

ಶುಭ ಶುಕ್ರವಾರದಂದು ಬೆಳಿಗ್ಗೆಪಿಯುಸ್ ನಗರ ಇಗರ್ಜಿಯ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಪಯಣವನ್ನು ನಡೆಸಲಾಯಿತು.














ಕುಂದಾಪುರ: 75 ನೇ ವಿಶ್ವ ಆರೋಗ್ಯ ದಿನಾಚರಣೆಯನ್ನು ಈ ದಿನ ತಾರೀಖು 07-04-2023 ರಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಎದುರು ಆಚರಿಸಲಾಯಿತು. ಉಚಿತ ಆರೋಗ್ಯ ತಪಾಸಣೆ ಈ ಪ್ರಯುಕ್ತ ಆಯೋಜಿಸಲಾಯಿತು. 133 ಜನ ಶಿಭಿರಾರ್ಥಿ ಗಳು ಇದರ ಪ್ರಯೋಜನ ಪಡೆದರು. ಈ ಕಾರ್ಯ ಕ್ರಮವನ್ನು ಖ್ಯಾತ ವೈದ್ಯರಾದ ಡಾ. ಎ. ವಸಂತ ಶೆಟ್ಟಿಯವರು ಉದ್ಘಾಟಿಸಿದರು ಮತ್ತು ರೆಡ್ ಕ್ರಾಸ್ ಸಂಸ್ಥೆ ಯ ದೈನಂದಿನ ಕಾರ್ಯಕ್ರಮ ವನ್ನು ಕೊಂಡಾಡಿದರು. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ ಫಾರ್ಮೆಸಿಸ್ಟ್ ಬಿ. ಎಮ್ ಚಂದ್ರಶೇಖರ ಹಾಗೂ ಸಿಭಂದಿಗಳು ಉಪಸ್ಥಿತರಿದ್ದರು.





ಬೆಳಗಿನ ಹೊತ್ತಿನಲ್ಲಿ ಕಶ್ಟ ಯಾತನೆಯ ಶಿಲುಭೆ ಪಯಣ


ಕುಂದಾಪುರ ಎ.8: ಶುಭ ಶುಕ್ರವಾರದಂದು ಬೆಳಿಗ್ಗೆ ಕುಂದಾಪುರ ರೋಜರಿ ಮಾತಾ ಚರ್ಚಿನ ಇಗರ್ಜಿಯ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಪಯಣವನ್ನು ನಡೆಸಲಾಯಿತು. ಯೇಸು ಶಿಲುಭೆ ಹೊತ್ತು, ಕಶ್ಟ ಕಾರ್ಪಣ್ಯಗಳನ್ನು ಒಟ್ಟು 14 ಅಧ್ಯಾಯಗಳು, ಅವುಗಳನ್ನು ಚರ್ಚಿನ ವಾಳೆಯಯವರು ಮತ್ತು ಯುವ ಸಂಘಟನೆಯವರು ಒಂದೊಂದು ಶಿಲುಭಾ ಅಧ್ಯಾಯಾವನ್ನು ಯೇಸು ಅನುಭವಿಸಿದ ಯಾತನೆ ಜಾಞಪಿಸಿ ಪ್ರಾರ್ಥನೆ ಮೂಲಕ ನೇರವೆರಿಸಿದರು.
ಸಂಜೆ ಇಗರ್ಜಿಯ ಒಳಗಡೆ ಯೇಸುವಿನ ಕಷ್ಟ ಮರಣದ ಧಾರ್ಮಿಕ ವಿಧಿ

ಸಂಜೆ ಪುನ: ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ದೇವರ ವಾಕ್ಯದ ಪಠಣ, ಸಂಭ್ರಮದ ಪ್ರಾರ್ಥನ ವಿಧಿ, ಪವಿತ್ರ ಶಿಲುಭೆಗೆ ಗೌರವ ಪೂರ್ವಕ ನಮನ ಮತ್ತು ಪವಿತ್ರ ಕ್ರಿಸ್ತ ಪ್ರಸಾದ ಹೀಗೆ ನಾಲ್ಕು ಭಾಗಗಳಲ್ಲಿ ಯೇಸುವಿನ ಕಶ್ಟ ಮರಣದ ಧಾರ್ಮಿಕ ವಿಧಿಗಳನ್ನು ನಡೇಸಲಾಯಿತು.
