
ಉಡುಪಿ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಮತ್ತು ಗುರಿ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಅವರು ಭಾನುವಾರ ಪಾಂಬೂರಿನ ಮಾನಸ ಪುನರ್ವಸತಿ ಕೇಂದ್ರದಲ್ಲಿ ಕಥೊಲಿಕ್ ಸಭಾ ಮತ್ತು ಜಾನ್ ಡಿ’ಸಿಲ್ವಾ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಹಲವಾರು ಅವಕಾಶಗಳಿವೆ ಆದರೆ ಅದನ್ನು ಪಡೆದುಕೊಳ್ಳುವತ್ತ ಕಠಿಣ ಪರಿಶ್ರಮ ಮತ್ತು ಸ್ಪರ್ಧಾತ್ಮಕ ಚಿಂತನೆ […]

ಮಲ್ಪೆ : ಜಾಗತೀಕರಣದಿಂದಾಗಿ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಉಂಟಾಗಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಅತೀವ ಬದಲಾವಣೆ ಕಾಣುತ್ತಿದ್ದು ಬಹುಕುಟುಂಬದಲ್ಲಿದ್ದ ಅನೇಕ ಪದ್ಧತಿ ರೀತಿ-ನೀತಿಗಳು ದೂರವಾಗಿ ಅಜ್ಜ-ಅಜ್ಜಿಯರ ಪ್ರೀತಿ ಮಮತೆ ಮಾರ್ಗದರ್ಶನ ಈಗ ನಮ್ಮ ಮಕ್ಕಳಿಗೆ ಮರೀಚಿಕೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶಾಲಾ ರಜಾ ದಿನಗಳಲ್ಲಿ ಮನೆಯಲ್ಲಿದ್ದು ಟಿ.ವಿ. ನೋಡುತ್ತಾ ಕಾಲಕಳೆಯಬೇಕಾಗಿದೆ. ಇದನ್ನು ದೂರ ಮಾಡಲು ಇಂತಹ ಶಿಬಿರಗಳಲ್ಲಿ ಭಾಗವಹಿಸಿದಾಗ ಮಕ್ಕಳಲ್ಲಿ ಏಕಾಗ್ರತೆ ಸೌಹಾರ್ದತೆ ಹೆಚ್ಚುತ್ತದೆ ಎಂದು ರೋ| ಶ್ರೀ ದೇವ ಆನಂದ್ ರೋಟರಿ ಜಿಲ್ಲಾ ಗವರ್ನರ್ […]

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ(ರಿ) ಬೆಂಗಳೂರು,ಕಾರ್ಕಳ ತಾಲೂಕು ಸಮಿತಿಯ ಮಹಾಸಭೆ ಹಾಗೂ 2022-25ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಉಡುಪಿ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಶ್ರೀಯುತ ಶ್ರೀಕಾಂತ್ ಶೆಣೈ ರವರ ಅಧ್ಯಕ್ಷತೆಯಲ್ಲಿ ಕಾರ್ಕಳದ ವಿದ್ಯುತ್ ಗುತ್ತಿಗೆದಾರರ ಸಂಘದ ಕಛೇರಿಯಲ್ಲಿ ನಡೆಯಿತು.ಈ ಸಭೆಯಲ್ಲಿ 2022-25 ನೇ ಸಾಲಿನ ಕಾರ್ಕಳ ತಾಲೂಕು ಸಮಿತಿಯ ಗೌ.ಅಧ್ಯಕ್ಷರಾಗಿ ಮಿರಾಂದ ಇಲೆಕ್ಟ್ರಿಕಲ್ಸ್ ಕಾರ್ಕಳ ಇದರ ಮಾಲೀಕರಾಧ ಶ್ರೀ ರಿಚಾರ್ಡ್ ಮಿರಾಂದ ರವರು ಸತತ 3ನೇ ಭಾರಿ 3ನೇ ವರ್ಷದ […]

