ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು – ಎ.ವೆಂಕಟರೆಡ್ಡಿ

ಶ್ರೀನಿವಾಸಪುರ: ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಬೈರವೇಶ್ವರ ವಿದ್ಯಾ ನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ ಹೇಳಿದರು.
ಪಟ್ಟಣದ ಕರ್ನಾಟಕ ಸರ್ಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಜಾಗೃತಿ ವೇದಿಕೆ, ಬಳ್ತಂಗಡಿ ಅಖಿಲ ಜನಜಾಗೃತಿ ವೇದಿಕೆ, ಡಿಜಿ ಯೋಜನೆ ಹಾಗೂ ಸ್ಥಳೀಯ ಉನ್ನತೀಕೃತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಈಚೆಗೆ ಏರ್ಪಡಿಸಿದ್ದ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುಶ್ಚಟಗಳು ಮನುಷ್ಯನ ಆತ್ಮಬಲ ಕುಗ್ಗಿಸುತ್ತವೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕೆಡಲು ಕಾರಣವಾಗುತ್ತವೆ. ಅಕ್ರಮ ಚಟುವಟಿಕೆ, ಅನೈತಿಕ ನಡವಳಿಕೆ ಮತ್ತು ಅಪರಾಧಕ್ಕೆ ಪ್ರೇರಣೆ ನೀಡುತ್ತವೆ. ಮನುಷ್ಯ ನೈತಿಕವಾಗಿ ಬೆಳೆಯಬೇಕು. ಯಾವುದೇ ಕಾರಣಕ್ಕೂ ದುಶ್ಚಟಗಳ ದಾಸರಾಗಬಾರದು ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಂ.ಬೈರೇಗೌಡ ಮಾತನಾಡಿ ಆತ್ಮಗೌರವ ಹಾಗೂ ದೃಢ ಸಂಕಲ್ಪ ಇದ್ದಲ್ಲಿ ಯಾವುದೇ ದುಶ್ಚಟ ಹತ್ತಿರ ಸುಳಿಯುವುದಿಲ್ಲ. ಒಳ್ಳೆ ವ್ಯಕ್ತಿಗಳೊಂದಿಗೆ ಸ್ನೇಹ ಮಾಡಬೇಕು. ಉತ್ತಮ ವಿಚಾರಗಳ ಬಗ್ಗೆ ಚರ್ಚಿಸಬೇಕು. ಕೆಟ್ಟ ಯೋಚನೆಗಳು ಮನಸ್ಸಿಗೆ ಬರದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಅವರು ಹೇಳುವಂತೆ ಕುಡಿತ ಮತ್ತಿರ ದುಶ್ಚಟಗಳು ಮನುಷ್ಯನ ಆತ್ಮ ಕೊಲ್ಲುತ್ತವೆ. ದುಶ್ಚಟ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ. ಸಮಾಜದಲ್ಲಿ ವ್ಯಕ್ತಿಗೌರವ ಸಿಗದಂತೆ ಮಾಡುತ್ತದೆ. ಅಪರಾಧ ಕೃತ್ಯದಲ್ಲಿ ಭಾಗಿಯಾದಲ್ಲಿ, ಜೈಲಿನಲ್ಲಿ ಕೊಳೆಯಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿ.ವಾಸುದೇವ, ಗಿರಿಜಾ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ನಾಗವೇಣಿ ರೆಡ್ಡಿ, ಎಂಜಿನಿಯರ್ ಮಮತಾ ಕಾಂತರಾಜ್, ಡಿಜಿವೈ ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಮೇಲ್ವಿಚಾರಕ ನರೇಶ್ ಇದ್ದರು.

ನಿರ್ಮಲ ಮಹಿಳಾ ಸೇವಾ ಕೇಂದ್ರದಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ

ಭದ್ರಾವತಿಯ ನಿರ್ಮಲ ಮಹಿಳಾ ಸೇವಾ ಕೇಂದ್ರದಿಂದ ಎಂ ಸಿ ಹಳ್ಳಿಯ ಭದ್ರಗಿರಿ ದೇವಸ್ಥಾನದ ಸಮುದಾಯ ಭವನದಲ್ಲಿ, ಭದ್ರಾವತಿ ಸರ್ಕಾರಿ ಶಾಲೆಯ ವಿಶೇಷ ಭೋದನಾ ವಿದ್ಯಾರ್ಥಿಗಳಿಗೆ ಮತ್ತು ಚಿಲ್ಡ್ರನ್ ಕ್ಲಬ್ ನ ಮಕ್ಕಳಿಗೆ ಮಕ್ಕಳ ವ್ಯಕ್ತಿತ್ವ ವಿಕಸನ ಕುರಿತು ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭದ್ರಗಿರಿ ಕ್ಷೇತ್ರದ ಶ್ರೀ ಶ್ರೀ ಮುರುಗೇಶ್ ಸ್ವಾಮಿಗಳು ಮಾತನಾಡಿ ಮಕ್ಕಳ ಸಮಾಜದ ಅವಿಭಾಜ್ಯ ಅಂಗ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಮಕ್ಕಳ ವ್ಯಕ್ತಿತ್ವ ವಿಕಸನ ಶಿಕ್ಷಣದ ಜೊತೆಗೆ ಇತರೆ ಆಟೋಟಗಳು, ದೈಹಿಕ ಮತ್ತು ಮನಸ್ಸಿಕ ಸ್ಥಿರತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು, ಭದ್ರಗಿರಿ ಟ್ರಸ್ಟ್ ನ ಮುಖಂಡರಾದ ಶ್ರೀ ಸುಂದರ್ ಮಾತನಾಡಿ ಭದ್ರಗಿರಿಯ ಪುಣ್ಯಕ್ಷೇತ್ರದಲ್ಲಿ ನಿರ್ಮಲ ಮಹಿಳಾ ಸೇವಾ ಕೇಂದ್ರ ನಡೆಸುತ್ತಿರುವ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕ್ಷೇತ್ರದಿಂದ ಸಂಪೂರ್ಣ ಸಹಕಾರ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಕೂಡಾ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದರು , ಫಾ. ಸಂತೋಷ್ ವಿನ್ಸೆಂಟ್ ಡಿ ‘ ಅಲ್ಮೆಡಾ ರವರು ಮಕ್ಕಳಿಗೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂದಿಸಿದ ಕಥೆಗಳನ್ನು ಮಕ್ಕಳಿಗೆ ಭೋದಿಸಿದರು, ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ ಭದ್ರಗಿರಿ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಗೋಶನ್ ನಿರ್ಮಲ ಮಹಿಳಾ ಸೇವಾಕೇಂದ್ರದ ನಿರ್ದೇಶಕರಾದ ಸಿ. ತೆರೇಸಾ ಮಸ್ಕರೇನ್ಹಸ್ ಸಿಬ್ಬಂದಿಗಳಾದ ಸಹಾಯ ಮೇರಿ, ಜಯಂತಿ, ಸತ್ಯವತಿ, ತೆರೇಸಾ ಕೌಸಲ್ಯ, ಅಂಗನವಾಡಿ ಕಾರ್ಯಕತೆಯರ ಮಾರ್ಗದರ್ಶಕರಾದ ಶ್ರೀಮತಿ ಜ್ಯೋತಿ ಎಸ್ ಕುಂಬಾರ, ಪೌಷ್ಟಿಕ ಆಹಾರ ಸಲಹೆಗಾರರದ ಶ್ರೀ ಗುರುನಾಥ್ ಆಚಾರ್ ಮತ್ತು ಮಕ್ಕಳು ಭಾಗವಹಿಸಿದ್ದರು.

