HOLY ROSARY CHURCH, KUNDAPUR – 450 th JUBILEE SOUVENIR 2021

ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ : ಸಂಭ್ರಮದ ಸ್ವಾತಂತ್ರ್ಯೋತ್ಸವ

ಗಂಗೊಳ್ಳಿ :2023 ಆಗಸ್ಟ್ 15 ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿ ಆದಿತ್ಯ9th ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿ ಶಾಲಾ ಹಳೆ ವಿದ್ಯಾರ್ಥಿ ಅಮೀರ್ ಸಾಹೇಬರವರು ಧ್ವಜಾರೋಹಣಗೈದು, “ಸ್ವಾತಂತ್ರ್ಯ ಫಲಪ್ರದವಾಗಲು ಶಿಕ್ಷಣದ ಪಾತ್ರ ಮಹತ್ವವಾದದ್ದು, ಆ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತಿದೆ.” ಎಂದು ಹೇಳಿದರು. ಶಾಲಾ ಜಂಟಿ ಕಾರ್ಯದರ್ಶಿ ಭ. ಡಯಾನ ತ್ರಿವಳಿ ಸಂಸ್ಥೆಗಳ ಮುಖ್ಯೋಪಾದ್ಯಾಯಿನಿರಾ ದ ಭ. ಕ್ರೆಸೆನ್ಸ್, ಭ. ಡೋರಿನ್, ಭ. ಜ್ಯೋತಿಪ್ರಿಯ, ಶಿಕ್ಷಕ ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯದ ಕುರಿತಾದ ಭಾಷಣ, ಗಾಯನ, ನೃತ್ಯಗಳು ಏರ್ಪಟ್ಟವು. ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಕೃತಿಕಾ ಮತ್ತು ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿದರು. ಸುಚಿನ್ ವಂದಿಸಿದರು.

ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ತುಂಬಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ :ಲಕ್ಷ್ಮಿ ಹೆಬ್ಬಾಳ್ಕರ್

ಕುಂದಾಪುರ: ಹಳ್ಳಿಗಳ ಸುಧಾರಣೆಯು ಗ್ರಾಮ ಪಂಚಾಯತಿಗಳಿಂದ ಮಾತ್ರ ಸಾಧ್ಯ ಆದ್ದರಿಂದ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಶಕ್ತಿ ತುಂಬಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಅವರು ಕುಂದಾಪುರ ತಾಲೂಕಿನ ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಶಕ್ತಿ ತುಂಬಿದರೆ ಆ ಮೂಲಕ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಕುಂದಾಪುರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು.ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಕೆ ವಿದ್ಯಾ ಕುಮಾರಿ, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ,ತಹಶೀಲ್ದಾರ್ ಶೋಭಾ ಲಕ್ಷ್ಮಿ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ಭಾರತಿ, ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಿದ್ಕಲ್ ಕಟ್ಟೆ ಶಾಲಾ ಶಿಕ್ಷಕ ಸತೀಶ್ ಶೆಟ್ಟಿಗಾರ್ ಸ್ವಾಗತಿಸಿದರು.

ಬಜ್ಜೋಡಿಯ ಇನ್ಪ್ಯಾಂಟ್ ಮೇರಿ ಚರ್ಚ್ – 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು

