

ಕುಂದಾಪುರ ತಾಲೂಕಿನ ಕೋಡಿಯಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಸಾಗಿ ಬರುತ್ತಿದ್ದ ವೇಳೆ ಕೋಟಿ ಚೆನ್ನಯ್ಯ ಹಳೆಅಲಿವೆ ಹಿಂದೂ ಬಾಂಧವರು ತಂಪು ಪಾನೀಯನ್ನು ನೀಡಿ ಸ್ವಾಗತಿಸಿದರು.
ಸೌಹಾರ್ದತೆಗೆ ಇದು ಒಂದು ಉತ್ತಮ ಉದಾರಣೆ.


ಶ್ರೀನಿವಾಸಪುರ: ದೇಶಕ್ಕೆ ಬೆನ್ನೆಲುಬಾದ ಆರೋಗ್ಯವಂತ ಯುವಕರೇ ದೇಶದ ಆಸ್ತಿ , ದೇಶವು ಪ್ರಗತಿಯತ್ತಾ ಸಾಗಲು ಯುವ ಜನತೆ ಸತ್ಪ್ರಜೆಗಳಾದರೇ ಮಾತ್ರ ಸಾಧ್ಯ . ಆದ್ದರಿಂದ ಆರೋಗ್ಯವಂತ ಸಮಾಜಕ್ಕೆ ಯುವ ಸಮುದಾಯ ಇರಲೇಬೇಕು ಎಂದು ಇಒ ಎ.ಎನ್.ರವಿ ಅಭಿಪ್ರಾಯ ಪಟ್ಟರು.
ಪಟ್ಟಣದ ಅಮಾನಿಕೆರೆ ಕ್ರೀಡಾಂಗಣದಲ್ಲಿ ಬುಧವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಾಗು ತಾಲೂಕು ಆಡಳಿತ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಜನತೆಯಲ್ಲಿ ಮಾನಸಿಕ ಹಾಗು ದೈಹಿಕವಾಗಿ ಉತ್ಸಾಹ ತುಂಬಿದರೆ , ಭವಿಷ್ಯದಲ್ಲಿ ಆರೋಗ್ಯವಂತ ಸಮಾಜ ಕಟ್ಟಲು ಸ್ಪೂರ್ತಿ ತುಂಬಲಿದೆ. ಪ್ರಸ್ತುತ ಯುವ ಜನತೆಯ ಅದ್ಯತೆ ಮೊಬೈಲ್ , ಟಿವಿ, ಹಾಗೂ ಮಾದಕ ವ್ಯಸನಿಗಳಾಗುತ್ತಿದ್ದು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ಕಳೆದುಕೊಳ್ಳುತ್ತಿದ್ದು , ದೇಶದ ಅಭಿವೃದ್ದಿಗೆ ಯುವ ಜನತೆಯ ಪಾಳುದಾರಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿತ ಕಂಡುಬರುತ್ತಿದೆ ಎಂದು ಅಂತಕ ವ್ಯಕ್ತಪಡಿಸಿದರು.
ಬಿಇಒ ಕಚೇರಿ ವ್ಯವಸ್ಥಾಪಕ ಮಂಜುನಾಥ್, ಟಿಪಿಒ ವೆಂಕಟಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಣ್ಣ, ನಿರ್ದೇಶಕ ರಘುನಾಥರೆಡ್ಡಿ, ಆರೋಗ್ಯ ಇಲಾಖೆ ಸಿಬ್ಬಂದಿ ಶಿವಬಸಪ್ಪ, ಹಿಂದುಳಿದ ವರ್ಗಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ವೇಣುಗೋಪಾಲ್, ಶಿಕ್ಷಕ ಕಿಟ್ಟಣ್ಣ, ಹಿರಿಯ ದೈಹಿಕ ಶಿಕ್ಷಕ ಕೃಷ್ಣಯ್ಯ, ಉಪನ್ಯಾಸಕರಾದ ಜಿ.ಕೆ.ನಾರಾಯಣಸ್ವಾಮಿ, ರಾಯಲ್ಪಾಡು ಪದವಿ ಪೂರ್ವ ಕಾಲೇಜಿನ ಗಿರೀಶ್, ಹಾಗು ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.


ಶ್ರೀನಿವಾಸಪುರ : ತಾಲೂಕಿನ ಆರಿಕುಂಟೆ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಬುಧವಾರ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನವಾಣೆಯಲ್ಲಿ ಕಂಬಾಲಪಲ್ಲಿ ಮುನಿರತ್ನಮ್ಮರಾಮಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮಪಂಚಾಯಿತಿಗೆ ಸೇರಿದಂತೆ ಒಟ್ಟು 19 ಸದಸ್ಯರಿದ್ದು, ಅದರಲ್ಲಿ ಜೆಡಿಎಸ್ ಬೆಂಬಲಿತ 14, ಕಾಂಗ್ರೆಸ್ ಬೆಂಬಲಿತ 05 ಸದ್ಯರಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ವೆಂಕಟಲಕ್ಷಮ್ಮ ರವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿದ ಹಿನ್ನೆಲೆಯಲ್ಲಿ ಬುಧವಾರ ನಡೆದ ಚುನವಾಣೆಯಲ್ಲಿ ಕುಂಬಾಲಪಲ್ಲಿ ಮುನಿರತ್ನಮ್ಮರಾಮಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ರವಿಚಂದ್ರ ಮಾಹಿತಿ ನೀಡದರು.
ಈ ಸಂದರ್ಭದಲ್ಲಿ ಪಿಡಿಒ ಮಂಗಳಾಂಬ, ಲೆಕ್ಕಪರಿಶೋದಕ ಶ್ರೀನಿವಾಸ್ ಸದಸ್ಯರಾದ ನಾಗೇದನಹಳ್ಳಿ ಚೌಡರೆಡ್ಡಿ, ಡಿಎಸ್ಆರ್ ಶ್ರೀನಾಥರೆಡ್ಡಿ, ಮುನಿರಾಜು, ಬಿ.ವಿ.ವೆಂಕಟರೆಡ್ಡಿ, ಅಶ್ವನಿ, ಮುನಿವೆಂಕಟಮ್ಮ, ಸತೀಶ್, ವೆಂಕಲಕ್ಷ್ಮಮ್ಮ, ಸೈಯದ್ಶರೀಫ್, ಅಮ್ರರಾನ್ತಾಜ್, ಮುನಿರೆಡ್ಡಿ, ಹರೀಶ್, ಸರಸ್ವತಮ್ಮ, ಮುಖಂಡರಾದ ಟಿಪಿಎಸ್ ಲಕ್ಷ್ಮಣರೆಡ್ಡಿ, ನೀಲಟೂರು ಚಂದ್ರಶೇಖರ ರೆಡ್ಡಿ, ಆನಂದ್, ಆರಿಕುಂಟೆ ಯಶ್ವಂತರೆಡ್ಡಿ, ಕಂಬಾಲಪಲ್ಲಿ ಅರ್.ಕೆ.ಸೀನ, ರವಿ, ನರಸಿಂಹರೆಡ್ಡಿ, ಬೈರೆಡ್ಡಿ, ಗಜೇಂದ್ರ ಇದ್ದರು.


ಕಲ್ಯಾಣಪುರ: ಸೆಪ್ಟೆಂಬರ್ 17, 2024 ರಂದು, ಕಲ್ಯಾಣಪುರ ಮಿಲಾಗ್ರೆಸ್ ಕಾಲೇಜಿನಲ್ಲಿ (NSS) ಸ್ವಯಂಸೇವಕರಿಗೆ ರಾಷ್ಟ್ರೀಯ ಸೇವಾ ಯೋಜನೆ ದೃಷ್ಟಿಕೋನ ಕಾರ್ಯಕ್ರಮ ಬಹಳ ಉತ್ಸಾಹದಿಂದ ನಡೆಸಲಾಯಿತು. 2024-25ರ ಎನ್ಎಸ್ಎಸ್ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಎನ್ಎಸ್ಎಸ್ ಅಧಿಕಾರಿ ಶ್ರೀ ಗಣೇಶ್ ನಾಯಕ್ ಅವರು ಎರಡನೇ ವರ್ಷದ ಸ್ವಯಂಸೇವಕರಿಗೆ ಒಳನೋಟದ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ತಮ್ಮ ಭಾಷಣದಲ್ಲಿ, ಅವರು ನಾಯಕತ್ವದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಮತ್ತು ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳನ್ನು ಬೆಳೆಸಲು ಪ್ರೋತ್ಸಾಹಿಸಿದರು ಅದು ಅವರಿಗೆ ವೈಯಕ್ತಿಕವಾಗಿ ಪ್ರಯೋಜನವನ್ನು ನೀಡುತ್ತದೆ ಆದರೆ ಅವರ ಸಹವರ್ತಿಗಳಿಗೆ ಸ್ಫೂರ್ತಿ ನೀಡುತ್ತದೆ. ಹಿರಿಯ ಸ್ವಯಂಸೇವಕರಾಗಿ, ಶ್ರೀ ನಾಯಕ್ ಅವರು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕೆಂದು ಒತ್ತಾಯಿಸಿದರು, ಎಲ್ಲಾ ಎನ್ಎಸ್ಎಸ್ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಿದರು. ಹಿರಿಯ ಸ್ವಯಂಸೇವಕರು ನಾಯಕರಾಗಿ ಹೇಗೆ ಸೇವೆ ಸಲ್ಲಿಸಬಹುದು ಮತ್ತು ಇತರರು ಅನುಸರಿಸಲು ಧನಾತ್ಮಕ ಉದಾಹರಣೆಯನ್ನು ಹೊಂದಿಸಬಹುದು ಎಂಬುದಕ್ಕೆ ಅವರು ಉದಾಹರಣೆಗಳನ್ನು ನೀಡಿದರು.
