ಕುಂದಾಪುರ,ಜ.24: ಚಾರಿತ್ರಿಕ ಹಿನ್ನೆಲೆಯುಳ್ಳ ಉಡುಪಿ ಜಿಲ್ಲೆಯ ಅತೀ ಹಿರಿಯ ಚರ್ಚ್ ರೋಜರಿ ಮಾತಾ ಚರ್ಚಿಗೆ ಹೊಸ ವರ್ಷದ ಪ್ರಯುಕ್ತ 2023 ರ ಡಿಸೆಂಬರ್ 31 ರ ಸಂಜೆ ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮಿ ಆಗಮಿಸಿ ಚರ್ಚ್ ಜನತೆಗೆ ಶುಭ ಕೋರಿದರು.“ದೇವರು ಮನುಷ್ಯರ ಮೆಲೆ ಓದಾರ್ಯೆತೆಯುಳ್ಳವನಾಗಿದ್ದಾರೆ. ಆತ ನಮಗೆ ಈ ಲೋಕದಲ್ಲಿ ಜೀವಿಸಲಿಕ್ಕಾಗಿ ನಮಗೆ ಎಲ್ಲವನ್ನು ಒದಗಿಸಿದ್ದಾನೆ. ದೇವರು ಈ ಭೂಮಿ ಮೇಲೆ ಬೇಕಾದಷ್ಟು ವಿಸ್ಮಯಗಳನ್ನು ನಿರ್ಮಿಸಿದ್ದಾನೆ, ಎಂದು ತಿಳಿಸುತ್ತಾ, ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಅವರು ಹಾಸನದ […]
ಶ್ರೀನಿವಾಸಪುರ 1 : ಇತ್ತೀಚೆಗೆ ನನ್ನನ್ನು ಎರಡನೇ ಮದುವೆ ಆಗಿ ನಂಬಿಸಿ ಮದುವೆ ಸಮಯದಲ್ಲಿ ವರೋಪಚಾರವನ್ನು ಪಡೆದುಕೊಂಡು, ನನ್ನ ಪತಿಯಲ್ಲೇ ಲೋಪವಿದ್ದರೂ ಇದನ್ನು ಬಚ್ಚಿಟ್ಟು, ಮೂರನೆ ಮದುವೆಗೆ ಪ್ರಯತ್ನ ಮಾಡುತ್ತಿರುವುದು ನನಗೆ ಮಾಹಿತಿ ಬಂದಿದ್ದು ನನಗಾಗಿರುವ ಅನ್ಯಾಯ ಮತ್ತೊಬ್ಬ ಹೆಣ್ಣುಮಗಳಿಗೆ ಆಗಬಾರದೆಂದು ನನ್ನ ಆಶಯ ಎಂದು ತನಗಾಗಿರುವ ನೋವನ್ನು ಬೆಂಗಳೂರಿನ ವಿಜಯನಗರದ ವಾಸಿಯಾದ ಕೆ.ಎಲ್. ಭಾವನ ವ್ಯಕ್ತಪಡಿಸಿದ್ದಾರೆ.ಕೆ.ಎಲ್. ಭಾವನತನಗಾಗಿರುವ ನೋವನ್ನು ಶುಕ್ರವಾರ ಮಾಧ್ಯಗಳ ಮುಖೇನ ವ್ಯಕ್ತಪಡಿಸಿ ಕಳೆದ 40 ದಿನಗಳ ಹಿಂದೆ ಪಟ್ಟಣದಎಂ.ಜಿ.ರಸ್ತೆಯಲ್ಲಿರುವ ನಿವೃತ್ತಇಂಜಿನಿಯರ್ಎಂ.ಆರ್. ರಮೇಶ್ಅವರ ಮಗನಾದ […]
ಶ್ರೀನಿವಾಸಪುರ: ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಜಾಗ್ರಾತ ಕ್ರಮಗಳ ಬಗ್ಗೆ ಡಿಎಚ್ಒ, ಟಿಎಚ್ಒ, ಆಸ್ಪತ್ರೆಯ ಆಡಳಿತಾಧಿಕಾರಿಗಳೊಂದಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾಹಿತಿ ಪಡೆದು ಮಾತನಾಡಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಬೇಟಿ ನೀಡಿ ಕುಂದುಕೊರತೆ ಹಾಗು ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು.ಆಸ್ಪತ್ರೆಗೆ ಸಮರ್ಪಕವಿದ್ಯುತ್ ಒದಗಿಸಲು 250 ಕೆವಿ ವಿದ್ಯುತ್ ಟ್ರಾನ್ಸ್ಫಾರಂ ಅಳವಡಿಕೆ ಮಾಡಲು ಹಾಗು ಆಸ್ಪತ್ರೆಗೆ 24 ಗಂಟೆ ವಿದ್ಯುತ್ ಸೌಲಭ್ಯ ಒದಗಿಸಲು ಪ್ರತ್ಯೇಕ ಎಕ್ಸ್ ಪ್ರೆಸ್ಸ ಲೈನ್ ಆಳವಡಿಸಲು ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ಮಾಡಿದರು.ಆಸ್ಪತ್ರೆಗೆ ಲಾಂಡ್ರಿ […]