ಬಜ್ಜೋಡಿ: ಇನ್‌ಫೆಂಟ್ ಮೇರಿ ಪ್ಯಾರಿಷ್‌ನ ಪ್ಯಾರಿಷಿಯನ್ನರು 15ನೇ ಆಗಸ್ಟ್ 2023 ರಂದು ಥ್ಯಾಂಕ್ಸ್‌ಗಿವಿಂಗ್ ಮಾಸ್‌ಗಾಗಿ ಬೆಳಿಗ್ಗೆ 6.30 ಕ್ಕೆ ಅವರ್ ಲೇಡಿ ಅವರ ಊಹೆಯ ಹಬ್ಬದ ಸಂದರ್ಭದಲ್ಲಿ ಮತ್ತು 77 ನೇ ಸ್ವಾತಂತ್ರ್ಯ ದಿನದಂದು ಒಟ್ಟಿಗೆ ಸೇರಿದರು. ನಂತರ ಧರ್ಮಕೇಂದ್ರದ
ಬಜ್ಜೋಡಿ ಘಟಕದ ಐಸಿವೈಎಂ ಸದಸ್ಯರು ಆಯೋಜಿಸಿದ್ದ ಧ್ವಜಾರೋಹಣ ಸಮಾರಂಭದಲ್ಲಿ ಚರ್ಚ್ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮವು ಬೆಳಿಗ್ಗೆ 7.30 ಕ್ಕೆ ಸಣ್ಣ ಪರಿಚಯದೊಂದಿಗೆ ಪ್ರಾರಂಭವಾಯಿತು ಮತ್ತು ನಂತರ ICYM ಸದಸ್ಯರಿಂದ ಪ್ರಾರ್ಥನಾ ಗೀತೆ ನಡೆಯಿತು. ಶ್ರೀ ಅನ್ನನ್ ಡಿಸೋಜಾ ಸ್ವಾಗತಿಸಿದರು. ಶ್ರೀ ಲಾರೆನ್ಸ್ ಡಿಸೋಜ, ವಾಮಂಜೂರು, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಮುಖ್ಯ ಅತಿಥಿಗಳು. ಪ್ಯಾರಿಷ್ ಅರ್ಚಕ ಫಾ. ಡೊಮಿನಿಕ್ ವಾಸ್, ಫಾ. ಸಿರಿಲ್ ಮೆನೆಜಸ್, ಫಾ. ರಾಯನ್ ಪಿಂಟೊ, ಪ.ಪಂ.ಉಪಾಧ್ಯಕ್ಷ ಶ್ರೀ ಪ್ರಕಾಶ್ ಸಲ್ಡಾನ್ಹಾ, ಪ.ಪಂ.ಕಾರ್ಯದರ್ಶಿ ಶ್ರೀಮತಿ ಎಲಿಜಬೆತ್ ಪಿರೇರಾ, 21 ಆಯೊಗಗಳ ಸಮನ್ವಯಾಧಿಕಾರಿ ಶ್ರೀ ರೊನಾಲ್ಡ್ ಗೊವೆಸ್, ಐಸಿವೈಎಂ ಕೊ-ಆರ್ಡಿನೇಟರ್ ಶ್ರೀ ಸಚಿನ್ ಮೆನೇಜಸ್ ಇತರರು ಉಪಸ್ಥಿತರಿದ್ದರು. ಶ್ರೀಮತಿ ರಿಶೆಲ್ ಸುವರ್ಣ ಅವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕೆಡೆಟ್ ಶ್ರೀಮತಿ ರಿಯಾನಾ ಪಿಂಟೋ ಅವರು ರಾಷ್ಟ್ರಧ್ವಜಾರೋಹಣಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು, ನಂತರ ರಾಷ್ಟ್ರಗೀತೆಯನ್ನು ಹಾಡಲಾಯಿತು ಮತ್ತು ರಾಷ್ಟ್ರಕ್ಕೆ ಗೌರವವನ್ನು ನೀಡಲಾಯಿತು.

ಮುಖ್ಯ ಅತಿಥಿಗಳು ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿ, ಭಾರತದಲ್ಲಿ ಬುದ್ದಿವಂತಿಕೆ ಇದೆ. ನಮ್ಮ ಬಹುತೇಕ ಯುವಕರು ವಿದೇಶಕ್ಕೆ ಹೋಗಿ ನೆಲೆಸುತ್ತಿದ್ದಾರೆ. ನಾವು ನಮ್ಮ ದೇಶವನ್ನು ಪ್ರೀತಿಸಬೇಕು ಮತ್ತು ನಮ್ಮ ದೇಶಕ್ಕಾಗಿ ನಾವು ಏನು ಮಾಡಬಹುದು ಎಂಬುದನ್ನು ನೋಡಬೇಕು. ಫಾದರ್ ಡೊಮಿನಿಕ್ ವಾಸ್ ಅವರು ತಮ್ಮ ಸಂದೇಶದಲ್ಲಿ ಭಾರತವು ಪ್ರಾಚೀನ ನಾಗರಿಕತೆಯಾಗಿದ್ದು, ನಮ್ಮ ಧರ್ಮ, ಸಂಸ್ಕೃತಿ ಮತ್ತು ಭಾಷೆಯಲ್ಲಿ ಮತಾಂಧತೆಯನ್ನು ಅಲ್ಲ ದೇಶಭಕ್ತಿಯನ್ನು ಅಭ್ಯಾಸ ಮಾಡಬೇಕು.

ICYM ಸದಸ್ಯರು ದೇಶಭಕ್ತಿ ಗೀತೆ ವಂದೇ ಮಾತರಂ ಗೀತೆ ಹಾಡಿದರು. ಶ್ರೀಮತಿ ರಿನ್ಸಿಯಾ ಡಿ’ಕುನ್ಹಾ ಧನ್ಯವಾದ ಪ್ರಸ್ತಾವಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ನೇಹಾ ಮೆಂಡೋನ್ಸಾ ನಿರೂಪಿಸಿದರು.

