ಮೂಡ್ಲಕಟ್ಟೆ ಎಂ ಐ ಟಿ: ರ್ಯಾಗಿಂಗ್ ವಿರೋಧಿ ಸಪ್ತಾಹ

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಂಟಿ ರ್ಯಾಗಿಂಗ್ ಸೆಲ್ ವತಿಯಿಂದ ರ್ಯಾಗಿಂಗ್ ವಿರೋಧಿ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು. ಆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯವನ್ನು ಆಯೋಜಿಸಲಾಗಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರದ ಜನಪ್ರಿಯ ವಕೀಲರಾಗಿರುವ ಶ್ರೀಯುತ ರೋ. ರಾಘವೇಂದ್ರ ನಾವುಡ ಇವರು ಆಗಮಿಸಿದ್ದರು. ಏಮ್ ಐ ಟಿ ಕಾಲೇಜು ರ್ಯಾಗಿಂಗ್ ಮುಕ್ತ ಸಂಸ್ಥೆಯಾಗಿದ್ದರೂ ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದರು. ಜೊತೆಗೆ ರ್ಯಾಗಿಂಗ್ ಮಾಡುವುದರಿಂದ ಆಗುವ ಎಲ್ಲ ತರಹದ ದುಷ್ಪರಿಣಾಮ ಹಾಗೂ ಕಾನೂನು ಕ್ರಮಗಳನ್ನು ಸವಿವರವಾಗಿ ತಿಳಿಸಿದರು. ವಿದ್ಯಾರ್ಥಿನಿ ಖುಷಿ ಕಾರ್ಯಕ್ರಮ ನಿರೂಪಿಸಿದರು. ರ್ಯಾಗಿಂಗ್ -ವಿರೋಧಿ ಕ್ರಮಗಳ ಮೇಲೆ ಕೇಂದ್ರೀಕರಿಸಿದ ಪ್ರಬಂಧ-ಬರಹ, ಪೋಸ್ಟರ್ ತಯಾರಿಕೆ ಮತ್ತು ಲೋಗೋ ವಿನ್ಯಾಸದಂತಹ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ರ್ಯಾಗಿಂಗ್ ವಿರೋಧಿ ಸಪ್ತಾಹದ ಕೊನೆಯ ದಿನ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.

ಕಾಲೇಜಿನ ಪ್ರಾಂಶುಪಾಲರಾದ ಡಾ| ಅಬ್ದುಲ್ ಕರೀಮ್ ,ಸ್ಟುಡೆಂಟ್ ವೆಲ್ಫ಼ೇರ್ ಡೀ‌ನ್ ಹಾಗೂ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ|ರಾಮಕೃಷ್ಣ ಹೆಗ್ಡೆ,ಉಪಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿ ಸೋಜಾ, ಕಾರ್ಯಕ್ರಮ ಸಂಯೋಜಕರಾದ ಪ್ರೊಫೆಸರ್ ವರುಣ್ ಕುಮಾರ್ ಬಹುಮಾನ ವಿತರಣೆ ಮಾಡಿದರು. ವಿದ್ಯಾರ್ಥಿ ಶರತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರೊಫೆಸರ್ ಸೂಕ್ಷ್ಮ ಎಸ್ ಅಡಿಗ ವಂದಿಸಿದರು. ವಿದ್ಯಾರ್ಥಿಗಳು, ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು.