




ಶ್ರೀನಿವಾಸಪುರ : ತಾಲೂಕಿನ ರಾಯಲ್ಪಾಡು ಸಮೀಪ ಇತ್ತೀಚಿಗೆ ಮಹಿಳಾ ಆಯೋಗದ ರಾಜ್ಯಧ್ಯಕ್ಷೆ ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡದೆ ಸರ್ಕಾರ ಸೌಲಭ್ಯಗಳಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ತಾಲೂಕೂ ಆಡಳಿತವು ಗ್ರಾಮದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಗ್ರಾಮವಾಸ್ತವ್ಯ ವ್ಯವಸ್ಥೆ ಮಾಡಲಾಗಿತ್ತು .
ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವ ವ್ಯವಸ್ಥೆ ಮಾಡುವ ಉದ್ದೇಶದಿಂದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಶ್ರಮಿಸುವಂತೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಸೂಚಿಸಿದರು.
ರಾಯಲ್ಪಾಡು ಸಮೀಪದ ಹಕ್ಕಿ ಪಿಕ್ಕಿ ಕಾಲೋನಿಯಲ್ಲಿ
ಶನಿವಾರ ತಾಲೂಕು ಆಡಳಿತವತಿಯಿಂದ ಹಮ್ಮಿಕೊಳ್ಳಲಾದ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮವು ಸಾಕಷ್ಟು ಬದಲಾವಣೆಯನ್ನು ಹೊಂದಿದೆ. ಗ್ರಾಮಕ್ಕೆ ಒಳ್ಳೇಯ ಪರಿಸರವೂ ಸಹ ಇದೆ. ತುಂಬಾ ಯುವಕರು ಮನಸ್ಥಿತಿಗಳು ಬದಲಾವಣೆಗಳು ಆಗಬೇಕಾಗಿದೆ ಇದಕ್ಕೆ ಒಂದಿಷ್ಟು ಎನ್ಜಿಒಗಳ ಸಹ ಯುವಕರ ಮನಸ್ಥಿತಿಗಳ ಬಗ್ಗೆ ಅವಲೋಕಿಸಿ, ಅವರ ಮನಃ ಸ್ಥಿತಿಯನ್ನು ಬದಲಿಸಬೇಕಿದೆ ಎಂದರು.
ಗ್ರಾಮದಲ್ಲಿನ ಮಕ್ಕಳಲ್ಲಿ ಜನಟಿಕ್ಸ್ ಅಥವಾ ನೀರಿನಲ್ಲಿನ ಫ್ಲೋರೈಡ್ ಅಂಶ ಜಾಸ್ತಿ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಏಳು ಎಂಟು ಜನಕ್ಕೆ ಅಂಗವೈಕಲ್ಯದ ಸಮಸ್ಯೆಗಳು ಇದ್ದು ಅದನ್ನ ಪರಿಶೀಲಿಸಬೇಕಿದೆ.
ಗ್ರಾಮದಲ್ಲಿ ಶೈಕ್ಷಣಿಕವಾಗಿ ಒತ್ತು ನೀಡುತ್ತಿಲ್ಲ .ಕಾರಣ ನೀವು ವಲಸೆಗೆ ಹೋಗುತ್ತೀರಾ ಇದರಿಂದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ ಎಂದರು.
ಆದ್ದರೀವಂದ ಮಕ್ಕಳ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕವಾಗಿ ಪೋತ್ಸಾಹಿಸುವಂತೆ ಮನವಿ ಮಾಡಿದರು. ನಮಗೆ ವ್ಯವಸಾಯಕ್ಕೆ ಬೇಕಾದ ಭೂಮಿಗಳ ದಾಖಲೆಗಳು ಇಲ್ಲವೆಂದು ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಂಸದರಿಗೆ ಒಂದು ಅರ್ಜಿ ಸಲ್ಲಿಸುವಂತೆ ಹಾಗು ಜಿಲ್ಲಾಧಿಕಾರಿಗಳ , ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಹೇಳಿದರು. ನಾವು ನಿಮಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾನೂನು ರೀತ್ಯ ನಮ್ಮಿಂದ ಆಗುವ ಸಹಾಯ ಹಸ್ತವನ್ನ ನೀಡುತ್ತೇವೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಶ್ರೀನಿವಾಸನ್ ಮಾತನಾಡಿ ಸರ್ಕಾರದಿಂದ ಸಿಗುವ ಮೂಲಭೂತ ಸೌಲಭ್ಯಗಳು ಸಿಗುವ ವ್ಯವಸ್ಥೆಯನ್ನ ಮಾಡಿಕೊಡುವುದಾಗಿ ಹಂತ ಹಂತವಾಗಿ ಮಾಡುವುದಾಗಿ ಭರವಸೆ ನೀಡಿದರು.ಗ್ರಾಮದಲ್ಲಿ ಬಹುತೇಕ ಮನೆಗಳು ಕಟ್ಟಿಕೊಂಡಿದ್ದಾರೆ. ಇನ್ನು ಕೆಲವರು ಮನೆಗಳನ್ನು ಕಟ್ಟಿಕೊಳ್ಳುವಂತೆ ತಿಳಿಸಿ , ಸರ್ಕಾರದಿಂದ ೧ಲಕ್ಷ ೨೫ ಸಾವಿರ, ಉಳಿದ ಕೆಲಸವನ್ನು ನರೇಗಾ ದಿಂದ ಸಿಗುವ ಅನುದಾನವನ್ನು ಬಳಸಿಕೊಂಡು ಮನೆಗಳನ್ನು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಸ್ವಲ್ಪ ಜೀವನದ ಬದಕನ್ನು ಬದಲಾಯಿಸಿಕೊಂಡು, ಪ್ರಸ್ತುತ ದಿನಗಳು ಜೀವನ ಶೈಲಿಯು ಪರಿವರ್ತನೆಯಾಗುತ್ತಿದೆ ಅದರಂತೆ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುಂವತೆ ಸಲಹೆ ನೀಡಿದರು. ತಮ್ಮ ಮಕ್ಕಳ ಶೈಕ್ಷಣಿಕವಾಗಿ ಬದಲಾಯಿಸಿಕೊಳ್ಳುವಂತೆ ಪೋಷಕರಿಗೆ ಸಲಹೆ ನೀಡಿದರು.