ಮಂಗಳೂರು ಮಿಲಾಗ್ರೆಸ್ ಚರ್ಚ್ – ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಥೊಲಿಕ್ ಸಭಾ ಮಿಲಾಗ್ರೆಸ್ ಘಟಕ ಹಾಗೂ ಸಮಾಜ ಕಲ್ಯಾಣ ಆಯೋಗದ ವತಿಯಿಂದ ಮಿಲಾಗ್ರಿಸ್ ಚರ್ಚ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಗಣ್ಯರನ್ನು ಬೆಂಗಾವಲಿಗೆ ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್ ಬ್ಯಾಂಡ್‌ನೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.

ಮುಖ್ಯ ಅತಿಥಿಗಳಾದ ಶ್ರೀ ಅಫೊನ್ಸಸ್ ಸಿಲ್ವೆಸ್ಟರ್ ಮಸ್ಕರೇನಸ್ ಅವರನ್ನು ಕೆಥೋಲಿಕ್ ಸಭಾದ ಅಧ್ಯಕ್ಷ ಶ್ರೀ ವಲೇರಿಯನ್ ಡಿಸೋಜ ಸ್ವಾಗತಿಸಿದರು, ಪ್ಯಾರಿಷ್ ಧರ್ಮಗುರು ಫಾ. ಬೊನವೆಂಚರ್ ನಜರೆತ್, ಫಾ. ಮೈಕಲ್ ಸಾಂತುಮಾಯರ್, ಫಾ. ರಾಬಿನ್ ಸಾಂತುಮಾಯರ್ ಮತ್ತು ಫಾ. ಉದಯ್ ಫೆರ್ನಾಂಡಿಸ್, ಪ್ಯಾರಿಷ್ ಕುರುಬ ಪರಿಷತ್ ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ಫೆರ್ನಾಂಡಿಸ್, ಎಲ್ಲಾ ಆಯೋಗಗಳ ಕನ್ವೇಯರ್ ಶ್ರೀಮತಿ ಲಿನೆಟ್ ಫೆರ್ನಾಂಡಿಸ್ ಮತ್ತು ಸಭೆ.

ಮುಖ್ಯ ಅತಿಥಿ ಶ್ರೀ ಅಲ್ಪೋನ್ಸಸ್ ಸಿಲ್ವೆಸ್ಟರ್ ಮಸ್ಕರೇನ್ಹಸ್ ಅವರನ್ನು ಕ್ಯಾಥೋಲಿಕ್ ಸಭಾದ ಕಾರ್ಯದರ್ಶಿ ಶ್ರೀಮತಿ ಫಿಲೋಮಿನಾ ಫೆರಾವೊ ಪರಿಚಯಿಸಿದರು. ಶ್ರೀ ಮಸ್ಕರೇನ್ಹಸ್ ಅವರು ಯುದ್ಧನೌಕೆಗಳ ಉತ್ಪಾದನೆ ಮತ್ತು ತಯಾರಿಕೆಯಲ್ಲಿ ರಕ್ಷಣಾ ಘಟಕದ ಸಚಿವರ ಅಡಿಯಲ್ಲಿ 34 ವರ್ಷಗಳ ಕಾಲ ಸೇವೆಯಲ್ಲಿದ್ದರು. ಅವರು ಈಗ ಗ್ರಾಮೀಣ ಮಕ್ಕಳ ಶಿಕ್ಷಣದಲ್ಲಿ ಸಾಕಷ್ಟು ದತ್ತಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಶ್ರೀ ಸಿಲ್ವೆಸ್ಟರ್ ಮಸ್ಕರೇನ್ಹಸ್ ಅವರು ತಮ್ಮ ಭಾಷಣದಲ್ಲಿ ದೇಶದ ಸಮಸ್ಯೆಗಳ ಬಗ್ಗೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದರು ಮತ್ತು ನಾವು ನಮ್ಮ ಕ್ರಿಶ್ಚಿಯನ್ ಮೌಲ್ಯಗಳನ್ನು ಹೇಗೆ ಎತ್ತಿಹಿಡಿಯಬೇಕು ಮತ್ತು ನಮ್ಮ ಎಲ್ಲ ಸಹವರ್ತಿಗಳೊಂದಿಗೆ ಐಕ್ಯತೆಯಿಂದ ಬದುಕಬೇಕು.

ಚರ್ಚ್ ಗಾಯಕರು ಸುಮಧುರ ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದರು. ಧ್ವಜಾರೋಹಣ ಸಮಾರಂಭದಲ್ಲಿ ಎನ್‌ಸಿಸಿ ಕೆಡೆಟ್ ಓರಾನ್ ಫುರ್ಟಾಡೊ ಸಹಕರಿಸಿದರು. ಸಮಾಜ ಕಲ್ಯಾಣ ಆಯೋಗದ ಸದಸ್ಯೆ ಅನಿತಾ ಫೆರ್ನಾಂಡಿಸ್ ವಂದಿಸಿದರು. ವಾರ್ಡ್ ಗುರ್ಕರು, ಪಾಲಿಕೆ ಸದಸ್ಯರು ಹಾಗೂ ಸುಮಾರು 500 ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು. ನೆರೆದಿದ್ದ ಜನರು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.

