ಕುಂದಾಪುರ ; ಮೂಡ್ಲಕಟ್ಟೆ ಎಂ ಸಿ ನ್ ನಲ್ಲಿ ಓಣಂ ಆಚರಣೆ ಸೆಪ್ಟೆಂಬರ್ 13ರಂದು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್   ಆವರಣದಲ್ಲಿ ಓಣಂ ಹಬ್ಬವನ್ನು   ವಿಜೃಂಭಣೆಯಿಂದ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರು ದೀಪ ಬೆಳಗಿಸುವ ಮೂಲಕ ಓಣಂ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಓಣಂ ಹಬ್ಬದ ಸಾಂಪ್ರದಾಯಿಕ ನೃತ್ಯ,  ಚಂಡೆ ವಾದ್ಯ,ಉಡುಗೆ ,ತೊಡುಗೆ ಹೂವಿನ ರಂಗೋಲಿ ಗಮನ ಸೆಳೆದಿದ್ದು ,ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು.  ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆಯವರಾದ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್, ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ […]

Read More

ಮಂಗಳೂರಿನ ಅಶೋಕನಗರದ ಎಸ್‌ಡಿಎಂ ಶಾಲೆಯಲ್ಲಿ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಎಐಸಿಎಸ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ದ.ಕ.ಜಿಲ್ಲೆಯಾದ್ಯಂತ ಸುಮಾರು 34 ಶಾಲಾ ತಂಡಗಳು ಭಾಗವಹಿಸಿದ್ದು, ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್ ಅಂಡರ್-17 ಬಾಲಕರ ತಂಡವು ಅಂತಿಮವಾಗಿ ಕೆನರಾ ಸಿಬಿಎಸ್‌ಸಿ ಶಾಲಾ ಅಂಡರ್-17 ಬಾಲಕರ ತಂಡವನ್ನು ಸೊಲೀಸಿ ಎಐಸಿಎಸ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿ ಬಂತು. ತಂಡದ ನಾಯಕ AL-HAN ಶಾಲೆಯ ಅಂಡರ್-17 ಬಾಲಕರ ತಂಡಗಳ ನೇತೃತ್ವದ, ದೈಹಿಕ ನಿರ್ದೇಶಕ ಕೇಶವನಾಯಕ್ ಅವರ ಅಸಾಧಾರಣ ಕೌಶಲ್ಯ ಮತ್ತು ತಂಡದ ಸಮನ್ವಯದಿಂದ […]

Read More

ಕ್ಷೇವಿಯರ್ ಎಜುಕೇಶನ್ ಟ್ರಸ್ಟ್ (ರಿ.)1984 ರಲ್ಲಿ ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ಹಿಂದುಳಿದ ಮತ್ತು ಗ್ರಾಮಿಣ ಯುವಕರಿಗೆ ತಾಂತ್ರಿಕ ತರಬೇತಿ ನೀಡುವ ಉದ್ದೇಶ ದಿಂದ ಜಾತಿ ಮತ ಧರ್ಮ ಲೆಕ್ಕಿಸದೆ ಸಮಾಜದ ಉದ್ಧಾರಕ್ಕಾಗಿ ಸ್ಥಾಪನೆಗೊಂಡಿತು. ಕ್ಷೇವಿಯರ್ ಟ್ರಸ್ಟ್ ವತಿಯಿಂದ 1984 ರಲ್ಲಿ ಮುಕ್ಕದಲ್ಲಿ ಕ್ಷೇವಿಯರ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ( XITC )ಎಂದು ಸ್ಥಾಪನೆಗೊಂಡು. ತದನಂತರ 1992ರಲ್ಲಿ ಮುಕ್ಕದಿಂದ ಕೊಣಾಜೆ ಸಮೀಪದ ಅಸೈಗೋಳಿಗೆ ಸ್ಥಳಾಂತರಿಸಲಾಯಿತು. ಕ್ಸೇವಿಯರ್ ಐಟಿಐ ಸ್ಥಾಪನೆಯ.ಈ ಐಟಿಐ ಗೆ ಉದ್ಯೋಗ ಮತ್ತು ತರಬೇತಿ […]