ಹಾಸ್‍ಮ್ಯಾಟ್ ಆಸ್ಪತ್ರೆಯಿಂದ ಅಪರೂಪದ ಸಾಧನೆ-ಮೇವು ಕತ್ತರಿಸುವ ಯಂತ್ರದಲ್ಲಿ ಕಡಿತಗೊಂಡ ಮಹಿಳೆಯ ಬೆರಳುಗಳ ಜೋಡನೆ ಯಶ್ವಸಿ

ಕೋಲಾರ,ಅ.10: ಅಕ್ಟೋಬರ್ 1 ರಂದು ಬೆಳಿಗ್ಗೆ 11:30 ಗಂಟೆಯ ಸುಮಾರಿಗೆ 44 ವರ್ಷದ ಮಂಜುಳಾ ಇವರಿಗೆ ಆಕಸ್ಮಿಕವಾಗಿ ವಿದ್ಯುತ್ ಮೇವು ಕತ್ತರಿಸುವ ಯಂತ್ರದಲ್ಲಿ ಎಡಗೈಗೆ ಗಾಯವಾಗಿದೆ.

ಇದು ಈ ಕೆಳಗಿನ ಗಾಯಗಳಿಗೆ ಕಾರಣವಾಯಿತು.


ಅವಳ ಹೆಬ್ಬೆರಳಿನ ಸಂಪೂರ್ಣ ಅಂಗಚ್ಛೇದನ, ಅವಳ ತೋರುಬೆರಳಿನ ಸಂಪೂರ್ಣ ಅಂಗಚ್ಛೇದನ, ಅವಳ ಮಧ್ಯದ ಬೆರಳನ್ನು ಸಂಪೂರ್ಣವಾಗಿ ಕತ್ತರಿಸುವುದು, ಅವಳ ಉಂಗುರದ ಬೆರಳನ್ನು ಸಂಪೂರ್ಣವಾಗಿ ಕತ್ತರಿಸುವುದು ಎಂಬುದಾಗಿತ್ತು.
ಆದರೆ ಕೋಲಾರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹಾಸ್‍ಮ್ಯಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಳು ಅದೇ ದಿನ ಮಧ್ಯಾಹ್ನ 3 ಗಂಟೆಗೆ ನಮ್ಮ ತುರ್ತು ವಿಭಾಗಕ್ಕೆ ಬಂದಳು. ಅಂದರೆ, ಗಾಯದ 4 ಗಂಟೆಗಳ ಒಳಗೆ 6 ಗಂಟೆಗಳ ಒಳಗೆ ಬರುವ ಸಮಯ ಮುಖ್ಯವಾಗಿದೆ.
ಸಂಬಂಧಿಕರು ಭಾಗಗಳನ್ನು ಸೂಕ್ತವಾಗಿ ತಂದಿದ್ದರು (ಅಂದರೆ – ಕತ್ತರಿಸಿದ ಭಾಗಗಳನ್ನು ಒಂದು ಗಾಜ್ ಪೀಸ್ನಲ್ಲಿ ಸುತ್ತಿ ಐಸ್ ಬಾಕ್ಸ್ನಲ್ಲಿ ಇರಿಸಿ) ಆಕೆಯ ಗಾಯಗಳನ್ನು ದಾಖಲಿಸಿದ ನಂತರ ಮತ್ತು ಸಂಬಂಧಿಕರಿಗೆ ವಿವರಿಸಿದ ನಂತರ ಕತ್ತರಿಸಿದ ಭಾಗಗಳನ್ನು ಮೊದಲು ಆಪರೇಟಿಂಗ್ ಥಿಯೇಟರ್‍ಗೆ ತೆಗೆದುಕೊಂಡು ಶಸ್ತ್ರಚಿಕಿತ್ಸಾ ಸೂಕ್ಷ್ಮದರ್ಶಕದ ಅಡಿಯಲ್ಲಿ ಪರೀಕ್ಷಿಸಲಾಯಿತು.
ಮೂಳೆಚಿಕಿತ್ಸೆಯ ಅಧ್ಯಕ್ಷ ಮತ್ತು ಮುಖ್ಯಸ್ಥ ಡಾ.ಥಾಮಸ್ ಚಾಂಡಿ ಅವರ ಪ್ರಕಾರ, ಡಾ.ಕಣ್ಣನ್ ಕರುಪ್ಪಯ್ಯ ಕುಮಾರ್ (ಹ್ಯಾಂಡ್ ಮತ್ತು ಮೈಕ್ರೊ ವಾಸ್ಕುಲರ್ ಸರ್ಜನ್) ಮತ್ತು ಡಾ.ದೀಪು ಎನ್.ಕೆ (ಪ್ಲಾಸ್ಟಿಕ್ ಮತ್ತು ಮೈಕ್ರೋ ನಾಳೀಯ ಶಸ್ತ್ರಚಿಕಿತ್ಸಕ), ವಿಶೇಷ ಆಪರೇಟಿಂಗ್ ಮೈಕ್ರೋಸ್ಕೋಪ್ ಬಳಸಿ ಶಸ್ತ್ರಚಿಕಿತ್ಸೆ ನಡೆಸಿದರು. (ಇದು ಅಂಗಾಂಶಗಳನ್ನು ಹಿಗ್ಗಿಸುತ್ತದೆ 10- 20 ಬಾರಿ). ಬೆರಳುಗಳ ಅಪಧಮನಿಗಳು ತೆಳುವಾದ ಹತ್ತಿ ದಾರದ ಗಾತ್ರವನ್ನು ಹೊಂದಿರುತ್ತವೆ. ಅರಿವಳಿಕೆ ತಜ್ಞ ಡಾ.ಗೌತಮ್ ಪಟೇಲ್ ಕತ್ತರಿಸಿದ ಎಲ್ಲಾ ಅಪಧಮನಿಗಳು, ರಕ್ತನಾಳಗಳು, ನರಗಳು ಮತ್ತು ಸ್ನಾಯುರಜ್ಜುಗಳನ್ನು ಪುನರ್ನಿರ್ಮಿಸಲಾಯಿತು ಮತ್ತು ಮುರಿದ ಮೂಳೆಗಳನ್ನು ಶಸ್ತ್ರಚಿಕಿತ್ಸೆಯ ತಂತಿಗಳನ್ನು ಬಳಸಿ ಸರಿಪಡಿಸಲಾಯಿತು. ಭಾನುವಾರ ಸಂಜೆ 4 ಗಂಟೆಗೆ ಶಸ್ತ್ರಚಿಕಿತ್ಸೆ ಪ್ರಾರಂಭವಾಯಿತು ಮತ್ತು ಮರುದಿನ ಬೆಳಿಗ್ಗೆ (ಸೋಮವಾರ ಬೆಳಿಗ್ಗೆ) 4 ಗಂಟೆಗೆ ಮುಕ್ತಾಯವಾಯಿತು. ಶಸ್ತ್ರಚಿಕಿತ್ಸೆಯ ಒಟ್ಟು ಅವಧಿಯು 12 ಗಂಟೆಗಳು.
ಈಗ ಪುನರ್ನಿರ್ಮಾಣಗೊಂಡ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ರೋಗಿಯು ರಕ್ತ ತೆಳುಗೊಳಿಸುವಿಕೆಯ ಮೇಲೆ ನಿಂತಿದ್ದಾನೆ. ಆಕೆಗೆ ಆಂಟಿಬಯೋಟಿಕ್ಸ್ ಕೂಡ ನೀಡಲಾಗಿದೆ. ಭಾಗಗಳನ್ನು ನೆನೆಸದೆಯೇ ಕತ್ತರಿಸಿದ ಬೆರಳುಗಳ ಸಂರಕ್ಷಣೆಯಿಂದ ಸಮಯೋಚಿತ ಮಧ್ಯಸ್ಥಿಕೆ ಮತ್ತು ರೋಗಿಯನ್ನು ಶಸ್ತ್ರಚಿಕಿತ್ಸೆಗಾಗಿ ಹೊಸಮ್ಯಾಟ್ ಆಸ್ಪತ್ರೆಗೆ ಧಾವಿಸುವುದು ಬೆರಳುಗಳ ಪುನಃಸ್ಥಾಪನೆಗೆ ಸಹಾಯ ಮಾಡಿತು.
ಈಗಿನಂತೆ ಹೆಬ್ಬೆರಳು ಮತ್ತು 3 ಬೆರಳುಗಳಲ್ಲಿ, ರಕ್ತ ಪರಿಚಲನೆ ಉತ್ತಮವಾಗಿದೆ ಮತ್ತು ರೋಗಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪತ್ರಕರ್ತರ ಸಂಘದಿಂದ ಕೋಲಾರ ಪತ್ರಿಕೆ ಸಂಪಾದಕ ಪ್ರಹ್ಲಾದರಾವ್ ಅವರಿಗೆ ಶ್ರದ್ಧಾಂಜಲಿ