ಅಧಿವೇಶನವು ಹೆಚ್ಚು ಸಂವಾದಾತ್ಮಕವಾಗಿತ್ತು, ಸ್ವಯಂಸೇವಕರು ಮತ್ತು NSS ಅಧಿಕಾರಿಗಳು ಇಬ್ಬರೂ ಅರ್ಥಪೂರ್ಣ ಚರ್ಚೆಯಲ್ಲಿ ತೊಡಗಿದ್ದರು. ಶ್ರೀ ನಾಯಕ್ ಅವರು ತಮ್ಮ ಸಹೋದ್ಯೋಗಿ ಶ್ರೀಮತಿ ಶುಭಲತಾ ಅವರೊಂದಿಗೆ ಸ್ವಯಂಸೇವಕರಿಗೆ ತಮ್ಮ ಎನ್ಎಸ್ಎಸ್ ಪ್ರಯಾಣವನ್ನು ಹೆಚ್ಚು ಮಾಡಲು ಸಹಾಯ ಮಾಡಲು ಅಮೂಲ್ಯವಾದ ಸಲಹೆಗಳು ಮತ್ತು ಮಾರ್ಗಸೂಚಿಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಅಧ್ಯಾಪಕರಾದ ಶ್ರೀಮತಿ ರಾಧಿಕಾ ಪಾಟ್ಕರ್ ಮತ್ತು ಶ್ರೀಮತಿ ಚೈತ್ರಾ, ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಶ್ರೀ ರವಿನಂದನ್ ಭಟ್ ಸಹ ಉಪಸ್ಥಿತರಿದ್ದು, ತಮ್ಮ ಬೆಂಬಲ ಮತ್ತು ಮಾರ್ಗದರ್ಶನವನ್ನು ನೀಡಿದರು. ಸ್ವಯಂಸೇವಕರನ್ನು ನಾಯಕತ್ವದ ನಿಲುವಂಗಿಯನ್ನು ತೆಗೆದುಕೊಳ್ಳಲು ಮತ್ತು ಎನ್ಎಸ್ಎಸ್ನಲ್ಲಿ ತಮ್ಮ ಒಳಗೊಳ್ಳುವಿಕೆಯ ಮೂಲಕ ತಮ್ಮ ಸಮುದಾಯಗಳಿಗೆ ಧನಾತ್ಮಕ ಕೊಡುಗೆ ನೀಡಲು ಪ್ರೋತ್ಸಾಹಿಸಲ್ಪಟ್ಟ ಕಾರಣ, ಪ್ರೇರಣೆ ಮತ್ತು ಉದ್ದೇಶದ ಪ್ರಜ್ಞೆಯೊಂದಿಗೆ ಅಧಿವೇಶನವು ಮುಕ್ತಾಯವಾಯಿತು.
National Service Scheme Orientation Program for Volunteers at Milagres College (NSS), Kalyanpur

Kalyanpur,September17, 2024: the National Service Scheme Orientation Program for volunteers was conducted with great enthusiasm at Milagres College (NSS), Kalyanpur. On September 17, 2024, the National Service Scheme (NSS) orientation program for fresh volunteers was conducted with great enthusiasm. Mr. Ganesh Nayak, the NSS officer, provided an insightful briefing to the second-year volunteers regarding the NSS action plan for 2024-25. In his address, he emphasized the importance of leadership and encouraged the students to cultivate leadership qualities that would not only benefit them personally but also inspire their peers. As senior volunteers, Mr. Nayak urged them to be role models for the first-year students, motivating them to actively participate in all NSS activities and programs. He provided examples of how senior volunteers could serve as leaders and set a positive example for others to follow.
The session was highly interactive, with both the volunteers and the NSS officers engaging in meaningful discussions. Mr. Nayak, along with his colleague Mrs. Shubhalatha, also shared valuable suggestions and guidelines to help the volunteers make the most of their NSS journey. Faculty members from the Department of Commerce, Mrs. Radhika Patkar and Mrs. Chaithra, along with Mr. Ravinandan Bhat, the Public Relations Officer (PRO), were also present during the program, lending their support and guidance. The session concluded with a sense of motivation and purpose, as the volunteers were encouraged to take up the mantle of leadership and contribute positively to their communities through their involvement in NSS.



Photography and Reported by Ganesh Nayak


ಕೋಲಾರ, ಸೆ.17: ಜಿಲ್ಲಾದ್ಯಂತ ಆಕ್ರಮ ಸಾಗುವಳಿ ಚೀಟಿ ರದ್ದು ಮಾಡಿ ಪಿ.ನಂಬರ್ ದುರಸ್ತಿ ಮಾಡಲು ವಿಶೇಷ ತಂಡ ರಚನೆ ಮಾಡಿ ಹತ್ತಾರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ರೈತರ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ರೈತ ಸಂಘದಿಂದ ಉಪ ವಿಭಾಗಧಿಕಾರಿ ಡಾ.ಮೈತ್ರಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಸೆ.2 ರಿಂದ ಚಾಲನೆ ಆಗಿರುವ ಕಂದಾಯ ಸಚಿವರ ಪಿ. ನಂಬರ್ ದುರಸ್ತಿ ಆದೇಶ ರೈತರಿಗೆ ಶಾಪವೇ? ವರದಾನವೇ! ಇಲ್ಲವೇ ರೈತರ ಹೆಸರಿನಲ್ಲಿ ಆಕ್ರಮ ದರಕಾಸ್ತ್ ಕಮಿಟಿ ದಾಖಲೆಗಳನ್ನು ಸೃಷ್ಠಿ ಮಾಡಿ ನಕಲಿ ಸಾಗುವಳಿ ಪಡೆದು ಸಾವಿರಾರು ಎಕರೆ ಸರ್ಕಾರಿ ಜಮೀನನ್ನು ಕಬಳಿಸಿರುವ ಬೆಂಗಳೂರು ಭೂಗಳ್ಳರಿಗೆ ಚಿನ್ನದ ಮೊಟ್ಟೆಯಿಡುವ ದಂದೆಯಾಗಿದೆಯೇ ಎಂದು ಉಪವಿಭಾಗಧಿಕಾರಿಗಳಿಗೆ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಪ್ರಶ್ನೆ ಮಾಡಿದರು.
