ನಮ್ಮ ಮನೆಯಲ್ಲಿಯೂ ಹೆಂಡತಿ ಕೂಗುತ್ತಾರೆ | ಸಿಎಂ ಬಸವರಾಜ್ ಬೊಮ್ಮಾಯಿ ಅಂಬೋಣ

JANANUDI.COM NETWORK


ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಟಿವಿ ಕಾರ್ಯಕ್ರಮದ ಕಲರ್ಸ್ ಕನ್ನಡದ ‘ಅನುಬಂಧ ಅವಾರ್ಡ್ 2021) ನಲ್ಲಿ ಸಿಎಂ ಭಾಗವಹಿಸಿದ್ದು, ಮನೆ, ಸಂಸಾರ ತಾಪತ್ರಯಗಳ ಬಗ್ಗೆ ಅನುಭವ ಕುರಿತು ಮಾತುಕತೆ ನಡೆದಿದೆ.
ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪೆÇ್ರಮೋದಲ್ಲಿ, ನಿರೂಪಕ ಅಕುಲ್ ಬಾಲಾಜಿ, ಎಲ್ಲರ ಮನೆಯಲ್ಲಿ ನಳ್ಳಿ ರಿಪೇರಿ, ಮನೆ ಸಂಸಾರದಲ್ಲಿ ಸಣ್ಣ ಸಣ್ಣ ಕಾರಣಕ್ಕೆ ಜಗಳವಾಗುತ್ತದೆ. ಹಾಗೆಯೇ ನಿಮ್ಮ ಮನೆಯಲ್ಲಿ ಕೂಡ ಜಗಳವಾಗುತ್ತಾ? ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಸಿಎಂ, ನಮ್ಮ ಮನೆಯೂ ಸಾಮಾನ್ಯರ ಸಂಸಾರ ಇದ್ದಂತೆ. ಎಲೆಕ್ಟ್ರಿಸಿಟಿ ಎಲ್ಲಾ ಕಡೆ ಹೇಗಿದೆಯೋ ನಮ್ಮ ಮನೆಯಲ್ಲೂ ಹಾಗೆಯೇ ಇದೆ. ನಾನು ಸಿಎಂ ಆದ ಮಾತ್ರಕ್ಕೆ ಅವು ಬದಲಾಗುವುದಿಲ್ಲ. ನಿಮ್ಮ ಮನೆಯಲ್ಲಿ ಹೆಂಡತಿ ಜೋರು ಮಾಡಬಹುದು. ಹಾಗೇ ನಮ್ಮ ಮನೆಯಲ್ಲಿಯೂ ಹಾಗೆಯೇ ಹೆಂಡತಿ ಜೋರು ಮಾಡುತ್ತಾರೆ’ ಎಂದಿದ್ದಾರೆ.
ಈ ಕಾರ್ಯಕ್ರಮವು ಕಲರ್ಸ್ ಕನ್ನಡದಲ್ಲಿ ಅಕ್ಟೋಬರ್ 15, 16, 17ರ ಸಂಜೆ 7 ಗಂಟೆಗೆ ಪ್ರಸಾರವಾಗುವುದು. ಹಾಗೆ ಇದೀಗ ಕೊವಿಡ್ ಹಾವಳಿ ತಗ್ಗಿರುವ ಕಾರಣ ಈ ಬಾರಿ ಕಳೆದ ಬಾರಿಗಿಂತ ಅದ್ದೂರಿಯಾಗಿಯೇ ಅನುಬಂಧ ಅವಾರ್ಡ್ ಕಾರ್ಯಕ್ರಮ ನಡೆಯುವುದೆಂದು ಅಂದಾಜಿಸಲಾಗಿದೆ.