ಕೋಲಾರ:  ಕೋಲಾರ ಪತ್ರಿಕೆ ಸಂಪಾದಕ ಕೆ.ಪ್ರಹ್ಲಾದರಾವ್ ಅವರಿಗೆ ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾವಪೂರ್ಣ  ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪತ್ರಕರ್ತರ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರು, ರಾಯರ ಭಾವಚಿತ್ರಕ್ಕೆ ಪುಷ್ಪ‌ನಮನ ಅರ್ಪಿಸಿ, ನುಡಿನಮನ ಸಲ್ಲಿಸಿದರು.

ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ‘ಕೋಲಾರ ಪತ್ರಿಕೆಯ ನಂಬರ್ ಒನ್ ಸ್ಥಾನವನ್ನು ಕಸಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಕೋಲಾರ ಪತ್ರಿಕೋದ್ಯಮದ ದಂತಕತೆ ರಾಯರು. ಅವರ ಸಾಹಸ ಹಾಗೂ ಧೈರ್ಯ ಮೆಚ್ಚುವಂಥದ್ದು. ಸೇವೆ ಎಂದೇ ಭಾವಿಸಿದ್ದರು. ಆದರೆ, ಈಗಿನ ಪತ್ರಿಕೋದ್ಯಮದಲ್ಲಿ ಹೊಟ್ಟೆಪಾಡು ದೊಡ್ಡದಾಗಿದೆ’ ಎಂದರು.

‘ಶಿಸ್ತಿನ ಜೀವನ ನಡೆಸಿದರು. ಯಾರ ವಿರೋಧ ಕಟ್ಟಿಕೊಂಡವರಲ್ಲ. ಕೋಲಾರ ಪತ್ರಿಕೆಯ ನಿರಂತರತೆ ಅದ್ಭುತ. ಒಂದೂ ದಿನ ನಿಲ್ಲಲಿಲ್ಲ. ಸಾಹಿತ್ಯಕವಾಗಿ ಹಾಗೂ ಸಾಮಾಜಿಕವಾಗಿ ವೇದಿಕೆ ಸೃಷ್ಟಿ ಮಾಡಿ ಸಾಹಿತಿಗಳನ್ನು ಕೋಲಾರ‌ ಪತ್ರಿಕೆ ಬೆಳೆಸಿದೆ’ ಎಂದು ಹೇಳಿದರು.

‘ಕೋಲಾರ ಪತ್ರಿಕೋದ್ಯಮಕ್ಕೆ ಹಾದಿ ತೋರಿದವರು ಪ್ರಹ್ಲಾದ ರಾವ್, ಪತ್ರಿಕೋದ್ಯಮದಲ್ಲಿ ಚಾಪು ಮೂಡಿಸಿದರು. ಆ ಪತ್ರಿಕೆ ಆತ್ಮ, ಉಸಿರು ಆಗಿತ್ತು. ಆ ಪತ್ರಿಕೆ ಮುಂದುವರಿದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ’ ಎಂದರು.

