ಶ್ರೀನಿವಾಸಪುರ : ಸಾಧಕರ ಪುಸ್ತಕಕ್ಕೆ ಶಿಕ್ಷಕಿ ಮಮತ ರಾಣಿ ಕೆ ಆಯ್ಕೆ. ನಾಡು ನುಡಿಗಾಗಿ ಕನ್ನಡ ಕಟ್ಟುವ ಕೆಲಸ ಸಾಹಿತ್ಯದ ಮೂಲಕ ವಿಶೇಷ ಸಾಧನೆ ಮಾಡುತ್ತಿರುವ ಸಾಧಕರ ಪುಸ್ತಕಕ್ಕೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸಹ ಶಿಕ್ಷಕರೂ,ಕವಯಿತ್ರಿಯಾದ ಶ್ರೀಮತಿ ಮಮತ ರಾಣಿ ಕೆ .ಶ್ರೀ ಮುತ್ತು ವಡ್ಡರ ಸಂಪಾದಕೀಯ ಸಾಧಕರ ಸಾಧನೆಯ ಪರಿಚಯದ ಎಲೆಮರೆ ಕಾಯಿ ಪುಸ್ತಕಕ್ಕೆ ಆಯ್ಕೆಗೊಂಡಿದ್ಧು , ಲಯನ್ಸ ಕ್ಲಬ್ ಆಪ್ ಮೈಸೂರು ಮಿಲೇನಿಯಂ ಮತ್ತು ಕನ್ನಡ ನುಡಿ ಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ,ನಿಸರ್ಗ […]
ಶ್ರೀನಿವಾಸಪುರ, ಜೂ.9: ಮುಂಗಾರು ಮಳೆ ಆರ್ಭಟಕ್ಕೆ ನಾಪತ್ತೆ ಆಗಿರುವ ಪುರಸಭೆ ಅಧಿಕಾರಿಗಳನ್ನು ಹುಡುಕಿಕೊಟ್ಟು ಒತ್ತುವರಿ ಆಗಿರುವ ರಾಜಕಾಲುವೆ ಚರಂಡಿ ತೆರೆವುಗೊಳಿಸಿ ಜನಸಾಮಾನ್ಯರ ಬದುಕು ಆರೋಗ್ಯವನ್ನು ರಕ್ಷಣೆ ಮಾಡಬೇಕೆಂದು ಜೂ.13 ರ ಗುರುವಾರ ಕಸದ ಸಮೇತ ಪುರಸಬೆ ಮುತ್ತಿಗೆ ಹಾಕಲು ತಾಲ್ಲೂಕು ಕಚೇರಿ ಅವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.ಪ್ರತಿ ವರ್ಷ ಮುಂಗಾರು ಮಳೆ ಆರ್ಭಟಕ್ಕೆ ನಗರಾದ್ಯಂತ ಜನ ಸಾಮಾನ್ಯರ ಬದುಕು ಆರೋಗ್ಯ ಹದಗೆಟ್ಟಾಗ ತಾಲ್ಲೂಕಾಡಳಿತ ಹಾಗೂ ಪುರಸಭೆ ಅಧಿಕಾರಿಗಳಿಗೆ ಅವ್ಯವಸ್ಥೆಯ ಸಮಸ್ಯೆ ನೆನಪಿಗೆ ಬರುತ್ತದೆ. ನೆಪಮಾತ್ರಕ್ಕೆ […]
ತೋಟಗಾರಿಕೆ ಮಹಾವಿದ್ಯಾಲಯ,ಕೋಲಾರಆವರಣದಲ್ಲಿ ದಿನಾಂಕ 25.05.2024 ರಿಂದ04.06.2024 ರವರೆಗೆ 15ದಿನಗಳ ಇಂಟರಶಿಪ್ ಕಾರ್ಯಾಕ್ರಮವನ್ನು ಮಹಿಳಾ ಸರ್ಕಾರಿ ಕಾಲೇಜ್ ಕೋಲಾರದಅಂತಿಮ ವರ್ಷದ 20 ವಿದ್ಯಾರ್ಥಿನಿಯರಿಗೆ ಕೈಗೊಳ್ಳಲಾಯಿತು. ದಿನಾಂಕ 20.05.2024ರಂದುತೋಟಗಾರಿಕೆ ಮಹಾವಿದ್ಯಾಲಯದ ಡೀನ್ರವರಾದ ಡಾ.ವೆಂಕಟೇಶಲುರವರು ಇಂಟರಶಿಪ್ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿದರು. ಈ ಕಾರ್ಯಕ್ರಮಕ್ಕೆ ಶ್ರೀಮತಿ. ಪದ್ಮಾ, ಮುಖ್ಯಸ್ಥರು ಸಸ್ಯಶಾಸ್ರ್ತ ವಿಭಾಗ, ಶ್ರೀಮತಿ.ಶೋಭಾ ಹಾಗೂ ಶ್ರೀಮತಿ.ಲಾವಣ್ಯ ಪ್ರಾಧ್ಯಾಪಕರು, ಮಹಿಳಾ ಸರ್ಕಾರಿಕಾಲೇಜ್,ಕೋಲಾರರವರು ಅತಿಥಿಗಳಾಗಿ ಭಾಗವಹಿಸಿದ್ದರು.ಇಂಟರ್ಶಿಪ್ ತರಬೇತಿಯಲ್ಲಿ ತೋ.ಮ.ವಿ,ಕೋಲಾರದ ವಿವಿಧ ಪ್ರಾಧ್ಯಾಪಕರುತೋಟಗಾರಿಕೆ ವಿಜ್ಞಾನಕ್ಕೆಸಂಬಂಧಿಸಿದ ವಿಷಯಗಳ ಕುರಿತು ಭೋದನೆಹಾಗೂ ಪ್ರಾಯೋಗಿಕ ತರಬೇತಿಗಳನ್ನು ಕೈಗೊಂಡರು. ಮುಖ್ಯವಾಗಿ ವಿವಿಧತೋಟಗಾರಿಕೆ ಬೆಳೆಗಳ […]
