ಕುಂದಾಪುರ ಸ.ಪ.ಪೂ.ಕಾಲೇಜಿಗೆ ಭಾ.ರೆಡ್ ಕ್ರಾಸ್ ಕುಂದಾಪುರ ಘಟಕದಿಂದ 78 ಸಾವಿರ ರೂಪಾಯಿ ಬೆಲೆ ಬಾಳುವ ವಾಷ್ ಬೇಸನ್ ಕೊಡುಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಈ ದಿನ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಕ್ಕೆ 78 ಸಾವಿರ ರೂಪಾಯಿ ಬೆಲೆ ಬಾಳುವ ಹದಿನೆಂಟು ನಳ್ಳಿಯ ಕೈ ತೊಳೆಯುವ ವಾಷ್ ಬೇಸನ್ ನೀಡಿದರು. ಇದರ ಉದ್ಘಾಟನೆ ಯನ್ನು ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಯವರು ನಡೆಸಿ ಕೊಟ್ಟರು. ಜೂನಿಯರ್ ಕಾಲೇಜ್ ವತಿಯಿಂದ ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಡಾ. ಸೋನಿ, ಸದಾನಂದ ಶೆಟ್ಟಿ ಮತ್ತು ಅಬ್ದುಲ್ ಬಶೀರ್ ಅಲ್ಲದೇ ಕಾಲೇಜಿನ ಬೋದಕ ಬೋದಕೇತರ ಸಿಭಂದಿಗಳು ಉಪಸ್ಥಿತರಿದ್ದರು