ಯಾಜಮಾನಿಕೆ‌ ಸಂಸ್ಕೃತಿ ಹೋಗಿ ಹಿರಿಯರ ಹಾಕಿಕೊಟ್ಟ ದಾರಿಯಲ್ಲಿ ನಿಸ್ವಾರ್ಥದಿಂದ ನಡೆಯಬೇಕು ಎಂದು ಸಲಹೆ‌ ನೀಡಿದರು.

ಹಿರಿಯ ಪತ್ರಕರ್ತ ಎಂ.ಜಿ. ಪ್ರಭಾಕರ ಮಾತನಾಡಿ, ‘ಪ್ರಹ್ಲಾದರಾವ್ ತಾವು ನಂಬಿದ ಸಿದ್ಧಾಂತದಂತೆ ನಡೆದರು. ಸಂಕಷ್ಟದ ಸಮಯದಲ್ಲಿ ಪತ್ರಿಕೆ ಹೊರತಂದರು‌. ಅವರ ಮಾರ್ಗದಲ್ಲಿ ಕುಗ್ಗದೆ, ಬೀಗದೆ, ಹೆದರದೆ ಪತ್ರಕರ್ತರು ಹೆಜ್ಜೆ ಇಡಬೇಕು’ ಎಂದರು.

ಹಿರಿಯ ಪತ್ರಕರ್ತ ಬಿ. ಸುರೇಶ್ ಮಾತನಾಡಿ, ಸ್ಥಳೀಯ ಪತ್ರಿಕೆಯನ್ನು ಬೆಳೆಸಿದ ಕೀರ್ತಿ ಪ್ರಹ್ಲಾದರಾವ್ ಅವರದ್ದು. ಉಚಿತವಾಗಿ ಪತ್ರಿಕೆ ನೀಡಿದರೆ ಮೌಲ್ಯ ಇರಲ್ಲ ಎಂಬುದು ಅವರ ನಂಬಿಕೆ ಆಗಿತ್ತು’ ಎಂದರು.

ಪತ್ರಕರ್ತ ಶ್ರೀನಿವಾಸಮೂರ್ತಿ ಮಾತನಾಡಿ, ಹಲವರಿಗೆ ಬರವಣಿಗೆ ಕಲಿಸಿ ಬದುಕು ಕಟ್ಟಿಕೊಟ್ಟರು. ತಮಗಿಂತ ಉಳಿದವರು ಚೆನ್ನಾಗಿ ಬರೆಯಬೇಕು, ಬೆಳೆಯಬೇಕು ಎಂಬ ಇಂಗಿತ ಹೊಂದಿದ್ದರು. ವ್ಯವಾಹರಿಕವಾಗಿ ಕಠಿಣವಾಗಿದ್ದರು‌. ಅವರ ಶಿಷ್ಯರ ಬಳಗ ಬಹಳಷ್ಟಿದೆ’ ಎಂದು ಹೇಳಿದರು.

ರಾಜ್ಯಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ‘ಜನಸಂಪರ್ಕ ಹೊಂದಿದ್ದರು. ಎಲ್ಲಾ ವರ್ಗದ ಪ್ರೀತಿ ಪಾತ್ರರಾಗಿದ್ದರು‌. ಅಪಾರ ಸ್ನೇಹವರ್ಗ ಹೊಂದಿದ್ದರು. ಶಿಸ್ತಿನ ಜೀವನ ಸಾಗಿಸಿದರು. ಸರಳ‌ಸಜ್ಜನಿಕೆಯ ವ್ಯಕ್ತಿ’ ಎಂದು ಬಣ್ಣಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ‘ರಾಯರಿಗಿಂತ ಮೊದಲು ನನಗೆ ಅವರ ಪತ್ರಿಕೆ ಪರಿಚಯವಾಗಿತ್ತು. ಆಗ ನಾನು ಕವನ ಬರೆಯುತ್ತಿದ್ದೆ. ಈಗಲೂ ಆ ಲೇಖನಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದೇನೆ. ತಮ್ಮದೇ‌ಅದ  ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿದರು. ಅವರಂತೆ ಮತ್ತೊಂದು  ಸ್ಥಳೀಯ ಪತ್ರಿಕೆಯನ್ನು ಯಾರೂ ರೂಪಿಸಿಲ್ಲ ಎಂಬುದು ನನ್ನ ಅಭಿಪ್ರಾಯ’ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ‘ರಾಯರು ರಾತ್ರಿ 12ರವರಗೆ ಕೆಲಸ ಮಾಡಿದ್ದರೂ ಬೆಳಿಗ್ಗೆ ಬೇಗನೇ ಹೇಳುತ್ತಿದ್ದರು. ತಮ್ಮ ಪತ್ರಿಕೆಯಲ್ಲಿ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದರು. ರಾಜ್ಯ,‌ ದೇಶದ ಸುದ್ದಿಗಳಿಗೆ ರಾಜ್ಯ ಪತ್ರಿಕೆಗಳು ಇವೆ ಎಂಬುದಾಗಿ ಹೇಳುತ್ತಿದ್ದರು ಎಂದರು.

ಸಭೆಯಲ್ಲಿ  ಹಿರಿಯ ಪತ್ರಕರ್ತರಾದ ಎಸ್.ಸಚ್ಚಿದಾನಂದ,  ಮಾಮಿ ಪ್ರಕಾಶ್, ಪಾ.ಶ್ರೀ.ಅನಂತರಾಮ್,  ಸಿ.ವಿ.ನಾಗರಾಜ್, ಎಂ.ಡಿ.ಚಾಂದ್ ಪಾಷ, ಓಂಕಾರಮೂರ್ತಿ, ವಿ. ಈಶ್ಚರ್, ಎಸ್.ರವಿಕುಮಾರ್, ಮದನ್, ಆಸೀಫ್ ಪಾಷ, ಸರ್ವಜ್ಞ ಮೂರ್ತಿ, ಸುದರ್ಶನ್,  ತಬ್ರೇಜ್, ಮುಕ್ತಿಯಾರ್, ಸಮೀರ್ ಅಹ್ಮದ್, ಬೆಟ್ಟಣ್ಣ, ಗಂಗಾಧರ್, ಗೋಪಿ, ಸಿ.ಅಮರೇಶ, ಮುಳಬಾಗಿಲು ಅಪ್ಪಾಜಿಗೌಡ,  ಶ್ರೀನಿವಾಸಪುರದ ಲಕ್ಷ್ಮಣ್, ನಾರಾಯಣಮೂರ್ತಿ,  ಮಾಲೂರಿನ ನಾರಾಯಣಸ್ವಾಮಿ, ವೆಂಕಟೇಶ್, ಪುರುಷೋತ್ತಮ್, ವಿನೋದ್ ಉಪಸ್ಥಿತರಿದ್ದರು.

