ಕುಂದಾಪುರ,ಆ.11:ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯೊಳೊಗಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆ ಹಾಗೂ ನ್ರತ್ಯ ಸ್ಪರ್ಧೆಗಳು (ಆ.10 ರಂದು) ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿ ಜರಗಿತು.ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಅಗಮಿಸಿದ ಕುಂದಾಪುರ ತಾಲುಕಿನ ತಹಸಿಲ್ದಾರ್ ಶೋಭಲಕ್ಷ್ಮಿ ಮಾತನಾಡಿ ‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ಸಾವಿರ ಅಲ್ಲ ಲಕ್ಷಾಂತರರ ಲಕ್ಷಾಂತರ ಜನ ಹೋರಾಡಿದ್ದಾರೆ, ನಮ್ಮ ದೇಶದ ಸ್ವಾತಂತ್ರ್ಯಕಾಗಿ ಜೀವ ಬಲಿದಾನವನ್ನು ಅರ್ಪಿಸಿದ್ದಾರೆ, ನಮಗೆ ದೊರೆತ ಸ್ವಾತಂತ್ರದ ಸವಿ ನೆನಪಿಗೆ […]
ಹೆರಾಡಿ ಬಾರ್ಕೂರಿನ ಶ್ರೀ ವಿದ್ಯೇಶ ವಿದ್ಯಾಮಾನ್ಯ ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೇದ ಗಣಿತ ಮತ್ತು ಅಬ್ಯಾಕಸ್ ತರಗತಿಯ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಕಿತಾ ಕೊಠಾರಿ ವಹಿಸಿದ್ದರು. ವಿಶೇಷ ಅತಿಥಿ ಶ್ರೀಮತಿ ಸುನೀತಾ ಹೆಬ್ಬಾರ್, ರ್ಯಾಪಿಡ್ ಇನ್ಸ್ಟಿಟ್ಯೂಟ್ ಆಫ್ ಅಬ್ಯಾಕಸ್ನ ಆಡಳಿತ ನಿರ್ದೇಶಕಿ. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಕಿತಾ ಕೊಠಾರಿ ಸಮಾರಂಭವನ್ನು ಉದ್ಘಾಟಿಸಿದರು, ನಂತರ ಶ್ರೀಮತಿ ಸುನೀತಾ ಹೆಬ್ಬಾರ್ ಅವರ ಭಾಷಣದಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಅಬ್ಯಾಕಸ್ ಮತ್ತು ವೈದಿಕ ಮಠಗಳ ಮಹತ್ವವನ್ನು ತಿಳಿಸಿದರು. […]
ಎಸ್ ಆರ್ ಎಸ್ ಎಂ ನ್ಯಾಷನಲ್ ಸ್ಕೂಲ್ ಹೆರಾಡಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳು, ಸಮವಸ್ತ್ರಗಳು ಮತ್ತು ಕ್ರೀಡಾ ಉಡುಪುಗಳನ್ನು ಹಸ್ತಾಂತರಿಸಲಾಯಿತುಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ರಾಷ್ಟ್ರೀಯ ಪ್ರಾಥಮಿಕ ಶಾಲೆ ಹೆರಾಡಿ – ಬಾರ್ಕೂರು – ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಕ್ರೀಡಾ ಉಡುಪು, ಅಥ್ಲೆಟಿಕ್ಸ್ ಉಡುಪುಗಳು ಮತ್ತು ನೋಟ್ ಪುಸ್ತಕಗಳ ಉಚಿತ ವಿತರಣೆಯನ್ನು ಆಯೋಜಿಸಲಾಗಿದೆ.2024 ರ ಆಗಸ್ಟ್ 8 ರಂದು ಬೆಳಿಗ್ಗೆ 11.00 ಗಂಟೆಗೆ ಎಸ್ಆರ್ಎಸ್ಎಂ ರಾಷ್ಟ್ರೀಯ ಪ್ರಾಥಮಿಕ ಶಾಲೆಯಲ್ಲಿ ‘ದಿ ಬಾರ್ಕೂರು ಎಜುಕೇಶನಲ್ ಸೊಸೈಟಿ’ […]
