Maundy Thursday observes in Milagres Cathedral, Kallianpur with great devotion and gaiety

Udupi : Maundy Thursday was observed in Milagres Cathedral, Kallianpur of Udupi diocese with great devotion and gaiety on Thursday, 6th April, 2023. The Holy Thursday also called Covenant Thursday was concelebrated by Most Rev Dr. Gerald Isaac Lobo, Bishop of Udupi Diocese along with Very Rev Fr. Valerian Mendonca, Rector of the Cathedral and Vicar of the parish, Rev Fr. Joy Andrade, Asst. parish priest, Very Rev Fr. Denzil Martin Superior and Vocational Director of Pilar Fathers, Kallianpur and Rev Fr. Nithesh D’Souza Vocational Promoter of Pilar Fathers, Kallianpur.

The evening liturgy started at 6.30pm is beginning of the three day celebrations of Easter which signifies Tridum, remembering the last supper, the Crucifixion and death of Jesus Christ and resurrection to new life.

In his homily Rev Fr. Nithesh D’Souza emphasized on the significance of Maundy Thursday and the last Supper of Christ during which Jesus constituted the priesthood of His Apostles and gave an example of service by washing the feet of the Apostles. He gave them a new commandment to serve and to love one another. Jesus is the Eucharist. Holy Thursday celebrates the institution of Eucharist as the true body and body of Jesus and institution of the sacrament of the priesthood. The last Supper of Jesus is an example of love for God. Through Eucharist, God completely loves us. Priest is the mediator between God and us. Priest is selected by God. To love God we need the priest to mediate and he is the gift of God to us.

Thereafter, Bishop Gerald carried out the ritual of washing the feet of 12 faithful laymen. The Maundy Thursday commemorates the Last Supper of Jesus with Apostles and Jesus washing the feet of his disciples.

At the end, Very Rev Fr. Valerian Mendonca placed some of the important announcements on the liturgy of Good Friday.

After the mass, the Holy Eucharist was placed on the altar of repose when Bishop, priests and altar servers proceeded in procession to the Altar of repose. The altar of repose is decorated with beautiful flowers and candle lights.

Rev Fr. Joy Andrade led the adoration prayers as soon as Holy Eucharist placed on the Alter of repose. It’s necessary to instruct the faithful on the meaning of the reposition. It is an austere solemn conservation of Body of Christ in the community of the faithful which takes part in the liturgy of Good Friday and for the viaticum of the confirmed. It is an invitation to silent and prolonged adoration of the wondrous sacrament instituted by Jesus on this day. On Good Friday, Way of the Cross will be held at the Cathedral at sharp 9am.

After midnight of Holy Thursday, the adoration should conclude without Solemnity since the day of the Lord’s Passion has already begun. Ms. Lerissa D’Souza compared the liturgy of Holy Thursday devotionally.

ಪಿಯೂಸ್ ನಗರ ಚರ್ಚಿನಲ್ಲಿ ಪಾದ ತೊಳೆಯುವ ದಿನದ ಆಚರಣೆ

ಪಿಯೂಸ್ ನಗರ ಚರ್ಚಿನಲ್ಲಿ ಯೇಸುವಿನ ಕೊನೆಯ ಭೋಜನ (ಪಾಸ್ಕ) ಹಬ್ಬದ ಆಚರಣೆ ಭಕ್ತಿತ್ಪೂರ್ವಕ ವಾಗಿ ನಡೆಯಿತು. ವಂದನೀಯ ಫಾದರ್ ಆಲ್ಬರ್ಟ್ ಕ್ರಾಸ್ತ ಇವರು ಸಾಂಕೇತಿಕವಾಗಿ 12 ಮಂದಿಯ ಪಾದವನ್ನು ತೊಳೆದು ಬಲಿ ಪೂಜೆಯನ್ನು ನೇರವೇರಿಸಿದರು.