ಕೋಲಾರ,ಜೂ.07: ಗ್ರಾಮ ಪಂಚಾಯತಿ ಅಧಿಕಾರಿಗಳು ಪ್ರಾಮಾಣಿಕ ಸೇವೆಗೆ ಆದ್ಯತೆ ನೀಡುವ ಮೂಲಕ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡಿದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಥ್ ಅಭಿಪ್ರಾಯಪಟ್ಟರು.ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿ, ಅಸರ, ಗ್ರಾಮವಿಕಾಸ ಯೋಜನೆಯಡಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಭಿವೃದ್ದಿ ಅಧಿಕಾರಿಗಳಿಗೆ ಹವಾಮಾನ ಬದಲಾವಣೆ ಹಾಗೂ ಹವಾಮಾನ ಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರದ ಕುರಿತು ಹಮ್ಮಿಕೊಂಡಿದ್ದ ಸಮಾಲೋಚನಾ […]
ಕೋಲಾರ,ಜೂ.07: ನೀರಾವರಿ ಯೋಜನೆ, ಯುಕವರಿಗೆ ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಮೊದಲ ಆಧ್ಯತೆಯನ್ನು ನೀಡುವುದಾಗಿ ಸಂಸದ ಮಲ್ಲೇಶ್ಬಾಬು ಹೇಳಿದರು.ಮೊದಲ ಬಾರಿಗೆ ಸಂಸತ್ ಪ್ರವೇಶಿಸಿ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೋಲಾರ ಜನತೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ 5 ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದರೆ ಸೂಕ್ತ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ, ಅವರ ಜೊತೆ ಇದ್ದು ಹೇಗೆ ಕೆಲಸ […]
ಶ್ರೀನಿವಾಸಪುರ : ಗುರುವಾರ ಮದ್ಯಾಹ್ನ ಒಂದುವರೆ ಗಂಟೆಗೂ ಹೆಚ್ಚು ಸಮಯ ಬಿದ್ದ ಮಳೆ ಯಿಂದಾಗಿ ಪಟ್ಟಣದ ಚರಂಡಿ ನೀರು, ಹಾಗು ಮಳೆಯ ನೀರು ತಗ್ಗು ಪ್ರದೇಶಗಳ ರಸ್ತೆಗಳು ಮನೆಗಳು ಕೊಳಚೆ ನೀರಿನಿಂದ ತುಂಬಿತಳುಕುತ್ತಿತ್ತು. ಈ ವಸ್ತು ಸ್ಥತಿಯನ್ನು ಕಂಡ ಸಾರ್ವಜನಿಕರು ಜನಪ್ರತಿನಿದಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದ ಪ್ರಸಂಗಗಳು ನಡೆಯುತ್ತಿತ್ತು.ಅಲ್ಲದೆ ಮಳೆ ನೀರು ಹಾಗೂ ಚರಂಡಿ ನೀರು ರಸ್ತೆ ಉದ್ದಗಲಕ್ಕೂ ಹರಿಯುವ ನೀರು ದ್ವಿಚಕ್ರ ವಾಹನ ಸವಾರರಿಗೂ, ಓಡಾಡುವ ಸಾರ್ವಜನಿಕರಿಗೂ ರಸ್ತೆ ಯಾವುದೂ, ಗುಂಡಿ ಯಾವುದು, ಚರಂಡಿ […]
