2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ-68 ಜನರಿಗೆ ಪ್ರಶಸ್ತಿ- ಕಥೊಲಿಕ್ ಸಭಾ ಸಂಘಕ್ಕೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು (ಅ.31) ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 68 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇನ್ನು 10 ಸಂಘ ಸಂಸ್ಥೆಗಳಿಗೂ ಸಹ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು, ಕಥೊಲಿಕ್ ಸಭಾ ಮಂಗ್ಳೂರ್ ಪ್ರದೇಶ್ (ರಿ) ಸಂಘಕ್ಕೆ ದ.ಕ. ಜಿಲ್ಲಾ ಪ್ರಶಸ್ತಿ ದೊರಕಿದೆಯೆಂದು ಮಂಗಳೂರು ಕೇಂದ್ರಿಯ ಕಥೊಲಿಕ್ ಸಭಾ ಅಧ್ಯಕ್ಷರಾದ ಅಲ್ವಿನ್ ಡಿಸೋಜಾ ಹೇಳಿಕೊಂಡಿದ್ದಾರೆ. ಈ ಪ್ರಶಸ್ತಿಗಳನ್ನು ನವೆಂಬರ್‌ 1 ರಂದು ನಾನಾ ಕ್ಷೇತ್ರಗಳ ಒಟ್ಟು 68 ಸಾಧಕರಿಗೆ ರಾಜ್ಯೋತ್ಸವ ದಿನದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇನ್ನು 2023-24ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 68 ಜನರ ಪಟ್ಟಿ ಈ ರೀತಿ ಇದೆ..

ಸಂಗೀತ/ನೃತ್ಯ
ಡಾ.ನಯನ ಎಸ್​​​.ಮೋರೆ, ನೀಲಾ ಎಂ ಕೊಡ್ಲಿ, ಶಬ್ಬೀರ್ ಅಹಮದ್, ಡಾ.ಎಸ್​​​. ಬಾಳೇಶ ಭಜಂತ್ರಿ

ಚಲನಚಿತ್ರ
ಡಿಂಗ್ರಿ ನಾಗರಾಜ, ಬಿ ಜನಾರ್ಧನ (ಬ್ಯಾಂಕ್ ಜನಾರ್ಧನ)

ರಂಗಭೂಮಿ
ಎ.ಜಿ. ಚಿದಂಬರ ರಾವ್ ಜಂಬೆ, ಪಿ. ಗಂಗಾಧರ ಸ್ವಾಮಿ, ಎಚ್.ಬಿ. ಸರೋಜಮ್ಮ, ತಯ್ಯಬಾಖಾನ್ ಎಂ. ಇನಾಮದಾರ, ಡಾ.ವಿಶ್ವನಾಥ್ ವಂಶಾಕೃತ ಮಠ, ಪಿ ತಿಪ್ಪೇಸ್ವಾಮಿ

ಜಾನಪದ ಕ್ಷೇತ್ರ
ಹುಸೇನಾಬಿ ಬುಡೆನ್​ ಸಾಬ್​ ಸಿದ್ಧಿ, ಶಿವಂಗಿ ಶಣ್ಮರಿ, ಮಹದೇವು, ನರಸಪ್ಪಾ, ಶಕುಂತಲಾ ದೇವಲಾನಾಯಕ, ಚೌಡಮ್ಮ, ಹೆಚ್​.ಕೆ.ಕಾರಮಂಚಪ್ಪ, ವಿಭೂತಿ ಗುಂಡಪ್ಪ 

ಶಿಲ್ಪಕಲೆ/ಚಿತ್ರಕಲೆ/ಕರಕುಶಲ
ಟಿ.ಶಿವಶಂಕರ್, ಕಾಳಪ್ಪ ವಿಶ್ವಕರ್ಮ, ಮಾರ್ಥಾ ಜಾಕಿಮೋವಿಚ್, ಪಿ. ಗೌರಯ್ಯ

ಯಕ್ಷಗಾನ/ಬಯಲಾಟ
ಅರ್ಗೋಡು ಮೋಹನದಾಸ, ಕೆ. ಲೀವಾವತಿ ಬೈಪಾಡಿತ್ತಾಯ, ಕೇಶಪ್ಪ ಶಿಳ್ಳಿಕ್ಯಾತರ, ದಳವಾಯಿ ಸಿದ್ದಪ್ಪ,