ಕುಂದಾಪುರ ಶುಭ ಶುಕ್ರವಾರ ಇಗರ್ಜಿಯ ಮೈದಾನದಲ್ಲಿ ಭಕ್ತಿ ಪೂರ್ವಕ ಶಿಲುಭೆ ಯಾತ್ರೆ /ಕುಂದಾಪುರ್ ನಿಮಾಣ್ಯಾ ಸುಕ್ರಾರಾ ಇಗರ್ಜೆ ಮೈದಾನಾರ್ ಭಕ್ತಿಪಣಾಚಿ ಖುರ್ಸಾ ವಾಟ್

ಕುಂದಾಪುರ, ಎ.7: ಇಂದು ಶುಭ ಶುಕ್ರವಾರದಂದು ಬೆಳಿಗ್ಗೆ ಎಂಟು ಮುವತ್ತಕ್ಕೆ, ಕುಂದಾಪುರ ಚರ್ಚಿನ ಇಗರ್ಜಿ ಮೈದಾನದಲ್ಲಿ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಭೆಯಾತ್ರೆಯು ಒಂದೊಂದು ಶಿಲುಭಾ ಅಧ್ಯಾಯಾವನ್ನು ಚರ್ಚಿನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೇರವೆರಿಸಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶಿಲುಭೆ ಯಾತ್ರೆಗೆ ಸ್ವಾಗತಿಸಿ ಧನ್ಯವಾದಗಳನ್ನು ಸಮರ್ಪಿಸಿದರು. ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ ಇವರು ಶಿಲುಭೆಯಾತ್ರೆಯ ಪ್ರಾರ್ಥನೆಗಳನ್ನು ಸಿದ್ದಪಡಿಸಿ, ಮಾರ್ಗದರ್ಶನ ನೀಡಿದರು. ಈ ಭಕ್ತಿಪೂರ್ವಕ ಶಿಲುಭೆ ಯಾತ್ರೆಗೆ ಕುಂದಾಪುರ ಚರ್ಚಿನ ಭಕ್ತಾಧಿಗಳು ದೊಡ್ಡ ಸಂಖ್ಯೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು.

ಕುಂದಾಪುರದಲ್ಲಿ ಪಾದ ತೊಳೆಯುವ ದಿನ – ಪಾದ ತೊಳೆಯುವುದೆಂದರೆ ಪರರ ಸೇವೆ ಮಾಡುವುದು : ಫಾ|ಆಲ್ವಿನ್ ಸೀಕ್ವೇರಾ


