ಮಂಗಳೂರು ; ಅಕ್ಟೋಬರ್ 23, 2024 ರಂದು, ಸೇಂಟ್ ಆಗ್ನೆಸ್ ಪಿಯು ಕಾಲೇಜು ತನ್ನ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುವ ಮೂಲಕ ವಿದ್ಯಾರ್ಥಿಗಳ ದಿನವನ್ನು ಆಚರಿಸಿತು. ಸಭಾಂಗಣದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮವು ಸಿಬ್ಬಂದಿಗಳ ಮನಃಪೂರ್ವಕ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮೂಹದ ವೈವಿಧ್ಯಮಯ ಪ್ರತಿಭೆಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳ ಸಾಧನೆ ಮತ್ತು ಸಾಮರ್ಥ್ಯವನ್ನು ಕೊಂಡಾಡಲು ಗೆಳೆಯರು ಮತ್ತು ಶಿಕ್ಷಕರು ಒಗ್ಗೂಡಿದ್ದರಿಂದ ವಾತಾವರಣವು ಉತ್ಸಾಹ ಮತ್ತು ಹೆಮ್ಮೆಯಿಂದ ತುಂಬಿತ್ತು.MCsRuth ಮತ್ತು ಅನನ್ಯಾ ಈವೆಂಟ್ ಅನ್ನು ಕೌಶಲ್ಯದಿಂದ ಮುನ್ನಡೆಸಿದರು, ಪ್ರೇಕ್ಷಕರನ್ನು […]
ಶ್ರೀನಿವಾಸಪುರ : 2023 ರಲ್ಲಿ ಅರಣ್ಯ ಇಲಾಖೆಯು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ರೈತರ ಆಸ್ತಿ, ಪಾಸ್ತಿ ಬೆಳಗಳನ್ನು ನಾಶಪಡಿಸಿ, ರೈತರ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ ಎಂದು ಆರೋಪಿಸಿದರು. ಅಲ್ಲದೆ ರೈತರನ್ನ ಭೂಗಳ್ಳರೆಂದು ಸಂಭೋದನೆ ಮಾಡಿದ್ದಾರೆ ಎಷ್ಟು ಸರಿ. ಅರಣ್ಯ ಇಲಾಖೆಯು ರೈತರಿಗೆ ಎಷ್ಟುನಷ್ಟ ವುಂಟು ಮಾಡಿದ್ದರೋ ಅಷ್ಟು ಪರಿಹಾರ ರೂಪದಲ್ಲಿ ಭರಿಸಬೇಕು ಎಂದು ಕೆಪಿಆರ್ಎಸ್ ನ ಪ್ರದಾನ ಕಾರ್ಯದರ್ಶಿ ಪಾತಕೋಟೆ ಪಿ.ಆರ್.ನವೀನ್ಕುಮಾರ್ ಒತ್ತಾಯಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಕೆಪಿಆರ್ಎಸ್ ಸಂಘದಿಂದ ಹಾಗು ಭೂ […]
ಬೆಂಗಳೂರು: ಸ್ಥಳೀಯ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಮಸ್ಯೆ ಕುರಿತು ಈಗಾಗಲೇ ಮುಖ್ಯಮಂತ್ರಿಯವರಿಗೆ, ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರಿಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆ ಪರಿಶೀಲಿಸಿ ನ್ಯಾಯ ಒದಗಿಸಿ ಕೊಡುವಂತೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಒತ್ತಾಯಿಸಿದರು. ಸಂಪಾದಕರ ಸಂಘದ ರಾಜ್ಯ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳ ನಿಯೋಗದೊಂದಿಗೆ ಅಕ್ಟೋಬರ್ 21 ರ ಸೋಮವಾರ ಮಧ್ಯಾಹ್ನ […]
