ಕುಂದಾಪುರ: ಟ್ಯಾಂಕರ್ ಬಡಿದು ಸಂಭವಿಸಿದ ರಸ್ತೆ ಅಪಘಾತ ಒಂದರಲ್ಲಿ ಮೃತಪಟ್ಟ ಉಳ್ಳೂರು-74 ಗ್ರಾಮದ ದ್ವಿಚಕ್ರ ವಾಹನದ ಮಾಲೀಕ ಶ್ರೀ ಗುರುಪ್ರಸನ್ನ ಕಾರ್ಣಿಕ ಇವರ ಮೋಟಾರ್ ವಾಹನ ಪಾಲಿಸಿಯಲ್ಲಿ ಅಂತರ್ಗತವಾದ ಮರಣ ಸಂಬಂಧ ವಿಮಾ ಪರಿಹಾರ ಮೊತ್ತ ರೂ.15 ಲಕ್ಷವನ್ನು ಭಾರತ ಸರಕಾರದ ಉದ್ಯಮವಾದ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಇದರ ಕುಂದಾಪುರ ಶಾಖೆಯಲ್ಲಿ ಇತ್ತೀಚೆಗೆ ಮೃತರ ಕಾನೂನು ಬದ್ಧ ವಾರಿಸುದಾರರಾದ ತಾಯಿ ಶ್ರೀಮತಿ ಮಾಲತಿ ಇವರಿಗೆ ಸಂಸ್ಥೆಯ ಶಾಖಾ ಪ್ರಬಂಧಕರು ಹಾಗೂ ಅಧಿಕಾರಿಗಳು ಹಸ್ತಾಂತರಿಸಿದರು.

Read More

ಹುಬ್ಬಳ್ಳಿ ; ಕರ್ನಾಟಕ ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆ (KMC-RI), ಹುಬ್ಬಳ್ಳಿ 22 ನೇ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಇಂಟರ್ಕಾಲೇಜಿಯೇಟ್ ಅಥ್ಲೆಟಿಕ್ಸ್ ಮೀಟ್ 2024 ಅನ್ನು ನವೆಂಬರ್ 5 ರಿಂದ 8 ರವರೆಗೆ ಅವರ ಕ್ರೀಡಾ ಮೈದಾನದಲ್ಲಿ ಆಯೋಜಿಸಿತ್ತು.ಬೆಂಗಳೂರಿನ ಆರ್‌ಜಿಯುಎಚ್‌ಎಸ್‌ಗೆ ಸಂಯೋಜಿತವಾಗಿರುವ ಒಟ್ಟು 101 ಕಾಲೇಜುಗಳು ಸಭೆಗೆ ನೋಂದಾಯಿಸಿಕೊಂಡಿದ್ದವು. ಕ್ರೀಡಾಕೂಟವು ಉನ್ನತ ಸ್ಥಾನಕ್ಕಾಗಿ ಸ್ಪರ್ಧಿಸುವ ಕ್ರೀಡಾಪಟುಗಳ ಉರಿಯುತ್ತಿರುವ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಅಥೆನಾ ನರ್ಸಿಂಗ್ ಕಾಲೇಜಿನ 29 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದರು […]

Read More

ಕುಂದಾಪುರ (ನ. 11) : ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 7ರಂದು ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ಸುರಕ್ಷತೆಯ ಬಗ್ಗೆ ಎರವೆಯಲ್ಲಿಯೇ ಅರಿವು ಇರಬೇಕೆಂಬ ಕಾಳಜಿಯಿಂದ ನನ್ನ ಸುರಕ್ಷತೆ ನನ್ನ ಧ್ವನಿ ಎನ್ನುವ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.ಶಾಲೆಯ ಮಾಜಿ ಶಿಕ್ಷಕಿ ಹಾಗೂ ಯೂಟ್ಯೂಬರ್ ಆಗಿರುವ ಶ್ರೀಮತಿ ಭಾರತಿ ಎನ್ ರವರು ವಿದ್ಯಾರ್ಥಿಗಳಿಗೆ ಗುಡ್ ಟಚ್ ಬ್ಯಾಡ್ ಟಚ್ ಕುರಿತಾದ ಪರಿಪೂರ್ಣ ಮಾಹಿತಿಯನ್ನು ಅವರ ವಯಸ್ಸಿಗನುಸಾರವಾಗಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲರು, ಪ್ರಾಥಮಿಕ […]

Read More

ಕೋಲಾರ,ಅ.07: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತನ್ನ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಸ್ಥಾಪಿಸಿರುವ ಪತ್ರಕರ್ತರ ಕಲ್ಯಾಣ ನಿಧಿಗೆ ಕರ್ನಾಟಕ ಸರ್ಕಾರವು 25 ಲಕ್ಷ ರೂ ಅನುದಾನ ಬಿಡುಗಡೆ ಮಾಡಿ ನವಂಬರ್ 7 ರಂದು ಅಧಿಕೃತ ಆದೇಶ ಹೊರಡಿಸಿದೆ. ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2022 ರಲ್ಲಿ ಬಿ.ವಿ.ಗೋಪಿನಾಥ್ ಅಧ್ಯಕ್ಷರಾದ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಪತ್ರಕರ್ತರ ಆಪತ್ಕಾಲಕ್ಕೆ ನೆರವಾಗುವ ಸಲುವಾಗಿ 1 ಕೋಟಿ ರೂಗಳ ಕ್ಷೇಮಾಭಿವೃದ್ಧಿ ನಿಧಿಯನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಪ್ರಕಟಿಸಿದ್ದರು. ಇದುವರೆಗೂ ಸಂಘವು […]