ಕುಂದಾಪುರ,ಎ.7; “ಯೇಸು ಇಂದು ಶಿಸ್ಯರ ಜೊತೆ ಭೋಜನ ಎರ್ಪಡಿಸಿ, ಒಂದು ರೊಟ್ಟಿ ಮುರಿದು ಇದು ನನ್ನ ದೇಹ, ಹಾಗೇ ದ್ರಾಕ್ಷರಸವನ್ನು ತೆಗೆದುಕೊಂಡು ಕುಡಿಯಲು ಕೊಟ್ಟು ಇದನ್ನು ನನ್ನ ರಕ್ತವೆಂದು ನೀವು ಅಂದುಕೊಳ್ಳಬೇಕು, ಇದನ್ನು ನೀವು ಮುಂದೆ ನನ್ನ ನೆನಪಿಗಾಗಿ ಆಚರಿಸಬೇಕು, ಅಂದಿನಿಂದ ಈ ರೀತಿಯ ಭೋಜನವು ಪವಿತ್ರ ಬಲಿದಾನವಾಗಿ ಮಾರ್ಪಟ್ಟಿತ್ತು. ನಾವೇನೊ ಪವಿತ್ರ ಬಲಿದಾನದಲ್ಲಿ ಭಾಗಿಯಾಗುತ್ತೇವೆ ಆದರೆ, ಇನ್ನೊಂದನ್ನು ಯೇಸು ಹೇಳಿದ್ದು ಮರೆತು ಬಿಟ್ಟಿದ್ದೇವೆ. ನನ್ನ ನೆನಪಿಗೆ ರೊಟ್ಟಿ ತಿನ್ನಿ ಮತ್ತು ದ್ರಾಕ್ಷರಸ ಕುಡಿಯಿರಿ ಅನ್ನುವ ಮೊದಲು, ಯೇಸು ಊಟಕ್ಕೆ ಕುಳಿತುಕೊಂಡವರು ಎದ್ದು, ತಮ್ಮ ಸೊಂಟಪಟ್ಟಿಯನ್ನು ಕಟ್ಟಿಕೊಂಡು, ಶಿಸ್ಯರ ಪಾದಗಳನ್ನು ತೊಳೆದರು, ಯೇಸು ಸ್ವಾಮಿ ಇದನ್ನು ಮಾಡಿದ್ದು ಬರೇ ಕಾಟಾಚರಕ್ಕಲ್ಲ. ನನ್ನ ಶಿಸ್ಯರು ಕೂಡ ಪರರ ಪಾದ ತೊಳೆಯಬೇಕು ಎಂದು ಹೇಳಿದರು. ಇದನ್ನು ಕೇವಲ ಪರಂಪರೆಯಂತೆ ಪಾದ ತೊಳೆಯುವದಲ್ಲ, ಪರರ ಮೇಲೆ ಕಾರುಣೆಯಿಟ್ಟು ಪರರ ಸೇವೆ ಮಾಡಬೇಕು, ಬಡವ ಬಲ್ಲಿಗರಿಗೆ, ದೀನದಲಿತರಿಗೆ ಅವಶ್ಯಕತೆಗೆ ಸ್ಪಂದಿಸಬೇಕು, ಸಹಾಯ ಮಾಡಬೇಕು, ರೋಗಿಗಳ ಶುಷುರ್ರೆ ಮಾಡಬೇಕು, ಇಂತಹ ಹ್ರದಯವಂತಿಕೆಯ ಸೇವೆಗಳನ್ನು ಮಾಡಲಿಕ್ಕಾಗಿ, ತನ್ನ ಶಿಸ್ಯರ ಪಾದಗಳನ್ನು ತೊಳೆಯುವ ಮೂಲಕ ಸ್ಪಷ್ಟ ಪಡಿಸಿದ್ದು. ಇದು ಯೇಸುವಿನ ಶಿಶ್ಯರಿಗೆ ಮಾತ್ರವಲ್ಲ ನಮ್ಮೇಲ್ಲರಿಗೂ ಅನ್ವಯವಾಗುತ್ತೆ, ಆವಾಗ ಮಾತ್ರ ಇಗರ್ಜಿಯಲ್ಲಿ ಅರ್ಪಿಸುವ ಬಲಿದಾನ ಪೂರ್ಣವಾಗುತ್ತದೆ, ಇಲ್ಲಿ ಬಲಿದಾನ ಅರ್ಪಿಸಿ, ಹೊರಗಡೆ ಮನೆಯಲ್ಲಿ, ನಮ್ಮ ನೆರೆಮನೆಯರಲ್ಲಿ, ಸಮಾಜದಲ್ಲಿ ಸೇವೆಯ ಕಾರ್ಯಗಳನ್ನು ಮಾಡದಿದ್ದರೆ ನಮ್ಮ ಬಲಿದಾನ ಅಪೂರ್ಣವಾಗುತ್ತದೆ” ಎಂದು 452 ವರ್ಷಗಳ ಇತಿಹಾಸ ಇರುವ ಚಾರಿತ್ರಿಕ ಹಿನ್ನೆಲೆಯುಳ್ಳ ಕುಂದಾಪುರ ರೋಜರಿ ಚರ್ಚಿನಲ್ಲಿ ಯೇಸುವಿನ ಕೊನೆಯ ಭೋಜನದ ಆಚರಣೆಯನ್ನು ಎಪ್ರಿಲ್ 6 ರಂದು ನಡೆಸಿಕೊಟ್ಟ ಕಟ್ಕರೆ ಬಾಲ ಯೇಸುವಿನ ಆಶ್ರಮದ ಮೇಲ್ವಿಚಾರಕರಾದ ವಂ|ಫಾ|ಆಲ್ವಿನ್ ಸೀಕ್ವೇರಾ ಸಂದೇಶ ನೀಡಿದರು. ನೀಡಿದರು


