ಬಸ್ರೂರು ಸ್ಪೋರ್ಟ್ಸ್ ಆಶ್ರಯದಲ್ಲಿ ‘ಹಿರಿಯರ ಕ್ರಿಕೆಟ್ ಟ್ರೋಫಿ-2023’ – ಲಕ್ಕಿ ಲೆಜೆಂಡ್ಸ್ಗೆ ಪ್ರಶಸ್ತಿ

ಬಸ್ರೂರು: ಬಸ್ರೂರು ಸ್ಪೋರ್ಟ್ಸ್ ಆಶ್ರಯದಲ್ಲಿ ರವಿವಾರ ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಮೈದಾನದಲ್ಲಿ ಹಿರಿಯರ ಕ್ರಿಕೆಟ್ ಟ್ರೋಫಿ-2023 ನಡೆಯಿತು. ಪಂದ್ಯಾವಳಿಯಲ್ಲಿ ಬಸ್ರೂರು ಪರಿಸರದ ಹಿರಿಯ ಕ್ರಿಕೆಟ್ ತಂಡಗಳು ಭಾಗವವಹಿಸಿದ್ದು, ಲಕ್ಕಿ ಲೆಜೆಂಡ್ಸ್ ಪ್ರಥಮ, ಲೆಜೆಂಡ್ಸ್ ಕಿಂಗ್ಸ್‌ ತಂಡ ದ್ವಿತೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

      ಟ್ರೋಫಿಗಳನ್ನು ವಿಜೇತರಿಗೆ ವಿತರಿಸಿದ ಧಾರ್ಮಿಕ ನೇತಾರ, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ಸುಮಾರು 25-30 ವರ್ಷಗಳ ಹಿಂದೆ ಜಿಲ್ಲೆ ರಾಜ್ಯ,ರಾಷ್ಟ್ರದಲ್ಲಿ ಮಿಂಚಿದ ಸ್ಥಳೀಯ ಕ್ರಿಕೆಟ್  ಪಟುಗಳ ಸಮಾಗಮ ಈಗ ಮತ್ತೊಮ್ಮೆ ನಡೆದಿರುವುದು ಸಂತಸದ ವಿಚಾರವಾಗಿದೆ. ಇಂದಿನ ಯುವ ಕ್ರಿಕೆಟ್ ಪಟುಗಳು ಹಿರಿಯ ಆಟಗಾರರಿಂದ ಅನೇಕ ಕೌಶಲಗಳನ್ನು ಕಲಿತು ಕೊಳ್ಳಬೇಕಾಗಿದೆ ಎಂದರು.

ಬಸ್ರೂರು ವ್ಯ.ಸೇ.ಸ. ಸಂಘದ ಅಧ್ಯಕ್ಷ ಬಿ.ಗೋಪಾಲ ಪೂಜಾರಿ, ಕ್ರಿಕೆಟ್ ಪಟು ಮನೋಜ್ ನಾಯರ್, ಕುಂದಾಪುರ ಕಾರ್ತಿಕ್ ಸ್ಕ್ಯಾನಿಂಗ್‌ನ ಡಾ|ಬಿ. ವೆಂಕಟರಾಮ ಉಡುಪ, ರಿಯಾಜ್. ಅಹ್ಮದ್, ಬಸ್ರೂರು  ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಅಬ್ದುಲ್ ಅಜೀಜ್, ಅಧ್ಯಕ್ಷ  ಬಿ.ಸತ್ಯನಾರಾಯಣ, ಕಾರ್ಯದರ್ಶಿ ಬಿ. ವಿವೇಕಾನಂದ, ಕೋಶಾಧಿಕಾರಿ ಅಶೋಕ್ , ಬಿ.ಕೆ., ಬಿ.ರಾಮ್ ಕಿಶನ್‌ ಹೆಗ್ಡೆ, ಸತೀಶ್ ಮಧ್ಯಸ್ಥ ಉಪಸ್ಥಿತರಿದ್ದರು.

ಸಮ್ಮಾನ

ಬಿ.ಅಪ್ಪಣ್ಣ ಹೆಗ್ಡೆ ಮತ್ತು ಸಮಾಜ ಸೇವಕ ಕೃಷ್ಣ ಬಿ. ಅವರನ್ನು ಸಮ್ಮಾನಿಸಲಾಯಿತು. ಬಸ್ರೂರುಸರಕಾರಿ ಪ್ರೌಢಶಾಲೆಯ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರರನ್ನು ಗೌರವಿಸಲಾಯಿತು. ಬೆಳಗ್ಗೆ ರಿಯಾಜ್ ಸಾನಕದಕಟ್ಟೆ ರಮೇಶ್ ಆಚಾರ್, ಸತೀಶ್ ಮಧ್ಯಸ್ಥ ಪಾರಿತೋಷಕಗಳನ್ನು ಅನಾವರಣಗೊಳಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದ್ದರು. ಯುವ ಮುಖಂಡ ಅಶೋಕ್ ಕೆರೆಕಟ್ಟೆ ,ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.