ಜೆಸಿಐ ಕುಂದಾಪುರ ಸಿಟಿಯ ವತಿಯಿಂದ ತೆರೆ ಮರೆಯಾ ಸಾಧಕ ದಿನೇಶ್ ಹೆಮ್ಮಾಡಿ ಯವರಿಗೆ ಸನ್ಮಾನ

ಕುಂದಾಪುರ: ಬಾಲ್ಯದಲ್ಲಿ ಕಷ್ಟ ಪಟ್ಟು ಜೀವನ ನಡೆಸಿ ಈಗ ಕುಂದಾಪುರ ಪುರಸಭೆ ಯಲ್ಲಿ ಪೌರ ಕಾರ್ಮಿಕ ನಾಗಿ ಹಲವಾರು ವರ್ಷ ಗಳಿಂದ ಕೆಲಸ ವನ್ನು ಮಾಡುತ್ತ ಬಂದಿದ್ದು ಈಗ ದುಡಿಮೆ ಮಾಡಿ ಸಂಸಾರ ನಡೆಸುವಾಗ ಬಹಳ ಖುಷಿ ಆಗತ್ತೆ ನಾವು ಮಾಡುತ್ತಿರುವ ಕೆಲಸ ಮುಖ್ಯವಲ್ಲ ಶ್ರದ್ದೆಯಿಂದ ಮಾಡುವ ಕೆಲಸ ಮುಖ್ಯ ವಾಗಿರುತ್ತೆ ಕೆಲಸದ ಜೊತೆಗೆ ಕೆಲವೊಮ್ಮೆ ಸಮಯ ಸಿಕ್ಕಿದಾಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಹಾಗಾಗಿ ಜೀವನ ತೃಪ್ತಿಕರವಾಗಿದೆ ಎಂದು ಜೆಸಿಐ ಕುಂದಾಪುರ ಸಿಟಿ ಯವರು ಕೋಟೇಶ್ವರ ದ ಸಮುದಾ ಹಾಲ್ ನಲ್ಲಿ ತೆರೆ ಮರೆಯಾ ಸಾಧಕ ಕುಂದಾಪುರ ಪುರಸಭೆಯ ಪೌರ ಕಾರ್ಮಿಕ ದಿನೇಶ್ ಹೆಮ್ಮಾಡಿ ಜೆಸಿಐ ಕುಂದಾಪುರ ಸಿಟಿಯ ವತಿಯಿಂದ ಸನ್ಮಾನ ಪಡೆದಕ್ಕೆ ಉತ್ತರವಾಗಿ ಮಾತನಾಡಿದರು.

ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷೆ ಡಾ ಸೋನಿ ಅಧ್ಯಕ್ಷತೆ ವಹಿಸಿದರು ಸಮಾರಂಭ ದಲ್ಲಿ ಭಾರತೀಯ ಜೇಸಿಸ್ ನ ರಾಷ್ಟ್ರೀಯ ಸಂಯೋಜಕರಾದ ಕೆ ಕಾರ್ತಿಕೇಯ ಮಧ್ಯಸ್ಥ ವಲಯ 15ರ ಉಪಾಧ್ಯಕ್ಷ ಅಭಿಲಾಶ್ ಜೆಸಿಐ ಕಲ್ಯಾಣಪುರ ದ ಅಧ್ಯಕ್ಷ ಅನಿತಾ ನರೇಂದ್ರ ಕುಮಾರ್ ಜೆಸಿಐ ಉಡುಪಿ ಇಂದ್ರಾಳಿ ಯಾ ಅಧ್ಯಕ್ಷೆ ರಿಟಾ ಮರಿಯಾ ಜೆಸಿಐ ಬ್ರಹ್ಮಾವರ ಸೇವೆಮೆ ಯಾ ಅಧ್ಯಕ್ಷ ಕೃಷ್ಣಮೂರ್ತಿ ಹೈಕಾಡಿ
ಜೆಸಿಐ ಶಂಕರಪುರ ಜಾಸ್ಮಿನ್ ನ ಅಧ್ಯಕ್ಷೆ ಮಾಲಿನಿ ಶೆಟ್ಟಿ ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಗಿರೀಶ್ ಹೆಬ್ಬಾರ್ ರಾಘವೇಂದ್ರ ಚರಣ್ ನಾವಡ ಶ್ರೀಧರ್ ಸುವರ್ಣ ಮಂಜುನಾಥ್ ಕಾಮತ್ ನಾಗೇಶ್ ನಾವಡ ವಿಜಯ ಬಂಡಾರಿ ಚಂದ್ರಕಾಂತ್ ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಯುವ ಜೇಸಿ ಅಧ್ಯಕ್ಷೆ ಚಂದ್ರಿಕಾ ಕಾಮತ್ ವಲಯ ತರಬೇತುದಾರ ನರೇಂದ್ರ ಕುಮಾರ್ ಕೋಟ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂದೇಶ ಶೆಟ್ಟಿ ವಂದಿಸಿದರು
.