ಕುಂದಾಪುರ (ಎ.7) : ಕುಂಬಾರಿಕೆ ಮಾಡುವುದು ಒಂದು ಕುಲಕಸುಬು. ಅದು ಒಂದು ದಿನದ ಕೈಚಳಕದಿಂದ ಮಾಡಲು ಸಾಧ್ಯವಿಲ್ಲ. ಒಂದು ಮಡಿಕೆಯನ್ನು ಲೀಲಾಜಾಲವಾಗಿ ಮಾಡಬೇಕಾದರೆ ಕನಿಷ್ಠ ಎರಡು ವರ್ಷಗಳ ಅನುಭವವಾದರೂ ಬೇಕು. ಎಲ್ಲಕ್ಕಿಂತ ಮಿಗಿಲಾಗಿ ಮಡಿಕೆ ಮಾಡಲು ತಾಳ್ಮೆ ಅತಿ ಮುಖ್ಯ. ಶಾಂತರೂಪಿನಿಂದ ಕೆಲಸ ಮಾಡಿದರೆ ಕಾರ್ಯಸಿದ್ಧಿ ಎಂದು ಕುಂಬಾರಿಕೆಯ ಪ್ರಾತ್ಯಕ್ಷಿಕೆ ನೀಡಿದ ಆಲೂರಿನ ರಾಘವೇಂದ್ರ ಕುಲಾಲ್ ಹೇಳಿದರು.ಅವರು ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ ಆಯೋಜಿಸಿದ ‘ಪ್ಯಾಟಿ ಮಕ್ಕಳ್ ಹಳ್ಳಿ ಟೂರ್’ ಬೇಸಿಗೆ […]
ಕುಂದಾಪುರ: ಬಸ್ರೂರಿನ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಶಾಲಾ ಸಂಚಾಲಕ ಶಿಕ್ಷಕಿಯ ಹತ್ತಿರ ಅಸಭ್ಯವಾಗಿ ವರ್ತಿಸಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೊರಬಂದಿದ್ದ ಆ ಶಾಲೆಯ ಉಪ ಪ್ರಾಂಶುಪಾಲೆ ಪೊಲೀಸರಿಗೆ ದೂರು ನೀಡಿದ್ದು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕಿ ಎಂದಿನಂತೆ ಶಾಲೆಗೆ ಬಂದಾಗ ಸೆಕ್ಯೂರಿಟಿ ಗಾರ್ಡ್ ಅವರನ್ನು ಅರ್ಧ ತಾಸಿಗಿಂತಲೂ ಹೆಚ್ಚು ಕಾಲ ತಡೆದು ನಿಲ್ಲಿಸಿ ಶಾಲೆಯ ಒಳಗೆ ಬಾರದಂತೆ ನಿರ್ಬಂಧಿಸಲಾಗಿತ್ತು. ಶಿಕ್ಷಕಿಯ ಗೋಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ದೂರ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಿಎಸ್ಐ […]
ಕುಂದಾಪುರ (06.04.2024) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಆಯೋಜಿಸಲಾದ ಸಮ್ಮರ್ ಕ್ಯಾಂಪ್ ‘ಪ್ಯಾಟಿ ಮಕ್ಕಳ್ ಹಳ್ಳಿ ಟೂರ್’ ನ 2ನೇ ದಿನದಂದು ಎಲ್ಲಾ ಶಿಬಿರಾರ್ಥಿಗಳು ಕಮಲಶಿಲೆಯ ಸುಪಾಶ್ವ ಗುಹಾಲಯವನ್ನು ವೀಕ್ಷಿಸಿ, ಗುಹೆಯ ಹುಟ್ಟು, ಅಲ್ಲಿನ ವಿಶೇಷತೆಯನ್ನು ಮಾಹಿತಿಗಾರರಾದ ರಾಘವೇಂದ್ರ ಜೋಗಿಯವರಿಂದ ಅರಿತರು.ನಂತರ ಕಮಲಶಿಲೆಯ ಹಿರಿಯ ಅನುಭವಿ ಕೃಷಿಕರಾದ ನಾಗಭೂಷಣ ಭಟ್ ರವರಿಂದ ಅಡಿಕೆ ತೋಟದ ನಿರ್ವಹಣೆ, ಬೆಳೆಯ ಸಂರಕ್ಷಣೆ ಹಾಗೂ […]