ಕೋಲಾರ,ಅ.21: ಗ್ರಾಮವಿಕಾಸ ಮತ್ತು ರೆಸ್ಟ್ಲೆಸ್ ಡೆವೆಲಪ್ಮೆಂಟ್, ಕೋಲಾರ ಲೇಕ್ಸೈಡ್ ರೋಟರಿ ಕ್ಲಬ್ ಮತ್ತು ಗ್ರೀನ್ ವಾರಿಯರ್ಸ್ ತಂಡದ ಸಹಯೋಗದಲ್ಲಿ ಮುಳಬಾಗಿಲು ಪಟ್ಟಣದಲ್ಲಿರುವ ವಾಸವಿ ಕಲ್ಯಾಣಮಂಟಪದಲ್ಲಿ “ಪ್ಲಾಸ್ಟಿಕ್ ಮುಕ್ತ ಕೋಲಾರ ಜಿಲ್ಲೆ” ಗಾಗಿ ಅಭಿಯಾನದ ಮೂಲಕ “ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ” ಎಂಬ ಸಂದೇಶವನ್ನು ಸಾರುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆ ಇಡೀ ವಿಶ್ವವನ್ನೆ ನಿದ್ದೆ ಇಲ್ಲದೇ ಮಾಡುತ್ತದೆ. ಪ್ರಪಂಚದಲ್ಲಿ ಎಲ್ಲಾ ರಾಷ್ಟ್ರಗಳು ಹವಾಮಾನ ಬದಲಾವಣೆಗೆ ತುತ್ತಾಗಿವೆ. 1.5 ಡಿಗ್ರೀಸ್ ತಾಪಮಾನ ಹೆಚ್ಚಾದರೆ […]
ಶ್ರೀನಿವಾಸಪುರ ; ಸೋಮವಾರ 4.30 ಸಮಯದವರೆಗೂ ನಾಮಪತ್ರ ಹಿಂಪಡೆಯುವ ಕೊನೆ ದಿನವಾದ್ದರಿಂದ ಪ್ರಾಥಮಿಕ ,ಪ್ರೌಡಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇಲಾಖೆ ಸಿಬ್ಬಂದಿಗಳು ಸ್ಪರ್ಧಿಯಲ್ಲಿ ಸ್ಪರ್ಧಿಸಲಿದ್ದು, 28 ರಂದು ಚುನಾವಣೆ ನಡೆಯಲಿದ್ದು, ಉಳಿದಂತೆ 21 ಇಲಾಖೆಗಳ 27 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸೋಮವಾರ ನೌಕರರ ಕಚೇರಿಯಲ್ಲಿ ಚುನಾವಣಾಧಿಕಾರಿ ಐಮಾರಡ್ಡಿ ಮಾಹಿತಿ ನೀಡಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸಂಘಕ್ಕೆ ಇದೇ ತಿಂಗಳು 28 ರಂದು 2024-29 ನೇ ಸಾಲಿಗೆ ನಡೆಯಲಿದ್ದು, ಅಂತಿಮವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ದೇಶಕರ […]
ಶ್ರೀನಿವಾಸಪುರ : ಮೊಬೈಲ್ ವೀಕ್ಷಣೆಯಿಂದ ಎಷ್ಟೋ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಜೀವನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾಭ್ಯಾಸದಲ್ಲಿ ತಮ್ಮ ಜೀವನದ ಗುರಿಮಟ್ಟುವ ತನಕ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವಂತೆ ಎಂದು ಪಿಎಸ್ಐ ಎಚ್.ಜಯರಾಮ್ ಸಲಹೆ ನೀಡಿದರು.ಪಟ್ಟಣದ ಎಸ್ಎಫ್ಎಸ್ ಶಾಲೆಯಲ್ಲಿ ಶುಕ್ರವಾರ ಪಟ್ಟಣ ಪೊಲೀಸ್ ಠಾಣೆಯ ವತಯಿಂದ ಅರಕ್ಷಕ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ತಂದೆ ತಾಯಿ ಎಷ್ಟು ಕಷ್ಟ ಬಿದ್ದು ಓದಿಸುತ್ತಾರೆ ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಗಮನದಲ್ಲಿ ಇಟ್ಟುಕೊಂಡು ವ್ಯಾಂಸಗ ಮಾಡಬೇಕು. ಪುಂಡ ಪೋಕರರು ಚುಡಾಯಿಸಲು ಬಂದಲ್ಲಿ. ಕೊಡಲೇ , […]
