ಸಮಾಜದ ಋಣ ತೀರಿಸಲು ಶ್ರೀಮಂತರಾಗಿ ಇರಬೇಕಾಗಿಲ್ಲ, ಪರೋಪಕಾರ ಮಾಡುವ ದೃಢ ಮನಸ್ಸಿದ್ದರೆ ಸಾಕು-ಅಭಿನಂದನ್ ಶೆಟ್ಟಿ

ಸಮಾಜದ ಋಣ ತೀರಿಸಲು ಶ್ರೀಮಂತರಾಗಿ ಇರಬೇಕಾಗಿಲ್ಲ, ಪರೋಪಕಾರ ಮಾಡುವ ದೃಢ ಮನಸ್ಸಿದ್ದರೆ ಸಾಕು ಎಂದು ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ರೋಟರಿ ಕುಂದಾಪುರ ದಕ್ಷಿಣದ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ತಮ್ಮ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಸಾಲು ಮರದ ತಿಮ್ಮಕ್ಕ, ಕಿತ್ತಳೆ ಹಣ್ಣು ಮಾರುವ ಹರೇಕಳ ಹಾಜಬ್ಬರ ಉದಾಹರಣೆಯನ್ನು ತಿಳಿಸುತ್ತಾ, ಅಶಕ್ತರ ಪಾಲಿಗೆ ರೋಟರಿಯಂತಹ ಸಂಸ್ಥೆಗಳು ಆಶಾಕಿರಣವಾಗಬೇಕು, ಶ್ರೀಮಂತ ಮತ್ತು ಬಡವರ ಮಧ್ಯದ ಕೊಂಡಿಯಾಗಬೇಕು ಎಂದು ಕರೆ ನೀಡಿದರು. ರೋಟರಿಯನ್ ಸುರೇಶ ಮಲ್ಯ ನೂತನ ಅಧ್ಯಕ್ಷರಾಗಿ . ನೂತನ ಕಾರ್ಯದರ್ಶಿಯಾಗಿ ರಮಾನಂದ ಕಾರಂತ ಅಧಿಕಾರ ಸ್ವೀಕರಿಸಿದರು. ವಲಯ ಒಂದರ ಸಹಾಯಕ ಗವರ್ನರ್ ಡಾ. ಸಂದೀಪ್ ಶೆಟ್ಟಿ, ವಲಯ ಸೇನಾನಿ ಡಾ. ಉತ್ತಮ ಕುಮಾರ ಶೆಟ್ಟಿ, ಕಳೆದ ಸಾಲಿನ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.