“ಯೇಸು ಕ್ರಿಸ್ತರು ಶ್ರೇಷ್ಟರಾದರೂ, ಅವರು ತಾವು ಶ್ರೇಷ್ಟರೆಂದು ಅಹಂಕಾರ ಪಟ್ಟುಕೊಳ್ಳಲಿಲ್ಲ, ಎಲ್ಲವನ್ನು ವಿಧೇಯತೆಯಿಂದ ನಡೆದುಕೊಂಡರು. ನಾವು ಕೂಡ ಹಾಗೇ, ತಾನೂ ಶ್ರೇಷ್ಟ, ಬುದ್ದಿವಂತ, ಪ್ರತಿಭಾವಂತ, ನನ್ನ ವಾಕ್ಯವೇ ನಡೆಯಬೇಕು ಎಂಬ ಅಹಂಕಾರ ತೊರೆಯಬೇಕು, ತಮ್ಮ ವರಗಳನ್ನು, ಕೌಶಲ್ಯಗಳನ್ನು, ಪ್ರಭಾವನ್ನು,ಎನ್ನನ್ನೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು. ನಮಗೆ ದೊರಕಿದ ಪ್ರತಿಭೆ ವರಗಳನ್ನು, ಇದೆಲ್ಲ ತಮ್ಮ ಸ್ವಂತದಲ್ಲವೆಂದು ತಿಳಿದುಕೊಂಡು, ಇದೆಲ್ಲಾ ನನಗೆ ದೇವರು ಕೊಟ್ಟಿದ್ದು ಎಂದು ತಿಳಿದು, ಪರರ ಒಳಿತಿಗಾಗಿ ಉಪಯೋಗಿಸಬೇಕು” ಎಂದು ತಿಳಿಸಿ ಪರಮ ಪ್ರಸಾದದ ಆರಾಧನೆಯನ್ನು ನಡೆಸಿಕೊಟ್ಟರು.


ಕುದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ಚರ್ಚ್ ಪರಿಧಿಯಲ್ಲಿನ ವಾಳೆಯ ಪ್ರತಿನಿಧಿಗಳ ಪಾದ ತೊಳೆಯುವ ಆಚರಣೆ ನೆರವೇರಿಸಿದರು. ಹೀಗೆ ಪಾದ ತೊಳೆಯುವ ವಿಧಿ, ಪರಮ ಪ್ರಸಾದದ ಸಂಸ್ಕಾರ, ಗುರುದೀಕ್ಷೆಯ (ಯಾಜಕತ್ವ) ಸಂಸ್ಕಾರ ಹೀಗೆ ಯೇಸು ಒಂದೇ ದಿನ ಸ್ಥಾಪಿಸಲ್ಪಟ್ಟ ಮೂರು ಸಂಸ್ಕಾರಗಳ ಅವಿಷ್ಕರಿಸಿದ ಪವಿತ್ರ ದಿನವನ್ನು, ಸಂಭ್ರಮ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಈ ಧಾರ್ಮಿಕ ವಿಧಿಯಲ್ಲಿ ಸಹಾಯಕ ಧರ್ಮಗುರು ವಂ| ಅಶ್ವಿ ಆರಾನ್ಹಾ ಭಾಗಿಯಾಗಿ ಪೂಜಾ ವಿಧಾನಗಳಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.

