ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹೆಚ್ಚುತಾ ಇದೆ, ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಪ್ರಿನ್ಸ್ ಸುಲ್ತಾನ್ ಏರ್ ಬೇಸ್ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು, ಅಮೆರಿಕದ ಅತ್ಯಂತ ದುಬಾರಿ ಮತ್ತು ಆಯಕಟ್ಟಿನ E-3 ಸೆಂಟ್ರಿ (AWACS) ವಿಮಾನವನ್ನು ಧ್ವಂಸಗೊಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಇದರ ಬೆನ್ನಲ್ಲೇ ಇಸ್ರೇಲ್ ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳನ್ನು ಗುರಿಯಾಗಿಸುವ ಬೆದರಿಕೆಯನ್ನು ಇರಾನ್ ಹಾಕಿದೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ಆರು ಬ್ಯಾಲಿಸ್ಟಿಕ್ […]
ಮಾ. 22: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿ ಸಂಭವಿಸಿದ ಕ್ಷಿಪಣಿ ದಾಳಿಯಲ್ಲಿ ಉತ್ತರ ಪ್ರದೇಶ ಮೂಲದ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ ಮೃತರನ್ನು ಮಹೂದಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಬಘೈನ್ ಗ್ರಾಮದ ನಿವಾಸಿ 26 ವರ್ಷದ ಕಾರ್ಮಿಕ ರವಿ ಗೋಪಾಲ್ ಸಾವನ್ನಪ್ಪಿದ ನಂತರ, ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಬಘೈನ್ ಗ್ರಾಮದಲ್ಲಿ ಕತ್ತಲೆಯ ವಾತಾವರಣ ಆವರಿಸಿದೆ. ಆದಾಗ್ಯೂ, ಅಧಿಕಾರಿಗಳು ಇಲ್ಲಿಯವರೆಗೆ ಮೌನವಾಗಿದ್ದಾರೆ ಎಂದು ಆರೋಪಿಸಿ ಕುಟುಂಬವು ರವಿಯ ದೇಹವನ್ನು ಸ್ವದೇಶಕ್ಕೆ ತರಲು ಹೆಣಗಾಡುತ್ತಿದೆ. ಮಾರ್ಚ್ 18 […]
ಕತಾರಿನ ರಾಸ್ ಲಫಾನ್ ಅನಿಲ ಘಟಕದ ಮೇಲೆ ಇರಾನ್ ದಾಳಿಯಿಂದ ಗಮನಾರ್ಹ ಹಾನಿಯಾಗಿದೆ ಎಂದು ಕತಾರ್ ಹೇಳಿದೆ. ದೇಶದ ಪ್ರಮುಖ ಅನಿಲ ಘಟಕವಾದ ರಾಸ್ ಲಫಾನ್ ಕೈಗಾರಿಕಾ ನಗರದ ಮೇಲೆ ಇರಾನಿನ ಕ್ಷಿಪಣಿ ದಾಳಿಗಳು “ಗಮನಾರ್ಹ ಹಾನಿ” ಉಂಟುಮಾಡಿವೆ ಎಂದು ಕತಾರ್ ಹೇಳಿದೆ. “ರಾಸ್ ಲಫಾನ್ ಕೈಗಾರಿಕಾ ನಗರವನ್ನು ಗುರಿಯಾಗಿಸಿಕೊಂಡು ಇರಾನಿನ ದಾಳಿ ನಡೆಸಿದ್ದು, ಬೆಂಕಿಗೆ ಕಾರಣವಾಗಿ ಸೌಲಭ್ಯಕ್ಕೆ ಗಮನಾರ್ಹ ಹಾನಿಯಾಗಿದೆ” ಎಂದು ಕತಾರ್ನ ವಿದೇಶಾಂಗ ಸಚಿವಾಲಯ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. ಸ್ಥಳದಲ್ಲಿ ಬೆಂಕಿಯನ್ನು ಪ್ರಾಥಮಿಕವಾಗಿ ನಿಯಂತ್ರಣಕ್ಕೆ […]
