

ಪಡುಕೋಣೆ: ದಿನಾಂಕ 31.8.2025 ರಂದು ಪಡುಕೋಣೆ ಸಂತ ಅಂತೋನಿ ಚರ್ಚಿನ ಸೌಪರ್ಣಿಕ ಮಹಿಳಾ ಸಂಘದಿಂದ ಮಹಿಳೆಯರ ದಿನಾಚರಣೆ ಸೌಪರ್ಣಿಕ ನದಿಯ ದಂಡೆಯ ಮೇಲೆ ಮಹಿಳೆಯರ ದಿನಾಚರಣೆಯನ್ನು ಆಚರಿಸಲಾಯಿತು.
ಮೊದಲು ವಂದನೀಯ ಫಾದರ್ ಪ್ರಾನ್ಸಿಸ್ ಕರ್ನೆಲಿಯೊರವರು ಚರ್ಚಿನ ಭಕ್ತಾಧಿಗಳ ಜೊತೆಗೂಡಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು.ಹಾಗೂ ಮಾತೆ ಮರಿಯಮ್ಮನ ಜನುಮದಿನದ ವ್ಯಾಪ್ತಿಯಾಗಿ 2ನೇ ದಿನದ ಪ್ರಾರ್ಥನೆಯೊಂದಿಗೆ ಹೂಗಳ ಅರ್ಪಣೆಯನ್ನು ಮಾಡಲಾಯಿತು.
ಬಳಿಕ ಚರ್ಚಿನ ಸಭಾಂಗಣದಲ್ಲಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ,ಸ್ವಾಗತ ನೃತ್ಯ, ವಿವಿಧ ವಿನೋದಾವಳಿಗಳಾದ ಇತರ ನೃತ್ಯಗಳು, ಹಾಡುಗಳು ಪ್ರದಶನ ನೀಡಿದರು. ಹೆಚ್ಚಿನ ಮಹಿಳೆಯರು ತುಂಬಾ ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು.
ಕಾರ್ಯಕ್ರಮದ ಅಧ್ಯಕ್ಷ ರಾಗಿ ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ ಮಹಿಳೆಯರ ಸಾಧನೆಗಳು ಅಪಾರ. ಕುಟುಂಬದಲ್ಲಿ ಹೆಣ್ಣು ಸಂಸಾರದ ಕಣ್ಣು ಇದ್ದಂತೆ, ಹೆಣ್ಣೇ ತಂದೆ-ತಾಯಿಗೆ ಉತ್ತಮ ರೀತಿಯಲ್ಲಿ ನೋಡಿಕೊಳ್ಳುವುದು. ಹೆಣ್ಣು ತನ್ನ ಶಕ್ತಿ, ಸಹನೆ,ಪ್ರೀತಿ ಹಾಗೂ ಬುದ್ಧಿವಂತಿಕೆಯಿಂದ ಕುಟುಂಬ ನಡೆಸುತ್ತಾಳೆ ಎಂದರು. ಅವರಿಗೆ ಸಂಗೀತದ ಸಾಧನೆಗೋಸ್ಕರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅತಿಥಿಗಳಾದ ಶ್ರೀ ಪ್ರಭು ಕೆನಡಿ ಪಿರೇರಾರವರು ಮಾತನಾಡಿ ಮನೆಯಲ್ಲಿ ಸ್ತ್ರೀಯೇ ಮುಖ್ಯ. ದೇವರು ಸೃಷ್ಟಿಸುವಾಗಲೇ ಸ್ತ್ರೀಯರಿಗೆ ಉತ್ತಮ ಸ್ಥಾನ,ಮಾನ,ಗೌರವ ಕೊಟ್ಟು ಸೃಷ್ಟಿಸಿರುವರು. ಎಂದರು.