ಐ.ಎಂ.ಜೆ. ವಿದ್ಯಾ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಎಪ್ರಿಲ್ ಹತ್ತರಂದು:ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ

ಮೂಡ್ಲಕಟ್ಟೆ ಐ.ಎಂ.ಜೆ. ವಿದ್ಯಾ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯನ್ನು ಇದೇ ಬರುವ ಎಪ್ರಿಲ್ ಹತ್ತರಂದು ನಡೆಯಲಿದೆ. ಇದರ ಪ್ರಯುಕ್ತ ಸಂಸ್ಥೆಯಲ್ಲಿ ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎಪ್ರಿಲ್ ಎಂಟನೇ ತಾರೀಖಿನಂದು ಬೆಂಗಳೂರಿನ ಮಾಜಿ ಇಸ್ರೋ ವಿಜ್ಞಾನಿ ಆರ್‍ಆರ್‍ಎಸ್‍ಸಿ ಸೌತ್ ಇದರ ನಿವೃತ್ತ ಜನರಲ್ ಮ್ಯಾನೇಜರ್ ಡಾ. ಕೆ. ಗಣೇಶ ರಾಜ್‍ರವರಿಂದ ಶ್ರೀ ಐ.ಎಂ.ಜಯರಾಮ ಶೆಟ್ಟಿ ಸ್ಮರಣಾರ್ಥ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಅವರು ಭೂಕಂಪ ಹಾಗೂ ಸಮಾಜದ ಮೇಲೆ ಅದರ ಪರಿಣಾಮ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಇದೇ ಬರುವ ಎಪ್ರಿಲ್ 10, ಸೋಮವಾರದಂದು ಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಗುವುದು ಈ ಕಾರ್ಯಕ್ರಮಕ್ಕೆ ಡಿವೈನ್ ಪಾರ್ಕ್ ಕೋಟ ಇಲ್ಲಿಯ ಎಸ್ ಎಚ್ ಆರ್ ಎಸ್ ವಿಭಾಗದ ಮೆಡಿಕಲ್ ಡೈರೆಕ್ಟರ್ ಹಾಗೂ ಡಿವೈನ್ ಪಾರ್ಕ್ ಟ್ರಸ್ಟ್‍ನ ಟ್ರಸ್ಟಿ ಆಗಿರುವ ಡಾ. ವಿವೇಕ್ ಎ. ಉಡುಪರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಎಂ.ಜೆ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಶ್ರೀಯುತ ಸಿದ್ದಾರ್ಥ ಜೆ. ಶೆಟ್ಟಿಯವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀದೇವಿ ಆಂಬುಲೆನ್ಸ್ ಸರ್ವಿಸ್, ಕುಂದಾಪುರದ ಶ್ರೀ ವಾಸುದೇವ ಹಂದೆ ಅವರಿಗೆ ಅವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಲಾಗುವುದು. ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅಲ್ಲದೇ ಸಮಾಜ ಸೇವಾ ಕಾರ್ಯಕ್ರಮಗಳಾಗಿ ಬುದ್ಧಿಮಾಂಧ್ಯ ಮಕ್ಕಳಿಗೆ “ವಿಸ್ಮಯ” ವೃದ್ಧಾಶ್ರಮದಲ್ಲಿ “ಮೈತ್ರಿ” ಕುಂದಾಪುರ ನಗರಸಭಾ ಸಹಯೋಗದೊಂದಿಗೆ “ಸಂರಕ್ಷಣೆ” ನಗರ ಸ್ವಚ್ಛತಾ ಕಾರ್ಯಕ್ರಮ “ನಮ್ಮ ಭೂಮಿ” ಬಸ್ರೂರು ಅವರೊಂದಿಗೆ ಒಡಂಬಡಿಕೆ ಹಾಗೂ ಸಂಸ್ಥೆಯ ಆವರಣದಲ್ಲಿ ಮಳೆನೀರು ಕೊಯ್ಲು ಮುಂತಾದವುಗಳನ್ನು ಹಮ್ಮಿಕೊಳ್ಳಲಾಗಿದೆ.

ಸಂಸ್ಥಾಪಕರ ದಿನಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದಿಂದ “ಸತ್ವ ದರ್ಶನಂ” ನಾಟಕ ಪ್ರದರ್ಶನವನ್ನು ಮಾಡಲಾಗುವುದು.

ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ “ESPERANZA 2K23” ಫ್ರೆಶರ್ಸ್ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು

ಕುಂದಾಪುರ, ಎ:5: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ “ESPERANZA 2K23” ಫ್ರೆಶರ್ಸ್ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಆದರದಿಂದ ಸ್ವಾಗತಿಸಿಕೊಂಡರು. ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು.

 ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಜೆನಿಫರ್ ಫ್ರೀಡಾ ಮಿನೇಜೆಸ್ ಹಾಗೂ ಐ.ಎಂ.ಜೆ. ಸಮೂಹ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪ್ರೊಫೆಸರ್ ದೋಮ ಚಂದ್ರಶೇಖರ್ ರವರು ದೀಪ ಬೆಳಗಿಸುವ ಮೂಲಕ  ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.   ಕಾರ್ಯಕ್ರಮದಲ್ಲಿ ಐ.ಎಂ.ಜೆ.ಐ.ಎಸ್.ಸಿ. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ಮತ್ತು ಬೋಧಕ – ಬೋಧಕೇತರ ವೃಂದದವರು ಉಪಸ್ಥಿತರಿದ್ದು,  ವಿದ್ಯಾರ್ಥಿನಿ ಕುಮಾರಿ ಶೇರಿಲ್ ಸಾರ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಕುಮಾರಿ ನಿತ್ಯ ಸ್ವಾಗತಿಸಿ, ಕುಮಾರಿ ಗಾಯತ್ರಿ ಧನ್ಯವಾದ ಸಮರ್ಪಣೆ ಮಾಡಿದರು.

ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಡಾ. ಬಾಬು ಜಗಜೀವನ್ ರಾಂ ಜಯಂತಿ ಆಚರಣೆ

ಶ್ರೀನಿವಾಸಪುರ: ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಡಾ. ಬಾಬು ಜಗಜೀವನ್ ರಾಂ ಜಯಂತಿ ಆಚರಿಸಲಾಯಿತು. ಶಾಸಕ ಕೆ.ಆರ್.ರಮೇಶ್ ಕುಮಾರ್ ಡಾ. ಬಾಬು ಜಗಜೀವನ್ ರಾಂ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಅರ್ಪಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಮುಖಂಡರಾದ ವೆಂಕಟೇಶ್, ಎನ್.ಮುನಿಸ್ವಾಮಿ, ಕೆ.ಕೆ.ಮಂಜು, ಸೀತಾರಾಮರೆಡ್ಡಿ, ವರ್ತನಹಳ್ಳಿ ವೆಂಕಟೇಶ್, ಮುನಿರಾಜು, ಕೆ.ನಾರಾಯಣಸ್ವಾಮಿ ಇದ್ದರು.
ಮಾಲಾರ್ಪಣೆ: ಬಾಬು ಜಗಜೀವನ್ ರಾಂ ಜಯಂತಿ ಅಂಗವಾಗಿ ತಾಲ್ಲೂಕು ಕಚೇರಿ ಮುಂಭಾಗ ಅಂಬೇಡ್ಕರ್ ಉದ್ಯಾನದಲ್ಲಿನ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾಲಾರ್ಪಣೆ ಮಾಡಿದರು.

ಹಸಿರು ಕ್ರಾಂತಿಗೆ ರಾಷ್ಟ್ರದ ಮಾಜಿ ಹಂಗಾಮಿ ಪ್ರಧಾನಿ ಡಾ. ಬಾಬು ಜಗಜೀವನ್ ರಾಂ ಅವರ ಕೊಡುಗೆ ಅಪಾರ