ಉಡುಪಿ ಜಿಲ್ಲಾಡಳಿತ ಹಾಗೂ SVEEP ಸಮಿತಿ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ -2024 ರ ಪ್ರಜಾಪ್ರಭುತ್ವ ಸಂಭ್ರಮದಲ್ಲಿ ನೈತಿಕ ಮತದಾರರಾಗಿ , ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ನಡೆಯುವ ಏಪ್ರಿಲ್ 26 ಹಾಗೂಮೇ 07ರಂದು ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ ಮರಳು ಶಿಲ್ಪದ ಮೂಲಕ ಜನ ಜಾಗೃತಿಯನ್ನು ಸಾರುವ ” *ಚುನಾವಣಾ ಪರ್ವ – ದೇಶದ ಗರ್ವ * ” ಎಂಬ ಶೀರ್ಷಿಕೆಯಡಿಯಲ್ಲಿ ಕಲಾಕೃತಿಯನ್ನು ಮಲ್ಪೆ ಕಡಲ ತೀರದಲ್ಲಿ ಮೂಡಿಸಿದರು . ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. […]
ಕಟಪಾಡಿ : ಇಲ್ಲಿಯ ತ್ರಿಷಾ ಕಾಲೇಜು ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ನಿರಂತರ ರಾಜಕೀಯ ಮಾಡುತ್ತಿದೆ. ತ್ರಿಷಾ ಕಾಲೇಜು ನಿರಂತರ ಕೇವಲ ಒಂದು ಪಕ್ಷಕ್ಕೆ ಬೆಂಬಲ ನೀಡುತ್ತ ಕಾಲೇಜಿನ ಒಳಗೆ ರಾಜಕೀಯ ಮಾಡುತ್ತಿದೆ. ಕಳೆದ ಚುನಾವಣಾ ಸಮಯದಲ್ಲಿ ಅಣ್ಣಾಮಲೈ ಅವರನ್ನು ಕರೆಸಿ ರಾಜಕೀಯ ಮಾಡಲಾಗಿತ್ತು. ಈ ಚುನಾವಣೆಯಲ್ಲಿ ಚುನಾವಣ ಪ್ರಚಾರ ಮಾಡಲು ಮೈಕ್ ಕೊಟ್ಟು ಚುನಾವಣ ಪ್ರಚಾರ ಮಾಡಲಾಗಿದೆ ಇದು ಖಂಡನೀಯ ಎಂದು ಕೋಟೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾಗಿರುವ ಪ್ರಶಾಂತ್ ಜತ್ತನ್ನ ತಿಳಿಸಿದ್ದಾರೆ. ಮಕ್ಕಳನ್ನು […]
ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಹಮ್ಮಿಕೊಳ್ಳಲಾದ ಸಮ್ಮರ್ ಕ್ಯಾಂಪ್ ‘ಪ್ಯಾಟಿ ಮಕ್ಕಳ್ ಹಳ್ಳಿ ಟೂರ್’ ನ 1ನೇ ದಿನವಾದ ಏಪ್ರಿಲ್ 5 ಶುಕ್ರವಾರದಂದು ಎಲ್ಲಾ ಶಿಬಿರಾರ್ಥಿಗಳು ಶಿಕ್ಷಕರೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು.ಮೊದಲಿಗೆ ಉಪ್ಪೂರಿನಲ್ಲಿರುವ ಹಾಲು ಶೇಖರಣಾ ಮತ್ತು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ, ಹಾಲಿನ ಸಂಸ್ಕರಣೆ ಮತ್ತು ಹಾಲಿನ ವಿವಿಧ ಉತ್ಪನ್ನಗಳ ಬಗ್ಗೆ ಅರಿತರು. ಅಲ್ಲಿಂದ ಪೆರ್ಡೂರಿನಲ್ಲಿರುವ ಕ್ಲೇ ಕಾರ್ಟ್ಸ್ ಗೆ […]