ಸಂಜೆಯ ಪ್ರಾರ್ಥನ ವಿಧಿಗಳನ್ನು ಕಟ್ಕರೆ ಬಾಲಾ ಯೇಸುವಿನ ಆಶ್ರಮದ ಧರ್ಮಗುರು ವಂ| ದೀಪ್ ಫೆರ್ನಾಂಡಿಸ್ ನೆಡೆಸಿಕೊಟ್ಟು ’ಯೇಸುವಿನ ಗಾಯಗಳಿಂದ ನಾವು ಗುಣ ಹೊಂದಿದೆವು ಎಂದು ನಾವು ನೆನಪಿಟ್ಟುಕೊಳ್ಳಬೇಕು. ನಾವು ಸಾಮಾನ್ಯವಾಗಿ ಮಾಡುವ ಪಾಪಗಳು ಮಾತ್ರ ನಮಗೆ ತಿಳಿದಿರುತ್ತವೆ, ಆದರೆ ನಮಗೆ ತಿಳಿಯದಂತೆ ನಾವು ಅನೇಕ ಪಾಪಗಳನ್ನು ಮಾಡುತ್ತೇವೆ, ಪರರಿಗೆ ಒಳಿತನ್ನು ಉಂಟು ಮಾಡದಂತೆ ಮಾಡುವುದು, ತಡೆಯುವುದು, ಬೇರೆಯವರು ಕಶ್ಟದಲ್ಲಿರುವರಿಗೆ ಸಹಾಯ ಮಾಡದೆ ಇರುವುದು, ಹಸಿದಾಗ ಹೊಟ್ಟೆಗೆ ಕೊಡದೆ ಇರುವುದು, ಇತರರರಿಗೆ ಒಳಿತನ್ನು ಬಯಸದೇ ಇರುವುದು, ಮನಸಿನಲ್ಲಿ ದೇವರನ್ನು ಅನುಮಾನಿಸುವುದು ಇಂತಹ ನಡೆಗಳು ಕೂಡ ಪಾಪಗಳಾಗಿವೆ.” ಎಂದು ಹೇಳುತ್ತ ’ಯೇಸು ನಮಗೆ ಹೇಳಿದ್ದಾರೆ, ನಾನು ನಿನ್ನನ್ನು ಪ್ರೀತಿಸುವಂತೆ, ನೀನು ಪರರನ್ನು ಪ್ರೀತಿಸಬೇಕು. ನಮ್ಮ ಪಾಪಗಳಿಗಾಗಿ ಯೇಸು ಸ್ವಾಮಿ ಶಿಲುಭೆಯ ಮರಣ ಹೊಂದಿದರು, ೨೦೦೦ ಸಾವಿರ ವರ್ಷಗಳ ಹಿಂದೆ ಶಿಲುಭೆಯು ಅತ್ಯಂತ ಅಸಯ್ಯ ಹೀನಯಾವಾದ ಸಂಕೇತವಾಗಿತ್ತು, ಯೇಸು ಶಿಲುಭೆಯ ಮೇಲೆ ಮರಣ ಹೊಂದಿ ಆ ಶಿಲುಭೆಯನ್ನು ಪವಿತ್ರಗೊಳಿಸಿದರು. ಇದು ದೇವರು ನಮಗೆ ಪಾಪಗಳಿಂದ ವೀಮೊಚನೆಗೊಳಿಸಲು ಎರ್ಪದಡಿಸಿದ ಯೋಜನೆ. ನಮ್ಮ ಮೇಲೆ ದೇವರಿಗೆ ಪ್ರೀತಿ ಇದೆ, ಅವರಿಗೆ ನಮ್ಮನ್ನು ಕಳೆದುಕೊಳ್ಳಲು ಇಷ್ಟವಿಲ್ಲ, ನೀವೆಲ್ಲರೂ ಅವರ ಸ್ವರ್ಗರಾಜ್ಯದಲ್ಲಿ ಬರಬೇಕೆಂದು ಅವರು ಆಶಿಸುತ್ತಾರೆ. ಅದಕ್ಕಾಗಿಯೇ ದೇವರು ತಮ್ಮ ಪುತ್ರ ಯೇಸುವನ್ನು ಕಳುಹಿಸಿ ಬಲಿ ಅರ್ಪಿಸಿದ್ದಾನೆ, ಕಾರಣ ನೀವು ಪರಿವರ್ತನೆಯಾಗಬೇಕು. ಹೀಗಾಗಿ ನಾವು ಯೇಸು ಹೇಳಿದ ಮಾರ್ಗದಲ್ಲಿ ನಡೆಯೋಣ, ಶಿಲುಭೆಯ ಮೇಲೆ ಮರಣ ಹೊಂದಿದ ಆ ಯೇಸುವೇ ನಿಮಗೆ ದಾರಿದೀಪವಾಗಲಿ” ಎಂದು ಅವರು ಸಂದೇಶ ನೀಡಿದರು.
