ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ
ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಭಿನಂದನೆ ಸಲ್ಲಿಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಜಿತ ನೂತನ ಪದಾಧಿಕಾರಿಗಳು ಹಾಗೂ ಹಾಲಿ ಅಧ್ಯಕ್ಷರನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಸಭಾಪತಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ವಿ.ಆರ್.ಸುದರ್ಶನ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೂತನ ಪದಾಧಿಕಾರಿಗಳು ಜಿಲ್ಲೆಯ ಜನರ ಸಮಸ್ಯೆಗಳಿಗೆ ಧ್ವನಿಯಾಗಲಿ, ಸಂಘ ಮತ್ತಷ್ಟು ಬಲಿಷ್ಟವಾಗಿ ಜಿಲ್ಲೆಯ ಅಭಿವೃದ್ದಿಗಾಗಿ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ವಿ.ಮುನಿರಾಜು, ನಿಯೋಜಿತ ನೂತನ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್, ರಾಜ್ಯಪರಿಷತ್ ಸದಸ್ಯ ಕೆ.ಎಸ್.ಗಣೇಶ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‍ಕುಮಾರ್, ಉಪಾಧ್ಯಕ್ಷ ಸದಾನಂದ, ಕಾರ್ಯದರ್ಶಿ ಸಿ.ಜಿ.ಮುರಳಿ, ಕಾರ್ಯಕಾರಿ ಸದಸ್ಯರಾದ ಆಸೀಫ್, ನಾ.ಮಂಜುನಾಥ್, ಲಕ್ಷ್ಮಣ್‍ರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಮಿನರಲ್ಸ್ ನಿರ್ದೇಶಕ ಆರ್.ಕಿಶೋರ್‍ಕುಮಾರ್, ಕಾಂಗ್ರೆಸ್ ಮುಖಂಡರಾದ ವೆಂಕಟಪತೆಪ್ಪ, ಪ್ರಸಾದ್‍ಬಾಬು, ಜೆ.ಕೆ.ಜಯರಾಂ,ಲಾಲ್‍ಬಹುದ್ದೂರು ಶಾಸ್ತ್ರಿ, ಮುರಳಿಗೌಡ, ಖಾದ್ರಿಪುರ ಬಾಬು, ತನ್ವಿರ್ ಅಹಮದ್, ಅಲ್ತಾಪ್, ನಿವೃತ್ತ ಬ್ಯಾಂಕ್ ಅಧಿಕಾರಿ ರಾಧಾಕೃಷ್ಣ, ಎಸ್.ಆರ್.ನಾರಾಯಣಸ್ವಾಮಿ, ತಿರುಮಲೇಶ್, ನಾರಾಯಣಸ್ವಾಮಿ,ಜಗನ್, ರಾಜೇಶ್,ವಿಜಯ್ ಮತ್ತಿತರರಿದ್ದರು.