ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಸಂತ ನಿರಂಕಾರಿ ಸತ್ಸಂಗ ನಾಗೂರು ಇಲ್ಲಿ ಬ್ರಹತ್ ರಕ್ತ ದಾನ ಶಿಬಿರ

25-4-22 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಸಂತ ನಿರಂಕಾರಿ ಸತ್ಸಂಗ ನಾಗೂರು ಇಲ್ಲಿ ಬ್ರಹತ್ ರಕ್ತ ದಾನ ಶಿಬಿರವನ್ನು ಆಯೋಜಿಸಿದರು. ಇದರ ಉದ್ಘಾಟನೆ ಯನ್ನು ಸಂತ ನಿರಂಕಾರಿ ಸಂಸ್ಥೆಯ ಆನಂದ್ ಚಾಬ್ರಿಯ ಮತ್ತು ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಇವರು ಜಂಟಿಯಾಗಿ ಮಾಡಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಸತ್ಯನಾರಾಯಣ ಪುರಾಣಿಕ ಹಾಗೂ ಸಂತ ನಿರಂಕಾರಿ ಸಂಸ್ಥೆಯ ರಾಮ ಪೂಜಾರಿ, ರಾಮ ಮೊಗವೀರ, ಲಕ್ಷ್ಮಣ ಪೂಜಾರಿ, ನಿರಂಜನ ಪೈ, ಚಂದ್ರ ಚಂದನ್, ದಾಮೋದರ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು. ಒಟ್ಟು116 ಯುನಿಟ್ ರಕ್ತ ಸಂಗ್ರಹಿಸಲಾಯಿತು.