ಐದಾರು ದಶಕಗಳಿಂದ ಕಾನೂನು ಬದ್ದವಾಗಿ ಮಂಜೂರಾಗಿರುವ ಸರ್ಕಾರಿ ಗೋಮಾಳ ಜಮೀನಿನ ಪಿ. ನಂಬರ್ ದುರಸ್ತಿಯಾಗದೆ ಸರ್ಕಾರದ ಆದೇಶದಂತೆ ಮಾರಾಟ ಮಾಡಲಾಗದೆ ಬ್ಯಾಂಕ್ನಲ್ಲಿ ಸಾಲ ಪಡೆಯಲಾಗದೆ ಅಧಿಕಾರಿಗಳಿಗೆ ಲಕ್ಷ ಲಕ್ಷ ಲಂಚ ನೀಡದ ಬಡ ರೈತರ ಆಸೆಗೆ ಕಂದಾಯ ಮಂತ್ರಿಗಳ ಆಧೇಶ ಜೀವವಿಲ್ಲದ ದೇಹವಾಗಿದ್ದ ರೈತನ ಕಣ್ಣಿನಲ್ಲಿ ಮತ್ತೆ ಪಿ.ನಂಬರ್ ದುರಸ್ತಿ ಆಗುತ್ತದೆ ಎಂಬ ಕಾತುರದಲ್ಲಿರುವ ರೈತರ ಆಸೆ ಈಡೇರುವುದೇ? ಹದಗೆಟ್ಟಿರುವ ವ್ಯವಸ್ಥೆಯಲ್ಲಿ ಎಂದು ಸಂಶಯ ವ್ಯಕ್ತಪಡಿಸಿದರು.
ಮಾಲೂರಿನ ಸಾವಿರಾರು ಎಕರೆ ಮುಳಬಾಗಿಲಿನ ಕಿರಣಮೆಟ್ಟಿ ದೇವರಾಯ ಸಮುದ್ರ ಕಂದಾಯ ವ್ಯಾಪ್ತಿಯ ಅಕ್ರಮ ಭೂ ಮಾಪಿಯ 20 ಸಾವಿರ ಕೋಟಿಗೂ ಅಧಿಕ ವಹಿವಾಟು ಭೂ ಗಳ್ಳರ ಜೊತೆ ತಾಲ್ಲೂಕಾಡಳಿತಗಳು ರಾಜಾರೋಷವಾಗಿ ನಡೆಯುತ್ತಿದೆ. ಸರ್ಕಾರಿ ಜಮೀನು ಸ್ಥಳಿಯ ವ್ಯಕ್ತಿಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಭೂಮಿ ಮೇಲೆ ಕಣ್ಣಿಟ್ಟು, ರಾತ್ರೋ ರಾತ್ರಿ ಹತ್ತಾರು ಜೆ.ಸಿ.ಬಿಗಳನ್ನು ಇಟ್ಟುಕೊಂಡು ಕಲ್ಲು ಬಂಡೆಗಳ ಜಮೀನನ್ನು ಮಣ್ಣು ಮುಚ್ಚಿ ನಕಲಿ ದಾಖಲೆ ಸೃಷ್ಠಿ ಮಾಡಿ ಕಾಂಪೌಂಡ್ ನಿರ್ಮಿಸಿ ಕೋಟಿ ಲೆಕ್ಕದಲ್ಲಿ ಭೂಗಳ್ಳರಿಗೆ ಮಾರಾಟ ಮಾಡುತ್ತಿದ್ದರೂ ಕಂದಾಯ ಅಧಿಕಾರಿಗಳು ಮೌನವಾಗಿರುವ ಉದ್ದೇಶ ಏನೂ ಎಂದು ಪ್ರಶ್ನೆ ಮಾಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಮುಳಬಾಗಿಲಿನಲ್ಲಿ 2 ಸಾವಿರ, ಮಾಲೂರಿನಲ್ಲಿ 3 ಸಾವಿರ, ಕೋಲಾರ ಮತ್ತಿತರ ತಾಲ್ಲೂಕುಗಳಲ್ಲಿ 15 ಸಾವಿರ ಅಕ್ರಮ ಸಾಗುವಳಿ ಚೀಟಿಗಳು ವಿತರಣೆ ಆಗಿರುವ ಬಗ್ಗೆ ಆಯಾ ತಾಲ್ಲೂಕಿನ ಶಾಸಕರೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಜಿಲ್ಲಾಡಳಿತ ಏಕೆ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡು ಆಕ್ರಮ ಸಾಗುವಳಿ ರದ್ದು ಮಾಡಿ ಸಾವಿರಾರು ಎಕರೆ ಸರ್ಕಾರಿ ಜಮೀನನ್ನು ಉಳಿಸಬಾರದೆಂದು ಸಲಹೆ ನೀಡಿದರು.