ಆಗಸ್ಟ್ 4 ರಂದು ಶಿವಮೊಗ್ಗದಲ್ಲಿ ನಡೆದ ಓಪನ್ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ – 2024ರಲ್ಲಿ ಬಸ್ರೂರಿನ ಮಿಥುನ್.ಆರ್ 16 ರಿಂದ 17 ವರ್ಷದ ವಯೋಮಾನದ ವಿಭಾಗದಲ್ಲಿ ಕಟಾದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾನೆ.ಈತ ಬಸ್ರೂರಿನ ನಿವಾಸಿ ರಮೇಶ್ ಹಾಗೂ ಕುಸುಮ ದಂಪತಿಯ ಪುತ್ರ. ಆರ್.ಎನ್.ಶೆಟ್ಟಿ ಕಂಪೋಸಿಟ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ. ಸಾಧಕ ಕರಾಟೆಪಟು ಮಿಥುನ್ ಆರ್. ಗೆ ಕಾಲೇಜಿನ ಸಂಚಾಲಕರಾದ ಶ್ರೀ ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ […]
ಕುಂದಾಪುರ : ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಮತ್ತು ಸರಕಾರಿ ಪ್ರೌಢಶಾಲೆ ಬಸ್ರೂರು ಇವರ ಜಂಟಿ ಸಹಭಾಗಿತ್ವದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಕುಮಾರಿ ರಿಧಾ ಫರ್ವಿನ್ ಪ್ರಥಮ ಸ್ಥಾನ (ಪ್ರೌಢಶಾಲೆ ವಿಭಾಗ) ಹಾಗೂ ಕುಮಾರ ಕಿಶನ್ ಶೆಟ್ಟಿ ಮತ್ತು ಕುಮಾರ ತನ್ಮಯ್ ತೃತೀಯ ಸ್ಥಾನ ಪಡೆದಿರುತ್ತಾರೆ ಕುಮಾರಿ ರಿಧಾ ಫರ್ವಿನ್ ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆಕರಾಟೆ ಶಿಕ್ಷಕಿ ಕುಮಾರಿ ಮೇಘನಾ ತರಭೇತಿಯನ್ನು ನೀಡಿರುತ್ತಾರೆ. ಇವರಿಗೆ ಸಂಸ್ಥೆಯ […]
ಕುಂದಾಪುರ, ದಿನಾಂಕ: 06/08/2024 ರಂದು, ಸ್ಥಳೀಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಭಾಂಗಣದಲ್ಲಿಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಯಕುರಿತು ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಡುಪಿ ಡಯಟ್ನ ಉಪ ಪ್ರಾಂಶುಪಾಲರಾಗಿರುವ ಡಾ| ಅಶೋಕ್ಕಾಮತ್ರವರು ಹದಿಹರೆಯ ಎಂದರೆ ಯಾರು? ಅವರ ಸಮಸ್ಯೇಗಳೇನು. ಅವರ ಆಸೆಗಳೇನು ಹಾಗೂ ಸಂಪರ್ಕ ಮಾದ್ಯಮವನ್ನು ಉಪಯೋಗಿಸುವುದರಿಂದಾಗುವ ಪರಿಣಾಮವೇನು ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಮೊಬೈಲ್ತಲೆ ಬಗ್ಗಿಸಿ ನನ್ನನ್ನು ನೋಡು ನಾನು ನಿಮ್ಮತಲೆಯನ್ನು ಎತ್ತದಂತೆ ಮಾಡುತ್ತೇನೆ. ಅದೇ ನೀವುತಲೆ ಬಗ್ಗಿಸಿ ಪುಸ್ತಕವನ್ನು ನೋಡು […]
