ಬಸ್ರೂರು ಉರ್ದು ಶಾಲೆ: ಕಂಪ್ಯೂಟರ್ ತರಗತಿ ಉದ್ಘಾಟನೆ

JANANUDI.COM NETWORK

ಬಸ್ರೂರು ಉರ್ದು ಶಾಲೆ: ಕಂಪ್ಯೂಟರ್ ತರಗತಿ ಉದ್ಘಾಟನೆ

ಕುಂದಾಪುರ, ಆ.೨೪.73ನೆಯ ಸ್ವಾತಂತ್ರ್ಯ ಸಂಭ್ರಮ ದ ಸಡಗರದಲ್ಲಿ ಉರ್ದು ಶಾಲೆಗೆ ಖಿಧ್ಮ ಫೌಂಡೇಶನ್ ಸೌದಿ ಅರೇಬಿಯಾ ಹಾಗೂ ದಿವಂಗತ ಬಿ.ಎನ್.ಮೊಯಿದಿನ್ ಸಾಹೇಬರ ಸ್ಮರಣಾರ್ಥ ಬಿ.ಎನ್.ಅಬ್ದುಲ್ ಅಜೀಜ್ ರವರು ಎರಡು ಕಂಪ್ಯೂಟರ್ ಅನ್ನು ಹಸ್ತಾಂತರಿಸಿದರು. ಕಂಪ್ಯೂಟರ್ ತರಗತಿ ಉದ್ಘಾಟನೇ ಮಾಡಿದ ಖಿಧ್ಮಾ ಫೌಂಡೇಶನ್ ಕಾರ್ಯದರ್ಶಿ ಜಮೀರ್ ಅಹಮ್ಮದ್ ರಶಾದಿಯ ಅವರು ಅಲ್ಪಸಂಖ್ಯಾತ ಸಮುದಾಯದ ಎಲ್ಲ ಪೋಷಕರು ಮಕ್ಕಳ ಭವಿಷ್ಯವನ್ನು ರೂಪಿಸಲು ಈ ಶಾಲೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗೂ ಪ್ರೋತ್ಸಾಹ ನೀಡಬೇಕು ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಶಿಕ್ಷಣ ತಜ್ಞ ಶಾಬೂ ನ ಉಸ್ತಾದ್ ,ವೇದಿಕೆಯಲ್ಲಿ ಮೊಹಮ್ಮದ್ ಹನೀಫ್ ಶೇಕ್ ಸೌದಿ ಅರೇಬಿಯಾ,ಮೊಹಮ್ಮದ್ ರಫೀಕ್ ಶೇಕ್.ಹಳೆ ವಿದ್ಯಾರ್ಥಿ ಸಂಘದ ಲಾಲಾ ಅನ್ವರ್.ಅಯ್ಯೂಬ್ ಮಸ್ಕತ್.ಫಿರೋಜ್ ಧುಬೈ.ಲಾಲ ಆಜಂ ಉಪಸ್ಥಿತರಿದ್ದರು… ಎಸ್. ಡೀ. ಎಮ್. ಸಿ ಅಧ್ಯಕ್ಷ ಶ್ರೀ ಅಬ್ದುಲ್ ಅಜೀಜ್,ಹಳೆ ವಿದ್ಯಾರ್ಥಿ ಸಂಗದ ಅಧ್ಯಕ್ಷ ಲಾಲ ಅನ್ವರ್.,ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಹಾಜರಿದ್ದರು. ಶಾಲಾ ಮುಖ್ಯ ಅಧ್ಯಾಪಕಿ ವಿಶಾಲಾಕ್ಷಿ ಶೆಡ್ತಿ ಸ್ವಾಗತಿಸಿ,ಮಹೇಶ್ ವಕ್ವಾಡಿ ನಿರೂಪಿಸಿದರು
ಇನ್ನೋರ್ವ ಶಿಕ್ಷಕಿ ಸಗೀರ್ ತಾರನ್ನುಂ ವಂದನಾರ್ಪಣೆ ಸಲ್ಲಿಸಿದರು.