ಕುಂದಾಪುರ,ದಿನಾಂಕ:25.09.2024 ರಂದು ನಗರದ ಸೈ0ಟ್ ಮೇರಿಸ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಸೂಸಲು “ಉತ್ಕರ್ಷ -2024″ಎನ್ನುವ ಹೆಸರಿನಿಂದ ವೇದಿಕೆ ಸಜ್ಜುಗೊಳಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಮೇರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕರು ಹಾಗೂ ಕುಂದಾಪುರ ಚರ್ಚಿನ ಪ್ರಧಾನ ಧರ್ಮ ಗುರುಗಳಾಗಿರುವ ಅತೀ ವಂದನೀಯ ಫಾದರ್ ಪಾವ್ಲ್ ರೇಗೊರವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ, ‘ಪ್ರತಿಭೆ ಎಲ್ಲರಲ್ಲೂ ಇದೆ. ಸರಿಯಾದ ವೇದಿಕೆ ಸಿಕ್ಕಾಗ ಬಳಸಿ ಕೊಳ್ಳಬೇಕು ಎನ್ನುತ್ತಾ ಎಲ್ಲರೂ ತಮ್ಮತಮ್ಮಲ್ಲಿಯ ಪ್ರತಿಭೆಯನ್ನು ಸರಿಯಾಗಿ ತೋರ್ಪಡಿಸಿಕೊಳ್ಳಬೇಕು’ ಎಂದು […]
ಕೊಲ್ಲುರು ಠಾಣಾ ವ್ಯಾಪ್ತಿಯ ಇಡೂರು ಕುಂಜಾಡಿ ಸಮೀಪದ ಜನ್ನಾಲ್ ಎಂಬಲ್ಲಿ ಟೇಂಪೊ ಹಾಗೂ ಬಸ್ ನಡುವೆ ಅಪಘಾತ ಹಲವರಿಗೆ ಗಾಯಗಳಾಗಿವೆ. ಬಸ್ಸು ಕುಂದಾಪುರ ಹೆಮ್ಮಾಡಿ ಮಾರ್ಗವಾಗಿ ಕೊಲ್ಲೂರಿಗೆ ತೆರಳುತೀತ್ತು. ಬಸ್ಸನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಬಸ್ಸಿನಲ್ಲಿ ೩೦ ಕ್ಕೂ ಹೇಚ್ಚು ಪ್ರಯಾಣಿಕರಿದ್ದರು.ಅದರಲ್ಲಿ ಹೆಚ್ಚಿನವರು ಕಾಲೇಜು ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ ರಾಘವೇಂದ್ರ ೪೩, ವಾಸಿಂ (೩೦) ಟೇಂಪೊನಲ್ಲಿದ್ದವರು, ಬಸ್ಸಿನಲ್ಲಿದ್ದ ಅಮ್ರತ (೧೭) ಪ್ರತ್ಯಸ್ಥಿ (೧೬) ಅಖಿತ್ (೨೮) ಗಾಯಾಳುಗಳೆಂದು ಗಾಯಾಳುಗಳೆಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ […]
ಕುಂದಾಪುರ : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಂ ಹಾಗೂ ವಿಕೆಆರ್ ಶಾಲೆಗಳ ಟೀಚರ್ ಟ್ರೈನಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ 25.09.2024 ರಂದು ಪ್ರಿಸ್ಕೂಲ್ ವಿದ್ಯಾರ್ಥಿಗಳಿಗೆ ಸುಂದರ ಕೈಬರಹ ಎನ್ನುವ ವಿಷಯದ ಕುರಿತು ಕಾರ್ಯಾಗಾರ ನೆರವೇರಿತು. ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕಿ ಹಾಗೂ ಕೈಬರಹ ಪರಿಣಿತರಾಗಿರುವ ಶ್ರೀಮತಿ ಕವಿತಾ ಪಿ ಅವರು ಶಾಲಾ ಪೂರ್ವ ಮಕ್ಕಳ ಭಾವನಾತ್ಮಕ ಕೈಬರಹದ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿತಾ ನೀಡಿದರು. ಸಂಸ್ಥೆಯ ಪ್ರಾಂಶುಪಾಲೆ ಆಗಿರುವ ಡಾ. ಚಿಂತನಾ ರಾಜೇಶ್ ಹಾಗೂ ವಿಷಯ […]
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ – ಕಾರ್ಮಿಕ ಸಂತ ಜೋಸೆಫ್ ಚರ್ಚ್ ವಾಮಂಜೂರ್, ಹಾಗೂ “ಸಾಂಗಾತಿ ವಾಮಂಜೂರ್” ಇವರ ಜಂಟಿ ಆಶ್ರಯದಲ್ಲಿ “ಕೊಂಕಣಿ ಕಲಾ ಸಂಭ್ರಮ್” ಕಾರ್ಯಕ್ರಮ ಸೆಪ್ಟೆಂಬರ್ 22 ರಂದು ವಾಮಂಜೂರ್ ಚರ್ಚ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಸಿಟಿ ವಲಯದ ಮುಖ್ಯ ಧರ್ಮಗುರು ಹಾಗೂ ವಾಮಂಜೂರು ಚರ್ಚ್ನ ಧರ್ಮಗುರು ಆತೀ ವಂ| ಫಾದರ್ ಜೇಮ್ಸ್ ಡಿಸೋಜ, ವಂ| ಫಾದರ್ ಐವನ್ ಅಶ್ವಿನ್ ಡಿಸೋಜ ವಾಮಂಜೂರು ಚರ್ಚ್ನ ಸಹಾಯಕ ಧರ್ಮಗುರುಡೊಲ್ಪಿ ಎಫ್ ಲೋಬೊ,ಹಿರಿಯ ಸಾಹಿತಿ […]
ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ವಾರದ ಆರು ದಿನ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಣಿಗೆ ಚಾಲನೆ ಕುಂದಾಪುರ:ರಾಜ್ಯ ಸರಕಾರದ ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜಿಂ ಪ್ರೇಮಜೀ ಫೌಂಡೇಶನ್ ಬೆಂಗಳೂರು ಇವರ ಅನುದಾನದ ಸಹಭಾಗಿತ್ವದಲ್ಲಿ ವಾರದ ಆರು ದಿನ ವಿದ್ಯಾರ್ಥಿ ಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ಬುಧವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಾಯಿತು. ಶಾಲಾ ಸಂಚಾಲಕರೂ,ಕುಂದಾಪುರ ವಲಯದ ಧರ್ಮಗುರು ಅತೀ ವಂ.ಪಾ.ಪೌಲ್ ರೋಗೋ ಚಾಲನೆ ನೀಡಿ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಶಾಲಾ […]
ಬಾರ್ಕೂರು: NJC ಬಾರ್ಕೂರ್ ಹಿಂದಿನ ವಿದ್ಯಾರ್ಥಿಗಳು ಒಟ್ಟುಗೂಡುತ್ತಿದ್ದಂತೆ, ಕ್ರಿಯೆಯಲ್ಲಿ ಶ್ರೀಮಂತ ಪರಂಪರೆ: ಒಂದುಗೂಡಿಸಿ, ಪ್ರೇರೇಪಿಸಿ ಮತ್ತು ಸಾಧಿಸಿ….NJC ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆಯು ಭಾನುವಾರ, 22ನೇ ಸೆಪ್ಟೆಂಬರ್, 2024 ರಂದು ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 10.30 ಕ್ಕೆ ನಡೆಯಿತು. ಶ್ರೀಮತಿ ನಾಗರತ್ನ ಮತ್ತು ಶ್ರೀಮತಿ ಗೌರಿಯವರ ಭಾವಪೂರ್ಣ ಸ್ತೋತ್ರದ ಮೂಲಕ ಸರ್ವಶಕ್ತ ಪ್ರಭುಗಳ ಆಶೀರ್ವಾದವನ್ನು ಕೋರುವ ಮೂಲಕ ಕಾರ್ಯಕ್ರಮವನ್ನು ಪ್ರಾರ್ಥನಾಪೂರ್ವಕವಾಗಿ ಪ್ರಾರಂಭಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಶ್ರೀ ಹರೀಂದ್ರನಾಥ ಶೆಟ್ಟಿಯವರು ಎಲ್ಲಾ ಅತಿಥಿಗಳು ಮತ್ತು ಪ್ರತಿನಿಧಿಗಳನ್ನು ಆತ್ಮೀಯವಾಗಿ […]
ಶ್ರೀನಿವಾಸಪುರ : ತಾಲೂಕಿನ ರಾಯಲ್ಪಾಡು ಸಮೀಪ ಇತ್ತೀಚಿಗೆ ಮಹಿಳಾ ಆಯೋಗದ ರಾಜ್ಯಧ್ಯಕ್ಷೆ ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡದೆ ಸರ್ಕಾರ ಸೌಲಭ್ಯಗಳಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ತಾಲೂಕೂ ಆಡಳಿತವು ಗ್ರಾಮದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಗ್ರಾಮವಾಸ್ತವ್ಯ ವ್ಯವಸ್ಥೆ ಮಾಡಲಾಗಿತ್ತು . ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವ ವ್ಯವಸ್ಥೆ ಮಾಡುವ ಉದ್ದೇಶದಿಂದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಶ್ರಮಿಸುವಂತೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಸೂಚಿಸಿದರು. ರಾಯಲ್ಪಾಡು ಸಮೀಪದ ಹಕ್ಕಿ […]
ಕೋಲಾರ,ಸೆ.22: ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯಾದ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನದ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವೈ.ಶಿವಕುಮಾರ್ ಅವರನ್ನು ನೇಮಕ ಮಾಡಿದ್ದಂತಹ ಮುಖ್ಯಮಂತ್ರಿಗಳಾದಂತಹ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಶಾಸಕರಾದ ಕೊತ್ತೂರು ಜಿ. ಮಂಜುನಾಥ್ ಅವರ ನೇತೃತ್ವದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ವೈ.ಶಿವಕುಮಾರ್ ಬೇಟಿ ಮಾಡಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ವಕ್ಕಲೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ರಾಮಸಂದ್ರ ಕುಮಾರ್, ಗ್ರಾಮ ಪಂಚಾಯತಿ ಸದಸ್ಯ ಅಪ್ಪಸಂದ್ರ ರಘು, […]