ಕಾರ್ಯಕ್ರಮವನ್ನು ಶ್ರೀಮತಿ ಒಫಿಲಿಯಾ ಮೊರಾಸ್ ಮತ್ತು ಶ್ರೀ ರೊನಾಲ್ಡ್ ಡಿಸೋಜಾ ಅವರು ಸಂಯೋಜಿಸಿದರು. ಶ್ರೀಮತಿ ಸುನೀತಾ ಮಚಾದೊ ಕಾರ್ಯಕ್ರಮ ನಿರೂಪಿಸಿದರು.

ಚರ್ಚ್ ವತಿಯಿಂದ ಸಿಹಿ ಹಂಚಲಾಯಿತು. ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್ ಬ್ಯಾಂಡ್‌ನ ಲಯಬದ್ಧ ತಾಳಗಳ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಕುಂದಾಪುರ ಚರ್ಚ್ ಮೈದಾನದಲ್ಲಿ  77ನೇ ಸ್ವಾತಂತ್ರ್ಯ ದಿನಾಚರಣೆ-ಪ್ರತಿಭಾವಂತರಿಗೆ ಪುರಸ್ಕಾರ

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ,  77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯ ಕೇಡೆಟಗಳಿಂದ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದು “ನಮ್ಮ ಹಿರಿಯರು ಮಾಡಿದ ತ್ಯಾಗ ಸಾಹಸಗಳ ಬಲಿದಾನದಿಂದ ಇವತ್ತು ನಾವು ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ. ಅವರ ತ್ಯಾಗ ಬಲಿದಾನಕ್ಕೆ ನಾವು ಗೌರವ ನೀಡಬೇಕು’ ಎಂದು ಅವರು ಶುಭ ಕೋರಿದರು. ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಈ ಸಂದರ್ಭದಲ್ಲಿ ಸಾರೆ ದೇಶಸೆ ಅಚ್ಚಾ ಹಮಾರ ದೇಶ್ ಹೇ ಎಂದು ಯಾವತ್ತೂ ನಾವು ನಮ್ಮ ದೇಶವನ್ನು ಪ್ರೀತಿಸಬೇಕು’ ಎಂದು ಕರೆ ಕೊಟ್ಟರು. ಶುಭ ಕೋರಿದರು. ಈ ಮೊದಲು ಇಂದು ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವಾದುದರಿಂದ ಕ್ರೈಸ್ತರಿಗೆ ಪವಿತ್ರ ದಿನವಾದರಿಂದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಬಲಿದಾನ ಅರ್ಪಿಸಿ ನಾ ’ನಮಗೆ ಇಂದು ದ್ವೀ ಸಂಭ್ರಮ ಒಂದು ನಮ್ಮ ದೇಶದ ಮಹಾಹಬ್ಬ ಸ್ವಾತಂತ್ರ್ಯ ದಿನ, ದೇಶಕ್ಕೆ ನಾವು ಗೌರವ ಕೊಡುವುದು ನಮ್ಮ ಮಹಾ ಕರ್ತವ್ಯವಾಗಿದೆ. ನಮ್ಮ ದೇಶ ನನಗೆ ಎನು ಮಾಡಿದೆ ಎಂದು ಕೇಳುವ ಬದಲು ನಾವು ದೇಶಕ್ಕಾಗಿ ಎನು ಮಾಡಿದ್ದೆವೆಂದು ಮನಗಂಡು ದೇಶಕ್ಕೆ ಒಳ್ಳೆದು ಮಾಡೋಣ ಅನ್ನುತ್ತಾ ಇದೇ  ಪುಣ್ಯ ದಿನದಂದು ನಮ್ಮ ಮಾಹಾತಾಯಿ ಮೇರಿ ಮಾತೆಗೆ ಜೀವಂತವಾಗಿ ದೇವರು ಸ್ವರ್ಗಕ್ಕೆ ಕರೆಸಿಕೊಂಡ ಹಬ್ಬ, ಮೇರಿ ಮಾತೆ ಯೇಸು ಕ್ರಿಸ್ತರ ಆಪೊಸ್ತಲರ ಮಧ್ಯೆ ಅವಳೂ ಒಬ್ಬಳು, ಯೇಸು ಕ್ರಿಸ್ತರ ಎಲ್ಲಾ ಯೋಜನೆಯಲ್ಲಿ ಅವರು ಪಾತ್ರ ವಹಿಸಿದ್ದಳು” ಎಂದು ತಿಳಿಸಿದರು.