ಶ್ರೀನಿವಾಸಪುರ : ಕೇತುಗಾನಹಳ್ಳಿ ಗ್ರಾಮಸ್ಥರು ಗ್ರಾಮಕ್ಕೆ ಸಂಬಂದಿಸಿದ ಸ್ಮಶಾನ ಜಾಗವನ್ನು ಖಾಸಗಿ ಒತ್ತುವರಿ ಮಾಡಿಕೊಂಡಿದ್ದು ಸ್ಮಶಾನದ ಜಾಗವನ್ನು ತೆರವುಗೊಳಿಸುವ ಬಗ್ಗೆ ತಹಶೀಲ್ದಾರ್ ರವರಿಗೆ ಅರ್ಜಿಯನ್ನು ನೀಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿಯ ನೀಡಲಾಗಿದೆ ಎಂದು ಗ್ರೇಡ್ 2 ತಹಶೀಲ್ದಾರ್ ಕೆ.ಎಲ್.ಜಯರಾಮ್ ಮಾಹಿತಿ ನೀಡಿದರು.ತಾಲ್ಲೂಕಿನ ಕಸಬಾ ಹೋಬಳಿ ಕೇತಗಾನಹಳ್ಳಿ ಗ್ರಾಮದ ಸರ್ವೇ ನಂ.79 ರಲ್ಲಿ 1 ಎಕರೆ 32 ಗುಂಟೆ ಜಮೀನನ್ನು ಸಾರ್ವಜನಿಕರ ಸ್ಮಶಾನಕ್ಕೆ ಮೀಸಲಿಡಲಾಗಿರುವ ಜಾಗವನ್ನು ಶನಿವಾರ ಕಂದಾಯ ಇಲಾಖೆ ಹಾಗು ಸರ್ವೆ ಇಲಾಖೆ, ಪೊಲೀಸ್ ಇಲಾಖೆ ಜಂಟಿಯಾಗಿ […]
ಕೋಲಾರ : 2024-25ನೇ ಸಾಲಿಗೆ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳು ಕ್ರಿಯಾಯೋಜನೆ, ಟೆಂಡರ್ ಪ್ರಕ್ರಿಯೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಬಿಡುಗಡೆಯಾಗಿರುವ ಅನುದಾನವನ್ನು ಸಂಪೂರ್ಣ ಖರ್ಚು ಮಾಡುವ ಮೂಲಕ ಶೇಕಡ 100 ರಷ್ಟು ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಿ ಎಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಕೋಲಾರ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಏಕ್ ರೂಪ್ ಕೌರ್ ಅವರು ಹೇಳಿದರು. […]
ಕೋಲಾರ,ಅ.17: ನಗರದ ಸಾಯಿಧಾಮ್ ಹೋಟೆಲ್ನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಓರಾ ಫೈನ್ ಜ್ಯುವೆಲರಿ ಆಭರಣ ಪ್ರದರ್ಶನಕ್ಕೆ ಶ್ರೇಯಾ ಆಸ್ಪತ್ರೆಯ ಡಾ. ವಂದನಾ ಅವರು ಇಂದು ಚಾಲನೆ ನೀಡಿದರು.ಶನಿವಾರದವರೆಗೂ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ವೀಕ್ಷಿಸಿ ಆಭರಣಗಳನ್ನು ಖರೀದಿ ಹಾಗೂ ಲೋನ್ ಮುಖಾಂತರ ಖರೀದಿ ಹಾಗೂ ಜಿರೋ ಡೌನ್ ಫೇಮಂಟ್ ಮೂಲಕವೂ ಸಹ ಖರೀದಿ ಮಾಡಬಹುದು.ಈ ಸಂದರ್ಭದಲ್ಲಿ ಕೋಲಾರ ನರ್ಸಿಂಗ್ ಹೋಂನ ಡಾ.ಹಮಾ, ಡಾ.ಶಶಿಕಲಾ ಶಂಕರ್, ವ್ಯವಸ್ಥಾಪಕ ಲೋಕೇಶ್ರೆಡ್ಡಿ, ಸೋಮಶರ್ಮ ಉಪಸ್ಥಿತರಿದ್ದರು.

