ಶ್ರೀನಿವಾಸಪುರ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಿಂದ ಅಕ್ಕಿ ವಿತರಣೆ

 

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಶ್ರೀನಿವಾಸಪುರ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಿಂದ ಅಕ್ಕಿ ವಿತರಣೆ

 

ಶ್ರೀನಿವಾಸಪುರ:-ಶ್ರೀನಿವಾಸಪುರ ತಾಲೂಕು ಪಂಚಾಯಿತಿ ಉಪಾಧ್ಯಕ್ಷ್ಚೆ ಬಾಲಾವತಿಜಯರಾಮ್ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯ ಗೌಡತಾತನಗಡ್ಡ ಗ್ರಾಮದ ಸುಮಾರು 150 ಕುಟುಂಬಗಳಿಗೆ ಅಕ್ಕಿ ಬೆಳೆ ಅಡುಗೆ ಎಣ್ಣೆ ಸೇರಿದಂತೆ ಪದಾರ್ಥಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಗೌಡತಾತನಗಡ್ಡ ಗ್ರಾಮದಲ್ಲಿ ಬಹುತೇಕ ದಲಿತ ಸಮುದಾಯದ ಬಡವರೆ ಹೆಚ್ಚಾಗಿ ಇದ್ದು ಇವರು ಬೆಂಗಳೂರಿನಲ್ಲಿ ಕೂಲಿಕಾರ್ಮಿಕರಾಗಿರುತ್ತಾರೆ ಲಾಕ್ ಡೌನ್ ನಿಂದಾಗಿ ಗ್ರಾಮಗಳಿಗೆ ವಾಪಸ್ಸು ಬಂದಿರುತ್ತಾರೆ ಇಲ್ಲಿ ಇವರಿಗೆ ಕೆಲಸ ಕಾರ್ಯ ಇಲ್ಲದೆ ಇರುವುದರಿಂದ ಜೀವನೊಪಾಯಕ್ಕೆ ತೊಂದರೆಯಾಗಿದ್ದು ಇವರಿಗೆ ಅಸರೆಯಾಗಿ ದಿನಸಿ ಪದಾರ್ಥಗಳನ್ನು ವಿತರಿಸುತ್ತಿರುವುದಾಗಿ ಹೇಳಿದರು.
ಶ್ರೀನಿವಾಸಪುರ ತಾಲೂಕು ಮಾಜಿ ಶಾಸಕ ವೆಂಕಟಶಿವಾರೆಡ್ಡಿಯವರ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ತೂಪಲ್ಲಿನಾರಯಣಸ್ವಾಮಿ ಆಶಯದಂತೆ ಇಂದು ಇವರಿಗೆ ಸಹಾಯ ಮಾಡಿರುವುದಾಗಿ ತಿಳಿದರು. ಸ್ಥಳಿಯ ಮುಖಂಡ ಜಯರಾಮ್ ಗ್ರಾಮ ಪಂಚಾಯಿತಿ ಸದಸ್ಯ ಸರಸಮ್ಮ,ಗೋಪಾಲ್ ಮುನಿರೆಡ್ಡಿ ಚಿನ್ನಕ್ಕ ಇದ್ದರು.