ಕೊಂಕಣಿ ಲೇಖಕ್ ಸಂಘ್ ಕರ್ನಾಟಕ ವಾರ್ಷಿಕ್ ಜೆರಾಲ್ ಜಮತ್ ಆನಿ “ತುಂ ಪೂತ್ ನ್ಹಯ್” ಪುಸ್ತಕ್ ವಿಮೋಚನ್


ಮಂಗಳೂರ್ : 2023 ವ್ಯಾ ಅಕ್ಟೋಬರ್ 8 ತಾರಿಕೆರ್ ಸಕಾಳಿಂ ಧಾ ವೊರಾರ್ ‘ಕೊಂಕಣಿ ಲೇಖಕ್ ಸಂಘ್ ಕರ್ನಾಟಕ’ ಹಾಂಚಿ ವಾರ್ಷಿಕ್ ಜೆರಾಲ್ ಜಮತ್ ಬಜ್ಜೋಡಿಂತ್ಲ್ಯಾ ಸಂದೇಶ ಸಭಾ ಸಲಾಂತ್ ಜಮ್ಲಿ. ಸುಂಕಾಣ್ ಸಮಿತಿಚೊ ಸಂಚಾಲಕ್ ಮಾನೆಸ್ತ್ ರಿಚರ್ಡ್ ಮೋರಸ್ ಸವೆಂ
ಸುಂಕಾಣ್ ಸಮಿತಿಚೆ ಸಾಂದೆ ಮಾನೆಸ್ತ್ ಡೊಲ್ಫಿ ಕಾಸ್ಸಿಯಾ ಆನಿ ಡಾ. ಎಡ್ವರ್ಡ್ ನಜ್ರೆತಾನ್ ಹಿ ಜಮಾತ್ ಚಲವ್ನ್ ವ್ಹೆಲಿ.

ಹೊ ಸಂಘ್ ಕಾನಡಿ ಲಿಪಿಂತ್ ಕೊಂಕಣಿ ಸಾಹಿತ್ಯ್ ರಚ್ಚ್ಯಾ ಕೊಂಕಣಿ ಸಾಹಿತಿಂಚ್ಯಾ ಹಿತಖಾತಿರ್ ರಚ್ಲೊಲೊ ಆಸುನ್ ಪಾಟ್ಲ್ಯಾ ಪಾಂಚ್ ವರ್ಸಾಂನಿ ಹ್ಯಾ ಸಂಘಾನ್ ಕೆಲ್ಲಿಂ ಕಾರ್ಯಕ್ರಮಾಂ ಆನಿ ಸಂಘಾಚೊ ದಿಷ್ಟಾವೊ ಆಪ್ಲ್ಯಾ ಪ್ರಸ್ತಾವಿಕ್ ಉಲವ್ಪಾಂತ್ ಡಾ. ಎಡ್ವರ್ಡ್ ನಜ್ರೆತಾನ್
ವಿವರಾಯ್ಲೊ. ಪಾಟ್ಲ್ಯಾ ವರ್ಸಾಂತ್ ಅಂತರ್ಲೆಲ್ಯಾ ಸರ್ವ್ ಕೊಂಕಣಿ ಸಾಹಿತಿ ತಶೆಂಚ್ ಕಲಾಕಾರಾಂಚ್ಯಾ ಅತ್ಮ್ಯಾಕ್ ಶಾಂತಿ ಮಾಗುನ್ ಮೌನ್
ಪ್ರಾರ್ಥನ್ ಚಲಯ್ಲೆಂ.

ಸಂಚಾಲಕ್ ಮಾನೆಸ್ತ್ ರಿಚರ್ಡ್ ಮೋರಸಾನ್ ಆಡಿಟ್ ಕೆಲ್ಲೆಂ ಸಂಘಾಚೆಂ ಲೇಕ್‍ಪಾಕ್ ಮಂಡನ್ ಕೆಲೆಂ. ಸಂಘಾಚ್ಯಾ ಮುಕ್ಲ್ಯಾ ಕಾರ್ಯಾವಳಿವಿಶಿಂ ಸಾಂದ್ಯಾಂನಿ ಜಾಯ್ತ್ಯೊ ಕ್ರಿಯಾತ್ಮಕ್ ಸಲಹಾ ದಿಲ್ಯೊ. ಜಮಾತಿಚೊ ಮುಕ್ಲೊ ಭಾಗ್ ಜಾವ್ನ್
ಕೊಂಕಣಿ ಸಾಹಿತಿ ಮಾನೆಸ್ತಿನ್ ಐರಿನ್ ರೆಬೆಲ್ಲೊ ಹಿಣೆಂ “ಕೊಂಕಣಿ ಸಾಹಿತ್ಯಾಕ್ ಸ್ತ್ರೀಯಾಂಚಿ ದೆಣ್ಗಿ” ಹ್ಯಾ ವಿಚಾರಾಚೆರ್ ಖೊಲಾಯೆನ್
ಆಧ್ಯಯನಾತ್ಮಕ್ ಉಲವ್ಪ್ ಸಾದರ್ ಕೆಲೆಂ. ಸ್ತ್ರೀ ಸಾಹಿತಿಂಕ್ ಆಸ್ಚ್ಯೊ ಅಡ್ಕಳಿ ವಿವರುನ್ ಅಡ್ಕಳಿ ನಿವ್ರಾಂವ್ಕ್ ಸಲಹಾ ದಿಂವ್ಚ್ಯೆ ಸವೆಂ
ಕಥೊಲಿಕ್ ತಶೆಂಚ್ ಕಥೊಲಿಕೇತರ್ ಸ್ತ್ರೀ ಸಾಹಿತಿಂಚಿ ವಳಕ್ ಆನಿ ಝಳಕ್ ದಿಲಿ. ಡಾ. ಎಡ್ವರ್ಡ್ ನಜ್ರೆತಾನ್ ಸ್ವಾಗತ್ ಕರ್ನ್,
ಮಾನೆಸ್ತ್ ಡೊಲ್ಫಿ ಕಾಸ್ಸಿಯಾನ್ ನಿರೂಪಣ್ ಕೆಲೆಂ.