ಈ ಪ್ರಾರ್ಥನಾ ವಿಧಿಗಳಲ್ಲಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಭಾಗಿಯಾದರು. ಈ ಶುಭ ಶುಕ್ರವಾರದ ಧಾರ್ಮಿಕ ವಿಧಿಯಲ್ಲಿ , ಹಲವಾರು ಧರ್ಮ ಭಗಿನಿಯರು, ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರು.






















































ಮುಳಬಾಗಿಲು, ಏ.06: ಎಂ.ಎಸ್.ಪಿ.ಸಿ (ಅಂಗನವಾಡಿ ಕೇಂದ್ರಗಳಿಗೆ) ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪಧಾರ್ಥಗಳನ್ನು ಸರಬರಾಜು ಮಾಡುವ ಕಿಸಾನ್ ಟ್ರೇಡರ್ಸ್ ಟೆಂಡರ್ ಪರವಾನಗಿ ರದ್ದು ಮಾಡಿ ಅಂಗನವಾಡಿ ಹಾಜರಾತಿ ಪರೀಶೀಲನೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ಏ.11 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಕಳಪೆ ಆಹಾರ ಸಮೇತ ಪ್ರತಿಭಟನೆ ಮಾಡಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಅಂಗನವಾಡಿ ಮಕ್ಕಳ ಹಾಗೂ ಗರ್ಭಿಣಿ ಸ್ತ್ರೀಯರ ಅಪೌಷ್ಠಿಕತೆ ಸಮಸ್ಯೆ ಹೋಗಲಾಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾg ನಿಡುವ ಅನುದಾನದಲ್ಲಿ ವಿತರಣೆ ಮಾಡುವ ಆಹಾರ ಪದಾರ್ಥಗಳೂ ಕಳಪೆ ಆಗಿದ್ದರೂ ಪರೀಶೀಲನೆ ಮಾಡಬೇಕಾದ ಶಿಶು ಅಭಿವೃದ್ದಿ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿ ಕಡಿಮೆ ಬೆಲೆಯ ಕಳಪೆ ಆಹಾರ ಪದಾರ್ಥಗಳನ್ನು ದುಬಾರಿ ಬೆಲೆಗೆ ಎಂ.ಎಸ್.ಪಿ.ಸಿಗಳಿಗೆ ಸರಬರಾಜು ಮಾಡುತ್ತಿದ್ದರೂ ಅಲ್ಲಿನ ಅಧಿಕಾರಿಗಳು ಕಣ್ಮುಚ್ಚಿ ಕುಳಿತು ಪ್ಯಾಕಿಂಗ್ ಮಾಡಿ ತೂಕ ಮತ್ತು ಗುಣಮಟ್ಟದಲ್ಲಿ ಮೋಸ ಮಾಡುತ್ತಿದ್ದಾರೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಶಿಶು ಅಭಿವೃದ್ದಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ದುಬಾರಿ ಆಗಿರುವ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಕಾಲೇಜುಗಳಿಗೆ ಸೇರಿಸಲಾಗದೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡರೆ ಕೂಲಿ ಕೆಲಸ ಮಾಡಲಾಗುವುದಿಲ್ಲ ಎಂದು ಅಂಗನವಾಡಿ ಕೇಂದ್ರಗಳಿಗೆ ಬಡವರ ಮಕ್ಕಳನ್ನು ಅಕ್ಷರ ಅಭ್ಯಾಸ ಮಾಡಿ ಸರ್ಕಾರ ನೀಡುವ ಗುಣಮಟ್ಟದ ಆಹಾರ ಸಿಗುತ್ತದೆ ಎಂಬ ನೀರಿಕ್ಷೆಯಲ್ಲಿರುವ ಪೋಷಕರಿಗೆ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಹಣ ದಾಹಕ್ಕೆ ಪೌಷ್ಠಿಕ ಆಹಾರ ಕಾಳ ಸಂತೆಯಲ್ಲಿ ಮಾರಾಟ ಆಗುತ್ತದೆ ಎಂದು ತಿಳಿಯುತ್ತಿಲ್ಲ ಜೊತೆಗೆ ಬಡ ಕೂಲಿ ಕಾರ್ಮಿಕರ ಹೆಣ್ಣು ಮಕ್ಕಳು ಗರ್ಭಿಣಿ ಆದಾಗ ಪೌಷ್ಠಿಕ ಆಹಾರ ನೀಡಿ ಬಲ ನಿಡುವ ಸರ್ಕಾರದ ಯೋಜನೆಗಳು ಮಣ್ಣು ಪಾಲಾಗುತ್ತಿವೆ ದುಬಾರಿ ಬೆಲೆಯಲ್ಲಿ ಗುಣಮಟ್ಟದ ಬೆಲ್ಲ, ಅಕ್ಕಿ, ತೊಗರಿ ಹೆಸರು ಬೇಳೆ, ಸಕ್ಕರೆ ಮತ್ತಿತರ ಆಹಾರ ಪದಾರ್ಥಗಳು ಗರೀಷ್ಠ ಬೆಲೆ ನೆಪದಲ್ಲಿ ಕನಿಷ್ಠ ಬೆಲೆಯ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಎಂ.ಎಸ್.ಪಿ.ಸಿ ಆಹಾರ ಘಟಕ ಕೇಂದ್ರಗಳಿಗೆ ಗುತ್ತಿಗೆದಾರರು ಸರಬರಾಜು ಮಾಡಿ ಮಕ್ಕಳ ಮತ್ತು ಗರ್ಭಿಣಿಯರ ಹೆಸರಿನಲ್ಲಿ ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದಾರೆಂದು ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಎಂ.ಎಸ್.ಪಿ.ಸಿ ಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಟೆಂಡರ್ನ್ನು ಹತ್ತಾರು ವರ್ಷಗಳಿಂದ ಕಿಸಾನ್ ಟ್ರೇಡರ್ಸ್ಗೆ ನೀಡಿರುವ ಉದ್ದೇಶವಾದರೂ ಏನೂ? ಗುತ್ತಿಗೆದಾರರಿಗೆ ಬರುವ ಲಾಭದಲ್ಲಿ ಸಮಪಾಲು ಇದೆಯೇ ಎಂಬುದು ತನಿಖೆ ಆಗಬೇಕೆಂಬುದು ಸಭೆಯಲ್ಲಿ ಒತ್ತಾಯಿಸಿದರು.
ತಾಲ್ಲೂಕಾದ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ತಾಲ್ಲೂಕಿನಾದ್ಯಂತ ಹದಗೆಟ್ಟಿರುವ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ದಿಪಡಿಸುವಲ್ಲಿ ಸರ್ಕಾರ ವಿಪಲವಾಗಿದೆ. ಜೀವಭಯದಲ್ಲಿ ಬಡವರ ಮಕ್ಕಳು ಬೀಳುವ ಅಂಗನವಾಡಿ ಕೇಂದ್ರಗಳಲ್ಲಿ ಪಾಠ ಕೇಳಬೇಕಾದ ಪರಿಸ್ಥಿತಿ ಇದ್ದರೂ ಸರಿಪಡಿಸಬೇಕಾದ ಸರ್ಕಾರಗಳು ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡಿ ಬಡವರ ಮಕ್ಕಳನ್ನು ರಾಜಕಾರಣಿಗಳ ಹಿಂಬಾಲಕರಾಗಿ ಜೈಕಾರ ಹಾಕಲು ಬಳಸಿಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಹಾಗೂ ಗರ್ಭಿಣಿ ಸ್ತ್ರೀಯರ ಲೆಕ್ಕವನ್ನು ಪುಸ್ತಕದಲ್ಲಿ ತಪ್ಪು ಲೆಕ್ಕ ಬರೆದು ಹೆಚ್ಚಿನ ಹಾಜರಾತಿ ತೋರಿಸಿ ಆಹಾರ ಸರಬರಾಜಿನಲ್ಲಿ ಹೆಚ್ಚಿಗೆ ಬಿಲ್ ಮಾಡಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸಮಪಾಲಾಗಿ ಹಂಚಿಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದರು .
