ಶ್ರೀನಿವಾಸಪುರ: ಅಂತರರಾಜ್ಯ ಸಾರಿಗೆಯಲ್ಲಿ ವಿದ್ಯಾರ್ಥಿಗಳ ಪಾಸ್ ಅಂಗಿಕರಿಸಬೇಕು. ವಿದ್ಯಾರ್ಥಿಗಳ ಶಾಲೆಯ ಸಮಯದಲ್ಲಿ ಪ್ರತಿಯೊಂದು ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.ಬಸ್ಪಾಸ್ ಸಂಪೂರ್ಣವಾಗಿ ಉಚಿತಗೊಳಿಸಬೇಕು. ಹಾಗು ಉಪನ್ಯಾಸಕರ , ಶಿಕ್ಷಕರ ಒತ್ತಡಕ್ಕೆ ಕೆಲ ವಿದ್ಯಾರ್ಥಿಗಳು ಮಾನಸಿಕವಾಗಿ ಆತ್ಮಸ್ಥೈ ಕುಗ್ಗುತಿದ್ದು, ಇದೆನ್ನೆಲ್ಲಾ ಇಲಾಖಾಧಿಕಾರಿಗಳು ತನಿಖೆ ನಡೆಸಿ ಸರಿಪಡಿಸಬೇಕಾಗಿದೆ ನವ ಕರ್ನಾಟಕ ಸ್ವಾಭಿಮಾನ ವೇದಿಕೆ ರಾಜ್ಯ ಪ್ರದಾನ ಕಾರ್ಯದರ್ಶಿ ಸಾಧಿಕ್ ಅಹ್ಮದ್ ಒತ್ತಾಯಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಕನ್ನಡವೇ ಉಸಿರು ನವವೇದಿಕೆ, ನವ ಕರ್ನಾಟಕ ಸ್ವಾಭಿಮಾನ ಕನ್ನಡಿಗರ ಯುವ ಸೈನ್ಯ ರಾಜ್ಯ ಸಮಿತಿ […]
ಶ್ರೀನಿವಾಸಪುರ; ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಹೊಸ ವರ್ಷದ ಪ್ರಯುಕ್ತ ದೇವಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಜನ ಜಾತ್ರೆ ಅದ್ದೂರಿಯಾಗಿ ನಡೆಯಿತು.ಪಟ್ಟಣದ ಹೊರವಲಯದಲ್ಲಿರುವ ಕೇತಗಾನಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ನೆಲಸಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಪ್ರತಿ ವರ್ಷದಂತೆ ಈ ವರ್ಷವು ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು, ಬೆಳಗ್ಗೆ 5 ಗಂಟೆಯಿಂದಲೇ ದೇವಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಪಟ್ಟಣದ ನಾಗರೀಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ತಂಡೋಪ […]
ಶ್ರೀನಿವಾಸಪುರ; ಡಿ.31: ಕೆಸಿವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಿ ಒತ್ತುವರಿಯಾಗಿರುವ ಸರ್ಕಾರಿ ಆಸ್ತಿಗಳನ್ನು ತೆರವುಗೊಳಿಸಲು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ಅವರೆಕಾಯಿ ವಹಿವಾಟಿಗೆ ಸೂಕ್ತ ಜಾಗ ಗುರುತಿಸಲು ಜ.3ರ ಶುಕ್ರವಾರ ಖಾಲಿ ಬಿಂದಿಗೆಗಳು, ಅವರೆಕಾಯಿ ಸಮೇತ ತಾಲೂಕು ಕಚೇರಿ ಮುಂದೆ ಹೋರಾಟ ಮಾಡಲು ತೋಟಗಾರಿಕೆ ಆವರಣದಲ್ಲಿ ಕರೆದಿದ್ದ ರೈತಸಂಘದ ಮುಖಂಡರು ಪತ್ರಿಕಾ ಹೇಳಿಕೆ ಮುಖಾಂತರ ತಿಳಿಸಿದರು.ನಗರದ ಎಂಜಿ ರಸ್ತೆಯಲ್ಲಿ ನಡೆಯುತ್ತಿರುವ ಅವರೇಕಾಯಿ ವಹಿವಾಟನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಇಲ್ಲವೇ ಸೂಕ್ತ ಜಾಗವನ್ನು ಗುರುತಿಸುವಲ್ಲಿ ತಾಲೂಕು ಆಡಳಿತ ನಗರಸಭೆ […]