ತಹಶೀಲ್ದಾರ್ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಸುತ್ತಾಡಿ ಮನೆ ಮನೆಗಳ ಸಮಸ್ಯೆಗಳನ್ನು ಆಲಿಸಿ ಸರ್ಕಾರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮಕ್ಕೊಂದು ಕೊಳವೆ ಕೊರಿಸಿಕೊಡುವಂತೆ ಹಾಗು ಅಂಗನವಾಡಿ, ಪ್ರಾಥಮಿಕ ಶಾಲೆಯು ವ್ಯವಸ್ಥಿತವಾಗಿ ನಡೆಸಿಕೊಡಲು, ಕೆಲವರಿಗೆ ವೃದ್ದಾಪ್ಯ ವೇತನ ಇಲ್ಲವೆಂದು ಅದನ್ನ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದರು.
ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಆಯೋಗ ಜಿಲ್ಲಾಧ್ಯಕ್ಷೆ ಲಕ್ಷಿ, ಎನ್ಜಿಒ ಶಾಂತಮ್ಮ , ಇಒ ಎ.ಎನ್.ರವಿ, ಬಿಇಒ ಬಿ.ಸಿ.ಮುನಿಲಕ್ಷö್ಮಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಪಿಎಸ್ಐ ಯೊಗೇಶ್ ಪಿಡಿಒ ಎನ್.ನರೇಂದ್ರಬಾಬು, ಬಿಐಆರ್ಟಿ. ಜಿ ವಿ ಚಂದ್ರಪ್ಪ ,ಸಿಆರ್ಪಿ ಗಳಾದ ಅಮರನಾಥ್, ವೇಣುಗೋಪಾಲ್, ಇದ್ದರು.

ಕೋಲಾರ,ಸೆ.22: ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯಾದ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನದ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವೈ.ಶಿವಕುಮಾರ್ ಅವರನ್ನು ನೇಮಕ ಮಾಡಿದ್ದಂತಹ ಮುಖ್ಯಮಂತ್ರಿಗಳಾದಂತಹ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಶಾಸಕರಾದ ಕೊತ್ತೂರು ಜಿ. ಮಂಜುನಾಥ್ ಅವರ ನೇತೃತ್ವದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ವೈ.ಶಿವಕುಮಾರ್ ಬೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ವಕ್ಕಲೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ರಾಮಸಂದ್ರ ಕುಮಾರ್, ಗ್ರಾಮ ಪಂಚಾಯತಿ ಸದಸ್ಯ ಅಪ್ಪಸಂದ್ರ ರಘು, ನದೀಂ, ಪಶುಸಂಗೋಪನಾ ಹಾಗೂ ಮೀನುಗಾರಿಕೆ ಸಮಿತಿ ಸದಸ್ಯ ಗಾಜಲದಿನ್ನೆ ರಮೇಶ್, ಅಚ್ಚಟ್ನಹಳ್ಳಿ ಮನು, ಚಿನ್ನಾಪುರ ನಾರಾಯಣಸ್ವಾಮಿ, ನರಸಾಪುರ ನವೀನ್, ಗಾಜಲದಿನ್ನೆ ನವೀನ್, ಆರೀಫ್ಉಲ್ಲಾ, ಬಿಲ್ಡರ್ ರಮಣಾರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.


ಕೋಲಾರ,ಸೆ.22: ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯಾದ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನದ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವೈ.ಶಿವಕುಮಾರ್ ಅವರನ್ನು ನೇಮಕ ಮಾಡಿದ್ದಂತಹ ಮುಖ್ಯಮಂತ್ರಿಗಳಾದಂತಹ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಶಾಸಕರಾದ ಕೊತ್ತೂರು ಜಿ. ಮಂಜುನಾಥ್ ಅವರ ನೇತೃತ್ವದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ವೈ.ಶಿವಕುಮಾರ್ ಬೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ವಕ್ಕಲೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ರಾಮಸಂದ್ರ ಕುಮಾರ್, ಗ್ರಾಮ ಪಂಚಾಯತಿ ಸದಸ್ಯ ಅಪ್ಪಸಂದ್ರ ರಘು, ನದೀಂ, ಪಶುಸಂಗೋಪನಾ ಹಾಗೂ ಮೀನುಗಾರಿಕೆ ಸಮಿತಿ ಸದಸ್ಯ ಗಾಜಲದಿನ್ನೆ ರಮೇಶ್, ಅಚ್ಚಟ್ನಹಳ್ಳಿ ಮನು, ಚಿನ್ನಾಪುರ ನಾರಾಯಣಸ್ವಾಮಿ, ನರಸಾಪುರ ನವೀನ್, ಗಾಜಲದಿನ್ನೆ ನವೀನ್, ಆರೀಫ್ಉಲ್ಲಾ, ಬಿಲ್ಡರ್ ರಮಣಾರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.


ಶ್ರೀನಿವಾಸಪುರ: ಶಿಕ್ಷಕರ ಜೀವ ಇರುವ ತನಕ ಎಲ್ಲಿ ಕಾಣಿಸಿದರೂ ನಮಗೆ ನಮಸ್ಕಾರ ಎಂದು ಹೇಳುವ ವೃತ್ತಿಎಂದರೆ ನಮ್ಮ ಶಿಕ್ಷಕ ವೃತ್ತಿ ಮಾತ್ರ, ಒಬ್ಬಇಂಜಿನಿಯರ್ ನೀಡುವ ಪ್ಲಾನ್ನಂತೆಕಟ್ಟಡಕಟ್ಟಿದರೆ ಬೀಳಬಹುದು, ಆದರೆಒಬ್ಬ ಶಿಕ್ಷಕ ವಿದ್ಯಾರ್ಥಿಗೆ ವಿಧ್ಯೆಯನ್ನು ನೀಡಿದರೆಆದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲಎಂದು ಸಾಕ್ಷರತಾ ನಿರ್ದೇಶಕಿಯಾದ ಲಕ್ಷ್ಮೀ ಪ್ರಸನ್ನ ತಿಳಿಸಿದರು.
