ಕುಂದಾಪುರ: ಜೂನ್ 10ರಂದು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ “ಇಕೋಕ್ಲಬ್ ಉದ್ಘಾಟನೆ ಮತ್ತು ವಿಶ್ವಪರಿಸರ ದಿನಾಚರಣೆ” ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರದ ಸರಕಾರಿ ಜ್ಯೂನಿಯರ್ ಕಾಲೇಜಿನ ಉಪಪ್ರಾಂಶುಪಾಲರಾದ ಕಿರಣ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪರಿಸರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೇ ವಿದ್ಯಾರ್ಥಿಗಳೆಲ್ಲರೂ ಜೀವನ ಪರ್ಯಂತ ಪರಿಸರ ಸಂರಕ್ಷಣೆಯ ಬಗೆಗೆ ಒಲವನ್ನು ತೋರಿಸಬೇಕು. ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಪರಿಸರದಿಂದ ಕೂಡಿದ ಸಮಾಜವನ್ನು ನಿರ್ಮಾಣ ಮಾಡಬೇಕು. ನೀರಿನ ದುರ್ಬಳಕೆಯನ್ನು ತಡೆಯಬೇಕು.ಹಾಗಿದ್ದರೆ ಮಾತ್ರ ಸಧೃಡ ಸಮಾಜ ನಿರ್ಮಾಣ […]

Read More

ಬ್ರಹ್ಮಾವರ : ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸಂಚಿಕೆ ಬಿಡುಗಡೆ ದಿನಾಂಕ10-06-2024 ರಂದು ಎಸ್ ಎಮ್ ಎಸ್ ಪದವಿಪೂವ೯ ಕಾಲೇಜು ಬ್ರಹ್ಮಾವರದ ಸಭಾಂಗಣದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ “ ಇನ್ಸ್ಪಾಯರ್ “ನ ಬಿಡುಗಡೆ ಸಮಾರಂಭದ ಅಧ್ಯ ಕ್ಷತೆಯನ್ನು ಒ ಎಸ್ ಸಿ ವಿದ್ಯಾಯಸಂಸ್ಥೆಯ ಸಂಚಾಲಕರಾದ ರೆ. ಫಾ. ಎಮ್ ಸಿ ಮಥಾಯಿ ಅವರು ವಹಿಸಿದ್ದರು.ಅವರು ತಮ್ಮ ಅಧ್ಯಕ್ಷೀಯ ಭಷಣದಲ್ಲಿ ” ಈ ಸಂಚಿಕೆ ವಿದ್ಯಾರ್ಥಿಗಳ ಕ್ರೀಯಾಶೀಲತೆ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ”ಎಂದರು. ಬ್ರಹ್ಮಾವರದ ಉದ್ಯಮಿ ಹಾಗೂ ಬ್ರಹ್ಮಾವರ ತಾಲೂಕು […]

Read More

ಮಹಿಳೆಯರಿಗೆ , ಶಾಲಾ ಬಾಲಕಿಯರಿಗೆ ಹಾಗೂ ಸಾರಿಗೆ ನಿಗಮಕ್ಕೆ ಶಕ್ತಿ ತಂದ ರಾಜ್ಯ ಸರ್ಕಾರದ ಮಹತ್ತರ ಯೋಜನೆ ಶಕ್ತಿ ಜಾರಿಯಾಗಿ ಇಂದಿಗೆ ಒಂದು ವರ್ಷ ತುಂಬಿದೆ. ಕುಂದಾಪುರ ಕೆಎಸ್ಆರ್ಟಿಸಿ ಡಿಪೋ ದ ಅಧಿಕೃತ ಮಾಹಿತಿ ಈ ಕೆಳಗಿನಂತಿದೆ 01 ) 2022-23 ರ ಒಟ್ಟು ವಾರ್ಷಿಕ ಆದಾಯ 41.54 ಕೋಟಿ ರೂ ಆಗಿದ್ದು ಶಕ್ತಿ ಯೋಜನೆಯು ಜಾರಿಗೊಂಡ ನಂತರ 2023-24 ನೇ ಸಾಲಿನಲ್ಲಿ 60.35 ಕೋಟಿ ರೂ ಆಗಿರುತ್ತದೆ.ಶಕ್ತಿ ಯೋಜನೆ ಬಳಕೆಯಿಂದ ಆದಾಯದಲ್ಲಿ 18.82 ಕೋಟಿ ರೂಪಾಯಿಯಂತೆ […]