24 ಘಂಟೆಯಲ್ಲಿ ಜಿಲ್ಲಾದ್ಯಂತ ಆಕ್ರಮ ಸಾಗುವಳಿ ಚೀಟಿ ರದ್ದು ಮಾಡಿ ಪಿ.ನಂಬರ್ ದುರಸ್ತಿ ಮಾಡಲು ವಿಶೇಷ ತಂಡ ರಚನೆ ಮಾಡಿ ಹತ್ತಾರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ರೈತರ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಮನವಿ ನೀಡಿ ಒತ್ತಾಯಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಧಿಕಾರಿಗಳಾದ ಡಾ.ಮೈತ್ರಿರವರು ಪಿ.ನಂಬರ್ ದುರಸ್ತಿಯಲ್ಲಿ ಆಕ್ರಮ ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಮಾಡಿ ಆಕ್ರಮ ಪಿ.ನಂಬರ್ ತನಿಖೆ ಮಾಡಿ ರದ್ದು ಮಾಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಮಂಗಸಂದ್ರ ತಿಮ್ಮಣ್ಣ, ಗೀರೀಶ್, ಪುತ್ತೇರಿ ರಾಜು, ಮುಂತಾದವರಿದ್ದರು.



ಕುಂದಾಪುರ( ಸೆ 18) : ಶ್ರೀ ಬಿ.ಎಮ್ ಸುಕುಮಾರ ಶೆಟ್ಟಿಯವರ ನೇತೃತ್ವದಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ. ಕುಂದಾಪುರಎಜುಕೇಶನ್ ಸೊಸೈಟಿ ಪ್ರವರ್ತಿತ ಹಲ್ಸನಾಡು ಮಾದಪ್ಪಯ್ಯ ಸ್ಮಾರಕಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತುಕ್ಷೇತ್ರ ಸಂಪನ್ಮೂಲ ಕೇಂದ್ರ, ಕುಂದಾಪುರ ಇದರ ವತಿಯಿಂದಆಯೋಜಿಸಲ್ಪಟ್ಟ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ2024-25ರಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ, ವಿದ್ಯಾರ್ಥಿಗಳಾದ, ಅವನಿ ಎ ಶೆಟ್ಟಿಗಾರ್(ಡ್ರಾಯಿಂಗ್),ಕೃತಿಕಾ (ಅಭಿನಯಗೀತೆ), ಪ್ರಕೃತಿ(ಕಥೆ ಹೇಳುವುದು), ಸಂಹಿತಾ-(ದೇಶಭಕ್ತಿಗೀತೆ ಮತ್ತು ಭಕ್ತಿಗೀತೆ), ಆದರ್ಶ (ಕ್ಲೇ ಮಾಡೆಲಿಂಗ್),ಮನೀಶ್ (ಆಶುಭಾಷಣ),ಶ್ರೀಲತಾ (ಹಿಂದಿ ಕಂಠಪಾಠ) ಪ್ರಥಮ ಸ್ಥಾನಗಳನ್ನೂ, ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಗೋಪಿಕಾ(ಭಕ್ತಿಗೀತೆ,)ಪ್ರಣೀತಾ(ಕ್ಲೇ ಮಾಡೆಲಿಂಗ್),ಅದ್ವಿಕ್(ಡ್ರಾಯಿಂಗ್) ಪ್ರಥಮ ಸ್ಥಾನವನ್ನು, ಹಿರಿಯ ಪ್ರಾಥಮಿಕ ವಿಭಾಗದಲ್ಲಿಆಧ್ಯಾ ಶೆಟ್ಟಿ(ಪ್ರಬಂಧ), ಚಿನ್ಮಯ್(ಸಂಸ್ಕøತಧಾರ್ಮಿಕ ಪಠಣ), ತ್ರಿಶೂಲ್(ಮಿಮಿಕ್ರಿ), ಗಹನ (ಇಂಗ್ಲೀಷ್ಕಂಠಪಾಠ), ಭುವನ(ಛದ್ಮವೇಷ), ಸಿಂಚನ (ಕನ್ನಡಕಂಠಪಾಠ) ದ್ವಿತೀಯ ಸ್ಥಾನಗಳನ್ನು ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿಗೋಪಿಕಾ (ದೇಶಭಕ್ತಿಗೀತೆ) ಮತ್ತು ಸಾತ್ವಿಕ್(ಆಶುಭಾಷಣ) ದಲ್ಲಿ ದ್ವಿತೀಯ ಸ್ಥಾನವನ್ನುಅದೇರೀತಿರುಚಿತಾ(ಕನ್ನಡಕಂಠಪಾಠ),ಆಯಿಷಾ ತುಲ್ ಸುಹಾನಾ(ಅರೇಬಿಕ್ಕಂಠಪಾಠ)ತೃತೀಯ ಸ್ಥಾನಗಳನ್ನು ಗಳಿಸಿರುವುದು ಸಂಸ್ಥೆಯ ಹೆಮ್ಮೆಯ ವಿಷಯವಾಗಿದೆ.
ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರಾದಡಾ. ಚಿಂತನಾರಾಜೇಶ್ ಹಾಗೂ ಇತರ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.


ಕುಂದಾಪುರದ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿಕೆ) ತನ್ನ ಮೊದಲ ಅಂತರರಾಷ್ಟ್ರೀಯ ಸಮ್ಮೇಳನವನ್ನು ಸೆ. 17ಮತ್ತು 18 ರಂದು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ದತ್ತಾಂಶ ವಿಜ್ಞಾನದ ಕುರಿತು ಹೈಬ್ರಿಡ್ ವಿಧಾನ ದಲ್ಲಿ ಆಯೋಜಿಸಿದ್ದು, ಸಂಸ್ಥೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.
ಎ ಐ ಎಂ ಎಲ್ ವಿಭಾಗ ಮುಖ್ಯಸ್ಥರು ಹಾಗೂ ಸಮ್ಮೇಳನದ ಅಧ್ಯಕ್ಷರಾದ ಡಾ. ಇಂದ್ರವಿಜಯ್ ಸಿಂಗ್, ಸಭೆಯನ್ನುದ್ದೇಶಿಸಿ ಮಾತನಾಡಿ ಎ ಐ ಮತ್ತು ಎಂ ಎಲ್ ದೈನಂದಿನ ಜೀವನಕ್ಕೆ ಹೇಗೆ ಅವಿಭಾಜ್ಯವಾಗುತ್ತಿವೆ ಎಂಬುದನ್ನು ಹೇಳಿದರು. ಡಾ. ಸಿಂಗ್ ಅವರು ಮೀನುಗಾರಿಕೆಯಲ್ಲಿ ಎ ಐ ಮತ್ತು ಎಂ ಎಲ್ ಹೇಗೆ ಉಪಯೋಗಿಸಬಹುದು ಎಂಬುದನ್ನು ಚರ್ಚಿಸುವುದು ಸಮ್ಮೇಳನದ ಗುರಿ ಎಂದರಲ್ಲದೆ ಈ ಸಮ್ಮಳನದಲ್ಲಿ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರತಿನಿಧಿಗಳಿಂದ ಅತ್ಯುತ್ತಮ ಲೇಖನಗಳು ಮಂಡಿಸಲ್ಪಡುತ್ತಿವೆಯೆಂದರು.
ಪ್ರಾಧ್ಯಾಪಕಿ ಸುಷ್ಮಾ ಶೆಟ್ಟಿ ಅತಿಥಿ ಉಪನ್ಯಾಸಕರನ್ನು ಪರಿಚಯಿಸಿದರು. ಕಾರವಾರದ ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಐಸಿಎಆರ್ನ ಹಿರಿಯ ವಿಜ್ಞಾನಿ ಡಾ.ಪುರುಷೋತ್ತಮ ಜಿ.ಬಿ. ಅವರು ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಎ ಐ ಮತ್ತು ಎಂ ಎಲ್ ನಲ್ಲಿ ಆದ ಇತ್ತೀಚಿನ ಆವಿಷ್ಕಾರಗಳು ಮತ್ತು ಪ್ರಗತಿಗಳನ್ನು ಚರ್ಚಿಸಿದರು ಹಾಗು ಮೀನುಗಾರಿಕೆಯಲ್ಲಿ ಪರಿಚಯಿಸಲಾದ ಎಐಎಂಎಲ್ ಉಪಯೋಗದ ಬಗ್ಗೆ ಅವರು ವಿವರಿಸಿದರು
ಎಂಐಟಿಕೆ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಂ ತಮ್ಮ ಭಾಷಣದಲ್ಲಿ, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆ ಬೇಡಿಕೆಗಳು ಮತ್ತು ಈ ಬೆಳವಣಿಗೆಗಳಿಗೆ ಸರಿಹೊಂದುವಂತೆ ಶೈಕ್ಷಣಿಕ ಪಠ್ಯಕ್ರಮವನ್ನು ನವೀಕರಿಸುವಲ್ಲಿನ ಸವಾಲುಗಳ ಬಗ್ಗೆ ಮಾತನಾಡಿದರು. ಅವರು ಎಂಜಿನಿಯರ್ಗಳು ಮತ್ತು ಮೀನುಗಾರಿಕಾ ವಲಯದ ನಡುವಿನ ಸಹಯೋಗದ ಮಹತ್ವ ತಿಳಿಸಿದರು. ಅವರು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಇಂತಹ ತಾಂತ್ರಿಕ ಸಮ್ಮೇಳನಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.