ಸಮಾಜಸೇವೆ ಕ್ಷೇತ್ರ
ಹುಚ್ಚಮ್ಮ ಬಸಪ್ಪ ಚೌದ್ರಿ, ಚಾರ್ಮಾಡಿ ಹಸನಬ್ಬ, ಕೆ.ರೂಪ್ಲಾ ನಾಯಕ್,   ಶ್ರೀ ನಿಜಗುಣಾನಂದ ಸ್ವಾಮೀಜಿ (ಬೆಳಗಾವಿ), ಜಿ.ನಾಗರಾಜು

ಆಡಳಿತ ಕ್ಷೇತ್ರ
ಜಿ.ವಿ.ಬಲರಾಮ್​

ವೈದ್ಯಕೀಯ ಕ್ಷೇತ್ರ
ಡಾ.ಜಿ.ರಾಮಚಂದ್ರ, ಡಾ. ಪ್ರಶಾಂತ್ ಶೆಟ್ಟಿ

ಸಾಹಿತ್ಯ ಕ್ಷೇತ್ರ
ಪ್ರೊ. ಸಿ. ನಾಗಣ್ಣ, ಹೆಚ್​.ಕೆ. ಸುಬ್ಬಯ್ಯ, ಸತೀಶ್ ಕುಲಕರ್ಣಿ, ಲಕ್ಷ್ಮೀಪತಿ ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ, ಡಾ. ಕೆ.ಷರೀಫಾ

ಶಿಕ್ಷಣ ಕ್ಷೇತ್ರ
ರಾಮಪ್ಪ ಹವಳೆ, ಕೆ. ಚಂದ್ರಶೇಖರ್, ಕೆ.ಟಿ. ಚಂದು

ಕ್ರೀಡಾ ಕ್ಷೇತ್ರ
ಟಿ.ಎಸ್​. ದಿವ್ಯಾ, ಅದಿತಿ ಅಶೋಕ್, ಅಶೋಕ್ ಗದಿಗೆಪ್ಪ ಏಣಗಿ

ನ್ಯಾಯಾಂಗ
ವಿ ಗೋಪಾಲ ಗೌಡ

ಕೃಷಿ-ಪರಿಸರ
ಸೋಮನಾಥ ರೆಡ್ಡಿ ಪೂರ್ಮಾ, ದ್ಯಾವನ ಗೌಡ ಟಿ ಪಾಟೀಲ, ಶಿವರೆಡ್ಡಿ ಹನುಮರೆಡ್ಡಿ ವಾಸನ

ಸಂಕೀರ್ಣ
ಎಎಂ ಮದರಿ, ಹಾಜಿ ಅಬ್ದುಲ್ಲಾ ಪರ್ಕಳ, ಮಿಮಿಕ್ರಿ ದಯಾನಂದ್, ಡಾ.ಕಬ್ಬಿನಾಲೆ ವಸಂತ ಭಾರದ್ವಜ್, ಕೊಡನ ಪೂವಯ್ಯ ಕಾರ್ಯಪ್ಪ

ಮಾಧ್ಯಮ
ದಿನೇಶ ಅಮೀನ್​​​​ಮಟ್ಟು, ಜವರಪ್ಪ, ಮಾಯ ಶರ್ಮಾ, ರಫೀ ಭಂಡಾರಿ

ವಿಜ್ಞಾನ-ತಂತ್ರಜ್ಞಾನ
ಎಸ್ ಸೋಮನಾಥನ್ ಶ್ರೀಧರ್ ಪನಿಕರ್, ಪ್ರೊ ಗೋಪಾಲನ್ ಜಗದೀಶ್

ಹೊರನಾಡು/ಹೊರದೇಶ
ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿ ಕಿರಣ್ ಶೆಟ್ಟಿ

ಸ್ವಾಂತಂತ್ರ್ಯ ಹೋರಾಟಗಾರ
ಪುಟ್ಟಸ್ವಾಮಿ ಗೌಡ