Reported by: P. Archibald Furtado. Photographs arranged by: Praveen Cutinho. ಕಲ್ಯಾಣಪುರ : ವಿಶಾಲವಾದ ಮತ್ತು ಕಲಾತ್ಮಕವಾಗಿ ಹೊಸದಾಗಿ ನಿರ್ಮಿಸಲಾದ ಮೌಂಟ್ ರೋಸರಿ ಚರ್ಚ್ ಅನ್ನು 2014 ರಲ್ಲಿ ಆಶೀರ್ವದಿಸಿ ಉದ್ಘಾಟಿಸಲಾಯಿತು ಮತ್ತು ಈ ವರ್ಷ ಅದರ ದಶಮಾನ ವರ್ಷ, 10 ವರ್ಷಗಳು ಪೂರ್ಣಗೊಂಡಿದೆ ಮತ್ತು ಈ ಐತಿಹಾಸಿಕ ಮತ್ತು ಸಂತೋಷದಾಯಕ ಘಟನೆಯ ನೆನಪಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಪ್ಯಾರಿಷ್ ಯೋಜಿಸಿದೆ. ‘ವಾರ್ಡ್ ಮಟ್ಟದ ಗಾಯನ, ನೃತ್ಯ ಮತ್ತು ಸ್ಕಿಟ್ಸ್ ಸ್ಪರ್ಧೆಗಳು’ ಮುಂಚೂಣಿಯಲ್ಲಿರುವ ಪ್ಯಾರಿಷ್ನ ರೋಮಾಂಚಕ […]
ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ರಾತ್ರಿ ಸಮಯ ಕಳ್ಳರ ಓಡಾಟವಿದೆ ಎಂಬ ವದಂತಿಯೊಂದು ಹರಿದಾಡುತ್ತಿದ್ದು ನಾಗರಿಕರು ಭೀತಿಯಾಗಿದ್ದಾರೆ. ಕೊಲ್ಲೂರು ಠಾಣಾ ವ್ಯಾಪ್ತಿಯ ಬೀಸಿನಪಾರೆ, ನಿಡುಟಿ, ಹುಯ್ಯಂಗಾರು, ಬೋಗಿಹಾಡಿ, ಜನ್ನಾಲು, ಹೊಸೂರು, ಜಡ್ಕಲ್, ಇಡೂರು-ಕುಂಜ್ಞಾಡಿ ಭಾಗದಲ್ಲಿ ಹಾಗೂ ಬೈಂದೂರು ವ್ಯಾಪ್ತಿಯ ತಗ್ಗರ್ಸೆ, ಶಿರೂರು, ಕಿರಿಮಂಜೇಶ್ವರ, ಯಳಜಿತ್ ಮೊದಲಾದ ಭಾಗದಲ್ಲಿ ವದಂತಿ ಕೇಳಿಬರುತ್ತಿದೆ. ಯಾರೋ ಓಡಾಡಿದಂತೆ ಭಾಸವಾಗುವುದು, ಬಾಗಿಲು ತಟ್ಟುವುದು, ಟಾರ್ಚ್ ಲೈಟ್ ಬಿಡುವುದು, ನಾಯಿ ಬೊಗಳುವುದು ಎಂದು ಜನರು ಆರೋಪಿಸುತ್ತಿದ್ದಾರೆ. ಅಲ್ಲದೆ ಪೊಲೀಸರಿಗೂ ಮಾಹಿತಿ […]
ಉಡುಪಿ : ರಾಜ್ಯಸಭಾ ಸದಸ್ಯ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗರಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ಪ್ರಧಾನ ಕಾರ್ಯದರ್ಶಿ, ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ಶೇಕ್ ವಹಿದ್ ಉಡುಪಿ ಇವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಡಾ. ಶೇಕ್ ವಹಿದ್ ಉಡುಪಿ, ಕಷ್ಟದಲ್ಲಿರುವ ರೋಗಿಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. […]