    ಸ್ವಾತಂತ್ರ್ಯ ಆಚರಣೆಯ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಕಥೊಲಿಕ್ ಸಭಾ ಎರ್ಪಡಿಸಿದ ಭಾಷಣ ಸ್ಪರ್ಧೆಯ ವಿಜೇತರನ್ನು ಪುರಸ್ಕರಿಸಲಾಯಿತು.

    ಈ ಸಂದರ್ಭದಲ್ಲಿ ಕಥೊಲಿಕ್ ಸಭಾ  ಕುಂದಾಪುರ ವಲಯದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಘಟಕದ ನಿಕಟಪೂರ್ವ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಕಥೊಲಿಕ್ ಸಭಾದ ಪದಾಧಿಕಾರಿಗಳಾದ ಜೂಲಿಯೆಟ್ ಪಾಯ್ಸ್, ವಿನೋದ್ ಕ್ರಾಸ್ಟೊ,  ಪಾಲನ ಮಂಡಳಿ ಉಪಧ್ಯಾಕ್ಷ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಜೋನ್ ಮಾಸ್ಟರ್, ಇನ್ನಿತರರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು,  ಕಾರ್ಯದರ್ಶಿ ವಾಲ್ಟರ್ ಡಿಸೋಜಾ ವಂದಿಸಿದರು,  ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ನಿರೂಪಿಸಿದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಬಿಜೆಪಿ ಯ ಹೊಸ ಶೈಕ್ಷಣಿಕ ನೀತಿ (NEP) ರದ್ದುಗೊಳಿಸಲಾಗುವುದು ; ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಶೈಕ್ಷಣಿಕ ನೀತಿ ( NEP) ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಸಮಿತಿಯ ಸದಸ್ಯರ ಸಭೆಯನ್ನು ಉದ್ಘಾಟಿಸಿ, ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ NEP ಮುಂದಿನ ಶೈಕ್ಷಣಿಕ ವರ್ಷದಿಂದ ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದರು.

ಅಗತ್ಯವಾದ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಂಡು NEP ರದ್ದುಗೊಳಿಸಬೇಕಾಗಿದೆ. ಅದಕ್ಕೆ ಈ ವರ್ಷ ಸಮಯ ಇರಲಿಲ್ಲ ಚುನಾವಣೆ ಫಲಿತಾಂಶದ ಬಂದು ಸರಕಾರ ರಚನೆ ಆಗುವ ವೇಳೆಗೆ ಶೈಕ್ಷಣಿಕ ವರ್ಷ ಆರಂಭವಾಗಿತ್ತು. ಮಧ್ಯದಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣದಿಂದ ಈ ವರ್ಷ ಹಾಗೆ ಮುಂದುವರಿಸಲಾಗಿದೆ ’ ಎಂದರು.

ಈ ಹೊಸ ನೀತಿ NEP ಗೆ ಏಕಕಾಲದಲ್ಲಿ ವಿದ್ಯಾರ್ಥಿಗಳಿಗೆ, ಪೋಷಕರು, ಮತ್ತು ಉಪನ್ಯಾಸಕರು ಹಾಗೂ ಶಿಕ್ಷಕರಿಂದ ವಿರೋಧವಿದೆ. ಬಿಜೆಪಿಯು ದೇಶದಲ್ಲಿ ಎಲ್ಲಾ ಕಡೆಗಳಲ್ಲಿ NEP ಜಾರಿಗೊಳಿಸದೆ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಯಗೊಳಿಸಿ, ನಾಡಿನ ವಿದ್ಯಾರ್ಥಿ ಸಮೂಹದ ಹಿತಾಸಕ್ತಿಯನ್ನು ಬಲಿ ಕೊಟ್ಟಿದೆ ಎಂದರು.

ಮಾನವ ಕಳ್ಳಸಾಗಣೆಯ ದುಷ್ಪರಿಣಾಮಗಳ ಕುರಿತು ಸೆಂಟ್ ಆ್ಯಗ್ನೆಸ್ ಪಿಯು ಕಾಲೇಜಿನಲ್ಲಿ ಉಪನ್ಯಾಸ

ಮಂಗಳೂರು: ಮಾನವ ಕಳ್ಳಸಾಗಣೆಯು ಒಂದು ಗಂಭೀರ ಸಮಸ್ಯೆಯಾಗಿದ್ದು, ಅದು ಸಮಾಜದ ಮೂಲಭೂತ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ‘ಮಾನವೀಯ ಕಳ್ಳಸಾಗಾಣಿಕೆ’ ಎಂಬ ಪದವನ್ನು ಜನರ ನೇಮಕಾತಿ, ಸಾರಿಗೆ, ವರ್ಗಾವಣೆ, ಆಶ್ರಯ, ವಂಚನೆ ಅಥವಾ ವಂಚನೆ ಮೂಲಕ ಸ್ವೀಕರಿಸುವ ಅಥವಾ ಸ್ವೀಕೃತಿ ಎಂದು ವ್ಯಾಖ್ಯಾನಿಸಬಹುದು. ಸೇಂಟ್ ಆಗ್ನೆಸ್ ಪಿಯು ಕಾಲೇಜು, ಆಗಸ್ಟ್ 11,2023 ರಂದು ಕಾಲೇಜು ಸಭಾಂಗಣದಲ್ಲಿ ಈ ವಿಷಯದ ಬಗ್ಗೆ ಒಂದು ಉಪನ್ಯಾಸ ಆಯೋಜಿಸಲಾಗಿತ್ತು.
ಭಾಷಣಕಾರರಾದ ಹ್ಯಾರಲ್ಡ್ ಡಿಸೋಜಾ ಅವರು ತಮ್ಮ ಜೀವನದ ಪಯಣದ ಬಗ್ಗೆ ಮತ್ತು ಅವರು ಸಾಲದ ದಾಸತ್ವದಿಂದ ಹೇಗೆ ಬಲಿಪಶುವಾಗಿ ಪರಿಣಮಿಸಿದರು ಮತ್ತು ಅವರು ಮಾನವ ಕಳ್ಳಸಾಗಣೆದಾರರ ಕೈಯಲ್ಲಿ ಹೇಗೆ ಶೋಷಿಸಲ್ಪಟ್ಟಿದ್ದಾರೆ ಎಂಬುದರ ಬಗ್ಗೆ ಮಾತನಾಡಿದರು. ಅವನು ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ವಿವರವಾಗಿ ವರ್ಣಿಸಿ, ಸ್ವಾತಂತ್ರ್ಯವನ್ನು ಕಳೆದುಕೊಂಡಾಗ ಮತ್ತು ತನ್ನ ಕುಟುಂಬವನ್ನು ಸುರಕ್ಷಿತವಾಗಿಡಲು ಹೆಣಗಾಡಿದಾಗ ತನ್ನ ಮಹಾ ಹೋರಾಟದ ಬಗ್ಗೆ ಸುದೀರ್ಘವಾಗಿ ಮಾತಾಡಿದರು. ಹ್ಯಾರಲ್ಡ್ ಅವರು ‘ಯೆಸ್ ಓಪನ್ ಇಂಟರ್ ನ್ಯಾಷನಲ್’ನ ಸಹ-ಸಂಸ್ಥಾಪಕವಾಗಿದ್ದು, ಇದು ಕಳ್ಳಸಾಗಣೆಯ ಬಲಿಪಶುಗಳಾಗಲು ತಡೆಗಟ್ಟುವಿಕೆಗೆ ಪ್ರಯತ್ನ ಪಡುತ್ತದೆ. ಹ್ಯಾರಲ್ಡ್ ಅವರು ಎನ್ಪ್ರಾಥಮಿಕ ವಿದ್ಯಾರ್ಥಿಗಳೊಂದಿಗೆ ಒಂದು ಆಸಕ್ತಿದಾಯಕ ವಿಚಾರ ಗೋಷ್ಟಿ ನಡೆಸಿದರು ಮತ್ತು ಯುವಕರನ್ನು ಕ್ರಿಯೆಗೈಯುವಂತೆ ಸ್ಪಷ್ಟ ಕರೆ ನೀಡಿ, ಜಾಗರೂಕರಾಗಿರುವಂತೆ ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಶ್ರೀ ಜಾನೆಟ್ ಸಿಕ್ವೇರಾ, ಶ್ರೀ ಅಲ್ವಿನ್ ಡಿಸೋಜಾ, ಶ್ರೀ ನೆವಿಲ್ಲೆ ಪಿರೇರಾ, ಶಿಕ್ಷಕಿ ಸಿಸ್ಟರ್ ಮಾರಿಯಾ ಗ್ಲೋರಿಯ, ಮುಖ್ಯಶಿಕ್ಷಕಿ, ಸಂತ ಆಗ್ನೆಸ್ ಹೈಸ್ಕೂಲ್, ಬೆಂದೂರು ಚರ್ಚಿನ ಕುಟುಂಬ ಆಯೋಗದ ಮೂವರು ಸದಸ್ಯರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಿಸ್ಟರ್ ನೊರೀನ್ ಡಿಸೋಜ ಪ್ರಾಂಶುಪಾಲರು, ಸಂಪನ್ಮೂಲ ವ್ಯಕ್ತಿಗೆ ಹೂಗುಚ್ಛ ನೀಡಿ ಗೌರವಿಸಿದರು. ಶ್ರೀಮತಿ ಪ್ರೇಮಾ ಪೆರೇರಾ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಶ್ರೀಮತಿ ಜೋನ್ನೆ ಶೀತಲ್ ವಂದಿಸಿದರು.

