ಕುಂದಾಪುರ: ಐ.ಸಿ.ವೈ.ಎಮ್ – ವೈ.ಸಿ.ಎಸ್. ಸಂಘಟನೆಗಳಿಂದ ತೈಝೆ ಪ್ರಾರ್ಥನೆ

JANANUDI NETWORK

ಕುಂದಾಪುರ: ಐ.ಸಿ.ವೈ.ಎಮ್ – ವೈ.ಸಿ.ಎಸ್. ಸಂಘಟನೆಗಳಿಂದ ತೈಝೆ ಪ್ರಾರ್ಥನೆ


ಕುಂದಾಪುರ.ಜು.29: ಕುಂದಾಪುರ ಐ.ಸಿ.ವೈ.ಎಮ್ – ವೈ.ಸಿ.ಎಸ್. ಸಂಘಟನೆಗಳಿಂದ ಅಪರೂಪದ ತೈಝೆ ಪ್ರಾರ್ಥನೆ ಕುಂದಾಪುರ ಪವಿತ್ರ ರೋಜರಿ ಮಾತಾ ಸಭಾ ಭವನದಲ್ಲಿ ಜುಲಾಯ್ 28 ರಂದು ಹಮ್ಮಿ ಕೊಳ್ಳಲಾಗಿತ್ತು.
ಅಸು ನೀಗಿದ ಯೇಸು ಕ್ರಿಸ್ತರ ಶಿಲುಭೆಯನ್ನು ಇಟ್ಟು ಕತ್ತಲಲ್ಲಿ, ದೀಪಗಳನ್ನು ಉರಿಸಿ, ಶಾಂತಾವಾಗಿ ಧ್ಯಾನ ಮಾಡುವುದು ತೈಝೆ ಎಂಬ ಪ್ರಾರ್ಥನೆ ಆಗಿದೆ. ಗಾಯನದ ಜೊತೆ ದೇವರ ವಾಕ್ಯಗಳನ್ನು ಕೇಳುತ್ತಾ ಭಜಿಸುವುದು, ಮೊಣಕಾಲ ಮೇಲೆ, ಅಥವ ಸಾಂಶ್ಟಾಂಗ ಎರಗಿ ವಯಕ್ತಿವಾಗಿ ಬೇಡುವ ಭಕ್ತಿ ಕಾರ್ಯಕ್ರಮ ನಡೆಯಿತು. ಈ ಪ್ರಾರ್ಥನ ವಿಧಿಯನ್ನು ಕಟ್ಕರೆ ಕಾರ್ಮೆಲ್ ಬಾಲ ಯೇಸುವಿನ ಆಶ್ರಮದ ಧರ್ಮಗುರು ವಂ|ಸ್ಟೀವನ್ ಲೋಬೊ ನಡೆಸಿಕೊಟ್ಟರು.
ಈ ಪಾರ್ಥನ ಕೂಟಕ್ಕೆ ಕುಂದಾಪುರ ಚರ್ಚಿನ ಐ.ಸಿ.ವೈ.ಎಮ್ – ವೈ.ಸಿ.ಎಸ್. ಸಂಘನೇಯ ಯುವಕ ಯುವತಿಯರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿದ್ದರು, ಅವರ ಜೊತೆ ಕುಂದಾಪುರದ ಹಿರಿಯ ಭಕ್ತಿಕರು ಕೂಡ ಈ ಪ್ರಾರ್ಥನೆಯಲ್ಲಿ ಭಾಗಿಯಾದರು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶುಭ ಕೋರಿ ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಮಾರ್ಟಿಸ್, ಐ.ಸಿ.ವೈ.ಎಮ್ – ವೈ.ಸಿ.ಎಸ್. ಪದಾಧಿಕಾರಿಗಳು, ಸಂಘಟನೇಯ ಸಂಚಾಲಕರಾದ ರೇಶ್ಮಾ ಫೆರ್ನಾಂಡಿಸ್ ಮತ್ತು ಲೋನಾ ಲುವಿಸ್ ಉಪಸ್ಥಿತರಿದ್ದರು.