ಶ್ರೀನಿವಾಸಪುರ : ದೇಶದಲ್ಲಿನ ಯಾವುದೇ ನಾಗರೀಕರು ಊಟ, ವಸತಿ ಇಲ್ಲದೆ, ಮಾತನಾಡಲು ಸ್ವಾತಂತ್ರವಿಲ್ಲದೆ ಇರುಬಾರದು ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳು ಇರಬೇಕು ಎನ್ನುವ ದೃಷ್ಟಿಯಲ್ಲಿ ಸಂವಿಧಾನವನ್ನು ರಚನೆ ಮಾಡಲಾಗಿದೆ. ವಿದ್ಯಾರ್ಥಿಗಳು ಹಾಗೂ ದೇಶದಲ್ಲಿನ ಪ್ರತಿಯೊಬ್ಬರು ಸಹ ಸಂವಿಧಾನ ಬಗ್ಗೆ ಅರಿತುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್ ಹೇಳಿದರು.ತಾಲೂಕಿನ ದಳಸನೂರು ಗ್ರಾ.ಪಂ ಸಮೀಪದ ಶನಿವಾರ ಜಿಲ್ಲಾ ಪಂಚಾಯಿತಿ ಹಾಗು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಂವಿಧಾನದ […]
ಜೆ.ತಿಮ್ಮಸಂದ್ರ ಗ್ರಾಮದಲ್ಲಿ ಗ್ರಾ.ಪಂ ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವು ಗ್ರಾ.ಪಂ ಅಧ್ಯಕ್ಷ ನಾಗೇಶ್ರೆಡ್ಡಿ, ಉಪಾಧ್ಯಕ್ಷೆ ಭಾರತಮ್ಮ, ಪಿಡಿಒ ವಿನೋಧರೆಡ್ಡಿ, ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ, ಸದಸ್ಯರಾದ ಕೃಷ್ಣಮ್ಮ, ಶಿಲ್ಪ, ಆರ್ಐಗಳಾದ ಮುನಿರೆಡ್ಡಿ, ಗುರುರಾಜರಾವ್, ವಿಎ. ಸ್ವಾತಿ ಬಂಡಾರಿ, ಸಿಬ್ಬಂದಿ ಜೆ.ಎ.ಮಂಜುನಾಥ್, ಮುಖಂಡರಾದ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ನಾಗದೇನಹಳ್ಳಿ ದಲಿತ ಮುಖಂಡ ಶ್ರೀನಿವಾಸ್ ನೇತೃತ್ವದಲ್ಲಿ ನಡೆಯಿತು.
ತಾಲೂಕಿನ ಮುದಿಮಡುಗು ಕ್ಲಸ್ಟರ್ನ ಹಕ್ಕಿಪಿಕ್ಕಿ ಗ್ರಾಮದಲ್ಲಿ ಗುರುವಾರ ಗ್ರಾಮದ ಗೃಹ ಆಧಾರಿತ ವಿಕಲಚೇತನ ಮಗುವಾದ ರೆಡ್ಡಮ್ಮ ಸರ್ವ ಶಿಕ್ಷಣ ಇಲಾಖೆ ವತಿಯಿಂದ 7850 ರೂಗಳ ಚೆಕ್ನ್ನು ಬಿಐಇಆರ್ಟಿ ಅಧಿಕಾರಿ ಜಿ.ವಿ.ಚಂದ್ರಪ್ಪ ವಿತರಿಸಿದರು. ಕ್ಲಸ್ಟರ್ನ ಸಿಆರ್ಪಿ ಅಮರನಾಥ್, ಮುಖ್ಯ ಶಿಕ್ಷಕ ರಮಣಾರೆಡ್ಡಿ ಇದ್ದರು.
