ಕುಂದಾಪುರ:ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಬಾರಂದಾಡಿ ಕನ್ನಡ ಮಾಧ್ಯಮ ಶಾಲೆಯ ಅಭಿವ್ರದ್ದಿಗಾಗಿ 80 ಸಾವಿರ ರೂಪಾಯಿ ದೇಣಿಗೆ

ಕುಂದಾಪುರ. ಮಾ.28 : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಈ ದಿನ ತಮ್ಮ ಆಡಳಿತ ಕಛೇರಿಯಲ್ಲಿ ಬಾರಂದಾಡಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಅಭಿವ್ರದ್ದಿಗಾಗಿ ರೂಪಾಯಿ ಎಂಬತ್ತು ಸಾವಿರ ದೇಣಿಗೆ ನೀಡಿದರು.

ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಶಾಲೆಯ HM ಶ್ರೀಮತಿ ಅಮಿತಾ ಆರ್ ಶೆಟ್ಟಿ ಇವರಿಗೆ 80,000/- ದ ಚೆಕ್ ಹಸ್ತಾಂತರಿಸಿದರು. ಈ ದೇಣಿಗೆಯನ್ನು ರೆಡ್ ಕ್ರಾಸ್ ಸದಸ್ಯರಾದ ಶ್ರೀಮತಿ ಪ್ರತಿಮಾ ಮತ್ತು ಡಾ. ದಿನಕರ ಶೆಟ್ಟಿ ಯವರು ಕೊಡಮಾಡಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ ಮತ್ತು ಡಾ. ಸೋನಿ ಉಪಸ್ಥಿತರಿದ್ದರು .