ಕೋಲಾರದಸ್ಕೌಟ್ಸ್ ಭವನದಲ್ಲಿ3191ಕೋಲಾರಜೋನ್ನ 12 ರೋಟರಿಕ್ಲಬ್ ಗಳೊಂದಿಗೆ ಗುರು ಶ್ರೇಷ್ಟ ಪ್ರಶಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ 121 ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಲಕ್ಷ್ಮೀ ಪ್ರಸನ್ನ, ಎಷ್ಟೋ ಜನಇಂಜಿನಿಯರ್ಸ್, ವೈಧ್ಯರನ್ನ, ಉದ್ಯೋಗಸ್ಥರನ್ನುತಯಾರು ಮಾಡುವಂತಹ ಶಿಕ್ಷಕ ವೃತ್ತಿಗೆರೋಟರಿ ಸಂಸ್ಥೆಯಿಂದಇಷ್ಟೊಂದು ಶಿಕ್ಷಕರಿಗೆ ಸನ್ಮಾನಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆಅಭಾರಿಯಾಗಿದ್ದೇನೆಎಂದರು.
ಜಿಲ್ಲಾಪಾಲಕರಾದ ಸತೀಶ ಮಾಧವನ್ ಮಾತನಾಡಿ, ಈ ಜೋನ್ ನ 121 ಶಿಕ್ಷಕರಿಗೆ ಗುರು ಶ್ರೇಷ್ಟ ಪ್ರಶಸ್ತಿ ಸನ್ಮಾನಕಾರ್ಯಕ್ರಮವನ್ನುರೋಟರಿ ಸಂಸ್ಥೆಯಿಂದಹಮ್ಮಿಕೊಂಡಿರುವುದು ನಮ್ಮ ಭಾಗ್ಯಎಂದರು.
ಶ್ರೀನಿವಾಸಪುರತಾಲ್ಲೂಕಿನ 10 ಶಿಕ್ಷಕರಿಗೆ ಸನ್ಮಾನ
ಶ್ರೀನಿವಾಸಪುರತಾಲ್ಲೂಕಿನ ಹನುಮಂತಪ್ಪಎನ್ಎ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವಪುರ, ಮಧುಕುಮಾರ್ಜಿ.ಎಲ್.ಪಿ.ಎಸ್. ಕೊತ್ತಪಲ್ಲಿ, ಮಂಜುನಾಥ್ಹೆಚ್.ಪಿ.ಎಸ್. ಕೊಪ್ಪವಾರಿಪಲ್ಲಿ, ಶ್ರೀಮತಿ ಅನಿತಜಿ.ಎಲ್.ಪಿ.ಎಸ್. ಗೊಟ್ಟಿಕುಂಟೆ, ಶೋಭಾ ಡಿ.ವಿ. ಜಿ.ಎಲ್.ಪಿ.ಎಸ್. ಬೈರಪ್ಪಲ್ಲಿ, ಬಾಲಕೃಷ್ಣರಾವ್ಸರ್ಕಾರಿ ಪ್ರೌಢ ಶಾಲೆ, ನಂಬಿಹಳ್ಳಿ, ಮಂಜುನಾಥ್ದೇವೇಗೌಡನ್ಯಾಷನಲ್ ಹೈಸ್ಕೂಲ್ಯಲ್ದೂರು, ಚೆನ್ನಕೇಶವ ಸರ್ಕಾರಿ ಪ್ರೌಢಶಾಲೆ, ಮುತ್ತಕಪಲ್ಲಿ, ಗಿರೀಶ್ಎಮ್.ಜಿ.ಸರ್ಕಾರಿ ಪದವಿ ಪೂರ್ವಕಾಲೇಜು, ರಾಯಲ್ಪಾಡುಇವರಿಗೆಗುರು ಶ್ರೇಷ್ಟ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಮಯದಲ್ಲಿಆರ್.ಐ. ಜೋನ್ನ ಅನೇಕ ಹಿರಿಯರೋಟರಿ ಸದಸ್ಯರು, ಜಿಲ್ಲಾ ಕಾರ್ಯದರ್ಶಿ ಎಸ್.ವಿ. ಸುಧಾಕರ್, ಲಕ್ಷ್ಮೀ ಪ್ರಸನ್ನ, ಅ.ಮು. ಲಕ್ಷ್ಮೀನಾರಾಯಣ್, ಜೋನ್ಗೌರ್ನರ್ರಾಜ್ಕುಮಾರ್, ಶಿವಮೂರ್ತಿ ಎಸ್. ಮೌನಿ, ಪ್ರಸನ್ನ, ರವೀಂದ್ರನಾಥ್,12 ಜಿಲ್ಲಾ ಅಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳು, ಸದಸ್ಯರು ಸೇರಿದಂತೆ ಅನೇಕ ಶಿಕ್ಷಕರು ಹಾಗೂ ಶಿಕ್ಷಕರಕುಟುಂಬವರ್ಗದವರು ಭಾಗವಹಿಸಿದ್ದರು.
ಇದೆ ಸಮಯದಲ್ಲಿರೋಟರಿ ಶ್ರೀನಿವಾಸಪುರ ಸೆಂಟ್ರಲ್ ನ ಅಧ್ಯಕ್ಷರಾದಎಸ್.ಎನ್. ಮಂಜುನಾಥರೆಡ್ಡಿ, ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಹಿರಿಯ ಸದಸ್ಯರಾದರಾಜೇಂದ್ರಪ್ರಸಾದ್, ಕುಲಕರ್ಣಿ, ಹೆಚ್.ಎನ್ ನಾಗೇಶ್, ಅಶೋಕ್, ಸುರೇಶ್ ಕುಮಾರ್ ಸೇರಿದಂತೆಅನೇಕರು ಸದಸ್ಯರು ಭಾಗವಹಿಸಿದ್ದರು.