ಕುಂದಾಪುರ (ಎ.5) : ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಒಂದು ವಿಭಿನ್ನ ಕಾರ್ಯಕ್ರಮ. ಮಕ್ಕಳಿಗೆ ಇಂದಿನ ದಿನಗಳಲ್ಲಿ ಮರೆಯಾಗುತ್ತಿರುವ ಹಳ್ಳಿಯ ವಿಚಾರಗಳ ಬಗ್ಗೆ ಇಂತಹ ಶಿಬಿರಗಳ ಮೂಲಕ ತಿಳಿದುಕೊಳ್ಳಲು ಸಾಧ್ಯ ಎಂದು ರಂಗಭೂಮಿ ತರಬೇತುದಾರ, ರಂಗ ನಿರ್ದೇಶಕರಾದ ಶ್ರೀ ವಾಸುದೇವ ಗಂಗೇರರವರು ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆಯಲ್ಲಿ ಆಯೋಜಿಸಿದ ಬೇಸಿಗೆ ಶಿಬಿರದಲ್ಲಿ ಮೊದಲ ದಿನದ ಮಧ್ಯಾಹ್ನದ […]
ಕರ್ನಾಟಕದ ಸಹಕಾರಿ ಬ್ಯಾಂಕಿAಗ್ ಕ್ಷೇತ್ರದಲ್ಲಿ 112 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2024 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಲೆಕ್ಕ ಪರಿಶೋಧನಾ ಪೂರ್ವ 13.12 ಕೋಟಿ ರೂಪಾಯಿ ವ್ಯವಹಾರಿಕ ಲಾಭಗಳಿಕೆಯನ್ನು ದಾಖಲಿಸಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆ ಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ 1.07% ಎನ್.ಪಿ.ಎ. ದಾಖಲಿಸಿದೆ.ದಾಖಲೆಯ ಲಾಭ ಮತ್ತು ಕನಿಷ್ಠ ಎನ್.ಪಿ.ಎ. ಜೊತೆಗೆ, 2023–2024ನೇ ವಿತ್ತೀಯ ವರ್ಷದಲ್ಲಿ, ಬ್ಯಾಂಕಿನ ಅಧ್ಯಕ್ಷ […]
ಕುಂದಾಪುರ (ಎ.4) : ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ – ತಿರ್ಗ್ತಾ ಕಲುದ್ ಎನ್ನುವುದು ಒಂದು ವಿಶೇಷ, ವಿಭಿನ್ನ ಕಾರ್ಯಕ್ರಮ. ನಾವು ಎಲ್ಲಿಯೇ ಹೋದರೂ ನಮ್ಮ ಮಣ್ಣಿನ ಸೊಗಡನ್ನು ಮತ್ತು ಸಂಸ್ಕೃತಿಯನ್ನು ಬಿಡದೇ ಬೆಳೆಸಬೇಕು ಎಂದು ಕುಂದಾಪುರದ ಖ್ಯಾತ ನ್ಯಾಯವಾದಿ, ಸಾಹಿತಿ ಡಾ. ಎ. ಎಸ್. ಎನ್. ಹೆಬ್ಬಾರ್ ಹೇಳಿದರು. ಅವರು ಕುಂದಾಪುರದ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆಗಳು ಹಮ್ಮಿಕೊಂಡ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ – ತಿರ್ಗ್ತಾ ಕಲುದ್ ಎನ್ನುವ […]

