ಬೆಸ್ಕಾಂ ಇಲಾಖೆಯಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ

ಶ್ರೀನಿವಾಸಪುರ : ಪಟ್ಟಣದಲ್ಲಿ ಪ್ರತಿ ವರ್ಷದಂತೆಯೂ ಈ ವರ್ಷವೂ ಸಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಬೆಸ್ಕಾಂ ಇಲಾಖೆ ಕಚೇರಿ ಆವರಣದಲ್ಲಿ  ಬೆಸ್ಕಾಂ ಸಿಬ್ಬಂದಿಯಿಂದ ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ  ಸೂಚಿಸಲಾಯಿತು ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಸ್ಥೆ ಅಧ್ಯಕ್ಷರಾದ ರಾಮಾಂಜಿ ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ನೌಕರರ ಪ್ರಾಥಮಿಕ ಸಮಿತಿಯ ಕಾರ್ಯದರ್ಶಿ ಆರ್ ಕೆ ಬಾಬು ಮಾತನಾಡಿ ಪ್ರತಿ ವರ್ಷವೂ ನಮ್ಮ ಬೆಸ್ಕಾಂ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತೇವೆ ಕಳೆದ ತಿಂಗಳು ಏಪ್ರಿಲ್ 14ರಂದು ವಿಧಾನಸಭೆ ಚುನಾವಣೆಯ ನಿಮಿತ್ತ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಸಾಂಕೇತಿಕವಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ್ದು ನೀತಿ ಸಂಹಿತೆ ಮುಗಿದ ಮೇಲೆ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದೇವೆಂದು ಮುಂದಿನ ದಿನಗಳಲ್ಲಿಯೂ ಇದೇ ರೀತಿಯಾಗಿ ಮುಂದುವರೆಸುತ್ತೇವೆಂದರು ಇನ್ನೂ ಈ ಸಂದರ್ಭದಲ್ಲಿ ಬೆಸ್ಕಾಂ ಎ ಇ ಇ ರಾಮತೀರ್ಥ, ನಂಜುಂಡೇಶ್ವರ, ಶ್ರೀನಿವಾಸ್,ಆರ್ ಕೆ ಬಾಬು,  ರಾಮಾಂಜಿ, ಆನಂದ್, ಶ್ರೀನಿವಾಸ್,ವೇಣುಗೋಪಾಲ್, ಸುದರ್ಶನ್, ಆರ್ ಚಂದ್ರು,ರಾಜಶೇಖರ್, ಗಂಗರಾಜ್, ಬೆಸ್ಕಾಂ ಗುತ್ತಿಗೆದಾರರ ಗೌರವಾಧ್ಯಕ್ಷ ಕೆ.ಮೋಹನಾಚಾರಿ, ಇತರರು ಹಾಜರಿದ್ದರು.