Read More

ಕುಂದಾಪುರ ; ಐಎಂಜೆ ಸಂಸ್ಥೆಗಳು ಮೂಡ್ಲಕಟ್ಟೆ ವತಿಯಿಂದ ಶ್ರೀ ಗಣೇಶೋತ್ಸವವನ್ನು ಎಂಐಟಿ ಕ್ಯಾಂಪಸ್‌ನಲ್ಲಿ ಆಚರಿಸಲಾಯಿತು. ಪ್ರತಿಮೆಯ ವಿಸರ್ಜನೆ ಮೂಲಕ ಮೂರು ದಿನಗಳ ಉತ್ಸವ ಸೋಮವಾರ ಮುಕ್ತಾಯಗೊಂಡವು. ವಿಸರ್ಜನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Read More

ಕುಂದಾಪುರ,ಬಿದ್ಕಲ್ ಕಟ್ಟೆ, ಸೆ.12; ದಿನಾಂಕ 12-09-2024ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ. ರಜತಾದ್ರಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಬಿದ್ಕಲ್ ಕಟ್ಟೆ ಇವರ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಬಾಲಕ- ಬಾಲಕಿಯರ ಥ್ರೋ ಬಾಲ್ ಪಂದ್ಯಾಟದಲ್ಲಿ ನಗರದ ಸೈಂಟ್ ಮೇರಿಸ್ ಪದವಿಪೂರ್ವ ಕಾಲೇಜಿನ ಬಾಲಕಿಯರು ಅಮೋಘ ಪ್ರದರ್ಶನ ನೀಡಿ ವಿಜೇತರಾಗಿ ಜಿಲ್ಲಾಮಟ್ಟಕೆ ಆಯ್ಕೆಯಾಗಿದ್ದಾರೆ. ಅಲ್ಲದೆ ತಂಡದ ನಾಯಕಿ ಜೋನಿಟಾ ಮೆಂಡೊನ್ಸ್ “ಬೆಸ್ಟ್ ಆಲ್ ರೌಂಡರ್ “ಪ್ರಶಸ್ತಿ ಪಡೆದಿರುತ್ತಾರೆ. ಇವರ ಈ ಸಾಧನೆಗೆ ವಿದ್ಯಾ ಸಂಸ್ಥೆಯ […]

Read More

ಬಾರ್ಕೂರುಃ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಪ್ರದರ್ಶನವನ್ನು SVVN ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಇಂದು, ಗುರುವಾರ, 12ನೇ ಸೆಪ್ಟೆಂಬರ್, 2024 ರಂದು ಬೆಳಿಗ್ಗೆ 9.45 ಕ್ಕೆ ಉದ್ಘಾಟಿಸಲಾಯಿತು, ಇದು ಯುವ ಸೃಜನಶೀಲತೆ ಮತ್ತು ಕೌಶಲ್ಯದ ಅವಿಸ್ಮರಣೀಯ ಆಚರಣೆಯಾಗಿದೆ, ಇದು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗಳ ಸರಣಿಯನ್ನು ಒಳಗೊಂಡಿದೆ.ಬಾರ್ಕೂರು ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಶೇಡಿಕೊಡ್ಲು ವಿಟ್ಲ ಶೆಟ್ಟಿ ಅವರು ಸಾಂಪ್ರದಾಯಿಕ ದೀಪ ಬೆಳಗಿಸುವ ಮೂಲಕ ವರ್ಣರಂಜಿತ ಕಾರ್ಯಕ್ರಮವನ್ನು ಉದ್ಘಾಟಿಸಿ, ಭಾಗವಹಿಸಿದವರಿಗೆ ಶುಭ ಹಾರೈಸುವ ಮೂಲಕ ಕಿರು ವೇದಿಕೆ ಕಾರ್ಯಕ್ರಮವನ್ನು […]