ಶ್ರೀನಿವಾಸಪುರ; ಭೀಮಾ ಕೋರೆಗಾಂವ್ ಯುದ್ದ ದಲಿತರ ಪಾಲಿಗೆ ಅತ್ಯಂತ ಮಹತ್ವದ ದಿನ ಎಂದ ದಲಿತ ಮುಖಂಡ ರಾಮಾಂಜಮ್ಮ .ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಭೀಮಾ ಕೋರೆಗಾಂವ್ ಕಾರ್ಯಕ್ರಮಕ್ಕೆ ಪ್ರಯಾಣ ಬೆಳಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಾಂಜಮ್ಮ ಹಿರಿಯರ ತ್ಯಾಗ, ಬಲಿದಾನ, ಶೌರ್ಯದ ಇತಿಹಾಸವೆ ಇರುವ ಸ್ಥಳ ಭೀಮಾ ಕೋರೆಗಾಂವ್ ಈ ಹೆಸರು ಭಾರತದ ಇತಿಹಾಸದಲ್ಲಿ ಹೆಸರಾದ ಕದನ ಹಾಗೂ ಭೂಮಿ ಇದು ದಲಿತರ ಆತ್ಮ ಗೌರವ ಹಾಗೂ ಹಕ್ಕುಗಳಿಗೆ […]
ಶ್ರೀನಿವಾಸಪುರ : ಆಧ್ಯಾತ್ಮಿಕ ಹಾಗೂ ವೈಜ್ಞಾನಿಕವಾಗಿ ಸಾಬೀತಾಗಿರುವಂತೆ ಓಂಕಾರವನ್ನು ಪ್ರತಿದಿನ ಪಠಿಸುವುದರ ಮೂಲಕ ನಮ್ಮ ಮಾನಸಿಕ ಒತ್ತಡಗಳು ನಿವಾರಣೆಯಾಗಿ ಹಾಗೂ ಭಾವನೆಗಳು ನಿಯಂತ್ರಣಕ್ಕೆ ಬಂದು ಮನಸ್ಸು ಪ್ರಹ್ಲಾದಕರವಾಗಿರುತ್ತದೆ ಎಂದು ಧಾರ್ಮಿಕ ಚಿಂತಕ ಕೆ.ಎಂ.ಸೋಮಶೇಖರ್ ತಿಳಿಸಿದರು.ಪಟ್ಟಣದ ಸಂತೆ ಮೈದಾನದಲ್ಲಿ ನೆಲಸಿರುವ ಶ್ರೀಬೋಯಿಕೊಂಡ ಗಂಗಮ್ಮ ದೇವಾಲಯದಲ್ಲಿ ಲೋಕಕಲ್ಯಾಣರ್ಥವಾಗಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ಕೇತಗಾನಹಳ್ಳಿ ಕೆ.ಎಂ. ಸೋಮಶೇಖರ್ ಧನಾತ್ಮಕ ಕಂಪನವನ್ನುಂಟು ಮಾಡುವುದರ ಜೊತೆಗೆ ಓಂಕಾರ ಉಚ್ಚಾರಣೆಯು ನಮ್ಮ ಶರೀರದಲ್ಲಿರುವ ಎಲ್ಲಾ ವಿಷಕಾರಿ ಅಂಶಗಳನ್ನು ಹೊರಹಾಕಿ ನಮ್ಮ ಹೃದಯದ […]
ಶ್ರೀನಿವಾಸಪುರ : ರಾಯಲ್ಪಾಡು ಕ್ರಾಸ್ ಸಮೀಪ ಭಾನುವಾರ ಮಧ್ಯರಾತ್ರಿ ಸುಮಾರು 12-15 ಗಂಟೆ ಬೆಂಗಳೂರಿನಿಂದ ಆಂದ್ರ ಪ್ರದೇಶದ ಕನಿಗಿರಿ ನಗರಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ 40 ಅಡಿ ಆಳದ ಕಂದಕ್ಕೆ ಬಿದ್ದು, ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬರು ಮೃತರಾಗಿದ್ದು ಉಳಿದ 39 ಜನರು ಗಾಯಗಳಾಗಿವೆ .ಭಾನುವಾರ ರಾತ್ರಿ ಬೆಂಗಳೂರಿನಿಂದ ಆಂದ್ರ ಪ್ರದೇಶದ ಕನಿಗಿರಿ ನಗರಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಾಯಲ್ಪಾಡು ಕ್ರಾಸ್ ಬಳಿ 40 ಅಡಿ ಆಲದ ಕಂದಕ್ಕೆ ಬಿದ್ದು ಬಸ್ನಲ್ಲಿ […]
