
ಕುಂದಾಪುರ ; ಮೂಡ್ಲಕಟ್ಟೆ ಎಂ ಐ ಟಿ ಐಕ್ಯೂಎಸಿ ವಿಭಾಗವು ಕುಂದಾಪುರ ಮೂಲದ ಎನ್ಜಿಒ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ನೊಂದಿಗೆ ಎಂಒಯುಗೆ ಸಹಿ ಹಾಕುವ ಮೂಲಕ ಸಹಯೋಗವನ್ನು ಪ್ರಾರಂಭಿಸಿದೆ. ಒಪ್ಪಂದದ ಪ್ರಕಾರ, ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಸುರಕ್ಷಿತ ಮತ್ತು ತಿಳುವಳಿಕೆಯುಳ್ಳ ಮಕ್ಕಳ ಸಮುದಾಯವನ್ನು ಸ್ಥಾಪಿಸಲು ಗ್ರಾಮ ಪಂಚಾಯತ್ ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಎನ್ಜಿಒ ಜೊತೆ ಕೆಲಸ ಮಾಡಲು ವೇದಿಕೆಯನ್ನು ಒದಗಿಸುತ್ತದೆ. ಎಂ ಐ ಟಿ ಕುಂದಾಪುರದಲ್ಲಿ ಮಾರ್ಚ್ 25, […]

ಮಂಗಳೂರು ; ವಿಶ್ವ ಕ್ಷಯ ರೋಗದ ದಿನದ ಅಂಗವಾಗಿ ಮಾಹಿತಿ ನೀಡುವ ಕಾರ್ಯಕ್ರಮವನ್ನು ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್ ನ ಸಭಾಂಗಣದಲ್ಲಿ ಮಾರ್ಚ್ 25ರಂದು ಹಮ್ಮಿಕೊಳ್ಳಲಾಯಿತು. ಬಿಎಸ್ಸಿ ನರ್ಸಿಂಗ್ ನ ಮೊದಲ ವರ್ಷದ ವಿದ್ಯಾರ್ಥಿನಿ ಲಿಶಾ ರವರು “ಹೌದು! ನಾವು TB ಗೆ ಕೊನೆ ಮಾಡಬಹುದು: ಬದ್ಧರಾಗಿರಿ, ಹೂಡಿಕೆ ಮಾಡಿ, ತಲುಪಿಸಿ” ಎಂಬ ಕ್ಷಯರೋಗ ಧ್ಯೇಯವನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಕ್ಷಯರೋಗದ ಅಧಿಕಾರಿ ಡಾ ಖತೀಜ ದಿಲ್ಶದ್ ರವರು ಕ್ಷಯರೋಗದ ತೀವ್ರತೆ , ಅದರಿಂದ […]

ಕುಂದಾಪುರದ ಮುಖ್ಯ ರಸ್ತೆ ಎ.ವಿ.ಎನ್. ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ “ಜಯ ಹೆಲ್ತ್ ಕೇರ್” ಕೇಂದ್ರದಲ್ಲಿ ಸಾರ್ವಜನಿಕರಿಗಾಗಿ ಉಚಿತ ಥೈರಾಯ್ಡ್ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಮಾರ್ಚ್ 30 ರಂದು ಆದಿತ್ಯವಾರ ಈ ಉಚಿತ ತಪಾಸಣೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆ ತನಕ ನಡೆಯಲಿದೆ ಎಂದು ಕನ್ಸಲ್ಟೆಂಟ್ ಸರ್ಜನ್ ಡಾ|| ಸಿದ್ಧಾರ್ಥ ಹೆಗ್ಡೆ ವೈ ತಿಳಿಸಿದ್ದಾರೆ.ತೀವ್ರ ತೂಕ ನಷ್ಟ ಅಥವಾ ತೂಕ ಹೆಚ್ಚಾಗುವುದು, ಮಲ ವಿಸರ್ಜನಾ ತೊಂದರೆ, ನಿದ್ರಾಹೀನತೆ ಮತ್ತು ಮನಸ್ಥಿತಿ ಬದಲಾವಣೆ, ತಾಪಮಾನ ಸೂಕ್ಷ್ಮತೆ, ಕೂದಲು ಉದುರುವಿಕೆ, […]