ಬೆಥನಿ ಎಜುಕೇಶನಲ್ ಸೊಸೈಟಿ ® ಮಂಗಳೂರು ಬೆಥನಿ ಲಿಟಲ್ ಫ್ಲವರ್ ಆಫ್ ಸಿಸ್ಟರ್ಸ್ ಸಭೆಯಿಂದ ನಿರ್ವಹಿಸಲ್ಪಡುವ, ಪ್ಲಾಟಿನಂ ಜುಬಿಲಿ ಉದ್ಘಾಟನೆಯನ್ನು 12 ಅಕ್ಟೋಬರ್ 2022 ರಂದು ಮಂಗಳೂರಿನ ಸೇಂಟ್ ಸೆಬಾಸ್ಟಿಯನ್ ಚರ್ಚ್ ಬೆಂದೂರಿನಲ್ಲಿ ಪರಮಪ್ರಸಾದದ ಆರಾದನೆಯೊಂದಿಗೆ ಆಚರಿಸಲಾಯಿತು. ಬೆಥನಿ ಎಜುಕೇಷನಲ್ ಸೊಸೈಟಿ (BES) ಅನ್ನು 4 ಸೆಪ್ಟೆಂಬರ್ 1948 ರಂದು ಮದರ್ ಪೆಟ್ರಾ ಅವರೊಂದಿಗೆ ಮೊದಲ ಅಧ್ಯಕ್ಷರಾಗಿ ಅದರ ಸ್ಥಾಪಕ ಸೇವಕ ರೇಮಂಡ್ ಫ್ರಾನ್ಸಿಸ್ ಕ್ಯಾಮಿಲಸ್ ಮಸ್ಕರೇನ್ಹಾಸ್ ಅವರ ಆಶ್ರಯದಲ್ಲಿ ನೋಂದಾಯಿಸಲಾಯಿತು. ಇಂದು, ಇದು ಗ್ರಾಮೀಣ ಪ್ರದೇಶಗಳಲ್ಲಿ […]

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ,ಗೌತಮ್ ಶೆಟ್ಟಿ ಯವರ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಅಕ್ಟೋಬರ್ 15 ಮತ್ತು 16 ರಂದು 2 ನೇ ಆವೃತ್ತಿಯ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾವಳಿ ಕುಂದಾಪುರದ ನಾರಾಯಣಗುರು ಎ.ಸಿ ಹಾಲ್ ನಲ್ಲಿ ಜರುಗಲಿದೆ. 15 ಶನಿವಾರ ಬೆಳಿಗ್ಗೆ 9.30 ಗೆ ಸರಿಯಾಗಿ ನಡೆಯಲಿರುವ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀಕಾಂತ್ ಡಿ.ವೈ.ಎಸ್.ಪಿ ಕುಂದಾಪುರ,ವೀಣಾ ಭಾಸ್ಕರ್ ಮೆಂಡನ್ ಕುಂದಾಪುರ ಪುರಸಭೆ ಅಧ್ಯಕ್ಷೆ,ರಂಜನ್ ರಮೇಶ್ […]

PHOTOS;VARNA STUDIO GANGOLLI ಕುಂದಾಪುರ, ಅ.13: ಗಂಗೊಳ್ಳಿಯ ಪೀಟರ್ ಮತ್ತು ಜೂಡಿತ್ ರೆಬೆಲ್ಲೊ ಇವರ ಮಗನಾದ ಅಶ್ವಿನ್ ರೆಬೆಲ್ಲೊ ದಿನಾಂಕ 8 ರಂದು ಮಂಗಳೂರು 15 ವರ್ಷಗಳ ಶಿಕ್ಷಣ, ಧಾರ್ಮಿಕ ಶಿಕ್ಷಣ ಪಡೆದು, ಧರ್ಮಗುರುಗಳಾಗುವ ಯೋಗ್ಯತೆ ಸಂಪಾದಿಸಿ ಜೆಪ್ಪುವಿನ ಫಾತಿಮಾ ರೆಟ್ರೀಟ್ ಹೌಸ್ ನಲ್ಲಿ 6 ಜನ ದಿಯೋಕೆÇನಗಳೊಂದಿಗೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ದಿವ್ಯ ಹಸ್ತಗಳಿಂದ ಗುರು ದೀಕ್ಷೆ ಪಡೆದರು,ದಿನಾಂಕ 11 ರಂದು ಗಂಗೊಳ್ಳಿಯ ಕೊಸೆಸಾಂವ್ ಅಮ್ಮನ ಇಗರ್ಜಿಯಲ್ಲಿ ಧರ್ಮಗುರು ವಂ| […]