ಚಿತ್ರದುರ್ಗ ನಗರ ಹೊರವಲಯದ ಚಳ್ಳಕೆರೆ ಟೋಲ್ ಗೇಟ್ನ ಬಳಿಯಲ್ಲಿ ಇರುವ ಪಾಳು ಮನೆಯಲ್ಲಿ ಶವಗಳು ಸಂಪೂರ್ಣ ಕೊಳೆತು ಮೂಳೆ ಕಾಣುವ ಸ್ಥಿತಿಯಲ್ಲಿ ಪತ್ತೆಯಾಗಿದೆ.ಜಗನ್ನಾಥರೆಡ್ಡಿ ಎಂಬುವರಿಗೆ ಸೇರಿದ ಮನೆ ಇದಾಗಿದ್ದು ಮನೆ ಮುಂಭಾಗ ಜಗನ್ನಾಥರೆಡ್ಡಿ ಹೆಸರಿನ ಬೋರ್ಡ್ ನೇತಾಡುತ್ತಿದೆ.ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿಯವರಾದ ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಅವರು ತನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸುಮಾರು 2 ಕೋಟಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರಂತೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರೋಗ್ಯ ಮತ್ತೊಷ್ಟು ಹದಗೆಟ್ಟಿತ್ತು. ಇದರಿಂದ ಬೇಸತ್ತು ಯಾರ […]
ಬೆಂಗಳೂರು: ಹೊಸ ವರ್ಷದಂದು ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲು ಪೊಲೀಸರು ರೂಲ್ಸ್ ಜಾರಿಗೊಳಿಸುತ್ತಿದ್ದಾರೆ. ಹೊಸ ಕಾನೂನುಗಳಲ್ಲಿ ರಾತ್ರಿ 1 ಗಂಟೆಗೆ ಎಲ್ಲಾ ಪಾರ್ಟಿಗಳು ಬಂದ್ ಆಗಬೇಕು. ಕ್ಲಬ್, ಪಬ್, ಹೊಟೇಲ್ ಸೇರಿದಂತೆ ಎಲ್ಲಾ ಪಾರ್ಟಿಗೂ ರಾತ್ರಿ 1 ಗಂಟೆವರೆಗೆ ಮಾತ್ರ ಅವರಾಶ ನೀಡಿದ್ದಾರೆ. ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಡಿಸೆಂಬರ್ 31ರ ರಾತ್ರಿ ಬೆಂಗಳೂರು ಪೊಲೀಸರು ನಗರದ ವಿವಿಧ ಭಾಗಗಳಲ್ಲಿ 48 ಚೆಕ್ ಪೊಂಯ್ಟ್ ಗಳನ್ನು ನಿರ್ಮಿಸಿ ಎಲ್ಲರ ಮೇಲೂ ಹದ್ದಿನ […]
ಬೆಂಗಳೂರು: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಮಹಿಳೆಯರ ವಿರುದ್ಧ ರವಿವಾರ ಮಂಡ್ಯದಲ್ಲಿ ನೀಡಿರುವ ಅತ್ಯಂತ ಅವಹೇಳನಕಾರಿ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು. ಇಂದು ಆತನ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಜಾಮೀನು ರಹಿತ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 354, 294, 509, 506, 1534, 295, 295%, 298ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಹೋರಾಟಗಾರ್ತಿ ನಜ್ಮಾನರೀರ್ ಚಿಕ್ಕನೇರಳೆ ಅವರು ನೀಡಿದ ದೂರಿನ […]
