ಶ್ರೀನಿವಾಸಪುರ; ಪಟ್ಟಣದ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ವಿ.ನಾಗರಾಜು ರವರು ಬುಧವಾರ ಅಧಿಕಾರ ಸ್ವೀಕರಿಸಿದರು. ಚಿಕ್ಕಮಂಗಳೂರಿಗೆ ವಗಾವಣೆಯಾಗಿರುವ ವೈ.ಎನ್.ಸತ್ಯನಾರಾಯಣರವರನ್ನ ಬೀಳ್ಕೊಡಲಾಯಿತು. ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್, ಪುರಸಭೆ ಮಾಜಿ ಅಧ್ಯಕ್ಷ ಮುಕ್ತಿಯಾರ್, ಸದಸ್ಯರಾದ ತಜಮಲ್, ಆನಂದ್, ಮುಖಂಡ ಜಿ.ಆರ್.ಶ್ರೀನಿವಾಸ್ ಇದ್ದರು.
ಶ್ರೀನಿವಾಸಪುರ : ಜೀವನದ ಪ್ರತಿ ಹಂತದಲ್ಲೂ ಟಾಕ್, ವಾಕ್,ವರ್ಕ್ ಅಭ್ಯಾಸಮಾಡಿಕೊಳ್ಳಿ, ಆಗ ಮಾತ್ರ ಕ್ರಿಯಾಶೀಲ ಜೀವನ ಸಾಧ್ಯ ಎಂದು ಖ್ಯಾತ ಮನೋ ವೈದ್ಯ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ.ಸಿ.ಆರ್ ಚಂದ್ರಶೇಖರ್ ತಿಳಿಸಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ಪ್ರಶಸ್ತಿ ಪುರಸ್ಕೃತ ರನ್ನು ಸನ್ಮಾನಿಸಿ ಅವರು ಮಾತನಾಡಿದರು.ಜ್ಞಾನ ಮತ್ತು ವಿಜ್ಞಾನ ಯಾರ ಆಸ್ತಿಯೂ ಅಲ್ಲ. ವಿಜ್ಞಾನ ಯುಗದಲ್ಲಿ ಕಲಿಕೆ ನಮ್ಮ ಮೊದಲ ಆದ್ಯತೆ ಆಗಬೇಕು, ಕಲಿಯುವಾಗ ವಿದ್ಯಾರ್ಥಿ ಪ್ರೀತಿಯಲ್ಲಿ ಪ್ರಶ್ನೆ – […]
ಶ್ರೀನಿವಾಸಪುರ : ತಾಲೂಕಿನ ಪೆಗಳಪಲ್ಲಿ ಗ್ರಾಮದ ಬಳಿಯ ಮಾವಿನ ತೋಟದಲ್ಲಿ ಶನಿವಾರ ಸಂಜೆ 4 ಗಂಟೆ ಸಮಯದಲ್ಲಿ ಖಚಿತ ಮಾಹಿತಿಯ ಮೇರೆಗೆ ಇಸ್ಪೀಟ್ ದಂದೆಯ ಮೇಲೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ, ಪಿಎಸ್ಐ ಜಯರಾಮ್ ಹಾಗು ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಿ ಏಳು ಮಂದಿ ಆರೋಪಿಗಳು ಹಾಗು 9500 ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.ಇದೇ ಸಮಯದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ ಮಾತನಾಡಿ ಇತ್ತೀಚಿಗೆ ಕಾನೂನು ಬಾಹಿರದಲ್ಲಿ ಪಾಲ್ಗುಂಡಿರುವವರನ್ನ ಮಟ್ಟಹಾಕಲು ಎಸ್ಪಿರವರ ನಿರ್ದೇಶನದ ಮೇರೆಗೆ ಠಾಣೆಯ ವ್ಯಾಪ್ತಿಯಲ್ಲಿ ನಡೆಯುವ ಆಕ್ರಮ […]