ವಿದ್ಯಾರ್ಥಿನಿ ಫಾತಿಮಾ ಅವರು ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿನಿ ಮೇಘನಾ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರ ಗೀತೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯ ವಾಯಿತು
MITK Kundapura, First International Conference on AI, ML, and Data Science

Moodlakatte Institute of Technology (MITK), Kundapura, hosted its first international conference (on 17th &18th September 2024) in hybrid mode on Artificial Intelligence, Machine Learning and Data Science, marking a significant milestone in the institution’s history. The event was inaugurated with the lighting of the lamp by the dignitaries.
HOD AIML and the Conference Chair, Dr. Indravijay Singh, while addressing the gathering emphasized the interdisciplinary nature of the conference and how AI and ML are becoming integral to daily life. Dr. Singh also pointed out the conference’s focus on integrating AI and ML in fisheries, a topic of immense relevance for both students and faculty. He expressed his happiness for the number and quality of the national and international papers to be presented in this conference.
Professor Sushma Shetty introduced the guest speaker, Dr. Purushottam GB, Senior Scientist from ICAR – Central Marine Fisheries Research Institute, Karwar. Dr. Purushottam discussed the latest inventions and advancements in AI and ML across various fields. He briefed about AIML introduced in fisheries
Dr. Abdul Kareem, Principal of MITK, spoke about the rapidly evolving market demands and the challenges in updating academic syllabi to match these developments. He encouraged collaboration between engineers and the fisheries sector, underlining the importance of such technical conferences for students and professionals alike.
Miss Fathima proposed the vote of thanks, Maghana was the MC for the programme. Stage program concluded with the National Anthem.





ಶ್ರೀನಿವಾಸಪುರ : ಡೈರಿಗಳಿಗೆ ಉತ್ಪಾದಕರು ಗುಣಮಟ್ಟ ಹಾಲು ಹಾಕಿದಾಗಮಾತ್ರ ನಿಮ್ಮ ಹಾಲಿಗೆ ಪ್ರೋತ್ಸಾಹಧನ ಮತ್ತು ಬೋನಸ್ ಜೊತೆಗೆ ಒಕ್ಕೂಟದಿಂದ ಬರುವ ಎಲ್ಲಾ ಸೌಲಬ್ಯಗಳು ನಿಮ್ಮ ಸಂಘಗಳಿಗೆ ಶೀಘ್ರವಾಗಿ ದೊರೆಯುತ್ತವೆ, ಗುಣಮಟ್ಟ ಹಾಲು ಹಾಕಲು ಪ್ರತಿಯೊಬ್ಬ ಉತ್ಪಾದಕರು ದೃಢಮನಸ್ಸು ಮಾಡಬೇಕೆಂದು ಕೆ.ಎಂ.ಎಪ್ ಉಪ ವ್ಯವಸ್ಥಾಪಕ ಮುನಿರಾಜು ತಿಳಿಸಿದರು.
ತಾಲ್ಲೂಕಿನ ಆರಮಾಕಲಹಳ್ಳಿ ಚೌಡನಹಳ್ಳಿ, ಶೆಟ್ಟಿಹಳ್ಳಿ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ೨೦೨೩-೨೪ ನೇ ಸಾಲಿನ ವಾರ್ಷಿಕ ಸಾಮಾನ್ಯಸಭೆಗಳಲ್ಲಿ ಬಾಗವಹಿಸಿ ಮಾತನಾಡಿದ ಮುನಿರಾಜು ಆರಮಾಕಲಹಳ್ಳಿಯಲ್ಲಿ ಗ್ರಾಮದಲ್ಲಿ ಹಾಲಿನ ಗುಣಮಟ್ಟ ಚೆನ್ನಾಗಿದೆ ಪಣಸ ಚೌಡನಹಳ್ಳಿ ಗ್ರಾಮದ ಹಾಲುಉತ್ಪಾದಕರು ಮತ್ತಷ್ಟು ಗುಣಮಟ್ಟ ಹಾಲು ಡೈರಿಗೆ ಹಾಕಲು ಶ್ರಮಿಸಬೇಕು,
ಶೆಟ್ಟಿಹಳ್ಳಿ ಸಂಘ ಗುಣಮಟ್ಟಕ್ಕೆ ಒತ್ತು ನೀಡಬೇಕು, ಗುಣಮಟ್ಟದಲ್ಲಿ ನಾವು ರಾಜಿ ಆಗುವುದಿಲ್ಲಾ ನಮ್ಮ ಒಕ್ಕೂಟದಿಂದ ಬರುವ ಸೌಲಬ್ಯಗಳು ನಿಮಗೆ ತಲುಪಿಸಲು ಸಿದ್ದರಾಗಿದ್ದೇವೆ, ಮ್ಯಾಟುಗಳು ಇತರೆ ಸಾಮಗ್ರಿಗಳು ಒಕ್ಕೂಟದ ಮಹಾಮಂಡಳಿ ಚುನಾವಣೆ ನಂತರ ಎಲ್ಲವೂ ನಿಮ್ಮ ಸಂಘಗಳಿಗೆ ತಲುಪಿಸುತ್ತೇವೆ, ಸಮಯ ಹತ್ತಿರ ಬಂದಿದೆ ಎಂದರು.