ಶ್ರೀನಿವಾಸಪುರ: ಹಸಿರು ಕ್ರಾಂತಿಗೆ ರಾಷ್ಟ್ರದ ಮಾಜಿ ಹಂಗಾಮಿ ಪ್ರಧಾನಿ ಡಾ. ಬಾಬು ಜಗಜೀವನ್ ರಾಂ ಅವರ ಕೊಡುಗೆ ಅಪಾರ. ಅವರು ತಮ್ಮ ಸಾಮಾಜಿಕ ಬದ್ಧತೆಯಿಂದಾಗಿ ಸಮಾಜದ ಎಲ್ಲ ಸಮುದಾಯಗಳ ಪ್ರೀತಿಗೆ ಪಾತ್ರರಾಗಿದ್ದರು ಎಂದು ದಲಿತ ಮುಖಂಡ ಸೀತಪ್ಪ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಾ. ಬಾಬು ಜಗಜೀವನ್ ರಾಂ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಬಾಬು ಜಗಜೀವನ್ ರಾಂ ಅವರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಡಾ. ಬಾಬು ಜಗಜೀವನ್ ರಾಂ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಶಿವಕುಮಾರ್, ರಾಜೇಶ್, ದಲಿತ ಸಂಘಟನೆಗಳ ಮುಖಂಡರಾದ ಶಂಕರ್, ರಾಮಕೃಷ್ಣ, ಎಂ.ವೆಂಕಟೇಶ್, ಭಾವನ ಇದ್ದರು.

ಬಿಕರ್ಣಕಟ್ಟೆ:ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ನಲವತ್ತು ಘಂಟೆಗಳ ನಿರಂತರಆರಾಧನೆ / Bikarnakatte: 40Hours of Eucharistic Adoration at Infant Jesus Shrine