ಶ್ರೀನಿವಾಸಪುರ: ವಿಧಾನಸಭಾ ಕ್ಷೇತ್ರ ಗೌಡಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಕರೇಗೌಡ, ಸಾಹಿತಿ ಆರ್.ಚೌಡರೆಡ್ಡಿ ಉದ್ಘಾಟಿಸಿದರು. ನಾಡು ನುಡಿಯ ರಕ್ಷಣೆ ಎಲ್ಲರ ಹೊಣೆ -ಗೋಪಾಲಗೌಡ ಶ್ರೀನಿವಾಸಪುರ ನಾಡು ನುಡಿಯ ರಕ್ಷಣೆ ನಾಡಿನ ಎಲ್ಲರ ಹೊಣೆ. ಕನ್ನಡ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಹೇಳಿದರು.ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ […]
ಶ್ರೀನಿವಾಸಪುರ; ಪಟ್ಟಣ ಹೊರವಲಯದ ಶ್ರೀ ವಿಜಯಾದ್ರಿ ವಿದ್ಯಾ ಸಂಸ್ಥೆ ಆವರಣದಲ್ಲಿ ಶುಕ್ರವಾರ 69ನೇ ಕನ್ನಡರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನ ವಿದ್ಯಾ ಸಂಸ್ಥೆಯ ಆಡಳಿತ ಮಂಡಲಿವತಿಯಿಂದ ವಿತರಿಸಲಾಯಿತು.ಆಡಳಿತ ಮಂಡಲಿ ಅಧ್ಯಕ್ಷ ಆರ್.ನಾರಾಯಣಸ್ವಾಮಿ, ಆಡಳಿತಾಧಿಕಾರಿ ಎ.ವೆಂಕಟರಾಮರೆಡ್ಡಿ,ಕಾರ್ಯದರ್ಶಿ ಬಾಬುಗೌಡ, ಪ್ರಾಂಶುಪಾಲ ಎನ್.ಶಿವಕುಮಾರ್, ಉಪನ್ಯಾಸಕರಾದ ಸತೀಶ್, ಪಿ.ವಿ.ಶಿವಕುಮಾರ್, ರೀಯಜ್ ಪಾಷ, ಭವ್ಯ, ಬಿ.ಎಮ್.ಪವಿತ್ರ,ಎನ್.ಚಲಪತಿ, ಎಚ್.ಎನ್.ಸಂದೀಪ್, ಅನೀಲ್ಕುಮಾರ್, ಪೃಥ್ವಿ, ಶಿಕ್ಷಕರಾದ ಸಲ್ಮ ಸುಲ್ತಾನ, ಪ್ರೇಮಾ, ಸುಮತಿ, ಎನ್.ಝೈಬಾ ಆಯೇಶಾ, ವೈಷ್ಣವಿ, […]
ಪಟ್ಟಣದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವವು ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರ ಗದ್ದಲ, ವಿರೋಧ, ಆಕ್ರೋಶ ಬಹಿಷ್ಕಾರಗಳ ನಡುವೆ ನಡೆಯಿತು. ಧ್ವಜಾರೋಹಣ ಸುತ್ತೋಲೆ ಕುರಿತು ಸ್ಪಷ್ಟನೆ ನೀಡಿದ ತಹಶೀಲ್ದಾರ್ ಧ್ವಜಾರೋಹಣ ಕುರಿತು ರಾಜ್ಯ ಸರ್ಕಾರದ ನಡೆಯ ವಿರುದ್ದವೂ ಮುಖಂಡರು ಆಕ್ರೋಶ, ಕಾರ್ಯಕ್ರಮದಲ್ಲಿ ಬಹಳಷ್ಟು ಇಲಾಖೆಗಳ ಅಧಿಕಾರಿಗಳು ಗೈರಾಗಿರುವುದರ ವಿರುದ್ಧವೂ ಬೇಸರ ವ್ಯಕ್ತಪಡಿಸಿದರು. ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ಕನ್ನಡಬಾಷೆ ಉಳಿವಿಗಾಗಿ ಅನೇಕ ಮಹನೀಯರು ಹೋರಾಡಿದ್ದಾರೆ ಅವರನ್ನು ಇಂದಿನ ಯುವ ಪೀಳಿಗೆ […]
