

ಶ್ರೀನಿವಾಸಪುರ : ದೇಶದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಬಡಕುಂಟುಂಬಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಡೆಸುತ್ತಿದೆ ಇದರ ಬಗ್ಗೆ ಪ್ರತಿ ಹಳ್ಳಿಗಳಲ್ಲಿ, ಪ್ರತಿಭೂತಿನ ಸಾರ್ವಜನಿಕರಿಗೆ ಹಾಗು ಮತದಾರರನ್ನ ಎಚ್ಚರಿಕೆಗೊಳಿಸಬೇಕಿದೆ ಎಂದು ಜಿಲ್ಲಾ ಉಪಾಧ್ಯಕ್ಷ ವಾಸುದೇವರೆಡ್ಡಿ. ಹೇಳಿದರು.
ಗ್ರಾಮದ ಬಸ್ನಿಲ್ದಾಣದಲ್ಲಿ ಭಾನುವಾರ ಯುವಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದರು.
ಈ ಹಿಂದೆ 2014 ರಲ್ಲಿ ನರೇಂದ್ರಮೋದಿರವರಿಗೆ ಅಮೇರಿಕಗೆ ಹೋಗಲು ವೀಸಾ ಸಿಕ್ಕಿಲ್ಲ. ಅಂದು ನರೆಂದ್ರಮೋದಿರುವರು ಗೋದ್ರ ಹತ್ಯಕಾಂಡದಲ್ಲಿ ಪಾಲ್ಗುಂಡಿರುವುದನ್ನ ಎಂಬ ಕಾರಣಕ್ಕೆ ವೀಸಾವನ್ನು ನೀಡಿಲ್ಲ.. ಇಂದು ದೇಶದ ರೈತರು , ಬಡಕುಟುಂಬಗಳು ಜೀವನ ನಡೆಸುವುದು ಕಷ್ಟ ಸಾಧ್ಯವಾಗಿದೆ. ಮಾಜಿ ಪ್ರಧಾನಿ ಮನಮೋಹನ್ಸಿಂಗ್, ಸೋನಿಯಗಾಂದಿ ರವರು ಬಡಕುಟುಂಬಗಳ ಗಮನದಲ್ಲಿ ಇಟ್ಟುಕೊಂಡು ಮನರೇಗಾ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದರು ಅದನ್ನ ಬದಲಿಸಿ ವಿಬಿ ರಾಮಾಜಿ ಹೆಸರು ನಾಮಕರಣ ಮಾಡಿ ಅದರಲ್ಲಿ ಕೆಲ ನಿಯಮಗಳನ್ನು ಬದಲಾವಣೆ ಮಾಡಿರುವುದು ಖಂಡನೀಯ ಎಂದು ಆರೋಪಿಸಿದರು.
ನಮ್ಮ ರಾಜ್ಯವು ದೇಶದಲ್ಲಿನ ಎಲ್ಲಾ ರಾಜ್ಯಗಳಿಗಿಂತ ಹೆಚ್ಚು ಜಿಎಸ್ಟಿಯನ್ನ ಪಾವತಿ ಮಾಡುತ್ತಿದೆ ಆದರೆ ನಮ್ಮ ರಾಜ್ಯಕ್ಕೆ ಕೇವಲ 18 % ರಷ್ಟು ಮಾತ್ರ ಜಿಎಸ್ಟಿಯ ಪಾಲು ನೀಡುತ್ತಿರುವುದು ಸರಿಯಲ್ಲ ಎಂದು ನುಡಿದರು. ಮಾಜಿ ಶಾಸಕರಾದ ಕೆ.ಆರ್.ರಮೇಶ್ಕುಮಾರ್ರವರು ಗೆದ್ದು, ವಿಧಾನಸೌಧದಲ್ಲಿ ಇದ್ದರೆ ನಮ್ಮ ಶ್ರೀನಿವಾಸಪುರವು ಅನೇಕ ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ ಇಂದು ಶ್ರೀನಿವಾಸಪುರವು ಅಭಿವೃದ್ಧಿ ಕ್ಷೇತ್ರಕ್ಕೆ ಸಂಬAದಿಸಿದಂತೆ 25 ವರ್ಷಗಳಷ್ಟು ಹಿಂದೆ ಹೋಗಿದೆ ಎಂದರು. ಕೆ.ಆರ್.ರಮೇಶ್ಕುಮಾರ್ ರವರು ತಮ್ಮ ಸ್ವಂತ ಕಾರ್ಯಗಳನ್ನ ಬದಿಗಿಟ್ಟು ಅರಣ್ಯ ಇಲಾಖೆಯಿಂದ ಭೂಮಿಯನ್ನ ಕಳೆದುಕೊಂಡಿರುವವರ ಬಗ್ಗೆ ಹಾಗು ಮಾವು ಬೆಳೆಗಾರರ ಪರವಾಗಿ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿತ್ತಿದ್ದು ಅವರು ಬಡಜನರ ಹಾಗು ರೈತರ ಬಗ್ಗೆ ಕಾಳಜಿವಹಿಸಿ ಕೆಲಸಮಾಡುತ್ತಿರುವುದು ಶ್ಲಾಘನೀಯ ಎಂದರು.