ಮಂಗಳೂರಿನ ಬಿಕರ್ಣಕಟ್ಟೆಯಲ್ಲಿರುವ ಪ್ರಸಿದ್ಧ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ, ಪವಿತ್ರ ವಾರದಲ್ಲಿ“ಈಸ್ಟರ್”ಹಬ್ಬಕ್ಕೆತಯಾರಿಯಾಗಿ ನಲವತ್ತು ಘಂಟೆಗಳ ನಿರಂತರ ಪರಮಪ್ರಸಾದ ಆರಾಧನೆಯನ್ನು ಆಯೋಜಿಸಲಾಗಿತ್ತು. ಸೋಮವಾರ ಬೆಳ್ಳಿಗೆ ಐದುಘಂಟೆಗೆ ಫಾದರ್‍ರೊವೆಲ್‍ಡಿಸೋಜ್ ಬಲಿಪೂಜೆ ಮುಖಾಂತರ ಪವಿತ್ರ ಪರಮಪ್ರಸಾದವನ್ನು ಪ್ರತಿಶ್ಠಾಪಿಸಿ ಪವಿತ್ರ ಪರಮಪ್ರಸಾದದಲ್ಲಿರುವಯೇಸುಕ್ರಿಸ್ತರಿಗೆಆರಾಧನೆ ಸುತ್ತಿಸ್ತೋತ್ರ ಸಲ್ಲಿಸುವುದರ ಮೂಲಕ ಆರಾಧನೆಯನ್ನು ಪ್ರಾರಂಭಿಸಿದರು. ಪ್ರತಿಒಂದುಘಂಟೆಗೆ ವಿವಿಧ ಗುಂಪುಗಳು ಆರಾಧನೆಯನ್ನು ನೆರವೇರಿಸುತಿದ್ದರು. ಬಜ್ಜೋಡಿಚರ್ಚಿನ ಗುಂಪು, ಕಾರ್ಮೆಲ್ ಸಹೋದರರು, ಸೆಕುಲರ್‍ಕಾರ್ಮೆಲ್ ಸಭೆಯವರು, ಬಾಳೊಕ್ ಜೆಜುಕುಟುಂಬದವರು, ಫಾ.ರುಡೊಲ್ಫ್ ಪಿಂಟೊ, ಫಾ.ಲ್ಯಾನ್ಸಿ ಲುವಿಸ್, ಫಾ. ಅನಿಲ್ ಅಲ್ಫ್ರೆಡ್, ಫಾ. ಜೊಸೆಫ್‍ಡಿಸೋಜಾ, ಸಹೊದರ. ಜೊಯೆಲ್ ಲಸ್ರಾದೊ, ಫಾ. ರಿಚರ್ಡ್‍ಕ್ವಾಡ್ರಸ್, ಫಾ. ಬೊನಾವೆಂಚರ್, ಸಹೋದರ. ಪ್ರಶಾಂತ್ ಫ್ರ್ಯಾಂಕ್, ಸಹೊದರ. ಮರ್ವಿನ್, ಮರಿಯಾಡಿಸೋಜಾ, ಪ್ರಿಜನ್ ಮಿನಿಸ್ಟ್ರಿ, ಎಮ್.ಪಿ. ನೊರೊನ್ಹಾ, ಫಾ. ದೀಪ್ ಫರ್ನಾಂಡಿಸ್, ಫಾ.ಸ್ಟೀಫನ್ ಲೊಬೋ ರವರು ವಿವಿಧ ಕೋರಿಕೆಗಳಿಗೆ, ಬೇಡಿಕೆಗಳಿಗೆ ಪ್ರಾರ್ಥಿಸುತ್ತಾ ಭಕ್ತಾದಿಗಳು ಇನ್ನೂ ಭಕ್ತಿಯಲ್ಲಿ ಪ್ರಾರ್ಥಿಸಲು ನೆರವಾದರು. ವಿಶೇಷವಾಗಿ ಸಮಾಜದಲ್ಲಿ ಶಾಂತಿಗಾಗಿ, ರೋಗಿಗಳಿಗೆ, ಕುಟುಂಬಗಳಿಗಾಗಿ, ಮಕ್ಕಳಿಗಾಗಿ, ಯುವಜನಕಾಗಿ, ನವದಂಪತಿಗಳಿಗಾಗಿ, ಹಿರಿಯರಿಗಾಗಿ, ಮರಣದಂಚಿನಲ್ಲಿರುವವರಿಗಾಗಿ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಸಹಸ್ರಾರು ಭಕ್ತಾದಿಗಳು ಈ ಆರಾಧನೆಯ ವಿಧಿಯಲ್ಲಿ ಭಾಗವಹಿಸಿ ತಮ್ಮಕೋರಿಕೆ, ಬಿನಹಗಳಿಗೆಲ್ಲಾ ಪ್ರಾರ್ಥಿಸಿದರು. ಮಂಗಳವಾರ ರಾತ್ರಿ ಹತ್ತುಘಂಟೆಗೆ ಬಲಿಪೂಜೆಯ ಮೂಲಕ ನಲವತ್ತು ಘಂಟೆಗಳ ನಿರಂತರ ಪರಮಪ್ರಸಾದಆರಾಧನೆಯುಕೊನೆಗೊಂಡು ಭಕ್ತಾದಿಗಳ ಮನದಲ್ಲಿ ಶಾಂತಿ ಪ್ರೀತಿ ಹರಡಿತ್ತು.

Bikarnakatte: 40Hours of Eucharistic Adoration at Infant Jesus Shrine!

Infant Jesus Shrine at Bikarnakatte, Mangaluru, on the view of preparing for the Easter,in the Holy Week had organised 40 hours of continuous Eucharistic Adoration. On Monday morning at 5 am, Fr. Rovel D’Souza initiated the Eucharistic Adoration with the Holy Eucharist. For every hour or two different groups, priests and brothers led and animated the adoration for various intentions and created a prayerful atmosphere and helped the gathered faithful to pray well. Groups namely Bajjodi parish members, Secular Carmelites, Prison ministry, Carmelite Brothers, Frs. Rudolph Pinto, Lancy Lewis, Anil Alfred, Joseph D’Souza, Richard Quadros, Bonaventure, Deep Fernandes, Stephen Lobo and Brothers Joel Lasrado, Prashanth Frank, Mervin and Maria D’souza and M.P Noronha and many of them rendered their help to praise and worship the Eucharistic Lord. Many people had made their time came, offered their praises, and prayed for their various intentions. Tuesday night at 10 pm with the Eucharistic Celebration 40 hours of Eucharistic Adoration concluded preparing the faithful for the fruitful Easter celebrations.