬಲಿದಾನದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಮನೋರಂಜನ ಮತ್ತು ಭಕ್ತಿಮಯ ಕಾರ್ಯಕ್ರಮಗಳು ನೆಡದವು.

   ಬಾಲ ಮೇರಿ ಮಾತೆಯನ್ನು ತೊಟ್ಟಿಲಲ್ಲಿ ತೆಗೆದುಕೊಂಡು ಬರುವುದು ವಿಶೇಷವಾಗಿ ಕಂಡು ಬಂತು.

ಕರಾವಳಿಗರೆಲ್ಲಾ ಊರಲ್ಲೆ ಹಬ್ಬ ಮಾಡಿದ ಆಚರಿಸಿದ ಅನುಭವ ಮುಂಬಯಗರಿಗಾಗಿದ್ದುದು ಹುಸಿಯಲ್ಲ.

Monti Festival by Konkani Liturgy Committee at Holy Family Church, Chakala, Mumbai


Mumbai, Sep 22: Monti festival was celebrated with grandeur on Sunday, Sep 17 by the Konkani Liturgy Committee at the Holy Family Church in Chakala, Metro Mumbai. Guest Priest Rev. Fr. Gerald Desa offered the feast of the feast. Among the birthday celebrations, Mother Mary’s birthday is also an important festival. Today we are offering family festival, offer to God through Mother Mary for bestowing new crops. He messaged. Holy family Church Priest Rev. Fr. Gerald Rodrigues, was present.

The teas were blessed and distributed to each family. After the sacrifice, the assembly program was held. Entertainment and devotional programs are not planted.

It was especially seen that the Child Mary was carried in the cradle.

It is not a lie that the Mumbaikars have a celebrated experience of celebrating in all the towns along the coast.

ಕಥೋಲಿಕ್ ಎಜುಕೇಷನ್ ಸೊಸೈಟಿ ಆಫ್ ಉಡುಪಿ ಡಯಸಿಸ್ – ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ “ಜಾಗತಿಕ ದಿನಾಚರಣೆ”

ಉಡುಪಿ : ಜಾಗತಿಕ ಶಾಂತಿ ದಿನಾಚರಣೆ. ಕಥೋಲಿಕ್ ಎಜುಕೇಷನ್ ಸೊಸೈಟಿ ಆಫ್ ಉಡುಪಿ ಡಯಸಿಸ್ ನ ಆಡಳಿತ ಮಂಡಳಿಗೆ ಒಳಪಟ್ಟ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾಗತಿಕ ಶಾಂತಿ ದಿನವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಜಾಗತಿಕ ಶಾಂತಿಯ ಮಹತ್ವ ಮತ್ತು ಸಹಬಾಳ್ವೆ ಕುರಿತು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.