ಕೆಪಿಸಿಸಿ ಸದಸ್ಯ ಸಂಜಯ್ರೆಡ್ಡಿ ಮಾತನಾಡಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ವಿರೋಧಿ ನೀತಿಗಳ ಬಗ್ಗೆ ಖಂಡಿಸಿದರು. ಜೆಡಿಎಸ್ ಪಕ್ಷದಿಂದ ಚುನಾವಣೆಗೆ ನಿಂತ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ರವರು ಇಂದು ಜಾತಿವಾದಿ ಬಿಜೆಪಿ ಜೊತೆ ಕೈಜೋಡಿಸಿರುವುದು ನಾಚಕೆಗೇಡು. ದಲಿತರ ಮೇಲೆ ಅಲ್ಪಸಂಖ್ಯಾತರ ಮೇಲೆ ಗೌರವವಿದ್ದರೆ ಕೂಡಲೇ ರಾಜಿನಾಮೆ ನೀಡಿ ಎಂದು ಸವಾಲು ಹಾಕಿದರು .
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ಅಫ್ರೀದ್ಪಾಷ, ಕಾರ್ಯದರ್ಶಿ ರಿಯಾಜ್ಗೌರವ್, ಜಿಲ್ಲಾ ಉಪಾಧ್ಯಕ್ಷ ತೌಫಿಕ್ಅಹ್ಮದ್ , ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ಅಶೋಕ್, ಅಡ್ಡಗಲ್ ಕ್ಷೇತ್ರದ ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ, ತಾಲೂಕು ಅಧ್ಯಕ್ಷ ಮನೋಹರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದರಂಕಪಲ್ಲಿ ಪ್ರಶಾಂತರೆಡ್ಡಿ, ಮುಖಂಡರಾದ ಆರ್.ಗಂಗಾದರ್, ಎಸ್ .ಎನ್.ವೆಂಕಟೇಶ್, ಸಿ.ಎಸ್.ವೆಂಕಟರಮಣಪ್ಪ, ಸಿ.ಎಸ್.ಲೋಕೇಶ್ಕುಮಾರ್, ನರೇಶ್, ಬಂದರ್ಲಪಲ್ಲಿ ಮುನೆಪ್ಪ, ಬಸನಪಲ್ಲಿ ಮಂಜುನಾಥ್, ಕೊತ್ತಪಲ್ಲಿ ಪ್ರಭಾಕರ್, ಭಾಸ್ಕರ್, ಶಿವಪುರ ಮುರಳಿ, ನರಸಿಂಹಮೂರ್ತಿ, ಆಂಜಿ, ಸಾಕಪಲ್ಲಿ ರಘು, ಕನ್ನಯ್ಯ, ವಿಶ್ವನಾಥರೆಡ್ಡಿ, ಅಡಿವಿಬೈರಗಾನಪಲ್ಲಿ ಶಂಕರ್, ಪೆದ್ದರೂ ನಾಗರಾಜರೆಡ್ಡಿ, ನಯಾಜ್ಪಾಷ, ಅಕ್ಬರ್ಷರೀಫ್ ಇದ್ದರು.