ಕೊಂಕಣಿ ನಾಟಕ ಸಭಾ (ಕೆಎನ್ಎಸ್) ನಡೆಸಿದ 58ನೇ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಅಕ್ಟೋಬರ್ 9 ಭಾನುವಾರ ಇಲ್ಲಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಿತು. ಕೆಎನ್ ಎಸ್ ನಾಡಗೀತೆ ಗಾಯನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕೆಎನ್ಎಸ್ನ ಉಪಾಧ್ಯಕ್ಷ ಲಿಸ್ಟನ್ ಡೆರಿಕ್ ಡಿಸೋಜ ಸ್ಪರ್ಧಿಗಳನ್ನು ಸ್ವಾಗತಿಸಿದರು. ಸ್ಪರ್ಧೆಯನ್ನು ಕೊಂಕಣಿ ನಾಟಕ ಸಭಾದ ಪೋಷಕ ಸಂತೋಷ್ ಸಿಕ್ವೇರಾ ದೀಪ ಬೆಳಗಿಸಿ ಉದ್ಘಾಟಿಸಿದರು ಮತ್ತು ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಡೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಮಾನವ ಸಂಪನ್ಮೂಲ ವ್ಯವಸ್ಥಾಪಕ ರೋನಿ ಬೈಂದೂರು ಆಗಮಿಸಿದ್ದರು. […]

ಉಡುಪಿ ಅಕ್ಟೋಬರ್ 9, 2022: ಉಡುಪಿ ಧರ್ಮಪ್ರಾಂತ್ಯದ ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ ವತಿಯಿಂದ ಉಡುಪಿಯ ಕನ್ನಪಾಡಿಯಲ್ಲಿರುವ ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಟೋಬರ್ 9 ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಒಂದು ದಿನದ ಯುವ ಸಮಾವೇಶ “ಎಮರ್ಜ್ 2022” ಆಯೋಜಿಸಲಾಗಿತ್ತು. ಐಸಿವೈಎಂ ಸೆಂಟ್ರಲ್ ಕೌನ್ಸಿಲ್ ವತಿಯಿಂದ ಆಯೋಜಿಸಲ್ಪಟ್ಟ ವೇದಿಕೆ ಕಾರ್ಯಕ್ರಮ ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮದ ಅಧ್ಯಕ್ಷ ಅತಿ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೋಬೋ, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಸಮಾವೇಶವನ್ನು […]

ಮಂಗಳೂರು: ಸ್ನೇಹಾಲಯ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಛೇರಿಯನ್ನು ಮಂಗಳೂರು ಬೆಂದೂರಿನ ಲೋಟೊಸ್ ಪ್ಲಾಜದಲ್ಲಿ ಮೂಡಬಿದ್ರಿಯ ಆಳ್ವಾಸ್ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಕುಮಾರಿ ಸಬಿತಾಮೋನಿಸ್ ಗೌರವಾನ್ವಿತ ಅತಿಥಿಗಳಾದ .ಡಾ.ವಸಂತ ಕುಮಾರ್ ಶೆಟ್ಟಿ ನಿರ್ದೇಶಕರು ಸಾನಿಧ್ಯ ಸಂಸ್ಥೆ, ಶ್ರೀ.ರಫೀಕ್ ಮಾಸ್ಟರ್, ಶ್ರೀ ಅವಲೋನ್ ತ್ರಾವೋ ಅವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು. ಸೇಂಟ್ ಸಾಬಾಸ್ಟಿಯನ್ ರ್ಚ್ಚಿನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಮೊಂತೆರೋ ಬೆಂದೂರಿನ ನೂತನ ಸ್ನೇಹಾಲಯ ದಪ್ರಧಾನ ಕಛೇರಿಯ ಆಶೀರ್ವಚನ ಕಾರ್ಯಕ್ರಮವನ್ನು ನೆರವೇರಿಸಿದರು. ಕಚೇರಿಯ ನಾಮಫಲಕ ಅನಾವರಣವನ್ನು ಮಂಗಳೂರು ಮಹಾನಗರ ಪಾಲಿಕೆಯ […]