ಶಿರ್ವ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡ ಹಿನ್ನೆಲೆಯಲ್ಲಿ ಶಿರ್ವ ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಜೀವನ್ ಡಿಸೋಜರವರು ಮಾನಸ ಶಾಲೆಯ ಅಧ್ಯಕ್ಷರಿಗೆ ದಿನಸಿ ವಸ್ತುಗಳನ್ನು ಹಸ್ತಾಂತರಿಸಿ, ಇಂತಹ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಮೂಲ ಪ್ರೇರಣೆ ಮತ್ತು ಮುಖ್ಯ ಉದ್ದೇಶ ದಿ. ಫಾ. ವಲೇರಿಯನ್ ಮೆಂಡೋನ್ಸಾ. ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ […]
ಕುಂದಾಪುರ, ಯು ಬಿ ಎಂ ಸಿ ಕೃಪಾ ಇಂಗ್ಲಿಷ್ ಮೀಡಿಯಂ ಶಾಲೆ ,ಕುಂದಾಪುರ ಇಲ್ಲಿ ದಿನಾಂಕ 14.09.2024ರಂದುಹಿಂದಿ ದಿವಸವನ್ನು ಆಚರಿಸಲಾಯಿತು. ಹಿಂದಿ ಭಾಷಾ ಕ್ಲಬ್ ಸoಯೋಜಕರಾದ ರಾಜೇಶ್ವರಿ ಮತ್ತು ಟೀಚರ್ ವೀನಾ ಕಾರ್ಯಕ್ರಮವನ್ನು ಹಿಂದಿ ಭಾಷೆಯಲ್ಲಿ ನಡೆಸಿದರು ಕಾರ್ಯಕ್ರಮಕ್ಕೆ ಶಾಲಾ ಪ್ರಾಂಶುಪಾಲರಾದ ಅನಿತಾ ಆಲಿಸ್ ಡಿ ಸೋಜಾ ಅಧ್ಯಕ್ಷತೆಯನ್ನು ವಹಿಸಿದ್ದರು.ವಿದ್ಯಾರ್ಥಿಗಳು ಹಿಂದಿ ಭಾಷೆಯಲ್ಲಿ ಕಾರ್ಯಕ್ರಮ ನೆಡೆಸಿದರು.ಹಿಂದಿ ಗೀತೆಗಳನ್ನು ಹಾಡುವ ಮೂಲಕ,ಹಿಂದಿ ಭಾಷಣ ಮಾಡುವ ಮೂಲಕ ಕಾರ್ಯಕ್ರಮ ನೆಡೆಸಿದರು. ಪ್ರಾಂಶುಪಾಲರು ತಮ್ಮ ಭಾಷಣದಲ್ಲಿ ನಾವು ಎಲ್ಲಾ ಭಾಷೆಗಳನ್ನು ಗೌರವಿಸುವ […]
ಬ್ರಹ್ಮಾವರ; ಮಹಿಳಾ ವೇದಿಕೆ ಎಸ್ ಎಂ ಎಸ್ ಪದವಿಪೂರ್ವ ಕಾಲೇಜು ಮತ್ತು ಲಯನ್ಸ್ ಕ್ಲಬ್ ಬ್ರಹ್ಮಾವರ- ಬಾರ್ಕೂರು ಇದರ ಸಹಯೋಗದೊಂದಿಗೆ ದಿನಾಂಕ 13.9.2024 ದಂದು ‘ಆರೋಗ್ಯ ನೈರ್ಮಲ್ಯ ಮತ್ತು ಪೋಷಣೆ’ ಎಂಬ ವಿಷಯಾಧಾರಿತ ಕಾರ್ಯಕ್ರಮವನ್ನು ಪದವಿ ಪೂರ್ವ ಕಾಲೇಜಿನ ಕಲಾಭವನದಲ್ಲಿ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸ್ತ್ರೀರೋಗ ತಜ್ಞರಾದ ಡಾ. ರಾಜಲಕ್ಷ್ಮಿ, ವಾತ್ಸಲ್ಯ ಕ್ಲಿನಿಕ್, ಸಂತೆಕಟ್ಟೆ ರವರು ಸಮತೋಲನ ಆಹಾರ ಆರೋಗ್ಯಕರ ಆಹಾರಾಭ್ಯಾಸಗಳು ಮತ್ತು ನೈರ್ಮಲ್ಯದ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿದರು. ಸುಮಾರು 300 ಕ್ಕೂ ಅಧಿಕ […]
ಕಲ್ಯಾಣಪುರಃ ಮೂರು ದಿನಗಳ ಅಧಿಕೃತ ಭೇಟಿ ಶನಿವಾರ, 14ನೇ ಸೆಪ್ಟೆಂಬರ್, 2024 ರಂದು ಪ್ರಾರಂಭವಾಯಿತು. ಮೌಂಟ್ ರೋಸರಿ ಚರ್ಚ್ಗೆ ಬಿಷಪ್ರ ಅಧಿಕ್ರತ ಭೇಟಿ ಸಂಜೆ 4.00 ಗಂಟೆಗೆ ಪ್ಯಾರಿಷ್ ಕುಟುಂಬವು ಭೇಟಿ ನೀಡುವ ಬಿಷಪ್ಗೆ ಸಾಂಪ್ರದಾಯಿಕ ಮತ್ತು ವಿಧ್ಯುಕ್ತ ಸ್ವಾಗತವನ್ನು ನೀಡಲು ಚರ್ಚ್ನಲ್ಲಿ ಒಟ್ಟುಗೂಡಿತು, ಇದು ಗೌರವಾನ್ವಿತ ಮತ್ತು ಸಾಂಸ್ಕೃತಿಕವಾಗಿ ಸೂಕ್ತವಾದ ಸನ್ನೆಗಳ ಸರಣಿಯನ್ನು ಒಳಗೊಂಡಿತ್ತು.ಪ್ಯಾರಿಷ್ ಪ್ರೀಸ್ಟ್, ರೆವ್ ಡಾ ರೋಕ್ ಡಿಸೋಜಾ, ಸಹಾಯಕ ರೆವ್ ಫ್ರಾ ಒಲಿವರ್ ನಜರೆತ್, ಪಿಪಿಸಿಯ ವಿಪಿ ಶ್ರೀ ಲ್ಯೂಕ್ ಡಿಸೋಜಾ, […]
ಉಡುಪಿ,ಸೆ.16;ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜ್ – ವಿದ್ಯಾರ್ಥಿ ಕಲ್ಯಾಣ ಪರಿಷತ್ತು 2024 – 25ರಂದು ನೆಡೆದ ಉದ್ಘಾಟನಾ ಸಮಾರಂಭವನ್ನು ಉದ್ಘಾಟನೆ ಮಾಡಿ ‘ನಾಯಕತ್ವವು ಒಂದು ಸವಲತ್ತು ಅಲ್ಲ ಆದರೆ ಕರ್ತವ್ಯವಾಗಿದೆ ಎಂದು ದುಬೈನ ಜಿಲಿಯನ್ ಪಾಥ್ವೇಸ್ನ ಸಂಸ್ಥಾಪಕ ಮತ್ತು ಸಿಇಒ ಶ್ರೀ ರೊನಾಲ್ಡ್ ಒಲಿವೆರಾ ಅವರು ಹೂಡಿಕೆ ಅಧಿಕಾರಿಯ ಸ್ಥಾನದಿಂದ ಮಾತನಾಡುತ್ತಿದ್ದರು. ನಾಯಕನಾಗುವುದು ಜವಾಬ್ದಾರಿಯುತ ನಾಗರಿಕನಂತೆ ಮತ್ತು ಪ್ರಬುದ್ಧ ಮನುಷ್ಯನಂತೆ ಎಂದು ಅವರು ಒತ್ತಿ ಹೇಳಿದರು. ಗೊಂದಲಕ್ಕೀಡಾಗದೆ ಗುರಿಗಳತ್ತ ಗಮನ ಹರಿಸುವುದು ಇಂದಿನ ಅಗತ್ಯವಾಗಿದೆ. 1991ನೇ ಬ್ಯಾಚ್ನ ಭರವಸೆಯ […]
‘ಆರೋಗ್ಯದ ಕುರಿತು ತಮ್ಮ ಅಸಂಖ್ಯಾತ ಕೊಂಕಣಿ ಬರಹಗಳ ಮೂಲಕ ಮತ್ತು ತಮ್ಮ ಅಮೂಲ್ಯ ಪುಸ್ತಕಗಳ ಮೂಲಕ, ಡಾ. ಎಡ್ವರ್ಡ್ ನಜರೆತ್ ಅವರು ಅನಾರೋಗ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಜನರಿಗೆ ಶಿಕ್ಷಣ ನೀಡಿದ್ದಾರೆ. ಅವರ ಹೃದಯ ಸ್ಪರ್ಶಿಸುವ ಸಣ್ಣ ಕಥೆಗಳು, ನಮ್ಮ ಸಮಾಜದ ಸಾಮಾನ್ಯ ಜನರನ್ನು ಚಿತ್ರಿಸುವ ಅವರು ನಮ್ಮ ಜನರಿಗೆ ತಮ್ಮ ಅನುಭೂತಿಯನ್ನು ತೋರಿಸಿದ್ದಾರೆ. ಅವರು ನಿಜವಾಗಿಯೂ ‘ಜನರ ವೈದ್ಯರು’- ಶ್ರೀ ಸ್ಟ್ಯಾನಿ ಅಲ್ವಾರೆಸ್ ಹೇಳಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮಂಗಳೂರಿನ […]
ಕುಂದಾಪುರ, ಸೆ.15: ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಗಮ್ ಬಳಿ ಭಾನುವಾರ ಬೆಳಿಗ್ಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಮಾನವ ಸರಪಳಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನೆಡೆಯಿತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ ‘ಅಂಬೇಡ್ಕರ್ ಅವರು ನಮಗೆ ಸಂವಿಧಾನ ರಚಿಸಿ ನೀಡಿದ್ದಾರೆ, ಅವರ ಆಶಯ ತುಂಬಾ ಇದೆ, ಪರಿಪೂರ್ಣವಾಗಿಲ್ಲ, ಪರಿಪೂರ್ಣ ಮಾಡುವ ಜವಾಬ್ದಾರಿ ನಮಗೆ ನೀಡಿದ್ದಾರೆ’ ಎಂದು ತಿಳಿಸಿದರು. ಕುಂದಾಪುರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ವಿಶ್ವದಲ್ಲಿಯೇ […]
ಕುಂದಾಪುರ, ಸೆ.14; ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ವತಿಯಿಂದ, ಇನ್ನರ್ ವಿಲ್ ತುಂದಾಪುರ ದಕ್ಷಿಣ. ರೋಟರಿ ಸಮುದಾಯ ದಳ ತಲ್ಲೂರು, ಪ್ರಾಥಮಿಕ ಅರೋಗ್ಯ ಕೇಂದ್ರ ಗಂಗೊಳ್ಳಿ ಕಥೋಲಿಕ್ ಸಭಾ ತಲ್ಲೂರು ಘಟಕ ಹಾಗೂ ಆರೋಗ್ಯ ಆಯೋಗ ತಲ್ಲೂರು ಚರ್ಚ್ ಇವರ ಅಶ್ರಯದಲ್ಲಿ, ಮಂಗಳೂರಿನ ಪ್ರಸಿದ್ಧ ಜುಲೇಖಾ ಯೆನೆಪೆÇೀಯ ಇನ್ಸಿಟ್ಯೂಟ್ ಆಫ್ ಒಂಕೋಲಜಿ ಆಸ್ಪತ್ರೆಯ ನುರಿತ ಅನುಭವಿ ವೈದ್ಯರಿಂದ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ತಲ್ಲೂರು ಇಗರ್ಜಿಯ ಸಭಾಂಗಣದಲ್ಲಿ ಸೆ.14ರಂದು ನಡೆಸಲಾಯಿತು.ಚಿನ್ನಯಿ ಆಸ್ಪತ್ರೆಯ ವೈದ್ಯಾಧಿಕಾ ರೊ. ಡಾ. ಉಮೇಶ್ […]
ಕುಂದಾಪುರ, ಸೆ. 13: ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಸ್ಕರ್ ಫೆರ್ನಾಂಡೀಸ್ ಮೂರನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಯಕರ ಶೆಟ್ಟಿಯವರು ಮಾತನಾಡಿ , ಆಸ್ಕರ್ ಫೆರ್ನಾಂಡೀಸ್ ಕೇಂದ್ರದಲ್ಲಿ ಪ್ರಭಾವಿ ನಾಯಕರಾಗಿದ್ದರು ,ತಮ್ಮ ಸರಳ ವ್ಯಕ್ತಿತ್ವದಿಂದ ಜನಸಾಮಾನ್ಯರ ಅಗತ್ಯಗಳನ್ನು ಸ್ಪಂದಿಸುತ್ತಿದ್ದರು. ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದಲ್ಲಿ ಪ್ರಾರಂಭಿಸುವಾಗ ಕೇಂದ್ರ ಸರ್ಕಾರದಿಂದ ಅನುದಾನವನ್ನು ನೀಡಿ ಪ್ರೋತ್ಸಾಹಿಸಿದ್ದು ಸ್ಮರಣೀಯವೆಂದರು.ಅನೇಕ ಬಾರಿ ಮುಖ್ಯಮಂತ್ರಿ ಸ್ಥಾನ ದೊರಕುವ ಅವಕಾಶವಿದ್ದರೂ ನಿರಾಕರಿಸಿದ ಆಸ್ಕರಣ್ಣ, ಕರಾವಳಿ ಭಾಗದ ಅಭಿವೃದ್ಧಿಗೆ ಶ್ರಮಿಸಿದರು […]