ಶ್ರೀನಿವಾಸಪುರ : ಪ್ರತಿಯೊಂದು ಇಲಾಖೆಯು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು , ಸಂವಿಧಾನವನ್ನು ಉಳಿಸಿಬೆಳಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಿಡಿಒ ಮಂಗಳಾಂಬ ಕರೆ ನೀಡಿದರು.ತಾಲೂಕಿನ ಆರಿಕುಂಟೆ ಪ್ರೌಡಶಾಲೆಯ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತ್, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಂವಿಧಾನದಲ್ಲಿ ಮೂರು ಅಂಗಗಳು ಸಂವಿಧಾನದ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಕ್ಷೇತ್ರಗಳು ಮುನ್ನಡೆಯಲು ಸಂವಿಧಾನ ಮಹಾಗ್ರಂಥ ಕಾರಣವಾಗಿದೆ. ಸಂವಿಧಾನವು ದೇಶದ ಪ್ರಜಾಪ್ರಭುತ್ವ ಮುನ್ನಡೆಯಲು ಮಹತ್ವವನ್ನು ಪಡದಿದೆ. ನಮ್ಮ ದೇಶಕ್ಕೆ ಸಂವಿದಾನವನ್ನು […]
ಕಾರ್ಯಕ್ರಮವನ್ನುಗ್ರಾಮ ಪಂಚಾಯ್ತಿ ಸದಸ್ಯರಾದ ಭಕ್ಷು ಸಾಬ್ರವರು ಉದ್ಘಾಟಿಸಿ ಧರ್ಮಸ್ಥಳ ಯೋಜನೆಯ ಪ್ರತಿಯೊಂದು ಕಾರ್ಯಕ್ರಮಗಳು ಸಮಾಜ ಮುಖಿಚಿಂತನೆಯ ಕಾರ್ಯಕ್ರಮಗಳಾಗಿದ್ದು ಇದರಲ್ಲಿ ಭಾಗವಹಿಸುವುದೇ ಸಂತೋಷದ ವಿಚಾರ ಎಂದರು.ತಾಲ್ಲೂಕುಯೋಜನಾಧಿಕಾರಿ ಪ್ರಕಾಶ್ಕುಮಾರ್ಮಾತನಾಡುತ್ತಾನೀರು ಮನಷ್ಯನಿಗೆಅತ್ಯಮೂಲ್ಯ.ಒಂದು ಹೊತ್ತುಎರಡು ಹೊತ್ತು ಊಟ ಇಲ್ಲದೇಇದ್ದರೂ ಬದುಕಬಹುದುಆದರೆಒಂದೊತ್ತು ನೀರುಇಲ್ಲದೆಇದ್ದರೆ ಬದುಕಲುಅಸಾಧ್ಯ, ಪ್ರಪಂಚದಎಲ್ಲಾ ಜೀವರಾಶಿಗಳಿಗೂ ನೀರುಅಗತ್ಯಆಗಿರುವುದರಿಂದ ಮಾನವಕುಲದವರಾದ ನಾವುಗಳು ಪ್ರಾಣಿ ಪಕ್ಷಿಗಳ ಮೇಲೆ ಕನಿಕರತೋರಿ ನೀರಿನ ಮೂಲಗಳಾದ ಕೆರೆಕುಂಟೆ ಬಾವಿ ಮತ್ತು ಬಳಕೆ ಮಾಡುವಎಲ್ಲಾರೀತಿಯ ನೀರನ್ನು ಮಿತವಾಗಿ ಬಳಸಿ ಪಾಣಿ ಪಕ್ಷಿಗಳಜೀವ ಉಳಿಸಬೇಕು. ನನ್ನಅನುಭವದಲ್ಲಿಇಂತಹಕಲಾವಿದರ ನಾಟಕವನ್ನುಎಂದೂನೋಡಿಲ್ಲಎಲ್ಲರಿಗೂ ಮನಮುಟ್ಟುವರೀತಿಯಂತೆ ಅಭಿನಯಿಸಿರುತ್ತಾರೆ ಎಂದು ಮೆಚ್ಚುಗೆ […]
ಶ್ರೀನಿವಾಸಪುರ : ವಿಕಲ ಚೇತನರು ಎಂದಾಕ್ಷಣ ಕೈಲಾಗದವರು ಎಂರ್ಥವಲ್ಲ. ಅವರಲ್ಲಿಯೂ ವಿಶೇಷ ಸಾಮಾಥ್ರ್ಯವಿರುತ್ತದೆ . ಸೋಮಾರಿಗಳಾಗದೇ ನಿರಂತರ ಶ್ರಮ ವಹಿಸುವ ಮೂಲಕ ಸಾಧನೆಯ ಹಾದಿ ಹಿಡಿಯಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.ಪಟ್ಟಣದ ಪುರಸಭೆ ಕಛೇರಿಯಲ್ಲಿ ಗುರುವಾರ 22 ವಿಶೇಷ ಚೇತನರಿಗೆ ತ್ರಿಚಕ್ರವಾಹನಗಳನ್ನು ವಿತರಿಸಿ ಮಾತನಾಡಿದರು.ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಶೇಷ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪುಯೋಗಪಡಸಿಕೊಂಡು ಸ್ವಾವಲಂಬಿ ಬದುಕು ಸಾಧಿಸಬೇಕು ಎಂದು ಸಲಹೆ ನೀಡಿದರು. ಹಾಗೂ ಪ್ರತಿಯೊಬ್ಬರಲ್ಲಿ […]
ಕೋಲಾರ : ಮುಖ್ಯಮಂತ್ರಿಗಳ ಮಹತ್ವದ ಜನತಾ ದರ್ಶನ ಕಾರ್ಯಕ್ರಮವು ಬೆಂಗಳೂರಿನಲ್ಲಿ ಫೆ.8ರಂದು ಯಶಸ್ವಿಯಾಗಿ ಆರಂಭವಾಯಿತು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ನೇರವಾಗಿ ಭೇಟಿ ಮಾಡಿ ಅಹವಾಲು ಸಲ್ಲಿಸುವ ಮಹತ್ವದ ಈ ಜನತಾ ದರ್ಶನ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಸಿಇಓ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ವಿಡಿಯೋ ಕಾನ್ಸರೆನ್ಸ್ನಲ್ಲಿ ಹಾಜರಾಗಿದ್ದರು. ಕೋಲಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಸರೆನ್ಸ್ಲ್ಲಿ ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಹಾಗೂ ಜಿಲ್ಲಾ ಪಂಚಾಯತ್ […]
ಶ್ರೀನಿವಾಸಪುರ : ಒಂದು ವಾರದ ಕಾಲ ಕಾಲಾವಧಿಯನ್ನು ಕೊಟ್ಟು ವಾರದ ಒಳಗೆ ಕಂಪನಿ ಅವರನ್ನು ಕರೆಸಿ ಸಭೆ ಮಾಡಿ ರೈತರಿಗೆ ಬರಬೇಕಾದಂತಹ ಇನ್ಸೂರನ್ಸ್ ಹಣವನ್ನು ಕೊಡಿಸದೆ ಇದ್ದಲ್ಲಿ ಕೋಲಾರ ಜಿಲ್ಲೆಯಾದ್ಯಾಂತ ಉಗ್ರ ರೀತಿಯ ಹೋರಾಟಕ್ಕೆ ಮಾವು ಬೆಳಗಾರರು ಮುಂದಾಗಬೇಕಾಗುತ್ತದೆ ಎಂದು ಜಿಲ್ಲಾ ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಎಚ್ಚರಿಸಿದರು.ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ಬುಧವಾರ ಜಿಲ್ಲಾ ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಚ್ಡಿಎಫ್ಸಿ ಇರ್ಗೋ ಕಂಪನಿಯಿಂದ ಇನ್ಸೂರೆನ್ಸ್ನ್ನು ಅತಿ ಶೀಘ್ರವಾಗಿ ಬಿಡುಗಡೆ […]
ಶ್ರೀನಿವಾಸಪುರ : ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಮಾಡಬೇಕೆನ್ನುವ ಉದ್ದೇಶದಿಂದ ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ದುಶ್ಪರಿಣಾಮಗಳ ಬಗ್ಗೆ ಅರಿವು ಕಡಿಮೆ ಇದ್ದು ಇದರಿಂದ ನಾವು ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ತ್ಯಾಗರಾಜ ಬಡವಾಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ವತಿಯಿಂದ ಪ್ಲಾಸ್ಟಿಕ್ ನಿಷೇಧ ಮತ್ತು ಹವಾಮಾನ ಬದಲಾವಣೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಾಮಾನ್ಯವಾಗಿ ಸಾರ್ವಜನಿಕರು ಹಾಲಿನ […]

