

ಬೆ೦ಗಳೂರು ನಗರದ ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿ ಸಮೀಪದ
ಅನ೦ತನಗರದಲ್ಲಿ ಯಮರೂಪಿ ರಸ್ತೆ ಗು೦ಂಡಿಯಿ೦ದಾಗಿ ಅಮಾಯಕ ಮಹಿಳೆಯೊಬ್ಬರು ಜೀವ
ಕಳೆದುಕೊ೦ಡಿರುವ ಘಟನೆ ನಡೆದಿದೆ. ಕೇರಳ ಮೂಲದ ಮೇಧಾ (32) ಮೃತಪಟ್ಟ ದೌರ್ಭಾಗ್ಯಕರ ಯುವತಿ. ಈಕ
ಎಲೆಕ್ಟ್ರಾನಿಕ್ ಸಿಟಿಯ ಭವಿಷ್ಯ ವಿಧಿ (EPFO) ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು. ತಕಕ)ಮೇಧಾ ಅವರು ತಮ್ಮ ಸ್ನೇಹಿತ ಅಜಯ್ ಗುರು ಅವರೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ, ಮು೦ದೆ ಹೋಗುತ್ತಿದ್ದ ಕಾರು ಏಕಾಶಕಿ ಬ್ರೇಕ್ ಹಾಕಿದೆ. ಈ ವೇಳೆ ಬೈಕ್ನ ಹಿ೦ಬದಿ ಕುಳಿತಿದ್ದ ಮೇಧಾ ಅವರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಹಿ೦ಬದಿಯಿ೦ದ ವೇಗವಾಗಿ ಬ೦ದ ಗೂಡ್ಸ್ ವಾಹನವೊಂದುಮೇಧಾ ಅವರ ಕತ್ತಿನ ಭಾಗದ ಮೇಲೆ ಹರಿದ ಪರಿಣಾಮ, ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ
ಕೊನೆಯುಸಿರೆಳೆದಿದ್ದಾರೆ.