ಕುಂದಾಪುರ :ಕುಂದಾಪುರದ ಭಂಡಾರ್ಕಾರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿಗೆ ಪ್ರಧಾನಮಂತ್ರಿ ಕೌಶಲ ಕೇಂದ್ರ ಸ್ಥಾಪನೆಗೆ ಅನುಮತಿ ದೊರೆತಿದೆ.ಭಾರತದ ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಯುವ ಜನತೆಯನ್ನು ಉದ್ಯೋಗಕ್ಕೆ ಅಣಿ ಗೊಳಿಸುವ ನಿಟ್ಟಿನಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದ್ದು, ಯುವಜನತೆಗೆ ಉಚಿತವಾಗಿ ಕೌಶಲ್ಯಗಳನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುವುದು.ಕರ್ನಾಟಕದ ಮೂರು ಕಾಲೇಜುಗಳಿಗೆ ಈ ಕೇಂದ್ರ ಸ್ಥಾಪನೆಗೆ ಅನುಮತಿ ದೊರಕಿದೆ ಅದರಲ್ಲಿ ನಮ್ಮ ಭಂಡಾರ್ಕಾರ್ಸ್ ಕಾಲೇಜು ಒಂದಾಗಿದೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಸಿಟಿ ವಲಯ ಹಾಗೂ ಫೆರ್ಮಾಯ್ ಘಟಕ ಇವರ ಮುಂದಾಳತ್ವದಲ್ಲಿ ಮೊದಲ ಬಾರಿಗೆ ಮಹಿಳಾ ದಿನಾಚರಣೆ 2025ಮಾರ್ಚ್ 16 ಆದಿತ್ಯವಾರ ಸಂಜೆ 5 ಗಂಟೆಗೆ ಫೆರ್ಮಾಯ್ ಇಗರ್ಜಿಯ ಸಭಾಭವನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.ವೇದಿಕೆಯಲ್ಲಿ ಫೆರ್ಮಾಯಿ ಘಟಕದ ಆಧ್ಯಾತ್ಮಿಕ ನಿರ್ದೇಶಕರಾದ / ಫೆರ್ಮಾಯಿ ಇಗರ್ಜಿಯ ಧರ್ಮಗುರುಗಳಾದ ವಂದನೀಯ ಫಾದರ್ ಡಾಕ್ಟರ್ ಮಾರ್ಕ್ ಕ್ಯಾಸ್ತೆಲಿನೊ ಸಿಟಿ ವಲಯದ ಅಧ್ಯಕ್ಷರಾದ ಶ್ರೀಯುತ ಅರುಣ್ ಡಿಸೋಜಾ, ಶ್ರೀಮತಿ ಅಸುoಪ್ತಾ ಕ್ರಾಸ್ತಾ(ಸಿಟಿ ವಲಯ ಮಾಜಿ ಅಧ್ಯಕ್ಷರು), ಶ್ರೀಯುತ ಲ್ಯಾನ್ಸಿ […]

ಕುಂದಾಪುರ, ಮಾ.24: ಕುಂದಾಪುರ-ಬೈಂದೂರು ತಾಲೂಕುಗಳ ಭಾವನ ಮಹಿಳಾ ಒಕ್ಕೂಟದಿಂದ ಕುಂದಾಪುರ ಸಂತ ಮೇರಿಸ್ ಪ.ಪೂ. ಕಾಲೇಜಿನ ಸಭಾಭವನದಲ್ಲಿ ಮಾ.23 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.ಮುಖ್ಯ ಅತಿಥಿಗಳಾದ ಕುಂದಾಪುರ ವಲಯ ಪ್ರಧಾನರಾದ ಕುಂದಾಪುರ ರೋಜರಿ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಗಿಡಕ್ಕೆ ನೀರು ಎರೆಯುವೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ “ಮಹಿಳೆ ಶಕ್ತಿಯ ಸಂಕೇತ, ಪ್ರೇರಣೆಯ ಪ್ರತಿಕಾ, ಪ್ರೀತಿ ಸಹನೆ ಮತ್ತು ಧ್ರಡ ಸಂಕಲ್ಪದ ದೀಪ ಸ್ಥಂಬ, ನಿಮ್ಮ ಕನಸುಗಳನ್ನು ಹಿಂಬಾಲಿಸಿ, ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಿ’ ಎಂದು […]

