ಆಸ್ಕರ್‌ ಫೆರ್ನಾಂಡಿಸ್ ಪುಣ್ಯತಿಥಿ:ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಉಡುಪಿ: ಕೇಂದ್ರ ಮಾಜಿ ಸಚಿವ ದಿ. ಆಸ್ಕರ್‌ ಫೆರ್ನಾಂಡಿಸ್‌ ಪ್ರಥಮ ಪುಣ್ಯತಿಥಿಯನ್ನು ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ಸೆಪ್ಟಂಬರ್ 13 ರಂದು ಉಡುಪಿ ಜಿಲ್ಲೆಯ ಆಸ್ಕರ್‌ ಫೆರ್ನಾಂಡಿಸ್‌ ಅಭಿಮಾನಿ ಬಳಗವರು ಆಚರಿಸಿದರು.

ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

    ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಆಸ್ಕರ್‌ ಫರ್ನಾಂಡಿಸ್‌ ಅಭಿಮಾನಿ ಬಳಗ ಗೌರವ ಅಧ್ಯಕ್ಷ ರೊನಾಲ್ಡ್‌ ಮನೋಹರ್‌ ಕರ್ಕಡ, ಪ್ರಮುಖರಾದ ಮಂಜಿತ್‌ ನಾಗರಾಜ್‌, ಮಹಮ್ಮದ್‌ ಶೀಶ್‌, ಕಾಂಗ್ರೆಸ್‌ ಮುಖಂಡರಾದ ಎಂ. ಐ. ಗಫೂರ್‌, ರಮೇಶ್‌. ಕಾಂಚನ್‌, ಪ್ರಖ್ಯಾತ್‌ ಶೆಟ್ಟಿ, ಯತೀಶ್‌ ಕರ್ಕೇರ, ಫರ್ನಾಂಡಿಸ್‌, ನವೀನ್‌ ಶಟ್ಟಿ, ಹರೀಶ್‌ ಶೆಟ್ಟಿ, ಜಿಲ್ಲಾಸ್ಪತ್ರೆ ಸರ್ಜನ್‌ ಡಾ. ಮಧುಸೂದನ ನಾಯಕ್‌ ಈ ಕಾರ್ಯಕ್ರಮಕ್ಕೆ ಸಹಕರಿಸಿದರು.