ಕಥೊಲಿಕ್ ಸ್ತ್ರೀ ಸಂಘಟನೇಯಿಂದ ಫಾ|ಸ್ಟ್ಯಾನಿ ತಾವ್ರೊ ಇವರ ಹುಟ್ಟು ಹಬ್ಬ ಆಚರಣೆ-ಚಾರ್ಟೆಟ್ ಅಕೌಂಟೆಡ್ ವಿನಾರ್ಡ್ ರವರಿಗೆ ಸನ್ಮಾನ


ಕುಂದಾಪುರ, ಆ.13: ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರ 75 ನೇ ಹುಟ್ಟು ಹಬ್ಬ ಸನಿಹದಲ್ಲಿರುವಾಗ ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಮತ್ತು ಸ್ತ್ರೀ ಸ್ವಸಹಾಯ ಸಂಘಗಳಿಂದ ಚರ್ಚ್ ಸಭಾಭವನದಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಲಾಯಿತು.
ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನಾ ಫಾ||ಸ್ಟ್ಯಾನಿ ತಾವ್ರೊ ಅವರಿಗೆ ಶುಭ ಕೋರುತ್ತಾ ‘ನಮಗೆ ಧರ್ಮಗುರುಗಳಿಗೆ ಯಾಜಕೀ ದೀಕ್ಷೆ ಪಡೆದದ್ದು ಅದು ಶಾಸ್ವತವಾಗಿರುತ್ತೆ, ಆದರೆ ಚರ್ಚಗಳಲ್ಲಿ ಅಧಿಕ್ರತ ಸೇವೆ ಮಾಡಲಿಕ್ಕೆ ಆಗುವುದಿಲ್ಲ. ವಯಸ್ಸಿನ ದೆಸೆಯಿಂದ ನಿವ್ರತ್ತಿ ದೊರಕುತ್ತದೆ. ಆದರೆ ನಮ್ಮ ಧರ್ಮಗುರುಗಳು ವಯಸ್ಸಾದರೂ, ಅವರಲ್ಲಿ ಯುವಕರಂತೆ ಉತ್ಸಾಹ ಇದೆ, ಎಷ್ಟೊಂದು ಚರ್ಚಗಳಲ್ಲಿ ಧರ್ಮಗುರುಗಳಾಗಿ, ಹಲವಾರು ವಲಯ ಪ್ರಧಾನರಾಗಿ, ಧರ್ಮಪ್ರಾಂತ್ಯದ ಸಲಹೆಗಾರರಾಗಿ ಸೇವೆ ನೀಡಿದ ಅವರಲ್ಲಿ ಅನುಭವದ ಭಂಡಾರವೇ ಇದೆ” ಎಂದು ತಿಳಿಸಿದರು.

ಇತ್ತೀಚೆಗೆ ಚಾರ್ಟೆಟ್ ಅಕೌಂಟೆಡ್ ಪದವಿಯನ್ನು ಗಳಿಸಿದ ಸ್ತ್ರೀ ಸಂಘಟನೇಯ ಮಾಜಿ ಅಧ್ಯಕ್ಷೆ ವಿನಯಾ ಡಿಕೋಸ್ತಾ, ಕುಂದಾಪುರ ಕಥೊಲಿಕ್ ಸಭೆಯ ಮಾಜಿ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಇವರ ಪುತ್ರ ಪ್ರತಿಭಾನ್ವಿತ ವಿನಾರ್ಡ್ ಡಿಕೋಸ್ತಾ ಇವರಿಗೆ ಸ್ತ್ರೀ ಸಂಘಟನೇಯ ಪರವಾಗಿ ಫಾ|ಸ್ಟ್ಯಾನಿ, ಫಾ|ಅಶ್ವಿನ್ ಮತ್ತು ಇತರರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ವಿನಾರ್ಡ್ “ನನ್ನ ಕಲಿಕೆಯ ಸಂದರ್ಭದಲ್ಲಿ ನಿಮ್ಮಲ್ಲಿ ಹಲವರು ಪೆÇ್ರೀತ್ಸಾಹ ಉತೇಜನ ನೀಡಿದ್ದಿರಿ, ಇವತ್ತು ನನ್ನ ಗುರಿ ಸಾಧಿಸಿದಕ್ಕೆ ನನಗೆ ಸನ್ಮಾನ ಮಾಡಿದ್ದಕ್ಕೆ ಎಲ್ಲರಿಗೂ ಕ್ರತÅಜ್ಞತೆ ಸಲ್ಲಿಸಿದರು.
ಹುಟ್ಟು ಹಬ್ಬ ಆಚರಿಸಿ ಶುಭ ಹಾರೈಸಿದಕ್ಕೆ ಫಾ|ಸ್ಟ್ಯಾನಿ ತಾವ್ರೊ ‘ನಿಮ್ಮೆಲ್ಲರ ಪ್ರೀತಿ ನನಗೆ ಅತೀವ ಸಂತೋಷ ತಂದಿದೆ, ಪ್ರಾಯ ಆಗಿದೆಯೆಂದು ವ್ಯಥೆ ಸಲ್ಲದು, ನಾವು ಪ್ರಾಯವನ್ನು ಚಿಂತಿಸುವುದಲ್ಲ, ನಮಗೆ ಶಕ್ತಿ ಇರುವವರೆಗೆ ನಾವು ಕಾರ್ಯ ಪ್ರವತ್ತಿಯಲ್ಲಿ ತೊಡಗಿಸಿಕೊಳ್ಳಬೇಕು. ಸ್ತ್ರೀ ಸಂಘಟನೆ ನಮ್ಮ ಚರ್ಚಿಗಾಗಿ ಉತ್ತಮ ಸೇವೆ ನೀಡುತ್ತಾ ಇದೆ’ ಎಂದು ಶ್ಲಾಘಿಸಿದರು. ಸ್ತ್ರೀ ಸಂಘಟನೇಯ ಸಚೇತಕಿ ಸಿಸ್ಟರ್ ಆಶಾ ,
ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಉಪಸ್ತಿತರಿದ್ದರು.
ಸ್ತ್ರೀ ಸಂಘಟನೇಯ ಅಧ್ಯಕ್ಷೆ ಜೂಲಿಯೆಟ್ ಪಾಯ್ಸ್ ಸ್ವಾಗತಿಸಿದರು. ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಶುಭ ಹಾರೈಸಿ ಧನ್ಯವಾದಗಳನ್ನು ಸಮರ್ಪಿಸಿದರು. ಶಾಂತಿರಾಣಿ ಬರೆಟ್ಟೊ ನಿರೂಪಿಸಿದರು.