ಕೋಲಾರ:- ನಗರದ 14 ಕೇಂದ್ರಗಳಲ್ಲಿ ಭಾನುವಾರ ನಡೆದ 2023-24 ನೇ ಸಾಲಿನ ಗೆಜೆಟೆಡ್ ಪೆÇ್ರಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆ ಎರಡು ಕೇಂದ್ರಗಳಲ್ಲಿ ಓಎಂಆರ್ನಲ್ಲಿ ಮುದ್ರಣ ದೋಷದಿಂದಾಗಿ 1 ಗಂಟೆ ತಡವಾಗಿ ಆರಂಭವಾಯಿತಲ್ಲದೇ ಶೇ.50ಕ್ಕಿಂತಲೂ ಹೆಚ್ಚು ಅಂದರೆ 2923 ಮಂದಿ ಗೈರಾಗಿದ್ದರು.ಪರೀಕ್ಷೆಗೆ ಒಟ್ಟು 5718 ಮಂದಿ ಕುಳಿತಿದ್ದು, ಎಲ್ಲಾ 14 ಕೇಂದ್ರಗಳ ಪೈಕಿ ನಗರದ ಬಾಲಕರ ಪ್ರಥಮ ದರ್ಜೆ ಕಾಲೇಜು, ಮಹಿಳಾ ಪ್ರಥಮ ದರ್ಜೆ ಕಾಲೇಜು ಕೇಂದ್ರಗಳಲ್ಲಿ ಓಎಂಆರ್ನಲ್ಲಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯಲ್ಲೇ […]
ಕೋಲಾರ:- ರಾಜ್ಯ ಸರ್ಕಾರಿನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಕ್ಷರಿ ಪುನರಾಯ್ಕೆಯಾದ ಹಿನ್ನಲೆಯಲ್ಲಿ ಕೆಜಿಎಫ್ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ ನೇತೃತ್ವದಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಷಡಕ್ಷರಿ ಅವರು ತಮ್ಮ ಮೊದಲ ಅವಧಿಯಲ್ಲಿ ಮಾಡಿದ ನೌಕರ ಸ್ನೇಹಿ ಕಾರ್ಯಚಟುವಟಿಕೆಗಳೇ ಅವರ ಗೆಲುವಿಗೆ ಕಾರಣವಾಗಿತ್ತು. ಅವರನ್ನು ಸೋಲಿಸಲು ಹಲವಾರು ಮಂದಿ ನಡೆಸಿದ ಷಡ್ಯಂತ್ರವನ್ನೂ ನೌಕರರು ವಿಫಲಗೊಳಿಸಿದರು ಎಂದು ತಿಳಿಸಿದರು.7ನೇ ವೇತನ ಆಯೋಗ ಜಾರಿ ಜತೆಗೆ ನೌಕರ ಸ್ನೇಹಿಯಾಗಿ ಅವರು ಮಾಡಿದ ಕೆಲಸಗಳು ನೂರಾರು ಇದ್ದು, ಇಂದು ನೌಕರರು […]
ಶ್ರೀನಿವಾಸಪುರ : ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದು ತಾ.ಪಂ. ಮಾಜಿ ಸದಸ್ಯ ಕೆ.ಕೆ.ಮಂಜುನಾಥ್ ಹೇಳಿದರು.ತಾಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್ ಹೈಸ್ಕೂಲ್ ಶಾಲಾವರಣದಲ್ಲಿ ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ರವರ ಸಾರಥ್ಯದಲ್ಲಿ ಶುಕ್ರವಾರ ಬೆಂಗಳೂರಿನ ವೈದೇಹಿ ಆಸ್ಪತ್ರೆ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಈ ಹಿಂದಿನ ದಿನಗಳಲ್ಲಿ ನಮ್ಮಲ್ಲಿವಾಂತಿ-ಬೇದಿ, ಟೈಫಾಯಿಡ್, ಕ್ಷಯ, ಕಾಲಾರದಂತಹ ರೋಗಗಳು […]