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಪುನರ್ವಸತಿ ಕೇಂದ್ರ ಆಸ್ಪತ್ರೆಯೊಂದರ ಮೇಲೆ ಸೋಮವಾರ ತಡರಾತ್ರಿ ವಾಯುದಾಳಿ ನಡೆದಿದ್ದು, 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಸರ್ಕಾರ ಆರೋಪಿಸಿದೆ.ಅಫ್ಘಾನ್ ಸರ್ಕಾರದ ವಕ್ತಾರ ಹಮ್ಹುಲ್ಲಾ ಫಿತ್ರತ್ ಈ ವಿಷಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಫಿತ್ರತ್, “ಕಾಬೂಲ್ನ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದೆ. ದಾಳಿಯಿಂದ ಆಸ್ಪತ್ರೆಯ ಬಹುಭಾಗ ಧ್ವಂಸಗೊಂಡಿದ್ದು, ಹಲವರು ಸಾವನ್ನಪ್ಪಿದ್ದಾರೆ. ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ” ಎಂದು ಹೇಳಿದ್ದಾರೆ.ಆದರೆ, ಇದಕ್ಕೆ ಪ್ರತಿಕ್ರಿಯಿಸಿದ […]
ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನ್ ಡ್ರೋನ್ ದಾಳಿ ನಡೆಸಿದೆ. ದುಬೈ ಏರ್ ಪೋರ್ಟ್ ಬಳಿಯ ಇಂಧನ ಟ್ಯಾಂಕ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಪರಿಣಾ ಭೀಕರ ಸ್ಫೋಟಕ್ಕೆ ಇಂಧನ ಟ್ಯಾಂಕ್ ಹೊತ್ತಿ ಉರಿದಿದೆ. ಸುತ್ತಮುತ್ತಲು ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ದುಬೈ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ದುಬೈಗೆ ಬರುವ ಹಾಗೂ ದುಬೈನಿಂದ ತೆರಳುವ ಎಲ್ಲಾ […]
ತೈಲ ಟ್ಯಾಲಕರ್ ಇರಾನ್ ದಾಳಿ ನಡೆಸಿದ ಪರಿಣಾಮ ಭಾರತೀಯ ಮೂಲದ ಇಬ್ಬರುಸಾವನ್ನಪ್ಪಿದ ಮಾಹಿತಿ ತಿಳಿದು ಬ೦ದಿದೆ. ಮೃತ ಭಾರತೀಯರನ್ನು ಬಿಹಾರದ ಕ್ಯಾಪ್ಟನ್ ಅಶೀಶ್ ಕುಮಾರ್ ಮತ್ತು ರಾಜಸ್ನಾನದ ದಿಲೀಪ್ ಸಿ೦ಗ್ ಎಂದು ಗುರುತಿಸಲಾಗಿದೆ. ಈ ಟ್ಯಾ೦ಕರ್ ಫೆಬ್ರುವರಿ 22 ರಂದು ಹಾರ್ಮುಜ್ ಜಲಸ೦ಧಿ ಹತ್ತಿರ ತಲುಪಿದ್ದು, ಇರಾನ್ ಜಲಸ೦ಧಿಯನ್ನು ಬ೦ದ್ ಮಾಡಿದ ನ೦ತರ ಅಲ್ಲಿಯೇ ನಿಂತಿದೆ. ರಿಪಬ್ಲಿಕ್ ಆಫ್ ಪಲಾವ್ ನ ಬಾವುಟ ಹಾರಿಸಿಕೊ೦ಡು ನಿ೦ತಿದ್ದ ಟ್ಯಾ೦ಕರ್ ಮೇಲೆ ಇರಾನಿನ ಮಿಸೈಲ್ ಬಡಿದ ಪರಿಣಾಮ ಈ ಸಾವು-ನೋವು […]