ಕೋಲಾರ : ಕೊನೆಗೂ ಜಿಲ್ಲೆಯ ಸ್ಪರ್ಧಾಕಾಂಕ್ಷೆಗಳಿಗೆ ಒಂದು ಸಂತೋಷದ ಸುದ್ದಿ. ಕೋಲಾರ ಜಿಲ್ಲೆಯಲ್ಲಿ ಐಎಎಸ್, ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಸಲುವಾಗಿ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಲಕ್ಷಗಟ್ಟಲೆ ಹಣವನ್ನು ಸುರಿದು ಬೆಂಗಳೂರಿನ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯ ಸ್ಪರ್ಧಾಕಾಂಕ್ಷೆಗಳಿಗೆ ಒಂದು ಉತ್ತಮ ಗುಣಮಟ್ಟದ ಮತ್ತು ಉಚಿತ ತರಬೇತಿಯನ್ನು ಜಿಲ್ಲೆಯಲ್ಲಿ ಏಕೆ ಆರಂಭಿಸಬಾರದು ಎಂಬ ಆಲೋಚನೆಯಿಂದ ಬಂದ ಫಲಪ್ರದವೇ ವಿಷನ್ ಕೋಲಾರ. ಈ ಯೋಜನೆ ಅಡಿಯಲ್ಲಿ ಜಿಲ್ಲೆಯ ಪ್ರತಿಭಾನ್ವಿತ ಆರ್ಥಿಕವಾಗಿ ಹಿಂದುಳಿದವರ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿಯೇ ರಾಜ್ಯದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ದಿವಂಗತ ಡಿ. ದೇವರಾಜ ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗಿದ್ದು, ದೇವರಾಜ್ ಅರಸು ಜನ್ಮದಿನ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಕೋಲಾರ ಶಾಸಕರಾದಂತಹ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಗಳಾದ ಅನಿಲ್ ಕುಮಾರ್ ರವರಿಂದ ಈ ಕೇಂದ್ರವು ಉದ್ಘಾಟನೆಗೊಂಡಿದ್ದು ಇಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ರವರು ಆಗಮಿಸಿ ಪ್ರಾರಂಭಿಸುವ ಸಿದ್ಧತೆಯ ಬಗ್ಗೆ ಪರಿಶೀಲಿಸಿದರು.
ಜಿಲ್ಲಾಧಿಕಾರಿಯವರ ಕನಸಿನ ಕೂಸಾದ ಈ ಯೋಜನೆಯ ಅಕ್ಟೋಬರ್ ಮಾಹೆಯಲ್ಲಿ ಪ್ರಾರಂಭಗೊಳ್ಳಲಿದೆ.
ಏನಿದು ಯೋಜನೆ?
ಕೋಲಾರ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಗುಣಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಉಚಿತವಾಗಿ ಆರಂಭಿಸುವುದು. ಜಿಲ್ಲೆಯ ಪ್ರತಿಭಾನ್ವಿತ 70 ವಿದ್ಯಾರ್ಥಿಗಳಿಗೆ ಅವಕಾಶ.
ಆಯ್ಕೆ ಹೇಗೆ??
ಜಿಲ್ಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ, ರೋಸ್ಟರ್ ಮತ್ತು ಮೆರಿಟ್ ಪದ್ಧತಿ ಅನ್ವಯ ಪ್ರವೇಶ ಪರೀಕ್ಷೆಯನ್ನು ನಡೆಸಿ 70 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು.
ತರಭೇತಿ ಹೇಗೆ??
ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ದೇವರಾಜ್ ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಅಧ್ಯಯನ ಕೇಂದ್ರವನ್ನು ಬಳಸಿಕೊಳ್ಳುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮವಾದ ಪುಸ್ತಕಗಳನ್ನು ಒಳಗೊಂಡಿರುವ ಗ್ರಂಥಾಲಯ ಬಳಸಿಕೊಳ್ಳುವುದು, ಹಾಗೂ ಪ್ರತಿನಿತ್ಯ ಜಿಲ್ಲೆಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಕಂಡು ಇರುವಂತಹ ಅಧಿಕಾರಿ ವರ್ಗದವರಾದ ಜಿಲ್ಲಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿಗಳು ತಹಸಿಲ್ದಾರ್ಗಳು, ಜಿಲ್ಲಾ ಮಟ್ಟದ ಮತ್ತು ವಿವಿಧ ತಾಲೂಕು ಮಟ್ಟದ ಅಧಿಕಾರಿಗಳಿಂದ, ಉಪನ್ಯಾಸಕರು ಮತ್ತು ಪ್ರಾಧ್ಯಾಪಕರುಗಳಿಂದ ದಿನನಿತ್ಯ ಮಾರ್ಗದರ್ಶನ ಮತ್ತು ತರಗತಿಗಳನ್ನು ನಡೆಸುವುದು.
ಇದಲ್ಲದೆ ರಾಜ್ಯದ ಹೆಸರಾಂತ ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಸಾಮಾನ್ಯ ಅಧ್ಯಯನ, ಇತಿಹಾಸ ಭೂಗೋಳ, ಮೆಂಟಲ್ ಎಬಿಲಿಟಿ, ತಾರ್ಕಿಕ ಸಾಮರ್ಥ್ಯ, ಪ್ರಚಲಿತ ಘಟನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ ಮತ್ತು ಕಾರ್ಯಕ್ರಮಗಳು ಇಂತಹ ಮತ್ತು ಅನೇಕ ವಿಷಯಗಳಿಗೆ ತರಗತಿಗಳನ್ನು ನಡೆಸುವುದು.