Read More

ಕುಂದಾಪುರ : ಎಂ. ಸಿ. ಸಿ ಬ್ಯಾಂಕ್ ಲಿಮಿಟೆಡ್ ವತಿಯಿಂದ ದಿನಾಂಕ 10.06.2024 ರಂದು ಸಂತ ಜೋಸೆಫರ ಹಿರಿಯ ಪ್ರಾರ್ಥಮಿಕ ಶಾಲೆ ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಈಗಾಗಲೇ ಎಂ. ಸಿ. ಸಿ ಬ್ಯಾಂಕ್ ಹಲವು ಯೋಜನೆಗಳನ್ನು ಕೈಗೊಂಡಿದೆ. ಅದರ ಒಂದು ಭಾಗವಾಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಂ. ಸಿ. ಸಿ. ಬ್ಯಾಂಕ್ ಲಿಮಿಟೆಡ್ ಇದರ ಕುಂದಾಪುರ ಶಾಖೆಯ ವ್ಯವಸ್ಥಾಪಕರಾದ ಜ್ಯೋತಿ ಬರೆಟ್ಟೋ, ಬ್ಯಾಂಕ್ ಸಿಬ್ಬಂದಿಗಳಾದ […]

Read More

ಕಥೊಲಿಕ್‌ ಸಭಾ ಮಂಗ್ಳುರ್‌ ಪ್ರದೇಶ್‌ (ರಿ.) ಕೇಂದ್ರದ 2024-25ನೇ ಸಾಲಿನ ಚುನಾವಣೆಯು ದಿನಾಂಕ 09-06-2024ರಂದು ನಡೆಯಿತು. ಚುನಾವಣೆಯಲ್ಲಿ ಆಲ್ವಿನ್‌ ಡಿಸೋಜ, ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರುಗಳಾಗಿ ಸ್ಟೀವನ್‌ ರೊಡ್ರಿಗಸ್‌ ಮತ್ತು ಜೊಸ್ಸಿ ಕ್ರಾಸ್ತಾ, ಕಾರ್ಯದರ್ಶಿಯಾಗಿ ಆಲ್ವಿನ್‌ ಪ್ರಶಾಂತ್‌ ಮೊಂತೇರೊ, ಸಹ ಕಾರ್ಯಾದರ್ಶಿಯಾಗಿ ಲವೀನಾ ಗ್ರೆಟ್ಟಾ ಡಿಸೋಜಾ, ಖಜಾಂಚಿಯಾಗಿ ಮೆಲ್ರಿಡಾ ಜೇನ್ ರೊಡ್ರಿಗಾಸ್, ಸಹಾ ಖಜಾಂಚಿಯಾಗಿ ವಿಲ್ಪ್ರೆಡ್ ಮೆಲ್ವಿನ್ ಆಲ್ವರಿಸ್, ಆಯ್ಕೆಯಾಗಿದ್ದಾರೆ. ಸ್ಟ್ಯಾನಿ ಲೋಬೊ ನಿಕಟ ಪೂರ್ವ ಅಧ್ಯಕ್ಷರಾಗಿರುತ್ತಾರೆ.