ಕೋಲಾರ,ಅ.30: ಹಿಂದಿನ ದಿನಕ್ಕಿಂತ ನಾಳೆಯೇ ಲೇಸು ಎಂಬ ನುಡಿಯು ಅರ್ಥಪೂರ್ಣವಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ಅರೋಗ್ಯಕರ ಮನಸ್ಸು ಅಗತ್ಯವಿದೆ. ಭಾಷೆಗೂ ಭಾವನೆಗೂ ಅವಿನಭಾಜ್ಯ ಸಂಬಂಧವಿದೆ. ಕನ್ನಡ ಭಾಷೆ ಸಂವಾಹನ ಅಭಿವ್ಯಕ್ತವಾಗುತ್ತಿದೆ ಎಂದು ಡಾ. ಕೆ.ರಾಜಕುಮಾರ್ ಅಭಿಪ್ರಾಯಪಟ್ಟರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೋಲಾರದ ಅಂತರಗಂಗೆ ರಸ್ತೆಯ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಸಲುವಾಗಿ ಕನ್ನಡ ಪರಿಚಾರಕ-2024 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ, ಕನ್ನಡ ಪರಿಚಾರಕ ಎಂಬುವುದಕ್ಕಿಂತ ನುಡಿ ಪರಿಚಾರಕ ಎಂಬುವುದು ಸೂಕ್ತವಾಗಿದೆ ಎಂದು […]
ಶ್ರೀನಿವಾಸಪುರ;ಪಟ್ಟಣದ ಪುರಸಭೆ ಮುಂಭಾಗ ಮಂಗಳವಾರ ದಿ.ಪುನಿತ್ರಾಜಕುಮಾರ್ರವರ 3ನೇ ವರ್ಷದ ಪುಣ್ಯ ತಿಥಿಯನ್ನು ಪುನಿತ್ರಾಜಕುಮಾರ್ ಬಳಗವು ಆಯೋಜಿಸಿ ಅನ್ನಸಂತರ್ಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಪುರಸಭೆ ಅಧ್ಯಕ್ಷ ಬಿ.ಆರ್.ಬಾಸ್ಕರ್, ಪಿಎಸ್ಐ ಜಯರಾಮ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ಜಿ.ಎಸ್.ಶ್ರೀನಿವಾಸ್, ಪುನಿತ್ರಾಜಕುಮಾರ್ ಅಭಿಮಾನಿ ಬಳಗದ ಪದಾಧಿಕಾರಿಗಳಾದ ರಾಜ್ ದ್ವನಿ ವರ್ಧಕ ಮಾಲೀಕ ಶ್ರೀನಿವಾಸ್, ಚಂದ್ರು, ಎಚ್.ಎಸ್. ನಾರಾಯಣಮೂರ್ತಿ, ಲಕ್ಷ್ಮಣಬಾಬು, ಗೊಂಗರ್ ಶ್ರೀನಿವಾಸ್, ಕಾರ್ತೀಕ್ , ಮುನಿರಾಜು, ಮಂಜು ಇದ್ದರು.
ಶ್ರೀನಿವಾಸಪುರ : ಈ ಭಾಗದಲ್ಲಿ ಅತಿ ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದೇವೆ ಕೃಷಿ ಆಧಾರಿತ ಕಂಪನಿಗಳು ಎಂದರೆ ಉಪ್ಪಿನಕಾಯಿ ಕಾರ್ಖಾನೆಗಳು ಹಣ್ಣು ತಿರುಳು ತೆಗೆಯುವ ಕಾರ್ಖಾನೆಗಳು ವ್ಯಾಲ್ಯೂ ಆಡೆಡ್ ಪ್ರಾಡಕ್ಟ್ಸ್ ತಯಾರು ಮಾಡುವಂತಹ ಕಾರ್ಖಾನೆಗಳು ಹಾಗೂ ಇವುಗಳಿಗೆ ಬೇಕಾದಂತಹ ಪ್ಯಾಕಿಂಗ್ ಮೆಟೀರಿಯಲ್ ಇಂದ ಹಿಡಿದು ಇನ್ನು ಅನೇಕ ಕಂಪನಿಗಳು ಬರಬಹುದು ನಂತರ ನಾವು ತಯಾರಿಸಿದ ಪ್ರಾಡಕ್ಟ್ಸ್ ಅನ್ನು ದೇಶವಿದೇಶಗಳಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತಹ ಪ್ರಕ್ರಿಯೆಗಳನ್ನು ಮಾಡಿದರೆ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತದೆ ಎಂದು […]