“ವಿಷನ್ ಕೋಲಾರ ಎಂಬುದು ಜಿಲ್ಲೆಯ ಒಂದು ವಿನೂತನ ಪ್ರಯತ್ನವಾಗಿದ್ದು, ಜಿಲ್ಲೆಯ ಸ್ಪರ್ಧಾಕಾಂಕ್ಷೆಗಳಿಗೆ ಅತ್ಯದ್ಭುತ ಮತ್ತು ಪರಿಣಾಮಕಾರಿ ಉಪಕ್ರಮವಾಗಲಿದೆ. ಇದರಿಂದಾಗಿ ಜಿಲ್ಲೆಯ ಸ್ಪರ್ಧಾ ಕಾಂಶಿ ವಿದ್ಯಾರ್ಥಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೇವೆಗಳಲ್ಲಿ ಹೆಚ್ಚೆಚ್ಚು ತೆರ್ಗಡೆಗೊಂಡು ಜಿಲ್ಲೆಯ ಕೀರ್ತಿಪತಾಕೆ ಹಾರಿಸಲಿದ್ದಾರೆ ಎಂಬ ಆಶಾಭಾವನೆಯನ್ನು ಹೊಂದಿದ್ದೇವೆ ۲۲
ಅಕ್ರಂಪಾಷ ಜಿಲ್ಲಾಧಿಕಾರಿ
” ದೇವರಾಜ್ ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವು ವರ್ಷದಲ್ಲಿ ನಿರಂತರವಾಗಿ ನಡೆಯಲಿದ್ದು ಮೂರು ತಿಂಗಳಿಗೆ 70 ವಿದ್ಯಾರ್ಥಿಗಳ ಒಂದು ಬ್ಯಾಟ್ನಂತೆ ವರ್ಷದಲ್ಲಿ ಮೂರು ಬ್ಯಾಟ್ಗಳನ್ನು ತರಬೇತಿಗಾಗಿ ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯದ ಶ್ರೀ ಮುರಳಿರವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯದ ಶ್ರೀಮತಿ ಗೀತಾ ರವರು ಮಾತನಾಡಿ ದೇವರಾಜ್ ಅರಸು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವು ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನವಾಗಿರಲಿದ್ದು ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಬಳಸಿಕೊಳ್ಳಲು ಕೋರಿದರು.





ಕೋಲಾರ : ನೌಕರರು ತಮ್ಮ ಕೆಲಸಗಳಲ್ಲಿ ಬದ್ಧತೆ ತೋರಿಸಬೇಕು. ಸಾರ್ವಜನಿಕರ ಪರವಾಗಿ ಕಾಳಜಿಯಿಂದ ಕೆಲಸ ಮಾಡಬೇಕು ರೈತರು ತಮ್ಮ ಜಮೀನುಗಳ ಮಾಹಿತಿಯನ್ನು ಫೂಟ್ಟ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬರ ಪರಿಹಾರ ಹಾಗೂ ವಿಮಾ ಪರಿಹಾರಗಳಂತಹ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು.
ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಮೂಲಕ ರೈತರ ಪ್ರತಿಯೊಂದು ಜಮೀನನ್ನು ಫೂಟ್ ತಂತ್ರಾಂಶದ ವ್ಯಾಪ್ತಿಗೆ ತರಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಸೂಚಿಸಿದರು.
ಇಂದು ಜಿಲ್ಲಾಳಿತ ಭವನದ ಸಭಾಂಗಣದಲ್ಲಿ ಜರುಗಿದ ಕಂದಾಯ ಇಲಾಖೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರದ ಪರಿಹಾರ ಮೊತ್ತಗಳನ್ನು ರೈತರಿಗೆ ನೇರವಾಗಿ ಖಾತೆ ಜಮೆ ಮಾಡಲು ಫೂಟ್ ತಂತ್ರಾಂಶ ಬಳಸಲಾಗುತ್ತಿದೆ.
ರೈತರೆಲ್ಲರೂ ತಮ್ಮ ಜಮೀನಿನ ನಿಖರವಾದ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿಹಾರ ಪಡೆದುಕೊಳ್ಳಬೆಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರಿಗೆ ಮಾಹಿತಿ ಒದಗಿಸಬೇಕು. ಜಿಲ್ಲೆಯಲ್ಲಿ ಫೂಟ್ ತಂತ್ರಾಂಶದಲ್ಲಿ ಈಗಾಗಲೇ ನೋಂದಣಿ ಮಾಡಲಾಗಿದ್ದು. ಬಾಕಿ ಉಳಿದ ರೈತರು ನೋಂದಣಿ ಕಾರ್ಯವನ್ನು ಈ ತಿಂಗಳ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದರು.
ಜಿಲ್ಲೆಯಲ್ಲಿ ಬರ ಆವರಿಸುತ್ತಿರುವ ಹಿನ್ನಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆಯಾಗದಂತೆ ಮುಂಜಾಗೃತೆ ಕ್ರಮಗಳನ್ನು ಅಧಿಕಾರಿಗಳು ತೆಗೆದುಕೊಳ್ಳಬೇಕು. ಮೇವಿನ ಕೊರತೆ ಇದ್ದಲ್ಲಿ ಅಗತ್ಯಕ್ಕನುಸಾರ ಮೇವನ್ನು ಖರೀದಿ ಮಾಡಿಕೊಳ್ಳುವಂತೆ ಸೂಚಿಸಿದರು.
ನೀರಿನ ವ್ಯವಸ್ಥೆ ಇರುವೆಡೆ ರೈತರಿಗೆ ಮೇವಿನ ಬೀಜದ చిటో ಗಳನ್ನು ನೀಡಲಾಗುವುದು ಅವರು ಮೇವನ್ನು ಬೆಳೆದು ತಮ್ಮ ಜಾನುವಾರುಗಳಿಗೆ ಬಳಸಿಕೊಳ್ಳಬಹುದಾಗಿದೆ. ಅಧಿಕವಾದಲ್ಲಿ ಸರ್ಕಾರಕ್ಕೆ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಬಹುದಾಗಿದೆ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ ಜಿಲ್ಲೆಯಲ್ಲಿ ಮೇವಿನ ಕೊರತೆ ಆಗದಂತೆ ನಿಗಾವಹಿಸಲು ತಿಳಿಸಿದರು.