Read More

ಶ್ರೀನಿವಾಸಪುರ : ಕಸಬಾ ರೇಷ್ಮೆ ಬೆಳಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಅಯ್ಯಪ್ಪ ನಿಧನದಿ೦ದ ತೆರವಾದ ಖಾಲಿಯಾಗಿರುವ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ನ.೭ ರ ಗುರುವಾರ ನಿಗಧಿಯಾಗಿತ್ತು ಆದರೆ ನಿಗಧಿತ ಸಮಯಕ್ಕೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಚುನಾವಣೆಯ ಪಕ್ರಿಯೆಯನ್ನು ಇಲಾಖೆಯ ಸೂಚನೆಯಂತೆ ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಐ ಅಬೀದ್ ಹುಸೇನ್ ಮಾಹಿತಿ ನೀಡಿದರು.

Read More

ಮಂಗಳೂರು, ನ.7: ಬಿಕರ್ನಕಟ್ಟೆ ಜಂಕ್ಷನ್‌ನಲ್ಲಿ ಸ್ಟಾನ್ಲಿ ಬಂಟ್ವಾಳ ಮತ್ತು ಲಿಯೋ ರಾಣಿಪುರ ಮಾಲೀಕತ್ವದ ಮತ್ತು ನಿರ್ವಹಣೆಯ ನವೀಕೃತ ಅನ್ವಿತಾ ಫೋಟೋಗ್ರಫಿ ಮತ್ತು ಆನ್ಸಿತಾ ವಿಡಿಯೋಗ್ರಫಿ ಸ್ಟುಡಿಯೋ ಮತ್ತು ಯುನಿವರ್ಸಲ್ ಮೆಲೋಡೀಸ್ ಆಡಿಯೋ ವಿಷುಯಲ್ ಸ್ಟುಡಿಯೋ ಉದ್ಘಾಟನೆಗೊಂಡಿತು.ಅನ್ವಿತಾ ಫೋಟೋಗ್ರಫಿ & ಅನ್ಸಿತಾ ವಿಡಿಯೋಗ್ರಫಿ ಸ್ಟುಡಿಯೋವನ್ನು ಅನಿವಾಸಿ ಭಾರತೀಯ ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಮೈಕೆಲ್ ಡಿಸೋಜಾ ಅವರು ಉದ್ಘಾಟಿಸಿದರೆ, ಯುನಿವರ್ಸಲ್ ಮೆಲೋಡೀಸ್ ಆಡಿಯೋ ವಿಷುಯಲ್ ಸ್ಟುಡಿಯೋವನ್ನು ಎನ್‌ಆರ್‌ಐ ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಜೇಮ್ಸ್ ಮೆಂಡೋನ್ಕಾ ಉದ್ಘಾಟಿಸಿದರು. ಉದ್ಘಾಟನೆಯ […]

Read More

ಕುಂದಾಪುರ, ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ಪರಿಸರ‌‌ ಮತ್ತು ಮಣ್ಣಿನ‌ ಸಂರಕ್ಷಣೆ ಹಾಗೂ ಗಿಡಗಳನ್ನು ‌ನೆಡುವ ಬಗ್ಗೆ ಜಾಗೃತಿ‌ ‌ಮೂಡಿಸುವ ಸಲುವಾಗಿ ಆಯೋಜಿಸಲಾದ  ‘ ಗ್ರೋ ಗ್ರೀನ್’ ಕಾರ್ಯಕ್ರಮ ಕುಂದಾಪುರದ‌ ಆರ್. ಎನ್.ಶೆಟ್ಟಿ‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಸಸ್ಯಸಂಕುಲವನ್ನು ಉಳಿಸಿ ಬೆಳೆಸಿ ಆರೋಗ್ಯಕರ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕರೆ‌ ನೀಡಿ ಕಾರ್ಯಕ್ರಮಕ್ಕೆ […]

Read More

ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಲಯನ್ಸ್ ಜಿಲ್ಲೆ 317Cಯ ಲಯನ್ ದಂಪತಿಗಳಿಗೆ ವಿನೂತನ ರೀತಿಯ ಆದರ್ಶ ದಂಪತಿ ಸ್ಪರ್ಧೆ ಉದ್ಯಾವರ ಚರ್ಚ್ ವಠಾರದಲ್ಲಿ ನವಂಬರ್ 24 ಆದಿತ್ಯವಾರದಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ ಎಚ್’ಪಿಆರ್ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆಯ ಪೋಸ್ಟರ್ ಅನ್ನು ಎಚ್’ಪಿಆರ್ ಫಿಲಂಸ್ ಮುಖ್ಯಸ್ಥ ಮತ್ತು ಎಲ್’ಸಿಯಫ್ ಕೋಆರ್ಡಿನೇಟರ್ ಲಯನ್ ಹರಿಪ್ರಸಾದ್ ರೈ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉದ್ಯಮಿ ಡಾ. ಶೇಕ್ ವಹಿದ್ ಉಡುಪಿ, […]

Read More
1 95 96 97 98 99 283