ಕುಂದಾಪುರ ವೈಶಂತಿಕ ಸಭೆ : ಸಂತ ವಿನ್ಸೆಂಟ್ ಪಾವ್ಲರ ದಿನಾಚರಣೆ

ಕುಂದಾಪುರ, 24.: ಕುಂದಾಪುರ ರೋಜರಿ ಚರ್ಚಿನ ವೈಶಂತಿಕ ಸಭೆ ಸಂತ ವಿನ್ಸೆಂಟ್ ಪಾವ್ಲರ (ಸೆ.24 ರಂದು) ದಿನಾಚರಣೆಯನ್ನು ಆಚರಿಸಿತು.
ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಕ್ರತ್ಞತಾ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು. ವೈಶಂತಿಕ ಸಭೆಯ ಸದಸ್ಯರು ಬಲಿದಾನದ ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಫಾ|ಸ್ಟಾನಿ ತಾವ್ರೊ   ‘ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರು ಸಮಾಜಕ್ಕೆ ಅಮೂಲ್ಯ ಸೇವೆಯನ್ನು ನೀಡುತಿದ್ದಾರೆ, ಯೇಸು ಕ್ರಿಸ್ತರ ಭೋದನೆಯಂತೆ ಹಿಂದುಳಿದವರಿಗೆ, ಬಡವರಿಗೆ ಸೇವೆ ಮಾಡುವುದು,  ಬಡ ಬಗ್ಗರಿಗೆ ಸಹಾಯವನ್ನು ಮಾಡುತ್ತೀರುವುದು  ನಿಮ್ಮ ಈ ಸೇವೆ ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರಿಗೆ ಅನ್ವರ್ಥವಾಗುತ್ತೆ, ನಿಮ್ಮ ಸಭೆಯ ಕೆಲಸ ಮೆಚ್ಚುಗೆಗೆ ಪಾತ್ರವಾದುದು, ಅದಕ್ಕಾಗಿ ನಾವೆಲ್ಲ ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರಿಗೆ ಪ್ರೋತ್ಸಾಹಿಸಬೇಕು ’ ಎಂದು ಶುಭ ಕೋರಿದರು.

ಸಂತ ವಿನ್ಸೆಂಟ್ ಪಾವ್ಲ್ ಕುಂದಾಪುರ ವಲಯ ಸಭೆಯ ಅಧ್ಯಕ್ಷ ಅಂತೋನಿ ಡಿಸೋಜಾ ಮತ್ತು ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯ ಶುಭ ಕೋರಿದರು, ಕಾರ್ಯದರ್ಶಿ ಒಸ್ವಲ್ಡ್ ಕರ್ವಾಲ್ಲೊ ವರದಿಯನ್ನು ವಾಚಿಸಿದರು. ಖಚಾಂಚಿ ಇಗ್ನೆಶಿಯಸ್ ಡಿಕುನ್ಹಾ ಖರ್ಚು ವೆಚ್ಚಗಳನ್ನು ಮುಂದಿಟ್ಟರು, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ವೇದಿಕೆಯಲ್ಲಿದ್ದರು. ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಅಧ್ಯಕ್ಷೆ ಸೆರಾಫಿನ್ ಡಿಸಿಲ್ವಾ ಸ್ವಾಗತಿಸಿದರು. ಉಪಾಧ್ಯಕ್ಷರಾದ ವಿಕ್ಟರ್ ಡಿಸೋಜಾ ನಿರೂಪಿಸಿದರು ಉಪಾಧ್ಯಕ್ಷರಾದ ವಾಲೇರಿಯನ್ ಡಿಸೋಜಾ ವಂದಿಸಿದರು.