ಬಗರಹುಕುಂ ಅಡಿ ದುರ್ಬಳಕೆ ತಡೆಗಟ್ಟಲು ಮಂಜೂರಾತಿಗೆ ಡಿಜಿಟಲ್ ಸಹಿಗೆ ಅವಕಾಶ ಮಾಡಿಕೊಟ್ಟು ಡಿಜಿಟಲ್ ಸಾಗುವಳಿ ಚೀಟಿಯನ್ನು ನೀಡಲಾಗುತ್ತದೆ. ಈ ಹಿಂದೆ ನೀಡಿದ ಸಾಗುವಳಿ ಚೀಟಿ ನೀಡಿದ ನೈಜತೆಯ ಬಗ್ಗೆ ರಾಜ್ಯದಲ್ಲಿ ಲಕ್ಷಾಂತರ ಪ್ರಕಟಣಗಳು ನ್ಯಾಯಾಲಯದಲ್ಲಿವೇ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಡಿಜಿಟಲಿಕರಣ ಮಾಡಲಾಗುತ್ತಿದೆ.
ಸರ್ಕಾರಿ ಭೂಮಿ ರಕ್ಷಣೆಗೆ బిటో ಪದ್ಧತಿ: ಸರ್ಕಾರಿ ಜಮೀನುಗಳ ರಕ್ಷಣೆಗಾಗಿ ಆಪ್ ಸಿದ್ಧಪಡಿಸಲಾಗಿದೆ. ಸರ್ಕಾರಿ ಜಮೀನುಗಳನ್ನು ಆಪ್ ಮೂಲಕ ಡಾಟಾಬೇಸನ್ನು ಸಿದ್ಧಪಡಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಜಾಗೆಗಳ ಸ್ಥಳಕ್ಕೆ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಭೂಮಿ ಒತ್ತುವರಿ ಆಗಿದೆಯೋ, ಇಲ್ಲವೋ ಎಂಬದನ್ನು ಪರಿಶೀಲನೆ ನಡೆಸಿ ಆಪ್ ಮೂಲಕ ಆ ಸ್ಥಳದಿಂದಲೇ ಧೃಡೀಕರಿಸಿ ವರದಿಯನ್ನು ಆಪ್ಲೋಡ ಮಾಡಬೆಕು.
ಒಂದು ವೇಳೆ ಸರಕಾರಿ ಜಮೀನು ಒತ್ತುವರಿ ಆಗಿದ್ದಲ್ಲಿ ಆಪ್ ಬಳಸಿ ಆನಲೈನ್ ಮೂಲಕವೇ ತಹಶೀಲ್ದಾರರಿಗೆ ವರದಿ ನೀಡಬೇಕು. ಈ ಪ್ರಕ್ರಿಯೆಯಿಂದ ಸರಕಾರಿ ಭೂ-ಕಬಳಿಕೆ ನಿಯಂತ್ರಣಗೊಳ್ಳಲಿದೆ ಎಂದರು.
ಸರ್ಕಾರಿ ಭೂಮಿ ರಕ್ಷಣೆಗೆ ಬೀಟ್ ಪದ್ಧತಿ: ಸರ್ಕಾರಿ ಜಮೀನುಗಳ ರಕ್ಷಣೆಗಾಗಿ ಆಪ್ ಸಿದ್ಧಪಡಿಸಲಾಗಿದ್ದು ಸರ್ಕಾರಿ ಜಮೀನುಗಳನ್ನು ಆಪ್ ಮೂಲಕ ಡಾಟಾಬೇಸನ್ನು ಸಿದ್ಧಪಡಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಜಾಗೆಗಳ ಸ್ಥಳಕ್ಕೆ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಭೂಮಿ ಒತ್ತುವರಿ ಆಗಿದೆಯೋ, ಇಲ್ಲವೋ ಎಂಬದುನ್ನು ಪರಿಶೀಲನೆ ನಡೆಸಿ ಆಪ್ ಮೂಲಕ ಆ ಸ್ಥಳದಿಂದಲೇ ಧೃಡೀಕರಿಸಿ ವರದಿಯನ್ನು ಆಪ್ಲೊಡ ಮಾಡಬೆಕು. ಒಂದು ವೇಳೆ ಸರಕಾರಿ ಜಮೀನು ಒತ್ತುವರಿ ಆಗಿದ್ದಲ್ಲಿ ಆಪ್ ಬಳಸಿ ಆನಲೈನ್ ಮೂಲಕವೇ ತಹಶೀಲ್ದಾರರಿಗೆ ವರದಿ ನೀಡಬೇಕು. ಈ ಪ್ರಕ್ರಿಯೆಯಿಂದ ಸರಕಾರಿ ಭೂ-ಕಬಳಿಕೆ ನಿಯಂತ್ರಣಗೊಳ್ಳಲಿದೆ ಎಂದರು.
ಇ-ಆಫೀಸ: ಕಂದಾಯ ಇಲಾಖೆ ಕೆಲಸ ಕಾರ್ಯಗಳೆಲ್ಲವೂ ಚುರುಕುಗೊಳಿಸುವ ನಿಟ್ಟಿನಲ್ಲಿ ನಿಧಾನಗತಿ ತಪ್ಪಿಸಲು ಇ-ಆಫೀಸ ವ್ಯವಸ್ಥೆ ಅಳವಡಿಸಲಾಗಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಇ-ಆಫೀಸ ಮೂಲಕವೇ ಕಡತಗಳ ಚಲನೆಯಾಗಬೇಕು. ಇದರಿಂದ ವಿಳಂಭಕ್ಕೆ ವಿದಾಯ ದೊರೆಯುತ್ತದೆ. ನಮ್ಮ ಸರ್ಕಾರದ ಜನಪರ ಹಾಗೂ ಪಾರದರ್ಶಕ ಆಡಳಿತದ ಉದ್ದೇಶ ಸಾಕಾರಗೊಳ್ಳಲಿದೆ ಎಂದರು.