Read More

ಉಡುಪಿಃ ಇಂಟರ್ನಲ್ ಕ್ವಾಲಿಟಿ ಅಶ್ಯೂರೆನ್ಸ್ ಸೆಲ್ (IQAC), ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗ ಮತ್ತು ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಸೆಲ್ ಜಂಟಿಯಾಗಿ ಆಯೋಜಿಸಿದ ಸಾಫ್ಟ್ ಸ್ಕಿಲ್ಸ್ ತರಬೇತಿ ಕಾರ್ಯಕ್ರಮವು ಸೆಪ್ಟೆಂಬರ್ 11, 2024 ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಅವರ ಉದ್ಘಾಟನಾ ಭಾಷಣದಲ್ಲಿ, ಡಾ. ವಿನ್ಸೆಂಟ್ ಆಳ್ವಾ, ಕಾಲೇಜಿನ ಪ್ರಾಂಶುಪಾಲರು, ಶೈಕ್ಷಣಿಕ ಅನ್ವೇಷಣೆಗಳೊಂದಿಗೆ ಮೃದು ಕೌಶಲ್ಯ ತರಬೇತಿಯ ಮಹತ್ವವನ್ನು ಎತ್ತಿ ತೋರಿಸಿದರು, ವಿದ್ಯಾರ್ಥಿಗಳಲ್ಲಿ ಉದ್ಯೋಗ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮಹತ್ವವನ್ನು ಒತ್ತಿ ಹೇಳಿದರು. ಹೆಸರಾಂತ ಫ್ರೀಲ್ಯಾನ್ಸರ್ ಮತ್ತು ಸಾಫ್ಟ್ ಸ್ಕಿಲ್ಸ್ […]

Read More

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತಾಬ್ದಿ ಆರಾಧನಾ ಮಹೋತ್ಸವದ ಅಂಗವಾಗಿ ಖ್ಯಾತ ಗಾಯಕ ಶಂಕರ ಶ್ಯಾನುಭಾಗ ಅವರ ವತಿಯಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು. ದೇವಾಲಯದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ಹಾಗೂ ಶಂಕರ ಶ್ಯಾನುಭಾಗ ಕಾರ್ಯಕ್ರಮ ಉದ್ಘಾಟಿಸಿದರು. ಶಂಕರ ಶ್ಯಾನುಭಾಗ ಅವರೊಂದಿಗೆ ಶಂಕರ ಶೆಣೈ, ಲೋಕೇಶ, ಹರಿ, ಅಶ್ವಥ, ಅದೃುತ ಪೈ ಹಾರ್ಮೋನಿಯಂ, ತಬಲಾ, ತಾಳ ಸಂವಾದಿನಿಯಲ್ಲಿ ಸಹಕರಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಕೆ. ಪದ್ಮನಾಭ ಶೆಣೈ […]

Read More

ಉಡುಪಿ ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘ ಇದರ ವಿಷಯಾಧಾರಿತ ಪುನಶ್ಚೇತನ ತರಬೇತಿ, ನಿವೃತ್ತ ಉಪನ್ಯಾಸಕರ ಸನ್ಮಾನ ಮತ್ತು ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಸಮಾರಂಭವು ಸರ್ಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಇಲ್ಲಿಯ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಶಾಲಾ ಶಿಕ್ಷಣ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಾರುತಿ ಅವರು ರಾಜ್ಯಶಾಸ್ತ್ರ ಅಧ್ಯಯನದ ಮಹತ್ವ ಮತ್ತು ಕಲಾವಿಭಾಗವನ್ನು ಪುನಶ್ಚೇತನ ಗೊಳಿಸುವ ಕುರಿತು ಮತ್ತು […]

Read More