ಅಬುಧಾಬಿ: ಫೆಬ್ರವರಿ 28, 2026 ರಂದು, ಅಮೇರಿಕಾ, ಇಸ್ರೇಲ್ ದಾಳಿಗೆ ಪ್ರತ್ಯುತ್ತರವಾಗಿ, ಇರಾನಿನ ದಾಳಿ ಗಲ್ಫ್ ರಾಷ್ಟ್ರಗಳ ಮೇಲೆ ಆರಂಭವಾಗಿದೆ. ಯುಎಇಯ ಹೇಳುವ ಪ್ರಕಾರ ತಮ್ಮ ದೇಶದ ವಾಯುಪಡೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಇದುವರೆಗೆ 165 ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಎರಡು ಕ್ರೂಸ್ ಕ್ಷಿಪಣಿಗಳು ಮತ್ತು 541 ಇರಾನಿನ ಡ್ರೋನ್ಗಳನ್ನು ನಿಭಾಯಿಸಿವೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ. ದಾಳಿಯ ಎರಡನೇ ಬೆಳಿಗ್ಗೆ, ಸಶಸ್ತ್ರ ಪಡೆಗಳು 20 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶಪಡಿಸಿದವು, ಆದರೆ ಎಂಟು ಕ್ಷಿಪಣಿಗಳು ಸಮುದ್ರಕ್ಕೆ […]
ಇರಾನ್:ಅಮೆರಿಕಮತ್ತುಇಸ್ರೇಲ್ ನಡೆಸಿದಜಂಟಿಕಾರ್ಯಾಚರಣೆಯಲ್ಲಿ, ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾಅಲಿಖಮೇನಿಮೃತಪಟ್ಟಿದ್ದಾರೆ ಎಂದು ದೃಢೀಕರಣ ಆಗಿದೆ ಅಲ್ಲದೆ ವೈಮಾನಿಕ ದಾಳಿಯಲ್ಲಿ ಖಮೇನಿ ಅವರ ಪುತ್ರಿ,ಅಳಿಯ ಮತ್ತುಮೊಮ್ಮಗಳೂ ಕೂಡ ಸಾವನ್ನಪ್ಪಿದ್ದಾರೆ ಎಂದುಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಕ್ಷಿಪಣಿದಾಳಿಗೆ ಬಲಿಯಾದ ಇರಾನ್ ರಕ್ಷಣಾಸಚಿವಅಮೀರ್ ನಾಸಿರ್ಜಾದೆ ಅವರ ಮೃತ ದೇಹ ಪತ್ತೆಯಾಗಿದೆ ಎಂದು ಇಂದು ಭಾನುವಾರ ಧ್ರಡಪಟ್ಟಿದೆ. ಇರಾನಿನ ಪಾಲಿಗೆ ಇಂದು ಇತಿಹಾಸದ ಅತ್ಯಂತ ಕರಾಳ ಮತ್ತು ರಕ್ತಸಿಕ್ತ ಭಾನುವಾರ. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಇರಾನ್ನ ಸರ್ವೋಚ್ಚ ನಾಯಕನಾಗಿ, ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸಿಂಹಸ್ವಪ್ನವಾಗಿದ್ದ ಅಯತೊಲ್ಲಾ […]
ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಈ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಸಲಹೆಯಲ್ಲಿ, ಸ್ಥಳೀಯ ಅಧಿಕಾರಿಗಳು ನೀಡುವ ಸಲಹೆಗಳನ್ನು ಪಾಲಿಸುವಂತೆ ಭಾರತೀಯ ಪ್ರಜೆಗಳನ್ನು ಒತ್ತಾಯಿಸಿದೆ. ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಭಾರತೀಯ ಪ್ರಜೆಗಳು ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು community cw.rivadh@mea.gov.in ಇಮೇಲ್ ಮೂಲಕ ಸಂಪರ್ಕಿಸಬಹುದು ಅಥವಾ ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆ 00-966-11-4884697 ಗೆ ಕರೆ ಮಾಡಬಹುದು. ರಾಯಭಾರ […]