ಜನರು ಜನಪರವಲ್ಲದ ಸರ್ಕಾರದ ವಿರುದ್ಧ ದನಿಯೆತ್ತಬೇಕು : ಪಿ.ಆರ್.ಸೂರ್ಯನಾರಾಯಣ

ಶ್ರೀನಿವಾಸಪುರ: ಜನರು ಜನಪರವಲ್ಲದ ಸರ್ಕಾರದ ವಿರುದ್ಧ ದನಿಯೆತ್ತಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ಪ್ರಚಾರಾಂದೊನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಶ್ರೀಮಂತರ ಪರವಾಗಿದೆ. ರೈತರು, ಕಾರ್ಮಿಕರು ಹಾಗೂ ಕೂಲಿಕಾರರ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿದರು.
ದೇಶದ ಸ್ವಾಂತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಪ್ರಜೆಗಳು ಎಚ್ಚೆತ್ತುಕೊಳ್ಳಬೇಕು. ದೇಶ ಕ್ಷೇಮಕ್ಕಾಗಿ ಒಗ್ಗೂಡಬೇಕು. ಸಂವಿಧಾನ ರಕ್ಷಣೆಯಿಂದ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರ ಕೆಲಸಕ್ಕೆ ಭದ್ರತೆ ನೀಡಿ, ಅವರ ಮೂಲಭೂತ ಹಕ್ಕುಗಳ ರಕ್ಷಣೆ ಮಾಡಬೇಕು. ಪಿಂಚಣಿ ಸೌಲಭ್ಯ ಕಲ್ಪಿಸಲು ಕಾರ್ಮಿಕ ನೀತಿಯನ್ನು ಗಟ್ಟಿಗೊಳಿಸಬೇಕು. ಆದರೆ ಇರುವ 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ತಂದು, ಇಡೀ ಕಾರ್ಮಿಕ ವರ್ಗವನ್ನು ಕಾನೂನುಬದ್ಧ ಗುಲಾಮರನ್ನಾಗಿಸಲು ಹೊರಟಿದೆ ಎಂದು ಹೇಳಿದರು.
ಆಹಾರ, ಆರೋಗ್ಯ, ಶಿಕ್ಷಣದ ಭಾಗವಾಗಿ ಬಂದಿರುವ ಅಂಗನವಾಡಿ, ಬಿಸಿಯೂಟ, ಆಶಾ, ಪೋಷಣ್ ಅಭಿಯಾನ ಹಾಗೂ ಸಂಜೀವಿನಿ ಯೋಜನೆಯಡಿ ದೇಶದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಮಂದಿ ದುಡಿಯುತ್ತಿದ್ದಾರೆ. ಆದರೆ ಅವರು ಶಾಸನಾತ್ಮಕವಾಗಿ ಸೌಲಭ್ಯ ವಂಚಿತರಾಗಿದ್ದಾರೆ ಎಂದು ಹೇಳಿದರು.