ದಾಖಲೆಗಳ ಡಿಜಿಟಲಿಕರಣ: ರೆಕಾಡ್ನ ರೂಂನಲ್ಲಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಶಾಶ್ವತವಾಗಿ ದಾಖಲೆಗಳನ್ನು ಉಳಿಸಲು ಡಿಜಿಟಲಿಕರಣ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ರಾಜ್ಯ ಮಟ್ಟದಲ್ಲಿ ದಾಖಲೆಗಳ ಸೂಕ್ತ ರಕ್ಷಣೆಗೆ ಉತ್ತಮ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ ರಕ್ಷಣೆ ಮಾಡುತ್ತೇವೆ. ಜನಸಾಮಾನ್ಯರಿಗೆ ಸಲೀಸಾಗಿ ಅವರಿಗೆ ಸಂಬಂಧಿಸಿದ ದಾಖಲೆಗಳು ಸಿಗುವಂತೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಸೇರಿದಂತೆ ಎಲ್ಲಾ ತಹಶೀಲ್ದಾರರು, ಕಂದಾಯ ನೀರಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.




ಕುಂದಾಪುರ (ಸೆ . 23) : ಸಂಸ್ಥೆಯಲ್ಲಿ ಕಳೆದ ತನ್ನ ಪ್ರಾಥಮಿಕ ಶಿಕ್ಷಣದ ಕ್ಷಣಗಳನ್ನು ಮೆಲುಕು ಹಾಕುತ್ತಾ, ನನ್ನ ಹಿಂದಿನ ಈ ಸಾಧನೆಗೆ ಅಂದಿನ ನನ್ನ ಪ್ರಾಥಮಿಕ ಶಿಕ್ಷಕರು ನೀಡಿದ ಶಿಸ್ತು, ಸಂಯಮ, ಪ್ರೇರಣೆಯೇ ಕಾರಣ. ಧೈರ್ಯ, ಶಿಸ್ತು, ಶೌರ್ಯದಲ್ಲಿ ಭಾರತದ ಸೈನ್ಯಕ್ಕೆ ಪ್ರಪಂಚದ ಯಾವುದೇ ಸೈನ್ಯ ಸರಿಸಾಟಿಯಲ್ಲ ಎಂದು ಇತ್ತೀಚಿಗಷ್ಟೇ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ಸ್ಥಾನ ಪಡೆದಿರುವ ಸಂಸ್ಥೆಯ ಹಳೆ ವಿದ್ಯಾರ್ಥಿ ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ ಹೇಳಿದರು.
ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಜೈ ಹಿಂದ್ – ” ಟಾಕ್ ವಿದ್ ಲೆಫ್ಟಿನೆಂಟ್ ” ಕಾರ್ಯಾಗಾರದಲ್ಲಿ ಮಾತನಾಡುತ್ತ ಹೀಗೆಂದರು. ಇವರೊಂದಿಗೆ ಹಳೆಯ ವಿದ್ಯಾರ್ಥಿಗಳಾದ ಅಜಯ್ ಮತ್ತು ರೋಹಿತ್ ಬಾಬು ದೇವಾಡಿಗ ಆಗಮಿಸಿದ್ದರು. ಲೆಪ್ಟಿನೆಂಟ್ ರವರ ಸಾಧನೆಯನ್ನು ಗುರುತಿಸಿ ಸಂಸ್ಥೆಯು ಇವರನ್ನು ಸನ್ಮಾನಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್, ಉಪಪ್ರಾಂಶುಪಾಲರಾದ ಶುಭಾ ಕೆ ಎನ್ ಮತ್ತು ಇತರ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕಿ ಗಾಯತ್ರಿ ಕಾರ್ಯಾಕ್ರಮ ನಿರೂಪಿಸಿದರು.




ಮಂಗಳೂರುಃ ಎಪಿಸ್ಕೋಪಲ್ ಸಿಟಿ ವಲಯ ಚರ್ಚಗಳ ಪಾಲನ ಪರಿಷತ್ ಮತ್ತು ವಲಯದ ಪಾಲನ ಪರಿಷತ್ ಸಮಾವೇಶ, ಎಪಿಸ್ಕೋಪಲ್ ಸಿಟಿ ವಲಯ ಮತ್ತು ಕ್ರೈಸ್ತ ವಿದ್ಯಾಪೀಠ ಮಂಗಳೂರು ವಿಶ್ವವಿದ್ಯಾನಿಲಯ ಜಂಟಿಯಾಗಿ ಇವರ ಆಶ್ರಯದಲ್ಲಿ Fr ಮುಲ್ಲರ್ ವೈದ್ಯಕೀಯ ಕಾಲೇಜಿನ ಕನವೆನ್ಸನ್ ಹಾಲಿನಲ್ಲಿ ಸಮಾವೇಶ ಜರುಗಿತು.
