

ಕುಂದಾಪುರ; ದಿನಾಂಕ 05.08.2025 ರಂದು ನಗರದ ಸೈ0ಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸೈoಟ್ ಮೇರಿಸ್ ವಿದ್ಯಾಸಂಸ್ಥೆಗಳ ಜೊತೆ ಕಾರ್ಯದರ್ಶಿ ಹಾಗೂ ಚರ್ಚಿನ ಧರ್ಮಗುರುಗಳಾಗಿರುವ ಅತೀ ವಂದನೀಯ ಫಾದರ್ ಪಾವ್ಲ್ ರೆಗೋರವರು ಅಧ್ಯಕ್ಷತೆಯನ್ನು ವಹಿಸಿ, ಉತ್ತಮ ವ್ಯಕ್ತಿತ್ವ ನಿಮ್ಮದಾಗಿರಬೇಕು. ಇಂದು ಅನೇಕ ರೀತಿಯಲ್ಲಿ ಅವಕಾಶಗಳಿವೆ. ಎಲ್ಲರೂ ಅದನ್ನು ಬಳಸಿಕೊಳ್ಳಬೇಕು. ಕಲಿತ ವಿದ್ಯಾಸಂಸ್ಥೆಗೆ, ಪಾಲಕರಿಗೆ ಕೀರ್ತಿ ತರಬೇಕು,ನಿಮ್ಮ ಕನಸು ಈಡೇರಲಿ ಎಂದು ಅನೇಕ ಕಿವಿ ಮಾತುಗಳನ್ನು ವಿದ್ಯಾರ್ಥಿಗಳಿಗೆ ಹೇಳಿ, ಈ ತರಬೇತಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ವಿದ್ಯಾ ಸಂಸ್ಥೆಯ ಹಳೇ ವಿದ್ಯಾರ್ಥಿ ಪ್ರಸ್ತುತ ಯು ಎಸ್ ಎ ಯಲ್ಲಿ ಪ್ರಸಿದ್ಧ ವಿಮಾನ ಸಂಸ್ಥೆ ಬೋಯಿಂಗ್ ಕಂಪನಿಯಲ್ಲಿ ಸಪ್ಲಯ್ ಚೈನ್ ಆಪರೇಷನ್ ವಿಭಾಗದ ವಾಯ್ಸ್ ಪ್ರೆಸಿಡೆಂಟ್ ಆಗಿರುವ ಸರಳ ವ್ಯಕ್ತಿತ್ವ, ಮಹಾದಾನಿ ಗೌರವಾನ್ವಿತ ಮಿ. ಪ್ರದೀಪ್ ಫೇರ್ನಾಂಡೀಸ್ ರವರು ಕಿರು ಸನ್ಮಾನ ಸ್ವೀಕರಿಸಿ ತನ್ನ ವಿದ್ಯಾರ್ಥಿ ಜೀವನದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ದೇವರು ನಮಗೆ ನೀಡಿದ ಪ್ರತಿಭೆಯನ್ನು ಗುರುತಿಸಿಕೊಂಡು ಶಿಕ್ಷಣ ಸಂಸ್ಥೆಯಲ್ಲಿ ಅದನ್ನು ಸಾಕಾರಗೊಳಿಸಿಕೊಳ್ಳಬೇಕು. ಭವಿಷ್ಯದಲ್ಲಿ ಏನಾಗಬೇಕೆಂದು ಕನಸು ಕಂಡು ಅದನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ನನಸಾಗಿಸಿಕೊಳ್ಳಬೇಕು ಎನ್ನುತ್ತಾ ಒಲವು, ಕಠಿಣ ಶ್ರಮ, ಉತ್ತಮ ಮನೋಭಾವ, ಶೈಕ್ಷಣಿಕ ಪ್ರೇರಣೆ ಈ ನಾಲ್ಕು ಅಂಶಗಳನ್ನು ವಿದ್ಯಾರ್ಥಿಗಳಿಗೆ ಹುರಿದುಂಬಿಸಿ ಹೇಳಿ ಅವಕಾಶಕ್ಕೆ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರು ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಹೆಸರಾಂತ ಸಂಪನ್ಮೂಲ ವ್ಯಕ್ತಿ ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ನೇಮಕ ಸದಸ್ಯರು, ನಿಸ್ವಾರ್ಥ ಮನೋಭಾವದವರಾದ ಗೌರವಾನ್ವಿತ ಶ್ರೀ ಉದಯ ಕುಮಾರರವರು ಉತ್ತಮ ರೀತಿಯಲ್ಲಿ ಅನೇಕ ಮೌಲ್ಯಯುತವಾಗಿರುವ ವಿಚಾರಗಳನ್ನು, ಶಿಕ್ಷಣ ಕ್ಷೇತ್ರದ ಕೋರ್ಸ್ ಗಳು ಹಾಗೂ ಹೊಸ ತಿದ್ದುಪಡಿಯ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಫೆರ್ನಾಂಡಿಸ್ ರವರು ಸ್ವಾಗತಿಸಿ, ಕೊನೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಸಿಕೊಟ್ಟ ಗೌರವಾನ್ವಿತ ಉದಯ ಸರ್ ರವರ ಮಾತುಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಉಪನ್ಯಾಸಕಿ ಶರ್ಮಿಳಾ ಮಿನೇಜಸ್ ರವರು ಸನ್ಮಾನಿತರ ಪರಿಚಯ ವಾಚಿಸಿದರು. ಉಪನ್ಯಾಸಕ ನಾಗರಾಜ ಶೆಟ್ಟಿ ಧನ್ಯವಾದದೊಂದಿಗೆ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವಿಯೋನ್ನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.



















































