ಬೆಂಗಳೂರು,:ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರೆಂಟಿ ಯುವನಿಧಿ ನೋಂದಣಿ ಪ್ರಕ್ರಿಯೆಗೆ ಇಂದು ವಿಧ್ಯುಕ್ತ ಚಾಲನೆ ದೊರೆತಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯುವನಿಧಿ ನೋಂದಣಿ ಪ್ರಕ್ರಿಯೆಗೆ ವಿಧ್ಯುಕ್ತ ಚಾಲನೆ ನೀಡಿದರು. ಜ. 12ಕ್ಕೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಯುವಜನರ ಭವಿಷ್ಯಕ್ಕಾಗಿ ಈ ಯುವನಿಧಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 5 ಗ್ಯಾರೆಂಟಿಗಳನ್ನು […]
ಚಿತ್ರದುರ್ಗ, ಡಿಸೆಂಬರ್ 25, 2023: ಶಿವಮೊಗ್ಗದ ಧರ್ಮಪ್ರಾಂತದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಅವರ್ ಲೇಡಿ ಆಫ್ ಅಸಂಪ್ಷನ್ ಚರ್ಚ್ ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಡಿಸೆಂಬರ್ 10 ರಂದು ನಕ್ಷತ್ರವನ್ನು ಹಾರಿಸುವ ಮೂಲಕ ಕ್ರಿಸ್ಮಸ್ ಆಚರಣೆಯನ್ನು ಅನಾವರಣಗೊಳಿಸಲಾಯಿತು. ಧರ್ಮಕೇಂದ್ರದ ಧರ್ಮಗುರು ಫ್ರಾಂಕ್ಲಿನ್ ಡಿಸೋಜಾ ಅವರೊಂದಿಗೆ ಪ್ಯಾರಿಷಿಯನ್ನರು ಡಿಸೆಂಬರ್ 11 ರಿಂದ 16 ರವರೆಗೆ ಕರೋಲ್ಗಳನ್ನು ಆಯೋಜಿಸಿದರು. ಧರ್ಮಕೇಂದ್ರದ ಯುವಕರು ಚರ್ಚ್ ಮುಂದೆ ಸುಂದರವಾದ ಕೊಟ್ಟಿಗೆಯನ್ನು ಸಿದ್ಧಪಡಿಸಿದರು. ಡಿಸೆಂಬರ್ 24 ರಂದು ರಾತ್ರಿ 10:30 ಕ್ಕೆ […]
ಹುಬ್ಬಳ್ಳಿ: ಅಪರಿಚಿತನೊಬ್ಬ ದೇವರ ಹೆಸರೇಳಿಕೊಂಡು ಕೊಟ್ಟ ತೀರ್ಥ ಹಾಗೂ ಪ್ರಸಾದ ಸೇವಿಸಿದ ಮಹಿಳೆಯೊಬ್ಬರ ಮಾತೇ ನಿಂತುಹೋದ ಘಟನೆ ಕುಂದಗೋಳದ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ. ಭಿಕ್ಷುಕನೊಬ್ಬ ಕೊಟ್ಟ ಭಸ್ಮ ಹಾಗೂ ಹಾಲನ್ನು ಸೇವಿಸಿದ ಗ್ರಾಮದ ಮಹಿಳೆ ಮೀನಾಕ್ಷಿ ಎಂಬುವರಿಗೆ ಮಾತು ನಿಂತುಹೋಗಿದೆ. ಮನೆ ಬಳಿ ಬಂದಿದ್ದ ಭಿಕ್ಷುಕನಿಗೆ ಮಹಿಳೆ 5 ರೂ. ನೀಡಿದ್ದಾರೆ. ಈ ವೇಳೆ ಆತ ಪ್ರಸಾದ ಹಾಗೂ ತೀರ್ಥ ಎಂದು ಭಸ್ಮ ಮತ್ತು ಹಾಲನ್ನು ನೀಡಿದ್ದಾನೆ. ಇದನ್ನು ಸೇವಿಸಿದ ಬಳಿಕ ಮಹಿಳೆಗೆ ಈ ಸಮಸ್ಯೆ ಉಂಟಾಗಿದೆ. […]