ಇದೇ ವೇಳೆಯಲ್ಲಿ ಸಂಘಗಳ ವಾರ್ಷಿಕ ವರದಿಯನ್ನು ಮೇಲ್ವಿಚಾರಕ ನರಸಿಂಹರಾಜು ಮಂಡಿಸಿದರು, ಆರಮಾಕಲಹಳ್ಳಿ ಸಂಘದಲ್ಲಿ ಉತ್ಪಾದಕರಿಗೆ ಬೋನಸ್ ಆಗಿ ಪ್ಲಾಸ್ಕ್ ಗಳನ್ನು ವಿತರಿಸಲಾಗಿದೆ,
ಈ ವೇಳೆಯಲ್ಲಿ ಆರಮಾಕಲಹಳ್ಳಿ ಅದ್ಯಕ್ಷ ಎನ್. ಮಂಜುನಾಥ್ ರೆಡ್ಡಿ, ಉಪಾದ್ಯಕ್ಷ ಎಂ. ವೆಂಕಟೇಶಪ್ಪ, ಕಾರ್ಯದರ್ಶಿ ನಾನಪ್ಪ, ಪಣಸಚೌಡನಹಳ್ಳಿ ಅದ್ಯಕ್ಷಿಣಿ ಲಕ್ಷö್ಮಮ್ಮ, ಉಪಾದ್ಯಕ್ಷ ಸಿ.ವಿ ನಾರಾಯಣರೆಡ್ಡಿ, ಕಾರ್ಯದರ್ಶಿ ಎಂ. ವೆಂಕಟೇಶ್, ಶೆಟ್ಟಿಹಳ್ಳಿ ಅದ್ಯಕ್ಷ ಟಿ.ರಾಮಚಂದ್ರಪ್ಪ, ಉಪಾದ್ಯಕ್ಷ ವಿ.ನರಸಿಂಹಪ್ಪ, ಕಾರ್ಯದರ್ಶಿ ಎಸ್.ವೈ ಸೋಮನಾಥ್, ಮೇಲ್ವಿಚಾರಕ ವಿನಾಯಕ್, ಸಂಘಗಳ ಹಾಲು ಪರೀಕ್ಷಕರು, ಸಹಾಯಕರು, ಹಾಗು ಎಲ್ಲಾ ಹಾಲು ಉತ್ಪಾದಕರು ಬಾಗವಹಿಸಿದ್ದರು.


ಪಡುಕೋಣೆ, ದಿನಾಂಕ 15 9 2018 ರಂದು ಪಡುಕೋಣೆ ಸೈಂಟ್ ಆಂಟನಿ ಚರ್ಚಿನಲ್ಲಿ ಹಿರಿಯ ನಾಗರಿಕ ಸಂಘವನ್ನು ಧರ್ಮಗುರು ವಂ। ಫ್ರಾನ್ಸಿಸ್ ಕರ್ನೆಲಿಯೊರವರು ಉದ್ಘಾಟಿಸಿದರು.
25 ಮಂದಿ ಹಿರಿಯ ನಾಗರಿಕರೆಲ್ಲರೂ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಧರ್ಮಗುರು ವಂ। ಪ್ರವೀಣ್ ಪಿಂಟೊ ಅವರು ಹಿರಿಯರಾದ ನಾವು ಕುಟುಂಬದಲ್ಲಿ ಈಗಿನ ಕಾಲದಲ್ಲಿ ಯಾವ ರೀತಿ ನಮ್ಮ ಕೌಟುಂಬಿಕ ಜೀವನವನ್ನು ನಡಿಸಬೇಕೆಂದು ಎನ್ನುವ ಬಗ್ಗೆ ಮಾಹಿತಿ ನೀಡಿದ್ದರು.
ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಚೀನಾ ಮತಾಯಸ್ ಕ್ರಾಸ್ತಾ, ಉಪಾಧ್ಯಕ್ಷರಾಗಿ ಡಾಲ್ಫಿ ಡಿಸಿಲ್ವಾ ಮತ್ತು ಕಾರ್ಯದರ್ಶಿಯಾಗಿ ಶ್ರೀಮತಿ ಡೇರಿ ರೆಬೆಲ್ಲೋ ಆಯ್ಕೆಗೊಂಡರು. ಕಾರ್ಯಕ್ರಮಕ್ಕೆ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಕೆನಡಿ ಪಿರೇರಾ ಶುಭ ಹಾರೈಸಿದರು ವೇದಿಕೆಯಲ್ಲಿ ಮಾನವೀಯ ಕಾರ್ಯದರ್ಶಿ 22 ಆಯೋಗದ ಮುಖ್ಯಸ್ಥರು ಹಿರಿಯ ನಾಗರಿಕರಾದ ಶ್ರೀ ಪಿಲಿಫ್ ಡಿಸಿಲ್ವಾರವರು ಹಾಗೂ ಕಾನ್ವೆಂಟಿನ ಸಿ ಸುಪಿರಿಯರ್ ಹಾಜರಿದ್ದರು ಈ ಕಾರ್ಯಕ್ರಮಕ್ಕೆ ಸಿಲ್ವೆಸ್ಟರ್ ಬುತ್ತೆತ್ಲೊರವರು ಪ್ರಯೋಜಕರಾಗಿದ್ದರು.