ಶ್ರೀನಿವಾಸಪುರ : ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಗೋಪಾಲ್ನಾಯಕ್ ಮಾತನಾಡಿ ಪರಿಶುದ್ದ ಗಾಳಿ ಮಾನವನ ಆರೋಗ್ಯಕ್ಕೆ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ ಎಂದು ಹೇಳುತ್ತಾ, ಸಸಿಗಳನ್ನು ರಕ್ಷಿಸಿಸುವುದರಿಂದ ಪರಿಸರ ರಕ್ಷಣೆಯಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದರು. ಇಂದು ಪರಿಸರಮಾಲಿನ್ಯದಿಂದ ಅನೇಕ ರೋಗರುಜಿನುಗಳು ಹರಡುತ್ತಿದೆ ಎಂದರು . ಪರಿಸರ ಮಾಲಿನ್ಯದಿಂದ ಸಂಭವಿಸುವ ಅನೇಕ ಕಾಯಿಲೆಗಳನ್ನು ತಪ್ಪಿಸಲು ಸೂಕ್ತ ರೀತಿಯಲ್ಲಿ ಪರಿಸರ ನಿರ್ವಹಣೆ ಮಾಡಬೇಕಿದೆ. ಆದ್ದರಿಂದ ಉತ್ತಮ […]
ಕೋಲಾರ: ಜುಲೈ 1ರ ಪತ್ರಿಕಾ ದಿನಾಚರಣೆ ಅಂಗವಾಗಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾರ್ಯನಿರತ ಪತ್ರಕರ್ತರು ಹಾಗೂ ಕುಟುಂಬ ಸದಸ್ಯರಿಗೆ ಒಂದು ದಿನದ ಕ್ರೀಡಾ ಹಬ್ಬವನ್ನು ಆಯೋಜಿಸಲಾಗಿದೆ. ಪುರುಷ ಪತ್ರಕರ್ತರಿಗೆ ಕ್ರಿಕೆಟ್, ಕಬಡ್ಡಿ ಹಾಗೂ ಹಗ್ಗಜಗ್ಗಾಟ ಹಾಗೂ ಪತ್ರಕರ್ತರ ಕುಟುಂಬದ ಸದಸ್ಯರಿಗೆ ಹಾಗೂ ಮಕ್ಕಳಿಗೆ ಮ್ಯೂಸಿಕಲ್ ಚೇರ್, ಮಡಕೆ ಒಡೆಯುವ ಸ್ಪರ್ಧೆ, ಮಡಕೆಯಲ್ಲಿ ಚೆಂಡು ಹಾಕುವ ಸ್ಪರ್ಧೆ ಮತ್ತು ಬಾಯಿಯಲ್ಲಿ ಚಮಚ ಇಟ್ಟುಕೊಂಡು ಅದರಲ್ಲಿ ನಿಂಬೆಹಣ್ಣು ಇಟ್ಟು ನಡೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವ […]
ಕೋಲಾರ.ಜೂ,05: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರತಿ ವರ್ಷದಂತೆ ಈ ಬಾರಿಯೂ ಜುಲೈ 1 ರಂದು ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ಪತ್ರಕರ್ತರ ಮಕ್ಕಳು 2023 -2024 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಹಾಗೂ ಯಾವುದೇ ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ.60 ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಜೂನ್ 10 ರೊಳಗಾಗಿ […]