ಜಮತಿಚೊ ದುಸ್ರೊ ಭಾಗ್ ಜಾವ್ನ್ ಕೊಂಕಣಿ ಸಾಹಿತಿ ಲವಿ ಗಂಜಿಮಠ ಹಿಣೆಂ ಲಿಖ್ಲಲೊ “ತುಂ ಪೂತ್ ನ್ಹಯ್” ಕಾದಂಬರಿಚೊ
ಪುಸ್ತಕ್ ಕುಟ್ಮಾಚೊ ಸೆವಕ್ ಸಂಪಾದಕ್ ಮಾ.ಬಾ. ಚೇತನ್ ಲೋಬೊ ಹಾಣಿಂ ವಿಮೋಚನ್ ಕೆಲೊ. ಆಪ್ಲ್ಯಾ ಉಲವ್ಪಾಂತ್ ತಾಣಿಂ
ಸಾಹಿತ್ಯಾಚ್ಯಾ ಉದರ್ಗತೆಕ್ ರಚನಾತ್ಮಕ್ ಠೀಕಾಯ್ ಗರ್ಜ್ ಆಸಾ ಮ್ಹಣ್ಚಿ ಅಭಿಪ್ರಾಯ್ ಉಚಾರ್ಲಿ. ಕೊಂಕಣಿ ಸಾಹಿತಿ ಆನಿ ವಿಮರ್ಷಕ್
ದೊತೊರ್ ಜೊಯೆರ್ ನೊರೋನ್ಹಾ ಹಾಣಿ ವಿಮೋಚಿತ್ ಕಾದಂಬರಿಚೊ ವಿಮರ್ಸೊ ಸಾದರ್ ಕೆಲೊ. ಲವಿ ಗಂಜಿಮಠ ಹಿಣೆಂ ಸಾಹಿತ್ಯ್
ಕಶೆಂ ಸಾಹಿತಿಕ್ ಜೀವ್ ದವರ್ತಾ ಮ್ಹಣ್ಚ್ಯೆವಿಶಿಂ ಆಪ್ಲೊ ಅನುಭವ್ ವಾಂಟುನ್ ಘೆತ್ಲೊ. ಪುಸ್ತಕಾಚೊ ಫೊರ್ ವಿನ್ಯಾಸ್ ಕೆಲ್ಲ್ಯಾ
ನಾಮ್ಣೆಚೊ ಕಲಾಕಾರ್ ಮಾನೆಸ್ತ್ ಜಾನ್ ಚಂದ್ರನಾಕ್ ವೆದಿರ್ ಸನ್ಮಾನ್ ಕೆಲೊ. ಕೆ.ಎಲ್.ಎಸ್ ಸುಂಕಾಣ್ ಸಮಿತಿಚೆ ಸಾಂದೆ, ಶ್ರೀಮತಿ
ರೀಟಾ ಮಸ್ಕರೇನಸ್, ಆನಿ ಪ್ರಕಾಶಕಿ ಶ್ರೀಮತಿ ವೀರಾ ಡಿ’ಸೋಜ ಮಾನಾಚ್ಯಾ ಸೈರ್ಯಾಂಸವೆಂ ವೆದಿರ್ ಹಾಜರ್ ಆಸ್‍ಲ್ಲಿಂ. ಮಾನೆಸ್ತ್ ಹೆನ್ರಿ
ಮಸ್ಕರೇನಸಾನ್ ಪುಸ್ತಕ್ ವಿಮೋಚನ್ ಕಾರ್ಯೆಂ ಚಲವ್ನ್ ವ್ಹೆಲೆಂ. ಬಾಂದವ್ಪಣಾಚ್ಯಾ ಜೆವ್ಣಾ ಸವೆಂ ಕಾರ್ಯೆಂ ಸಂಪ್ಲೆಂ.

ಇಸ್ರೇಲ್- ಪೆಲೆಸ್ತಿನ್ ಸಂಘರ್ಷ ಉಲ್ಬಣದ ಬಗ್ಗೆ ಉಡುಪಿ ಬಿಷಪ್ ಕಳವಳ – ಇಸ್ರೇಲನಲ್ಲಿ ವಾಸವಿರುವ ಉಡುಪಿ ಜಿಲ್ಲೆವರ ಮಾಹಿತಿಯನ್ನು ಕಂಟ್ರೋಲ್ ರೂಂ ಗೆ ನೀಡಿ – ಬಿಷಪ್ ಜೆರಾಲ್ಡ್

ಉಡುಪಿ: ಇಸ್ರೇಲ್- ಪೆಲೆಸ್ತಿನ್ ಸಂಘರ್ಷ ಉಲ್ಬಣದ ಬಗ್ಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ. ಡಾ. ಜೆರಾಲ್ಡ್ ಲೋಬೋರವರು ಕಳವಳ ವ್ಯಕ್ತ ಪಡಿಸಿದ್ದು ಶೀಘ್ರ ಕದನ ವಿರಾಮ ಏರ್ಪಟ್ಟು ಯುದ್ಧದ ನಿಲುಗಡೆ ಮತ್ತು ಶಾಂತಿಯ ಮರು ಸ್ಥಾಪನೆಯಾಗಲಿ ಎ೦ದು ಅವರು ಹಾರೈಸಿದ್ದಾರೆ.
ಉಡುಪಿ ಜಿಲ್ಲೆಯ ಸುಮಾರು 5 ಸಾವಿರ ಮಂದಿ ಇಸ್ರೇಲ್ ನಲ್ಲಿ ಕೆಲಸ ಮಾಡುತ್ತಿದ್ದು ಅವರು ಮತ್ತು ಅವರ ಕುಟುಂಬದ ಸದಸ್ಯರು ಭಯಭೀತರಾಗಿದ್ದಾರೆ. ಅವರ ಸುರಕ್ಷತೆಗಾಗಿ ಮತ್ತು ಶಾಂತಿ ಸ್ಥಾಪನೆಗಾಗಿ ಎಲ್ಲರೂ ಪ್ರಾರ್ಥನೆ ಮಾಡೋಣ ಎ೦ದು ಪೂಜ್ಯ ಬಿಷಪರು ವಿನಂತಿ ಮಾಡಿದ್ದಾರೆ.