ಎಂ.ಎಸ್.ಪಿ.ಸಿ (ಅಂಗನವಾಡಿ ಕೇಂದ್ರಗಳಿಗೆ) ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪಧಾರ್ಥಗಳನ್ನು ಸರಬರಾಜು ಮಾಡುವ ಕಿಸಾನ್ ಟ್ರೇಡರ್ಸ್ ಟೆಂಡರ್ ಪರವಾನಗಿ ರದ್ದು ಮಾಡಿ ಅಂಗನವಾಡಿ ಹಾಜರಾತಿ ಪರೀಶೀಲನೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ಏ.11 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಕಳಪೆ ಆಹಾರ ಸಮೇತ ಪ್ರತಿಭಟನೆ ಮಾಡುವ ಮೂಲಕ ಅಂಗನವಾಡಿ ಅವ್ಯವಸ್ಥೆ ಗುತ್ತಿಗೆದಾರರ ಹಗಲು ದರೋಡೆಗೆ ಕಡಿವಾಣ ಹಾಕುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆ ಭಾಗವಹಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್ಪಾಷ, ಬಂಗಾರಿ ಮಂಜು, ವಿಜಯ್ಪಾಲ್, ಆದಿಲ್ಪಾಷ, ಬಾಸ್ಕರ್, ಸುನಿಲ್ಕುಮಾರ್, ಹೆಬ್ಬಣಿ ಆನಂದ್ರೆಡ್ಡಿ, ಹೆಬ್ಬಣಿ ರಾಮಮೂರ್ತಿ, ಮಾಲೂರು ತಾ.ಅ ಯಲ್ಲಪ್ಪ, ಮಾಸ್ತಿ ವೆಂಕಟೇಶ್, ಹರೀಶ್, ತೆರ್ನಹಳ್ಳಿ ಆಂಜಿನಪ್ಪ, ಸಂದೀಪ್ರೆಡ್ಡಿ, ಸಂದೀಪ್ಗೌಡ, ರಾಮಸಾಗರ ವೇಣು, ಮುಂತಾದವರಿದ್ದರು.





ಕೋಲಾರ : ಸಾರ್ವತ್ರಿಕ ಚುನಾವಣೆ -2023 ಸಂಬಂಧವಾಗಿ ನೀತಿ ಸಂಹಿತೆ ಜಾರಿಯಾಗಿದ್ದು , ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ನಗದು ಅಕ್ರಮಗಳು ನಡೆಯದಂತೆ ಕಡಿವಾಣ ಹಾಕಲು ಬ್ಯಾಂಕ್ಗಳವರು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಮನವಿ ಮಾಡಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಬ್ಯಾಂಕ್ ನೌಕರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನೀತಿ ಸಂಹಿತೆ ಜಾರಿಯಾಗಿರುವುದರಿಂದ ಎಲ್ಲ ತರಹದ ಖಾತೆಗಳಲ್ಲಿ ನಗದು ವ್ಯವಹಾರದ ಮೇಲೆ ನಿಗಾ ಇಡಬೇಕಾಗುತ್ತದೆ.
ಸಾರ್ವಜನಿಕರೂ ಇದಕ್ಕೆ ಸಹಕರಿಸಬೇಕು. ಅಲ್ಲದೆ 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ನಗದಾಗಿ ಖಾತೆಯಿಂದ ಸೆಳೆಯುವುದು ಹಾಗೂ ಖಾತೆಗೆ ತುಂಬುವ ಪ್ರಕ್ರಿಯೆಯ ಬಗ್ಗೆ ನಿಗಾ ವಹಿಸಬೇಕಿದೆ ಎಂದರು. ಈಗಾಗಲೇ ಎಲ್ಲಾ ಚೆಕ್ಪೋಸ್ಟ್ಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಬ್ಯಾಂಕ್ಗಳಿಂದ ಎಟಿಎಂ ಗಳಿಗೆ ಹಣ ತುಂಬುವ ವಾಹನಗಳ ಹಾಗೂ ವಾಹನಗಳಲ್ಲಿರುವ ಹಣದ ಮಾಹಿತಿಯನ್ನು ಏಇಇಒ ಆಫ್ ಮೂಲಕ ಚುನಾವಣಾ ಆಯೋಗಕ್ಕೆ ನೀಡಬೇಕು. ಆಫ್ನಲ್ಲಿ ನಮೂದಿಸಿರುವ ಮಾಹಿತಿ ಆಧರಿಸಿ ಒಂದು ಕ್ಯೂಆರ್ ಕೋಡ್ ಸೃಜಿಸಲಾಗುತ್ತದೆ.