ಆಸ್ಪತ್ರೆಯ ಸಮಾವೇಶ ಕೇಂದ್ರದಲ್ಲಿ ಇಂದು ಸಂಜೆ 5.30 ರಿಂದ 8.00 ರವರೆಗೆ ವರಡೋ ಪಾಲನಾ ಪರಿಷತ್ತಿನ ಸದಸ್ಯರು ಮತ್ತು 11 ಪಂಗಡಗಳ ಪ್ಯಾರಿಷ್ ಪಾಲನಾ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.ಬಿಜೈ ಪ್ಯಾರಿಷ್ ನೇತೃತ್ವದಲ್ಲಿ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಡೀನ್ ಫಾದರ್ ಬೊನವೆಂಚರ್ ನಜರೆತ್ ಕಾರ್ಯಕ್ರಮವನ್ನು ಪರಿಚಯಿಸಿದರು. ಮತ್ತು ಸಮಾವೇಶದ ಸಂದರ್ಭವನ್ನು ನಿರೂಪಿಸಿ ಸಭೆಯನ್ನು ಸ್ವಾಗತಿಸಿದರು. ಫ್ರಾ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಚರ್ಚ್ನ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಎತ್ತಿ ತೋರಿಸುವ ಕವಾಲಿಯನ್ನು ಪ್ರಸ್ತುತಪಡಿಸಿದರು. ಮುಖ್ಯ ವಿಷಯವನ್ನು ಮಂಡಿಸಿದರು ಮತ್ತು ಉಪನ್ಯಾಸಕರನ್ನು ಫ್ರಾ ಮ್ಯಾಕ್ಸಿಮ್ ಡಿ ಸೋಜಾ ಪರಿಚಯಿಸಿದರು. ರೆವ್ ಡಾ. ಜೆ.ಬಿ.ಸಲ್ಡಾನ್ಹಾ ವ್ಯಾಟಿಕನ್ ಕೌನ್ಸಿಲ್ 11 ರ ಮೊದಲು ವ್ಯವಹಾರಗಳ ಸ್ಥಿತಿಯ ಕುರಿತು ಮಾತನಾಡಿದರು ಮತ್ತು ಇಂದಿನ ವ್ಯವಹಾರಗಳ ಸ್ಥಿತಿಯನ್ನು ಜೋಡಿಸುವ ಬದಲಾವಣೆಗಳನ್ನು ಎತ್ತಿ ತೋರಿಸಿದರು. ಫ್ರಾನ್ಸಿಸ್ ಡಿ ಕುನ್ಹಾ ಅವರು ಚರ್ಚ್ನಲ್ಲಿನ ಭಕ್ತರಲ್ಲಿ ಭಾಗಿಯಾಗುವ ಅವಕಾಶಗಳ ಕುರಿತು ಮಾತನಾಡಿದರು ಮತ್ತು ಧರ್ಮಗುರುಗಳು, ಧಾರ್ಮಿಕ ಮತ್ತು ಪವಿತ್ರ ಮಾತೆ ಚರ್ಚ್ನಲ್ಲಿ ನಿಷ್ಠಾವಂತ ಮುಖದ ಇಂದಿನ ಸವಾಲುಗಳನ್ನು ರೆವ್ ಡಾ ಆಂಟನಿ ಜಾರ್ಜ್ ಪಿಂಟೋ ವಿವರಿಸಿದರು. ಬಿತ್ತರು, ಬೆಂದೂರು ಪ್ಯಾರಿಷ್ ಯುವಕರು ಬಾಂಧವ್ಯ, ಜೀವನದಲ್ಲಿ ಯಶಸ್ವಿಯಾಗಲು ಕುಟುಂಬದ ಮೌಲ್ಯಗಳನ್ನು ಪ್ರಸ್ತುತಪಡಿಸಿದರು. ಬಿಷಪ್ ಪೀಟರ್ ಪಾಲ್ ಸಲ್ಡಾನ್ಹಾ, ಮಂಗಳೂರು ಸಮುದಾಯವನ್ನು ಶ್ಲಾಘಿಸಿ, ಸೇವೆಯಲ್ಲಿ ಬದ್ಧತೆ ಮತ್ತು ಸಿನೊಡಾಲಿಟಿಗೆ ಕರೆ ನೀಡಿದರು. ಚರ್ಚ್ ಆಧುನಿಕ ಕಾಲಕ್ಕೆ ಚರ್ಚ್. ಮಾಡರೇಟರ್ ಸಮುದಾಯವನ್ನು ನಿರ್ಮಿಸಲು ಪ್ಯಾರಿಷ್ ಪ್ಯಾಸ್ಟೋರಲ್ ಪರಿಷತ್ತು, ಆಯೋಗಗಳು ಮತ್ತು ಚರ್ಚ್ನ ನಿಗದಿತ ಸಂಸ್ಥೆಗಳ ಅಗತ್ಯವನ್ನು ಮತ್ತು ದೇವರ ಜನರ ಸ್ಥಾನಮಾನವನ್ನು ಹೇಳಿದರು. ಡಾ ರಿತೇಶ್ ಮತ್ತು ಡಾ ಶಾನನ್ ಕಾರ್ಯಕ್ರಮವನ್ನು ಹೋಲಿಸಿದರು. ಜಾನ್ ಡಿ ಸಿಲ್ವಾ ಧನ್ಯವಾದವನ್ನು ಪ್ರಸ್ತಾಪಿಸಿದರು. ಭಾಗವಹಿಸುವವರು ಇನ್ಪುಟ್ ಸೆಷನ್ಗಳನ್ನು ಶ್ಲಾಘಿಸಿದರು. ಎಲ್ಲರೂ ಸಂತೋಷ ಮತ್ತು ಒಗ್ಗಟ್ಟಿನ ಭಾವದಿಂದ ಭೋಜನಕ್ಕೆ ಸೇರಿದರು. ಸುಮಾರು 560 ಜನರು ಹಾಜರಿದ್ದರು.
The Episcopal city Deanary and Chair in Christianity had jointly organised a convention at Fr Muller medical College

Mangaluruಃ hospital convention centre this evening between 5.30 to 8.00 pm.The Varado Pastoral Parishad members and the Parish Pastoral Parishad members of 11 Parishes were present.The program began with the prayer song led by the Bijai Parish.The Dean Fr Bonaventure Nazareth, introduced the program and highlighted the occasion of convention and welcomed the gathering.The Fr Muller medical College hospital presented the kavali highlighting the past, present and future of the church.The main topic was presented and the speakers were introduced by fr Maxim d Souza.Rev Dr. J.B.Saldanha spoke on the state of affairs before the Vatican council 11 and highlighted the changes linking it today’s state of affairs .Mr. Francis D Cunha spoke on the opportunities of the lay faithful in the church to be involved and Rev Dr Antony George Pinto enumerated the present day challenges that the Clergy, Religious and lay faithful face in the Holy Mother the church.Jeppu Parish enacted the Parable of the sower,the Bendur Parish youth presented the values of the family insisting on bonding , to be successful in life.The Bishop Peter Paul Saldanha, appreciating the mangalorean community, called on the commitment in service and synodality.He also explained the relevance of the church to the modern times.The moderator stated the necessity of the Parish Pastoral Parishad ,the commissions and the stipulated bodies of the church to build up a community and the status of the people of God.Dr Ritesh and Dr Shannon compared the program.Mr John d Silva proposed the vote of thanks.The participants appriciated the input sessions.All joined the dinner with the sense of joy and togetherness . Around 560 people were present.
