ಇಸ್ರೇಲ್ ದೇಶದ ಈಗಿನ ಪರಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್ ಗೆ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ಹೋಗಿರುವ ಮತ್ತು ವಾಸವಾಗಿರುವ ಉಡುಪಿ ಜಿಲ್ಲೆಯವರು ತಮ್ಮ ಮಾಹಿತಿಯನ್ನು ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವಂತೆ ಪೂಜ್ಯ ಬಿಷಪರು ವಿನಂತಿಸಿದ್ದಾರೆ.
ವಂ. ಡೆನಿಸ್ ಡೆಸಾ :ಸಾರ್ವಜನಿಕ ಸಂಪರ್ಕಾಧಿಕಾರಿ. ಉಡುಪಿ ಧರ್ಮಪ್ರಾಂತ್ಯ

“ಐಕ್ಯಂ”ನ ಅಂಗವಾಗಿ ಮೂಡ್ಲಕಟ್ಟೆ ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್& ಕಾಮರ್ಸ್ ಕಾಲೇಜಿನ ಕ್ರೀಡೋತ್ಸವ ಗಾಂಧಿ ಮೈದಾನದಲ್ಲಿ ಜರುಗಿತು

ಕುಂದಾಪುರ: ಅ:06: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್&ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರದಲ್ಲಿ “ಐಕ್ಯಂ”ನ ಅಂಗವಾಗಿ ಕುಂದಾಪುರದ ಗಾಂಧಿ ಮೈದಾನದಲ್ಲಿ ಕ್ರೀಡೋತ್ಸವವು ಅತ್ಯುತ್ತಮವಾಗಿ ನೆರವೇರಿತು.

ಟಾರ್ಪಿಡೋಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ಗೌತಮ್ ಶೆಟ್ಟಿ ಇವರು ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರೀಡೆಯಲ್ಲಿಯೂ ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ. ನಮ್ಮನ್ನು ನಾವು ಮೊದಲು ಪ್ರೀತಿಸಿದರೆ ಜೀವನದಲ್ಲಿ ಎಲ್ಲವನ್ನೂ ಸಾಧ್ಯಗೊಳಿಸಬಹುದು.“ಎಲ್ಲವೂ ಸಾಧ್ಯ ಆದರೆ ಸುಲಭವಲ್ಲ”. ಮೊದಲು ನಾವು ನಮ್ಮನ್ನು ಪ್ರೀತಿಸುವುದನ್ನು ಕಲಿಯಬೇಕು ಮತ್ತು ನಮ್ಮಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ನಾವು ನಿತ್ಯವೂ ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಮ್ಮ ಬದುಕಿನಲ್ಲಿ ತೃಪ್ತಿ ಇರಬೇಕು.ಮುಂದೊಂದುದಿನ ನಾನು ಇನ್ನೂ ಉತ್ತಮವಾಗಿ ಆಡಬಹುದಿತ್ತು ಎನ್ನುವ ಆಲೋಚನೆ ನಮ್ಮಲ್ಲಿ ಬರಬಾರದು. ಸೋಲು ಗೆಲುವು ನಮ್ಮ ಬದುಕಿನ ಒಂದು ಭಾಗ, ಮರಳಿ ಪ್ರಯತ್ನವನ್ನು ನಾವು ಮಾಡಲೇಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ| ಪ್ರತಿಭಾ ಎಂ ಪಟೇಲ್ ಇವರು“ಕ್ರೀಡೆ ನಮ್ಮಲ್ಲಿನ ದೌರ್ಬಲ್ಯವನ್ನು ತೊರೆಯುವಂತೆ ಮಾಡಿ ಜೀವನದ ಮೌಲ್ಯಗಳನ್ನು ನಮಗೆ ಕಲಿಸುತ್ತದೆ”ಎಂದುತಿಳಿಸಿದರು.

ಕಾರ್ಯಕ್ರಮದಲ್ಲಿ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಪ್ರೊ|ಜೆನಿಫರ್ಡ್ ಮಿನೇಜಸ್ ಹಾಗೂ ಐಎಂಜೆಐ ಎಸ್ಸಿಯ ಉಪ ಪ್ರಾಂಶುಪಾಲರಾದ ಪ್ರೊ|ಜಯಶೀಲ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಪ್ರವೀಣ್ ಖಾರ್ವಿ,ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬಿಸಿಎ ವಿಭಾಗದ ವಿದ್ಯಾರ್ಥಿನಿಯರಾದ ಕು| ಸಿಂಚನ ಸ್ವಾಗತಿಸಿ,ವಂದಿಸಿದರು.ಕು|ಪ್ರತಿಭಾ ಗಣ್ಯರ ಕಿರು ಪರಿಚಯವನ್ನು ಮಾಡಿದರು. ಕು| ಭಾನುಮತಿ ಪ್ರಾರ್ಥಿಸಿದರು.ಕು|ರಶಿತಾ ನಿರ್ವಹಿಸಿದರು.

ದ್ವಿತೀಯ ಬಿ ಸಿ ಎ ವಿಭಾಗದ ವಿದ್ಯಾರ್ಥಿಗಳಾದ ಕು| ನಿರೋಷ ಮತ್ತು ಕು|ನಿತಿನ್ ರವರು ಚಾಂಪಿಯನ್ ಶಿಪ್ ಪಡೆದುಕೊಂಡರು. ಹಾಗೆಯೇ ಓವರಾಲ್ ಚಾಂಪಿಯನ್ಶಿಪ್ ಅನ್ನು ರೆಡ್ ಈಗಲ್ಸ್ ತಂಡಪಡೆದುಕೊಂಡಿತು.

ಇಸ್ರೇಲ್-ಪ್ಯಾಲೆಸ್ಟೈನ್ 3 ನೇ ದಿನದ ಸಂಘರ್ಷ ಇತ್ತೀನ ಸುದ್ದಿ ; ಹಮಾಸ್‌ನೊಂದಿಗಿನ ಯುದ್ಧದಲ್ಲಿ ಸಾವಿನ ಸಂಖ್ಯೆ 1,100 ಕ್ಕಿಂತ ಎರಿತು

ಹಮಾಸ್ ಇಸ್ರೇಲ್ ಮೇಲೆ ಸಾವಿರಾರು ರಾಕೆಟ್ ಗಳ ಸುರಿಮಳೆಗೈದ ಒಂದು ದಿನದ ನಂತರ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಷ್ಟ್ರವನ್ನು “ದೀರ್ಘ ಮತ್ತು ಕಷ್ಟಕರ” ಸ್ಥಿತಿಯಾಗಿದೆ, ಎಂದು ತಿಳಿಸಿ ಯುದ್ದಕ್ಕೆ ಪ್ರೇರಣೆಯನ್ನು ನೀಡಿದ್ದಾರೆ

ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಹಮಾಸ್ ಗುಂಪು ಗಾಜಾದಿಂದ ಹಠಾತ್ ದಾಳಿಯನ್ನು ಪ್ರಾರಂಭಿಸಿದ ನಂತರ ಸಂಘರ್ಷದ ಸಾವಿನ ಸಂಖ್ಯೆ 1,100 ಕ್ಕಿಂತ ಹೆಚ್ಚಾದ ಕಾರಣ ಇಸ್ರೇಲ್, ತನ್ನ ಭೂಪ್ರದೇಶದ ಮೇಲೆ ಮಾರಣಾಂತಿಕ ದಾಳಿಯಿಂದ ತತ್ತರಿಸಿದ್ದು, ಹಮಾಸ್ ಭಾನುವಾರದ ಮೇಲೆ ಯುದ್ಧ ಘೋಷಿಸಿತು.