ಸದರಿ ಕ್ಯೂಆರ್ ಕೋಡ್ನ್ನು ಹಣಸಾಗಿಸುವ ವಾಹನಕ್ಕೆ ಲಿಂಕ್ ಮಾಡಲಾಗಿರುತ್ತದೆ. ಯಾವುದೇ ಚೆಕ್ ಪೋಸ್ಟ್ಗಳಲ್ಲಿ ಕ್ಯೂ ಆರ್ ಕೋಡ್ನ್ನು ಸ್ಕ್ಯಾನ್ ಮಾಡಿದಾಗ ವಾಹನ ಮತ್ತು ಮೊತ್ತದ ವಿವರಗಳು ಲಭ್ಯವಾಗುತ್ತದೆ. ವಾಹನದಲ್ಲಾಗಲೀ ಮೊತ್ತದಲ್ಲಾಗಲೀ ಯಾವುದೇ ವ್ಯತ್ಯಾಸ ಕಂಡುಬಂದರೆ ನಿಯೋಜಿಸಿರುವ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ.
ಅಕ್ರಮ ನಗದು ವ್ಯವಹಾರಗಳ ಬಗ್ಗೆ ನಿರ್ಧಿಷ್ಟ ಮಾಹಿತಿ ನೀಡಿದರೆ ತ್ವರಿತವಾಗಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳು , ಸ್ಥಳೀಯ ಬ್ಯಾಂಕ್ಗಳು ಹಾಗೂ ಸಹಕಾರಿ ಬ್ಯಾಂಕ್ಗಳ ವ್ಯವಸ್ಥಾಪಕರು , ಅಂಚೆ ಕಛೇರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .



Maundy Thursday was celebrated at Holy Rosary Church Alangar with great devotion on Thursday, 6 April, 2023. The Holy Thursday also called Covenant Thursday was celebrated by Rev Fr. Antony Shera secretary CBE MANGALORE TOGETHER WITH Parish Priest FR WALTER DSOUZA AND GUEST PRIEST FR DEEPAK NORONHA A NORBERTINE PRIEST
THE CELEBRATION INCLUDED SOLEMN MASS, WASHING OF 12 PARISHIONERS, ONE HOUR ADORATION OF THE BLESSED SACRAMENT.
















‘You should not fall prey to bad habits, on the other hand, you should make the best use of the opportunities available to you’, said Kadri Police Station Sub Inspector UmeshAiyappa.
He was addressing the students after inaugurating the ‘Besuge Sinchana’, a one-day summer camp organised by St Agnes PU College in association with St Agnes Higher Primary School here on Tuesday. Stating that opportunities don’t knock every door, he called upon the participants to make use of the opportunities whenever they get. “Not all are as lucky as you are”, he said and added that there are many students who lack opportunities in their life for various reasons.
In her address, St Agnes PU College Principal Sr Norine Dsouza said that there was a time when students were waiting for annual holidays to spend time at grandparents place. But in the modern era of nuclear families, many students are glued to the four walls of their house or limit their activities to indoor games or computer games.
This summer camp is an attempt to bring the best out of the students and also to engage in some creative activities so that they enjoy their holidays, she said
The day long camp comprised various events such as Ice Breaker, glimpseof Mother Veronica, MojinaRasayanashatra, theatre for daily life, language flair and dance. All the students took active part in all the events.
Nearly 150 students from 6 schools belonging to the Apostolic Carmelite congregation took part in the camp.
St Agnes Higher Primary School headmistress SrJyothsna introduced the chief guest and welcomed the gathering, camp co-ordinatorDrTressieMenezes proposed the vote of thanks. MrsJyothi compered the programme.































