ಬೈಂದೂರಿನಲ್ಲಿ ಮಾನವ ಬಂಧುತ್ವ ವೇದಿಕೆ ಸಮಾಲೋಚನಾ ಸಭೆ

ಬೈಂದೂರು: ಮಾನವ ಬಂಧುತ್ವ ವೇದಿಕೆ ಸಮಾಲೋಚನಾ ಸಭೆ ಬೈಂದೂರು ನಗರದ ಬ್ಲೂ ರೆಸ್ ಹೋಟೆಲ್ ನಲ್ಲಿ ದಿನಾಂಕ 6/6/23 ರಂದು ನಡೆಯಿತು.

ಈ ಸಭೆಯಲ್ಲಿ ಪಾಲ್ಗೊಂಡ ಮಾನವ ಬಂಧುತ್ವ ವೇದಿಕೆ ರಾಜ್ಯ ಸಮಿತಿ ಸದಸ್ಯ ಶ್ರೀ ರೋನಾಲ್ಡ್ ಮನೋಹರ್ ಕರ್ಕಡ, ಮಂಗಳೂರು ವಿಭಾಗೀಯ ಸಂಚಾಲಕ ಕೆಎಸ್ ಸತೀಶ್ ಕುಮಾರ್, ಕಾರ್ಕಳದ ಉದ್ಯಮಿ ಕ್ಲಾರಿ ಡಿಸೋಜ, ಕರ್ನಾಟಕ ಜಾನಪದ ಪರಿಷತ್ ಬೈಂದೂರು ತಾಲೂಕ್ ಅಧ್ಯಕ್ಷ ಗಿರೀಶ್ ಬೈಂದೂರು, ಶೇಖ್ ಫಯಾಜ್, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶಾಂತಿ ಪಿರೇರಾ ಹಾಗೂ ಅನೇಕ ಬೈಂದೂರು ಕ್ಷೇತ್ರ ಮಾನವ ಬಂಧುತ್ವ ವೇದಿಕೆಯ ಸದಸ್ಯರು ಪಾಲ್ಗೊಂಡಿದ್ದರು.

ಮಂಗಳೂರು ಸಂಚಾಲಕ ಸತೀಶ್ ಕುಮಾರ್ ಅವರು ಮಾತನಾಡಿ ಮಾನವ ಬಂದತ್ವ ವೇದಿಕೆಯ ಬಗ್ಗೆ ಕಿರುಪರಿಚಯವನ್ನು ನೀಡಿ ಸಂಕ್ಷಿಪ್ತವಾಗಿ ಅದರ ಆಶಯಗಳ ಬಗ್ಗೆ ಮಾಹಿತಿ ನೀಡಿದರು ಮುಂದಿನ ದಿನಗಳಲ್ಲಿ ಬೈಂದೂರು ಮತ ಕ್ಷೇತ್ರದಲ್ಲಿ ಮಾನವ ಬಂದುತ್ವ ವೇದಿಕೆಯ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಮತಕ್ಷೇತ್ರದ ಸಮಗ್ರ ಸಮಾನ ಮನಸ್ಕರು ಸೇರಿ, ಸಭೆಗಳನ್ನು ನಡೆಸಿ ಮುಂದಿನ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.