ಗಂಗೊಳ್ಳಿ; ಕೊಸೆಸಾಂವ್ ಮಾತಾ ದೇವಾಲಯ ಗಂಗೊಳ್ಳಿಯಲ್ಲಿ ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಮುಂದಾಳತ್ವದಲ್ಲಿ, ಚರ್ಚ್ ಆರೋಗ್ಯ ಆಯೋಗ, ಗುರು ಜ್ಯೋತಿ ಸ್ಪೋರ್ಟ್ಸ್ ಕ್ಲಬ್, ಸೋಶಿಯಲ್ ವೆಲ್ಫೇರ್ ಫೆಡರೇಶನ್ ಸಹಯೋಗದೊಂದಿಗೆ ಮಾರ್ಚ್ 23 ಭಾನುವಾರ ಬೆಳಿಗ್ಗೆ ಅರ್ಧ ದಿನದ ” ಸಾರ್ವಜನಿಕ ಆರೋಗ್ಯ ತಪಾಸಣಾ ಶಿಬಿರ”ವು ಸಂತ ಜೋಸೆಫ್ ವಾಜ್ ಸಭಾಂಗಣದಲ್ಲಿ ಜರಗಿತು. ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಬಿಪಿ, ಡಯಾಬಿಟಿಸ್ ತಪಾಸಣೆ, ರಕ್ತವರ್ಗೀಕರಣ, ಪ್ಯಾಕೇಜ್ ಮೂಲಕ ಕಡಿಮೆ ದರದಲ್ಲಿ ವಿವಿಧ ರೀತಿಯ ರಕ್ತ ಪರೀಕ್ಷೆಗಳನ್ನು ಬಯೋಲೈನ್ ಲ್ಯಾಬೋರೇಟರಿ ಕುಂದಾಪುರ […]

ಕೋಟೇಶ್ವರ: ಊರಿನ ಅಭಿವೃದ್ದಿಗೆ ಸಂಘಟನೆ ಅಗತ್ಯ.ಸಂಘಟನೆ ಬೆಳೆಯಬೇಕಾದರೇ ಒಳ್ಳೆಯ ನಾಯಕತ್ವವುಳ್ಳ ಯುವಕರು ಬೇಕು.ಇಂತಹ ಯುವಪಡೆ ಬೀಜಾಡಿ ಮಿತ್ರ ಸಂಗಮದಲ್ಲಿ ಇದೆ ಎಂದು ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣದ ಪ್ರಾಂತ ಪ್ರಮುಖರಾದ ಪ್ರೇಮಾನಂದ ಶೆಟ್ಟಿ ಕಟ್ಕೇರೆ ಹೇಳಿದರು.ಅವರು ಶನಿವಾರ ಬೀಜಾಡಿ ಮಿತ್ರಸೌಧದ ವಠಾರದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ಮಿತ್ರ ಸಂಗಮ ಬೀಜಾಡಿ-ಗೋಪಾಡಿ ಇದರ 28ನೇ ವಾರ್ಷಿಕೋತ್ಸವ, ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ, ಸಾಧಕರಿಗೆ ಗೌರವಾರ್ಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ವಉದ್ಯೋಗಕ್ಕೆ ದನದ ಕರು ವಿತರಣೆ […]

ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರ ನಿಯೋಗದಿಂದ ಸನ್ಮಾನ ಮಂಗಳೂರು ;ವಿಧಾನ್ ಪರಿಷತ್ ಕಲಾಪದಲ್ಲಿ ಅಲ್ಪಸಂಖ್ಯಾತರ ಪರವಾಗಿ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ MLC ಐವನ್ ಡಿಸೋಜಾ ಮಂಗಳೂರು ಇವರನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ವತಿಯಿಂದ ಅಭಿನಂದಿಸುವ ಕಾರ್ಯಕ್ರಮವು ಮಂಗಳೂರಿನಲ್ಲಿ ನಿನ್ನೆ ಮಾರ್ಚ್ 22ರಂದು ಶನಿವಾರ ನಡೆಯಿತು.“ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ವಿಧೇಯಕ” ತಿದ್ದುಪಡಿ 2025 ರಲ್ಲಿ ಪ್ರವರ್ಗ-2ಬಿ ನಲ್ಲಿ – ಕರ್ನಾಟಕ ಸರಕಾರವು, ತನ್ನ ನಿರ್ಮಾಣದ ಕೆಲಸ ಕಾರ್ಯಗಳಿಗೆ ಕಾಂಟ್ರಾಕ್ಟ್ ಗಳನ್ನು ನೀಡುವಾಗ […]