Read More

ಕುಂದಾಪುರ, ಜೂ.9: “ಅವಮಾನವನ್ನು ಸನ್ಮಾನವನ್ನಾಗಿ ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಣವು ವಿದ್ಯಾರ್ಥಿಯಲ್ಲಿ ಶಿಸ್ತು, ವಿನಮ್ರತೆ, ವಿಧೇಯತೆ , ಭ್ರಾತೃತ್ವ , ಮಾನವತೆ ಚಾರಿತ್ರ್ಯವನ್ನು ವೃದ್ಧಿಸುವಂತಿರಬೇಕು.ಶೈಕ್ಷಣಿಕ ಹಾದಿಯಲ್ಲಿ ಶ್ರದ್ಧೆ, ಅಧ್ಯಯನಶೀಲತೆ , ಆತ್ಮವಿಶ್ವಾಸ , ಕಠಿಣ ಪರಿಶ್ರಮದಿಂದ ಗುರಿಯಡೆಗೆ ಮುನ್ನುಗ್ಗುವ ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆಯಬಹುದು ” ಎಂದು ಸಂಪನ್ಮೂಲ ವ್ಯಕ್ತಿಗಳಾದ ಕುಂದಾಪುರದ ಆರ್ ಎನ್ ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಶ್ರೀಮತಿ ಜಯಶೀಲಾ ಕೃಷ್ಣದಾಸ್ ಕಾಮತ್ ರವರು ನುಡಿದರು. ಶ್ರೀ ಕಾಶಿ […]

Read More

ಕುಂದಾಪುರ: ಕುಂದಾಪುರ ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಅಂಬಾ ಟಿವಿ ಸೆಂಟರ್ ಶಾರ್ಟ್ ಸರ್ಕಿಟ್ ನಿಂದ ಅಗ್ನಿ ಅವಘಡವಾಗಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಬಗ್ಗೆ ವರದಿಯಾಗಿದೆ. ರವಿವಾರ ರಾತ್ರಿ 10:30ಕ್ಕೆ ಸುಧಾಕರ ಶೆಟ್ಟಿ ಎಂಬವರ ಮಾಲಕತ್ವದ ಅಂಬಾ ಟಿವಿ ಸೆಂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದರಿಂದ ಸೆಂಟರ್ನ ಒಳಗಿದ್ದ ಎಲ್ಲಾ ಸ್ವತ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಅಲ್ಲದೆ ಮೂರು ಲಕ್ಷ ರೂ ನಗದು ಕೂಡ ಬೆಂಕಿಗೆ ಆಹುತಿಯಾಗಿದೆ ಒಟ್ಟಾರೆ ಈ ದುರಂತದಿಂದ ಒಂದು ಕೋಟಿಗೂ […]

Read More

ಉಡುಪಿ: ನಾಯಕನಾದವನು ಸವಾಲುಗಳನ್ನು ಎದುರಿಸಿದಾಗ ಮಾತ್ರ ಪ್ರಗತಿಶೀಲನಾಗಿ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಹೇಳಿದರು.ಅವರು ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2023-24ನೇ ಸಾಲಿನ ವಾರ್ಷಿಕ ಮಹಾ ಸಭೆ ಹಾಗೂ ಸಹಮಿಲನವನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ಸ್ಪರ್ಧಾರ್ತಕ ಜಗತ್ತಿನಲ್ಲಿ ನಾಯಕನ ಆಲೋಚನೆಗಳು ಸಮಾಜದಲ್ಲಿ ಬದಲಾವಣೆಯನ್ನು ಬಯಸುವಂತದ್ದಾಗಿರಬೇಕಾಗಿದ್ದು ಹೊಸ ಹೊಸ ಪ್ರಯೋಗಗಳು ಮತ್ತು ಆಲೋಚನೆಗಳೊಂದಿಗೆ ಸಂಘಟನೆಯನ್ನು ಮುನ್ನಡೆಸಬೇಕಾಗಿದೆ ಈ ವೇಳೆ ಬರುವ ಟೀಕೆಗಳನ್ನು […]

Read More