ಮುಖ್ಯ ಅತಿಥಿಗಳಾದ ಶ್ರೀಮತಿ ಸಿಂತಿಯಾ ರೊಡ್ರಿಗಸ್ ರವರು ಮಾತನಾಡಿ ಕುಟುಂಬದಲ್ಲಿ ತಾಯಿಗೆ ಹೆಚ್ಚಿನ ಗೌರವ, ಪ್ರೀತಿಯಿಂದ ನೋಡಿ,ಅವರ ಮಾತಿಗೆ ಬೆಲೆ ಕೊಡಬೇಕು.ಸರ್ಕಾರದಿಂದ ಆರೋಗ್ಯದ ಬಗ್ಗೆ ಕೊಡುವ ಸೌಲಭ್ಯ ಗಳನ್ನು ಉಪಯೋಗಿಸಿಕೊಳ್ಳಬೇಕು. ಆರೋಗ್ಯದ ತಪಾಸಣೆ ಇಟ್ಟಾಗ ನೀವೆಲ್ಲರೂ ಹೋಗಿ ಮಾಡಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ಸೂಚನೆ ನೀಡಿದರು. ಚರ್ಚಿನ ಅಯೋಗಾದ ಸಂಚಾಲಕ ವಿನ್ಸೆಂಟ್ ಡಿ’ಸೋಜ, ಸಿ! ಲೂಸಿ ಸ್ತ್ರೀ ಸಂಘಟನೆಯ ಅಧ್ಯಕ್ಷೆಯಾದ ಕವಿತಾ ಸುವಾರಿಸ್, ಕುಂದಾಪುರ ಭಾವನ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾದ ಸಿಂತಿಯಾ ರೊಡ್ರಿಗಸ್ ಹಾಗೂ ವೈ.ಸಿ.ಎಂ ಅಧ್ಯಕ್ಷೆಯಾದ ಕುಮಾರಿ ಹೊಲೋರಾ ರೆಬೆಲ್ಲೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಡಾ! ಸೋನಿಯಾ ಡಿಕೋಸ್ತಾ ಆಗಮಿಸಿದ್ದರು. ಅವರ ಕಿರು ಪರಿಚಯವನ್ನು ಶ್ರೀಮತಿ ಟ್ರಿಜಾ ಸಿಕ್ವೇರಾರವರು ಮಾಡಿದರು.ತದನಂತರ ಇವರು ಮಹಿಳೆಯರನ್ನು ಉದ್ದೇಶಿಸಿ ಕೆಲವು ಮಹತ್ವದ ವಿಷಯಗಳನ್ನು ಆರೋಗ್ಯ ಕಾಪಾಡುವ ಬಗ್ಗೆ ತಿಳಿಸಿದರು. ಪ್ರಥಮವಾಗಿ ಪ್ರಾರ್ಥನೆ ,ವ್ಯಾಯಮ, ಊಟ-ತಿಂಡಿ ಮಾನಸಿಕ ಒತ್ತಡ ಈ ನಾಲ್ಕು ಉತ್ತಮ ಸಲಹೆಗಳನ್ನು ಎಲ್ಲರೂ ಪಾಲಿಸಿದರೇ ನಿಮ್ಮ ಆರೋಗ್ಯವನ್ನು ನೀವು ಉತ್ತಮವಾಗಿ ಕಾಪಾಡಿ ಕೊಳ್ಳುವಿರಿ.ಈ ಸಲಹೆಗಳನ್ನು ನೀಡಿದರು.
ಸಂಘಟನೆ ಅಧ್ಯಕ್ಷೆಯಾದ ಕವಿತಾ ಡಿ’ಸಿಲ್ವಾರವರು ಸರ್ವರನ್ನು ಸ್ವಾಗತಿಸಿದರು. ಪ್ಲೇವಿ ಲುವಿಸ್ ರವರು ಧನ್ಯವಾದ ನೀಡಿದರು. ಶೈಲಾ ಕ್ರಾಸ್ತಾರವರು ನಿರೂಪಣೆ ಮಾಡಿದರು.

































































