ಹಮಾಸ್ ಇಸ್ರೇಲ್‌ನ ಮೇಲೆ ಸಾವಿರಾರು ರಾಕೆಟ್‌ಗಳ ಸುರಿಮಳೆಗೈದ ಮತ್ತು ನಾಗರಿಕರನ್ನು ಹೊಡೆದುರುಳಿಸಿದ ಮತ್ತು ಕನಿಷ್ಠ 100 ಒತ್ತೆಯಾಳುಗಳನ್ನು ತೆಗೆದುಕೊಂಡ ಹೋರಾಟಗಾರರ ಅಲೆಯನ್ನು ಕಳುಹಿಸಿದ ಒಂದು ದಿನದ ನಂತರ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಷ್ಟ್ರವನ್ನು “ದೀರ್ಘ ಮತ್ತು ಕಷ್ಟಕರ” ಯುದ್ಧಕ್ಕೆ ಪ್ರೇರಣೆಯನ್ನು ನೀಡಿದ್ದಾರೆ

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ ಅಕ್ಟೋಬರ್ 8 ರ ಇತ್ತೀಚಿನ ಸುದ್ದಿಗಳು

ಸೋಮವಾರದಂದು ಇಸ್ರೇಲ್ ರಕ್ಷಣಾ ಪಡೆಗಳ (IDF) ಇತ್ತೀಚಿನ ಟೋಲ್ ಪ್ರಕಾರ ಹಮಾಸ್ ತನ್ನ ದೊಡ್ಡ-ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದಾಗಿನಿಂದ 700 ಕ್ಕೂ ಹೆಚ್ಚು ಇಸ್ರೇಲಿಗಳು ಕೊಲ್ಲಲ್ಪಟ್ಟಿದ್ದಾರೆ — 1973 ರ ಅರಬ್-ಇಸ್ರೇಲಿ ಯುದ್ಧದ ನಂತರ ದೇಶಕ್ಕೆ ಅತ್ಯಂತ ಕೆಟ್ಟದಾದ  ನಷ್ಟ ಇದಾಗಿದೆ

ಗಾಜಾದ ಅಧಿಕಾರಿಗಳು 2.3 ಮಿಲಿಯನ್ ಜನರ ಬಡ ಮತ್ತು ನಿರ್ಬಂಧಿತ ಎನ್‌ಕ್ಲೇವ್‌ನಲ್ಲಿ ಕನಿಷ್ಠ 413 ಸಾವುಗಳನ್ನು ವರದಿ ಮಾಡಿದ್ದಾರೆ. ಇದು 800 ಜನರ ಗುರಿಗಳ ಮೇಲೆ ಇಸ್ರೇಲಿ ವೈಮಾನಿಕ ದಾಳಿಯಿಂದ ಸುತ್ತಿಗೆಗೆ ಒಳಗಾದ ನೆಲದ ಆಕ್ರಮಣ ಎಂದು ಅನೇಕರು ಭಯಪಡುತಿದ್ದಾರೆ. ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇಸ್ರೇಲ್ ‌ನಲ್ಲಿನ ಕನ್ನಡಿಗರಿಗಾಗಿ ರಾಜ್ಯ ಸರ್ಕಾರದಿಂದ ಹೆಲ್ಪ್ ಲೈನ್ ಆರಂಭ/Helpline launched by state government for Kannadigas in Israel

ಬೆಂಗಳೂರು: ಇಸ್ರೇಲ್ ಮೇಲೆ ಪ್ಯಾಲೇಸ್ತೀನಿನ ಹಮಾಸ್ ಉಗ್ರರು ಭೀಕರ ರಾಕೆಟ್ ದಾಳಿ ನಡೆಸಿದ್ದರಿಂದ ಇಸ್ರೇಲ್ ಯುದ್ಧ ಘೋಷಿಸಿದೆ. ಇದರಿಂದ ಇಸ್ರೇಲ್‌ ನಲ್ಲಿ ನೆಲೆಸಿರುವ ಕನ್ನಡಿಗರು ಸೇರಿ ಸಾವಿರಾರು ಭಾರತೀಯರು ಸಂಕಷ್ಟದಲ್ಲಿದ್ದಾರೆ. ಅದರಲ್ಲಿಯೂ ನಮ್ಮ ರಾಜ್ಯದ ದ.ಕನ್ನಡ ಉಡುಪಿ ಮತ್ತು ಉ.ಕನ್ನಡದವರು ಅನೇಕರಿದ್ದಾರೆ ಹೀಗಾಗಿ ಅಲ್ಲಿನ ಕನ್ನಡಿಗರ ನೆರವಿಗಾಗಿ ರಾಜ್ಯ ಸರ್ಕಾರ ಸಹಾಯವಾಣಿಯನ್ನು ತೆರೆದಿದೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆ ನಿಕಟ ಸಂಪರ್ಕದಲ್ಲಿದ್ದೇವೆ. ಕೇಂದ್ರದ ಸಹಾಯವಾಣಿ 080 22340676 ಹಾಗೂ 080 22253707 ಸಂಪರ್ಕಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Helpline launched by state government for Kannadigars in Israel

Bengaluru: Israel has declared war because Palestinian Hamas terrorists launched a terrible rocket attack on Israel. Due to this, thousands of Indians including Kannadigas living in Israel are suffering. There are many people from our state Kannada Udupi and U. Kannada, so the state government has opened a helpline for the help of Kannadigas there.

We are in close touch with the Union Ministry of External Affairs. Chief Minister Siddaramaiah said that the center’s helpline number 080 22340676 and 080 22253707 can be contacted.